ನಟ, ನಿರ್ದೇಶಕ, ರಂಗಗೆಳೆಯ, ಯಶವಂತ ಸರ್ ದೇಶಪಾಂಡೆ ಹೋಗಿಬಿಟ್ಟ ಅನ್ನುವ ಮಾಹಿತಿ ನೇ ಸುಳ್ಳು ಅಂತ ನನ್ನ ಮನಸ್ಸು ಚೀರೋಕೆ ಷುರು ಮಾಡಿತು ಅವನ ಜೊತೆ ಮಾತಾಡೋಕೆ ಷುರುವಾಯ್ತು ಯಾಕೆ ಹೀಗೆ ಎದ್ದು ಹೋಗ್ಬಿಟ್ಟ ...
ಎಷ್ಟು ಚೆಂದಲೇ ನಿನ್ನ ಅಂತಃಕರಣ, ನನಗ ಹೇಳದೀ ' ಬೇ ಯವ್ವಾ ಖರೇನ ನಾನು ನೀನು ಕೂಡಿ ಒಂದು ಛಲೋ ಹಾಸ್ಯ ನಾಟಕ ಮಾಡೋಣು ಅಂದಿ ಕೈಕೊಟ್ಟ ಹೊಂಟಬಿಟ್ಟಿ ಇದು ಸರಿಯೇನ? ನೀ ಹ್ವಾದಿ ಬಾರದ ಊರಿಗಿ ನೀ ಹ್ವಾದಿ ಅಂತ ಗೊತ್ತಾಗ್ತಿದಂಗ ಇಷ್ಟು ಗಾಬಾದ್ನಿ ನಾ, ಹಿಂಗ್ ಮಾಡಬಾರದಿತ್ತು ನೀ ಬಿಡ, ಇಷ್ಟು ದೌಡ ಹೋಗೋನು ನಮ್ಮನ್ನ ಯಾಕ ಹಚ್ಕೋಂಡಿದ್ದಿ,ಒಂದು ನಾಟಕ ನಿನಗ ತೋರ್ಸೋದದ ಏಕ ವ್ಯಕ್ತಿ ನಾಟಕ ನಾನಾ ಈ ನಾಟಕ ನಿನಗ ನಿರ್ದೇಶನ ಮಾಡತೀನಿ ನಡಿ ಮುಂಬೈಕ ಅಂದಿ ಮುಂಬೈಕ ಹೋಗಿ ಬಂದ ಮ್ಯಾಗ ಜೋಷಿ ಹೇಳೋಣು ಅಲ್ಲೀ ಮಟ ಅವಂಗ ಹೇಳಬ್ಯಾಡ ಅಂದಿ ,ನಾನು ಹೂಂ ಆತು ಹೇಳಾಂಗಿಲ್ಲ ಹೋಗೋಣು ಅಂದ್ನಿ ನಾ ಇಲ್ಲೀ ಮಟ ಅವಂಗ ಹೇಳಿಲ್ಲ ತಳೀತು ನನ್ನ ಜತಿ ಮುಂಬೈಕ ಹೋಗೋದು ಮರ್ತು ಬರಲಾರದ ಹ್ವಾದಿ ತಪ್ಪು ಮಾಡದಿಈಗಿನ್ನು ನಿನ್ನ ಜತಿ ಮಾತಾಡಿದ್ನಿ ಅನ್ನಸ್ತದ ಕಳ್ಹರ್ಕ, ಎಷ್ಟು ಪ್ರೀತಿಯಿಂದ ಕಾಣತಿದ್ದೀ ಚೆಂದಲೇ ಯಪ್ಪಾ ನೀ, ಏನಂತ ಕರಿಬೇಕೋ ನಿನ್ನ ಗೆಳೆಯ ಅನ್ಲೋ ಇಲ್ಲ ನನ್ನ ತಮ್ಮ ಅನ್ಲೋ ಹೂಂ .. ತಮ್ಮ ಅನ್ನೂದ ಸರಿ ..ಹೋಗಿ ಬಾಅಂತ ಅನ್ನೋದು ಬಿಟ್ಟು ಏನೂ ಉಳದಿಲ್ಲಾ ನೆನಪುಗಳಷ್ಟು ಉಳಿದಾವ ಹೋಗಿ ಬಾ