- ರಾಘವೇಂದ್ರ ಅಡಿಗ ಎಚ್ಚೆನ್.

ಬೆಂಗಳೂರು, 26 ಮೇ, 2026: ಪ್ರತಿಷ್ಠಿತ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯು ಹೃದ್ರೋಗ ಆರೈಕೆಯಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ವಿಶೇಷ ಟಿಎವಿಆರ್ ಸಾಧನವನ್ನು ಬಳಸಿಕೊಂಡು ಪ್ಯೂರ್ ನೇಟಿವ್ ಅಯೋರ್ಟಿಕ್ ವಾಲ್ವ್ ರಿಗರ್ಜಿಟೇಷನ್ ಗಾಗಿ ಭಾರತದ ಮೊದಲ ಟ್ರಾನ್ಸ್‌ ಕ್ಯಾತಿಟರ್ ಅಯೋರ್ಟಿಕ್ ವಾಲ್ವ್ ಇಂಪ್ಲಾಂಟೇಶನ್ (ಟಿಎವಿಐ) ಅನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಹಿರಿಯ ಕನ್ಸಲ್ಟೆಂಟ್ ಕಾರ್ಡಿಯಾಲಜಿಸ್ಟ್ ಮತ್ತು ಸ್ಟ್ರಕ್ಚರಲ್ ಇಂಟರ್ವೆಂಷನ್ ಸ್ಪೆಷಲಿಸ್ಟ್ ಆದ ಡಾ. ಸೂರಜ್ ನರಸಿಂಹನ್ ಅವರು ಈ ಚಿಕಿತ್ಸೆಯನ್ನು ನಡೆಸಿದ್ದು, ಈ ಸಂಕೀರ್ಣ ಕವಾಟದ ಕಾಯಿಲೆಯಿಂದ ಬಳಲುತ್ತಿರುವ ಮತ್ತು ಹೆಚ್ಚಿನ ಅಪಾಯದಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಧಾನದಲ್ಲಿ ಇದು ಪ್ರಮುಖ ಬದಲಾವಣೆಯನ್ನು ತಂದಿದೆ.

ಅಯೋರ್ಟಿಕ್ ಕವಾಟದ ಕಾಯಿಲೆಯನ್ನು ವಿಶಾಲವಾಗಿ ಎರಡು ವರ್ಗಗಳಾಗಿ ವಿಂಗಡಿಸಬಹುದು. ಒಂದು, ಸ್ಟೆನೋಸಿಸ್. ಇದರಲ್ಲಿ ಕವಾಟದ ದ್ವಾರವು ಕ್ರಮೇಣ ಕಿರಿದಾಗುತ್ತದೆ. ಇನ್ನೊಂದು, ರಿಗರ್ಜಿಟೇಷನ್. ಇದರಲ್ಲಿ ಕವಾಟವು ಸಂಪೂರ್ಣವಾಗಿ ಮುಚ್ಚಲು ವಿಫಲವಾಗುತ್ತದೆ, ಇದರಿಂದಾಗಿ ರಕ್ತವು ಹೃದಯದ ಕಡೆಗೆ ಹಿಂದಕ್ಕೆ ಹರಿಯುತ್ತದೆ.

ಅಯೋರ್ಟಿಕ್ ರಿಗರ್ಜಿಟೇಷನ್ ಜಾಗತಿಕವಾಗಿ ಮೂರನೇ ಅತ್ಯಂತ ಸಾಮಾನ್ಯ ಕವಾಟದ ಕಾಯಿಲೆಯಾಗಿದೆ ಮತ್ತು ವಯಸ್ಸಾಗುತ್ತಿರುವ ಜನಸಂಖ್ಯೆಯೊಂದಿಗೆ ಇದರ ಪ್ರಮಾಣವು ಹೆಚ್ಚುತ್ತಿದೆ. 70 ವರ್ಷ ಮೇಲ್ಪಟ್ಟವರಲ್ಲಿ ಶೇಕಡಾ 2 ಕ್ಕಿಂತ ಹೆಚ್ಚು ಜನರು ಮಧ್ಯಮ ಅಥವಾ ತೀವ್ರ ಸ್ವರೂಪದ ಎಆರ್ ಅನ್ನು ಹೊಂದಿರುತ್ತಾರೆ ಮತ್ತು ಒಮ್ಮೆ ಇದರ ಲಕ್ಷಣಗಳು ಕಾಣಿಸಿಕೊಂಡರೆ, ರೋಗಿಯ ಪರಿಸ್ಥಿತಿ ವೇಗವಾಗಿ ಕ್ಷೀಣಿಸುತ್ತದೆ. ಕಳೆದ ಒಂದೂವರೆ ದಶಕದಲ್ಲಿ ಟ್ರಾನ್ಸ್‌ ಕ್ಯಾತಿಟರ್ ತಂತ್ರಜ್ಞಾನಗಳು ಅಯೋರ್ಟಿಕ್ ಸ್ಟೆನೋಸಿಸ್ ಚಿಕಿತ್ಸೆಯ ಫಲಿತಾಂಶಗಳನ್ನು ಸಂಪೂರ್ಣವಾಗಿ ಬದಲಾಯಿಸಿದ್ದರೂ, ಮುಕ್ತ ಹೃದಯ ಶಸ್ತ್ರಚಿಕಿತ್ಸೆ ಇಲ್ಲದೆ ಪ್ಯೂರ್ ಅಯೋರ್ಟಿಕ್ ರಿಗರ್ಜಿಟೇಷನ್ ಗೆ ಚಿಕಿತ್ಸೆ ನೀಡುವುದು ಹೆಚ್ಚು ಕಷ್ಟಕರವಾಗಿತ್ತು.

ಇದಕ್ಕೆ ಕಾರಣ ಮಾನವನ ದೇಹರಚನೆ. ಸ್ಟೆನೋಸಿಸ್ ಸಾಮಾನ್ಯವಾಗಿ ಕ್ಯಾಲ್ಸಿಯಂ ಶೇಖರಣೆಯನ್ನು ಒಳಗೊಂಡಿರುತ್ತದೆ, ಇದು ಟ್ರಾನ್ಸ್‌ ಕ್ಯಾತಿಟರ್ ಕವಾಟವನ್ನು ಸರಿಯಾದ ಜಾಗದಲ್ಲಿ ಭದ್ರಪಡಿಸಲು ಸಹಾಯ ಮಾಡುತ್ತದೆ. ಆದರೆ ಪ್ಯೂರ್ ಅಯೋರ್ಟಿಕ್ ರಿಗರ್ಜಿಟೇಷನ್ ನಲ್ಲಿ ಯಾವುದೇ ಕ್ಯಾಲ್ಸಿಯಂ ರಚನೆ ಇರುವುದಿಲ್ಲ, ಹೀಗಾಗಿ ಸಾಧನವನ್ನು ಭದ್ರವಾಗಿ ಕೂರಿಸಲು ಯಾವುದೇ ಕಠಿಣವಾದ ಆಧಾರ ಇರುವುದಿಲ್ಲ. ಈ ಶಾರೀರಿಕ ಸವಾಲಿನಿಂದಾಗಿ, ಈ ಕಾಯಿಲೆಗೆ ನಿರ್ದಿಷ್ಟವಾದ ಟ್ರಾನ್ಸ್‌ ಕ್ಯಾತಿಟರ್ ಪರಿಹಾರವನ್ನು ಅಭಿವೃದ್ಧಿಪಡಿಸುವುದು ವಿಳಂಬವಾಗಿತ್ತು.

IMG-20260526-WA0004

ಹ್ಯಾಂಕರ್ ವಾಲ್ವ್ ಸಿಸ್ಟಮ್ ಅನ್ನು ನಿರ್ದಿಷ್ಟವಾಗಿ ಈ ಕೊರತೆಯನ್ನು ನೀಗಿಸಲು ವಿನ್ಯಾಸಗೊಳಿಸಲಾಗಿದೆ. ಪ್ಯೂರ್ ಅಯೋರ್ಟಿಕ್ ರಿಗರ್ಜಿಟೇಷನ್ ನ ವಿಶಿಷ್ಟ ಶಾರೀರಿಕ ಅಗತ್ಯಗಳಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದ್ದು, ಕವಾಟದಲ್ಲಿ ಕ್ಯಾಲ್ಸಿಯಂ ಇಲ್ಲದಿದ್ದರೂ ಸಹ ವಿಶ್ವಾಸಾರ್ಹ ಟ್ರಾನ್ಸ್‌ ಕ್ಯಾತಿಟರ್ ವಿಧಾನವನ್ನು ಇದು ಸಾಧ್ಯವಾಗಿಸುತ್ತದೆ. ಈ ವ್ಯತ್ಯಾಸವು ಅತ್ಯಂತ ಮಹತ್ವದ್ದಾಗಿದ್ದು, ಆರಂಭಿಕ ಹಂತದ ಸಾಮಾನ್ಯ ಸಾಧನಗಳೊಂದಿಗೆ ಪ್ಯೂರ್ ಎಆರ್ ಚಿಕಿತ್ಸೆಯ ಯಶಸ್ಸಿನ ಪ್ರಮಾಣವು ಶೇಕಡಾ 67% ರಷ್ಟಿತ್ತು. ಆದರೆ ಈ ವಿಶೇಷ ವ್ಯವಸ್ಥೆಗಳು ಆ ಅಂಕಿ-ಅಂಶವನ್ನು ಸರಿಸುಮಾರು ಶೇಕಡಾ 95%ಕ್ಕೆ ಹೆಚ್ಚಿಸಿವೆ. ಅಲ್ಲದೆ, ಕವಾಟವು ತನ್ನ ಜಾಗದಿಂದ ಜರುಗುವ ಅಪಾಯವನ್ನು ಇದು ಕಡಿಮೆ ಮಾಡುತ್ತದೆ ಮತ್ತು 30 ದಿನ ಹಾಗೂ ಒಂದು ವರ್ಷದ ಮರಣ ಪ್ರಮಾಣವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ದೃಢಪಡಿಸಿವೆ. ಈ ವಿಶೇಷ ಸಾಧನಗಳು ಭಾರತದಲ್ಲಿ ಲಭ್ಯವಿರಲಿಲ್ಲ. ನಾರಾಯಣ ಹೆಲ್ತ್ ಸಿಟಿಯು ಸರ್ಕಾರದ ವಿಶೇಷ ಅನುಮತಿಯೊಂದಿಗೆ ಈ ಸಾಧನಗಳನ್ನು ಆಮದು ಮಾಡಿಕೊಂಡಿದ್ದು, ಸಾಂಪ್ರದಾಯಿಕ ಮುಕ್ತ ಹೃದಯ ಶಸ್ತ್ರಚಿಕಿತ್ಸೆಗೆ ಒಳಪಡಿಸಲು ಅತಿ ಹೆಚ್ಚು ಅಪಾಯವಿದ್ದ ಇಬ್ಬರು ರೋಗಿಗಳಿಗೆ ಇದನ್ನು ಬಳಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ