ಅಮೆರಿಕಾದ ಟ್ಯಾರೀಪಗಳ ಪರಿಣಾಮವಾಗಿ, ಈಗ ಭಾರತದ ನರೇಂದ್ರ ಮೋದಿಯವರು ಹೋಗಿ ಚೀನಾದ ಮಡಿಲಲ್ಲಿ ಶರಣಾಗತಿ ಪಡೆಯಬೇಕಿದೆ. ಗ್ವಾನ್ ತೀರ, ಅಸ್ಸಾಯಿ ಚೀನಾ, ಅರುಣಾಚಲ ಪ್ರದೇಶಗಳ ಕುರಿತಾಗಿ ತಾವು ಟೀಕಿಸುತ್ತಿದ್ದುದನ್ನು ಮರೆತಂತಿದೆ. ಅವರ ಪಕ್ಷ ಮೋದಿಯವರ ವಿರೋಧಿಗಳನ್ನು ಸುಲಭವಾಗಿ ಜಗ್ಗಿಹಿಡಿದು, ಚೀನಾವನ್ನು ಯಾವ ರೀತಿಯಲ್ಲೂ ಹೇಗಾದರೂ ಸರಿ ಸಮರ್ಥಿಸಿಕೊಳ್ಳುವ ವಕಾಲತ್ತು ನಡೆಸುತ್ತದೆ.
ನಮ್ಮ ವ್ಯಾಪಾರಿಗಳು ಚೀನಾದಿಂದ ಸತತ ರಾಶಿರಾಶಿ ಸಾಮಗ್ರಿ ಆಮದು ಮಾಡಿಕೊಳ್ಳುತ್ತಿರುವವರೆಗೂ ಎಲ್ಲಾ ಸಲೀಸು. ಎಲ್ಲೆಲ್ಲಿ ಭಗವಾ ಧ್ವಜ ಹಾರಾಡುತ್ತಿದೆಯೋ ಅಲ್ಲೂ ಚೀನಾ ಸಾಮಗ್ರಿ ತುಂಬಿ ಹೋಗುವಂತಾದಾಗ ಮಾತ್ರ. ಸಕಲ ಚೀನಾ ಮೂಲದ್ದೇ ಆಗಿರಬೇಕು. ಬಹಳಷ್ಟು ಉತ್ಪನ್ನಗಳು ಭಾರತದಲ್ಲೇ ತಯಾರಾದರೂ, ಅದರ ಕಚ್ಚಾ ಸಾಮಗ್ರಿ ಹಾಗೂ ಯಾವ ಯಂತ್ರಗಳಿಂದ ಅವು ತಯಾರಾಗುತ್ತವೆ, ಅವೆಲ್ಲ ಚೀನಾ ಮೂಲದ್ದೇ! ಹೀಗಾಗಿಯೇ ಚೀನಾದಿಂದ ಭಾರತ 100 ಸಹಸ್ರ ಕೋಟಿ ಡಾಲರ್ ಗಳಿಗಿಂತಲೂ ಹೆಚ್ಚಿನ ಸಾಮಗ್ರಿ ಆಮದು ಮಾಡಿಕೊಳ್ಳಬೇಕಾಗುತ್ತದೆ.
ಇಂದು ಯಾವುದೇ ಹೋಲ್ ಸೇಲ್ ಮಾರ್ಕೆಟ್ ನಲ್ಲಿ ಹೋಗಿ ನೋಡಿ, ಪ್ರತಿ ಡಬ್ಬಾದ ಮೇಲೂ `ಮೇಡ್ ಇನ್ ಚೀನಾ' ಎಂಬ ಲೇಬಲ್ ರಾರಾಜಿಸುತ್ತಿರುತ್ತದೆ. ಎಷ್ಟೋ ಸಾಮಗ್ರಿ ಅನಾಮಧೇಯ ಹೆಸರಿನಲ್ಲಿ ಬರುತ್ತದೆ, ಯಾವ ಚೀನಾದ ತಯಾರಕರು ತಮ್ಮ ದೇಶೀ ಬ್ರಾಂಡ್ ಅಂಟಿಸಿರುತ್ತಾರೆ. ಭಾರತೀಯರು ಚೀನಾದ ಈ ಮಾಲು ಪಡೆದು ಧನ್ಯೋಸ್ಮಿ ಎಂದುಕೊಳ್ಳುತ್ತಾರೆ. ಅವರಿಗೆ ಅದರಲ್ಲಿ ಎಲ್ಲೂ ಶತ್ರುತ್ವದ ದುರ್ವಾಸನೆಯ ಸುಳಿವು ಸಿಗುವುದಿಲ್ಲ. ಆದರೆ ಟ್ರಂಪಣ್ಣನ ಟ್ಯಾರೀಫ್ ಜಗಳದ ಮೊದಲಿನ ವ್ಯಾಪಾರದ ನೆಪವಿದ್ದರೂ, ಚೀನಾವನ್ನು ರೂಲಿಂಗ್ ಪಾರ್ಟಿ ಶತ್ರುಗಳೆಂದೇ ಭಾವಿಸುತ್ತಿತ್ತು. BJP ಸರ್ಕಾರದ ಮೂಲಕ ಚೀನಾದ ಕಮ್ಯೂನಿಸ್ಟ್ ಪಾರ್ಟಿ ಹಾಗೂ ಕಾಂಗ್ರೆಸ್ ಪಾರ್ಟಿಯ ವಿಚಾರ ವಿನಿಮಯದ ಸಂಧಾನ ಕಂಡು ಡಂಗೂರ ಸಾರುತ್ತಿತ್ತು.
ಟ್ರಂಪಣ್ಣ ಭಾರತವನ್ನು ನಡೆಸಿಕೊಳ್ಳುತ್ತಿರುವ ಪರಿ ನಿಜಕ್ಕೂ ನಾಚಿಕಿಗೇಡಿತನದ ಹಾಗೂ 2 ದೊಡ್ಡ ಪ್ರಜಾಪ್ರಭುತ್ವ ದೇಶಗಳ ಕೊರತೆಗಳನ್ನು ಎತ್ತಿಹಿಡಿಯಲಾಗುತ್ತಿದೆ, ಇದರ ಅರ್ಥ ನಾವು ನೆಹರೂ ಹಾಗೂ ಹಿಂದಿನ ಪ್ರಧಾನಿಗಳ ಹಾಗೆ ಮತ್ತೆ ಚೀನಾದ ಬೂಟು ನೆಕ್ಕಲಾಗದು. ಸದ್ಯದ ಪರಿಸ್ಥಿತಿಯಲ್ಲಿ, ಭಾರತದ ಧುರೀಣರು ಹೆದರಿಕೊಂಡು ಚೀನಾದ ಸೆರಗಿನಲ್ಲಿ ಅಡಗಿಕೊಳ್ಳುತ್ತಿರುವಂತಿದೆ. ಹೀಗೆ ಮಾಡುವುದು ಅನಿವಾರ್ಯ ಅಂತಾದರೆ, ಮೊದಲು ಚೀನಾದೊಂದಿಗೆ ಗಡಿ ವಿವಾದ ಇತ್ಯರ್ಥ ಮಾಡಿಕೊಳ್ಳುವುದು ಲೇಸು.
ಇಬ್ಬರು ನೆರೆಹೊರೆಯವರು ಬಹಳ ದಿನಗಳ ಜಗಳದ ನಂತರ ಕೈ ಕೈ ಮಿಲಾಯಿಸಬೇಕಾದರೆ, ಮೊದಲ ವಿಷಯವಾಗಿ ಪರಸ್ಪರರ ಜಗಳಕ್ಕೆ ಇತಿಶ್ರೀ ಹಾಡಬೇಕು. ಒಂದು ಮನೆಯ ಹೊಗೆ, ಕೊಳಚೆ ನೀರು ಪಕ್ಕದ ಮನೆಗೆ ನುಗ್ಗುತ್ತಿದ್ದರೆ ಅಂಥ ಕೊಳಕನ್ನು ಮೊದಲು ನಿವಾರಿಸಿಕೊಳ್ಳಬೇಕು. ಒಂದು ಮನೆಯವರು ಪಕ್ಕದ ಮನೆಯವರ ಮುಂದೆ ಕಾರು ಪಾರ್ಕಿಂಗ್ ಮಾಡುವುದನ್ನು ತಮ್ಮ ಹಕ್ಕೆಂದೇ ಭಾವಿಸುತ್ತಾರೆ, ಇದಕ್ಕೆ ವಿರೋಧ ತೋರಿದರೂ ಒಪ್ಪಲಾರರು, ಹಾಗಿರುವಾಗ ಅಂಥ ನೆರೆಯವರಿಂದ ನಮಗೆ ರೋಗ ಕಾಡಿದಾಗ ಔಷಧಿ ಯಾವ ಸಹಾಯ ಪಡೆಯುವುದು ಹೇಗೆ?
ಅಗತ್ಯ ಬಿದ್ದಾಗ ಕತ್ತೆ ಕಾಲು ಹಿಡಿ ಎಂಬ ನೀತಿ ಪಾಠವನ್ನು ಅನಾದಿ ಕಾಲದಿಂದ ಕಲಿಯುತ್ತಿದ್ದೇವೆ. ಧಾರ್ಮಿಕ ಪುರಾಣ ಅದನ್ನೇ ಸಾರುತ್ತದೆ. ಅಮೃತ ಮಂಥನ ನಡೆಸಲು ದಾನವರನ್ನು ದೇವತೆಗಳು ಸಹಾಯಕ್ಕೆ ಕರೆದರು, ಆದರೆ ನಂತರ ಅವರಿಗೆ ಅಮೃತ ಮಾತ್ರ ಕೊಡಲಿಲ್ಲ. ಅಗತ್ಯ ಬಿದ್ದಾಗ ರಾಮ ತನಗೇನೂ ಕೇಡು ಮಾಡದ ವಾಲಿಯ ವಧೆ ಮಾಡಿದ, ಅವನು ಗೆಳೆಯ ಸುಗ್ರೀವನ ಶತ್ರು ಎಂಬ ಒಂದೇ ಕಾರಣಕ್ಕಾಗಿ. ರಾಕ್ಷಸ ರಾಣ ದುರಾಚಾರಿ ಎಂದು ಕೊಲ್ಲಲಾಯಿತು, ಅವನ ತಮ್ಮ ವಿಭೀಷಣನನ್ನು ಮಾತ್ರ ಮುಗ್ಧನೆಂದೇ ಸ್ವೀಕರಿಸಲಾಯಿತು.





