ಆಹಾರ ಪ್ರತಿ ಜೀವರಾಶಿಗೂ ಅತ್ಯವಶ್ಯಕ. ದೇಹದ ಬೆಳವಣಿಗೆಯ ಚಟುವಟಿಕೆಯಲ್ಲಿ ಶಕ್ತಿ ಪಡೆಯುವಲ್ಲಿ ಹಾಗೂ ರೋಗರುಜಿನಗಳಿಂದ ರಕ್ಷಿಸುವುದಕ್ಕಾಗಿ ಆಹಾರವನ್ನು ಸೇವಿಸಬೇಕು. ನಾವು ಸೇವಿಸುವ ಆಹಾರದಿಂದಲೇ ಆರೋಗ್ಯ. ಅದನ್ನು ಕಾಪಾಡಿಕೊಳ್ಳಲು ಯಾವಾಗ, ಯಾವ ರೀತಿಯಲ್ಲಿ, ಎಷ್ಟು ಪ್ರಮಾಣದಲ್ಲಿ ಹಾಗೂ ಎಂತಹ ಆಹಾರವನ್ನು ಸೇವಿಸಬೇಕು ಎಂಬ ಅರಿವು ನಮಗೆ ಇರಬೇಕು. ದಿನನಿತ್ಯ ಉಪಯೋಗಿಸುವ ಆಹಾರ ಪದಾರ್ಥಗಳಲ್ಲಿರುವ ಔಷಧೀಯ ಗುಣಗಳನ್ನು ಗುರುತಿಸಿ ಅವುಗಳ ಉಪಯೋಗದಿಂದ ಸಣ್ಣಪುಟ್ಟ ಕಾಯಿಲೆಗಳನ್ನು ಮನೆಯಲ್ಲಿಯೇ ಗುಣಪಡಿಸಿಕೊಳ್ಳಲು ಹಾಗೂ ಆಹಾರದಿಂದಲೇ ರೋಗ ತಡೆಗಟ್ಟುವ ಶಕ್ತಿಯನ್ನು `ಆಹಾರದಿಂದ ಆರೋಗ್ಯ' ಎನ್ನಬಹುದು.

``ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿಕವಾದ ಆಹಾರವನ್ನು ಸಮತೋಲನದಲ್ಲಿ ಸೇವಿಸಬೇಕು. `ಪ್ರಿಕಾಶನ್‌ ಈಸ್‌ ಬೆಟರ್‌ ದ್ಯಾನ್‌ ಕ್ಯೂರ್‌' ಎನ್ನುವಂತೆ ರೋಗಗಳು ಬಂದ ನಂತರ ದುಬಾರಿ ವೆಚ್ಚದ ಔಷಧಿಗಳಿಗೆ ಮೊರೆ ಹೋಗುವ ಬದಲು ನಾವು ನಮ್ಮ ಪ್ರಕೃತಿದತ್ತವಾಗಿ ಸಿಗುತ್ತಿರುವ ಆಹಾರದಿಂದಲೇ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೀವನ ಶೈಲಿಯನ್ನು ಅವಳಡಿಸಿಕೊಳ್ಳಬೇಕು. ಆರೋಗ್ಯವಂತ ಬದುಕನ್ನು ನಮ್ಮದಾಗಿಸಿಕೊಳ್ಳಬೇಕು,'' ಎನ್ನುತ್ತಾರೆ ಹ್ಯೂಮನ್‌ ನ್ಯೂಟ್ರಿಷಿಯನ್‌ಪದವೀಧರ ಗೃಹಿಣಿ ವೀಣಾ ಶ್ರೀನಾಥ್‌.

ಯಾವುದೇ ರೋಗದ ವಿರುದ್ಧ ಸುಲಭವಾಗಿ ಹೋರಾಡುವ ಸಾಮರ್ಥ್ಯವನ್ನು ಪೌಷ್ಟಿಕಾಂಶಗಳು ಕೊಡಬಹುದೇ? ಎಂದು ಖ್ಯಾತ ಆರೋಗ್ಯ ತಜ್ಞರಾದ ಡಾ. ಎಚ್‌.ಎಸ್‌. ಪ್ರೇಮಾರವರನ್ನು ಕೇಳಿದಾಗ ಹಲವಾರು ವಿಷಯಗಳನ್ನು ತಿಳಿಸಿದರು.

``ಒಂದೊಂದು ಕಾಯಿಲೆಗೂ ಒಂದೊಂದು ರೀತಿಯ ನಿರ್ದಿಷ್ಟ ಆಹಾರಗಳಿರುತ್ತವೆ. ಅವುಗಳಿಗೆ ಅನುಗುಣವಾಗಿ ಥೆರಪಿಸ್ಟ್ ಆಹಾರ (ಚಿಕಿತ್ಸಕ ಆಹಾರ)ಗಳನ್ನು ನೀಡುತ್ತೇವೆ. ಉದಾಹರಣೆಗೆ ಕಬ್ಬಿಣಾಂಶದ ಕೊರತೆ ಅಂದರೆ ಅನಿಮಿಕ್‌ ಇರುವವರಿಗೆ ದಂಟಿನ ಸೊಪ್ಪು, ಪಾಲಕ್‌ ಸಲಹೆ ಮಾಡುತ್ತೇವೆ. ಆದಷ್ಟೂ ಸ್ಥಳೀಯ ಕಬ್ಬಿಣಾಂಶದ ಆಹಾರಗಳನ್ನು ತೆಗೆದುಕೊಳ್ಳುವಂತೆ ಹೇಳುತ್ತೇವೆ. ಬಾಣಂತಿಯರಲ್ಲಿ ಹೆಚ್ಚಾಗಿ ಕ್ಯಾಲ್ಶಿಯಂ ಕೊರತೆ ಕಾಣಸಿಗುತ್ತದೆ. ಇಲ್ಲಿ ಬಡ ಬಲ್ಲಿದರೆಂಬ ಭೇದಭಾವ ಇರುವುದಿಲ್ಲ.

``ವಾತ, ಪಿತ್ತ, ಶೀತಗಳು ಎಲ್ಲರ ದೇಹಕ್ಕೂ ಒಂದೇ. ಹಾಗಾಗಿ ಈ ಸಮಯದಲ್ಲಿ ಉಷ್ಣದ ಪದಾರ್ಥಗಳನ್ನು ಸೇವಿಸಲು ಹೇಳುತ್ತೇವೆ. ಸಸ್ಯಮೂಲ ಆಹಾರಗಳು ದುಬಾರಿ ಇರುವುದಿಲ್ಲ. ಕೈಗೆಟುಕು ಬೆಲೆಯಲ್ಲೇ ದೊರೆಯುತ್ತವೆ. ಇದರಲ್ಲಿ ಹೆಚ್ಚಿನ ಕಬ್ಬಿಣಾಂಶ ಇರುವುದರಿಂದ ಇದನ್ನೇ ಸಜೆಸ್ಟ್ ಮಾಡುತ್ತೇವೆ. ಹಾಲು, ರಾಗಿ ಈ ಸಮಯದಲ್ಲಿ ಬಹಳವೇ ಉಪಯೋಗಕ್ಕೆ ಬರುತ್ತದೆ. ಒಂದೊಂದು ಆಹಾರಾಂಶ ದೇಹದ ಒಳಗೆ ಹೋಗಿ ತನ್ನ ನಿರ್ದಿಷ್ಟ ಕೆಲಸಗಳನ್ನು ಮಾಡುತ್ತಿರುತ್ತದೆ. ಹಾಗಾಗಿ ರೋಗ ನಿರೋಧಕ ಶಕ್ತಿ (ಇಮ್ಯೂನಿಟಿ) ಹೆಚ್ಚಾಗಿ ಆರೋಗ್ಯವಂತ ಬದುಕು ನಮ್ಮದಾಗುತ್ತದೆ. ಚಿಕಿತ್ಸಕ ಆಹಾರಗಳನ್ನು ಸಜೆಸ್ಟ್ ಮಾಡುವಾಗ ವಯಸ್ಸು, ಲಿಂಗ, ಶಾರೀರಿಕ ಸಮಸ್ಯೆ, ಜೆನೆಟಿಕ್‌ ತೊಂದರೆ ಹಾಗೂ ಪರಿಸರಕ್ಕೆ ಅನುಗುಣವಾಗಿ ಹೇಳುತ್ತೇವೆ. ಜೊತೆಗೆ ಕ್ಯಾಲರಿಯನ್ನೂ ಅಡ್ಜೆಸ್ಟ್ ಮಾಡಿ ಹೇಳುತ್ತೇವೆ.''

ಡಾ. ಎಸ್‌. ವಿವೇಕ್‌, ಎಂಬಿಬಿಎಸ್‌, ಎಂಡಿ, ಡಿಎನ್‌ಬಿ, ಅಸೋಸಿಯೇಟ್‌ ಪ್ರೊಫೆಸರ್‌, ಅಜೀಜಿಯಾ ಇನ್ ಸ್ಟಿಟ್ಯೂಟ್‌ ಆಫ್‌ ಮೆಡಿಕಲ್ ಸೈನ್ಸ್, ಕೊಲ್ಲಂ, ಕೇರಳ. ಇವರು ಆಹಾರ ಪದ್ಧತಿಯ ಬಗ್ಗೆ ತಮ್ಮ ಅನಿಸಿಕೆಯನ್ನು ಹೀಗೆ ಪ್ರಾರಂಭಿಸಿದರು....

`ಎಷ್ಟು ನೀನುಂಡರೇಂ ಪುಷ್ಟಿ ಮೈಗಾಗುವುದು, ಹೊಟ್ಟೆ ಜೀರ್ಣಿಸುವಷ್ಟೇ ಮಿಕ್ಕದ್ದೆಲ್ಲ ಕಸ, ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು? ಮುಷ್ಟಿ ಪಿಷ್ಟ ತಾನೇ?  ಮಂಕುತಿಮ್ಮ'

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ