ಶರೀರದಲ್ಲಿ ಎನರ್ಜಿ ಖಾಯಮ್ಮಾಗಿಡಲು ಬೇಸಿಗೆಯಲ್ಲಿ ವಿಶೇಷವಾಗಿ ಹುರಿದ, ಕರಿದ ಮಸಾಲೆಯುಕ್ತ ಆಹಾರವನ್ನು ದೂರ ಮಾಡಿ. ನಿಮ್ಮ ಆಹಾರದಲ್ಲಿ ಆರೋಗ್ಯಕರವಾದ ಹಾಗೂ ಉಷ್ಣತೆಯಿಂದ ಪಾರು ಮಾಡುವಂತಹ ಪದಾರ್ಥಗಳನ್ನು ಸೇರಿಸಿಕೊಳ್ಳಿ.

ಇದರ ಬಗ್ಗೆ ಹೆಸರಾಂತ ಡಯೆಟ್‌ ಅಂಡ್‌ ನ್ಯೂಟ್ರಿಶನ್‌ ಕನ್ಸಲ್ಟೆಂಟ್‌ ಮಾಲತಿ, ಉಷ್ಣತೆಯಿಂದ ಪಾರಾಗಲು ಶರೀರದಲ್ಲಿ ನೀರಿನ ಕೊರತೆಯಾಗದಂತೆ ಹಾಗೂ ಎನರ್ಜಿ ಲೆವೆಲ್ ಸರಿಯಾಗಿರುವಂತೆ ಮಾಡುವ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ ಎಂದರು. ಬೇಸಿಗೆಯಲ್ಲೂ ಕೂಲ್ ಕೂಲ್‌ ಆಗಿರುವಂತಹ ಕೆಲವು ಉಪಾಯಗಳನ್ನು ಅವರು ತಿಳಿಸಿದರು.

ಎಳನೀರು : ಎಳನೀರು ಕುಡಿಯುವುದು ಆರೋಗ್ಯಕ್ಕೆ ಬಹಳ ಲಾಭಕರ. ಎಳನೀರು ದೇಹದಲ್ಲಾದ ನೀರಿನ ಕೊರತೆಯನ್ನು ದೂರ ಮಾಡುತ್ತದೆ. ಹೊಟ್ಟೆನೋವು, ಅಸಿಡಿಟಿ ಮತ್ತು ಅಲ್ಸರ್‌ನಂತಹ ಸಮಸ್ಯೆಗಳಿಂದಲೂ ಪರಿಹಾರ ಸಿಗುತ್ತದೆ. ಆದರೆ ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬಾರದು. ಶರೀರದಲ್ಲಿ ಗ್ಲೂಕೋಸ್‌ನ ಕೊರತೆಯಾಗಿದ್ದರೆ ಎಳನೀರು ಕುಡಿಯಬಹುದು. ಇದಲ್ಲದೆ, ಡೀ ಹೈಡ್ರೇಶನ್‌, ವೇಟ್‌ ಲಾಸ್‌ ಮತ್ತು ಬ್ಲಡ್‌ ಪ್ರೆಶರ್‌ನಲ್ಲಿ ಸುಧಾರಣೆ ತರಲು ಸಹ ಇದು ಲಾಭಕಾರಿ.

ಎಳನೀರಿನಲ್ಲಿ ಪೊಟ್ಯಾಶಿಯಂ, ಮೆಗ್ನೀಶಿಯಂ. ಸೋಡಿಯಂ ಮತ್ತು ಫಾಸ್ಛರಸ್‌ನಂತಹ ಮಿನರಲ್‌ಗಳಿವೆ. ಶರೀರದಲ್ಲಿ ನೀರಿನ ಕೊರತೆ ಅಥವಾ ಮಾಂಸಖಂಡಗಳಲ್ಲಿ ಬಿಗಿತದ ಸಮಸ್ಯೆ ಉಂಟಾದಾಗ 3-4 ದಿನ ದಿನಕ್ಕೆರಡು ಬಾರಿ ಎಳನೀರು ಕುಡಿಯಿರಿ. ಎಳನೀರಿನಲ್ಲಿ ಆ್ಯಂಟಿ ಫಂಗಲ್, ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು ಇರುತ್ತವೆ. ಇದನ್ನು ನಿಯಮಿತವಾಗಿ ಕುಡಿಯುವುದರಿಂದ ರೋಗನಿರೋಧಕ ಸಾಮರ್ಥ್ಯ ಹೆಚ್ಚುತ್ತದೆ. ಎಳನೀರಿನಲ್ಲಿ ರಾಸಾಯನಿಕ ಗುಣಗಳು ಪ್ಲಾಸ್ಮಾದಂತಿರುತ್ತವೆ. ಬೇಸಿಗೆಗೆ ಇದು ಆದರ್ಶ ಪೇಯವಾಗಿದೆ.

ನಿಂಬೆ : ನಿಂಬೆಹಣ್ಣು ಎಲ್ಲ ಸೀಸನ್‌ಗಳಲ್ಲೂ ಸಿಗುತ್ತದೆ. ಇದು ಆಹಾರದ ಸ್ವಾದ ಹೆಚ್ಚಿಸುವುದಷ್ಟೇ ಅಲ್ಲ ಅದರಲ್ಲಿ ಅನೇಕ ಔಷಧೀಯ  ಗುಣಗಳೂ ಇರುತ್ತವೆ. ಬೇಸಿಗೆಯಲ್ಲಿ ನಿಂಬೆಯ ಶರಬತ್‌ ಶರೀರಕ್ಕೆ ತಂಪು ನೀಡುತ್ತದೆ. ಇದು ಪಚನಕಾರಿ, ನೋವು ನಿವಾರಕ, ರಕ್ತಶೋಧಕ, ರೋಗ ನಿವಾರಕ ಹಾಗೂ ಶಕ್ತಿವರ್ಧಕ ಆಗಿದೆ. ಇದು ನರಗಳ ತೊಂದರೆಗಳನ್ನು ನಿವಾರಿಸಿ ಹೃದಯ, ಮೆದುಳನ್ನು ಶಾಂತವಾಗಿಡುತ್ತದೆ.  ನಿಂಬೆಯಲ್ಲಿ ಸಿಟ್ರಿಕ್‌ ಆ್ಯಸಿಡ್‌, ಪ್ರಾಕೃತಿಕ ಶರ್ಕರ ಕ್ಯಾಲ್ಶಿಯಂ, ಫಾಸ್ಪರಸ್‌, ಪೊಟ್ಯಾಶಿಯಂ ಮತ್ತು ವಿಟಮಿನ್‌ `ಸಿ' ಇರುತ್ತದೆ. ಬೇಸಿಗೆಯಲ್ಲಿ ನಿಂಬೆಯ ಶರಬತ್‌ ನಮಗೆ ಉಷ್ಣತೆಯಿಂದ ಪರಿಹಾರ ನೀಡುತ್ತದೆ. ನಿಂಬೆ ಆಮ್ಲೀಯವಾಗಿದ್ದರೂ ಪಿತ್ತನಾಶಕವಾಗಿದೆ.

ಕಿತ್ತಳೆ : ಬೇಸಿಗೆಯಲ್ಲಿ ಕಿತ್ತಳೆಹಣ್ಣು ತಿನ್ನುವುದರಿಂದ ಹೃದಯ ಹಾಗೂ ಮೆದುಳು ಕೂಲ್ ಆಗಿರುತ್ತದೆ. ಇದರಲ್ಲಿ ವಿಟಮಿನ್‌ `ಸಿ' ಹೆಚ್ಚಾಗಿರುತ್ತದೆ. ಜೊತೆಗೆ ಇದರಲ್ಲಿ ಐರನ್‌, ಪೊಟ್ಯಾಶಿಯಂ ಕೂಡ ಇರುತ್ತದೆ. ಕಿತ್ತಳೆಯ ಅತ್ಯಂತ ದೊಡ್ಡ ವಿಶೇಷತೆಯೆಂದರೆ ಅದರಲ್ಲಿರುವ ಫ್ರಕ್ಟೋಸ್‌, ಖನಿಜಗಳು ಮತ್ತು ವಿಟಮಿನ್‌ ಶರೀರದಲ್ಲಿ ಸೇರುತ್ತವೆ ಎನರ್ಜಿ ಕೊಡಲು ಪ್ರಾರಂಭಿಸುತ್ತದೆ. ಒಂದು ಗ್ಲಾಸ್‌ ಕಿತ್ತಳೆ ಜೂಸ್‌ ತನುಮನಕ್ಕೆ ಶೀತಲತೆ ಕೊಟ್ಟು ಸುಸ್ತು ಮತ್ತು ಒತ್ತಡವನ್ನು ದೂರ ಮಾಡುತ್ತದೆ. ಹೃದಯ ಮತ್ತು ಮೆದುಳಿಗೆ ಹೊಸ ಶಕ್ತಿ ಮತ್ತು ತಾಜಾತನ ಕೊಡುತ್ತದೆ. ಇದರಲ್ಲಿ ಕಡಿಮೆ ಕ್ಯಾಲೋರಿ ಇರುತ್ತದೆ. ಯಾವುದೇ ರೀತಿಯ ಸ್ಯಾಚುರೇಟೆಡ್‌ ಫ್ಯಾಟ್‌ ಅಥವಾ ಕೊಲೆಸ್ಟ್ರಾಲ್ ಕಿತ್ತಳೆಯಲ್ಲಿ ಇರುವುದಿಲ್ಲ. ಇದರಲ್ಲಿ ಫೈಬರ್‌ ಇದ್ದು ಹಾನಿಕಾರಕ ಅಂಶಗಳನ್ನು ಶರೀರದಿಂದ ಹೊರಗೆ ದೂಡಲು ಸಹಾಯಕವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ