ನಮ್ಮ ನಗರ ಬೆಂಗಳೂರು ಮೊದಲು ಇಷ್ಟು ಬೆಳೆದಿರಲಿಲ್ಲ. ಐ.ಟಿ. ಸಿಟಿಯಾಗಿ ಇಡೀ ದೇಶದ ಎಲ್ಲರೂ ಉದ್ಯೋಗವನ್ನರಸಿ ಇಲ್ಲಿಗೆ ಬರುವಂತಾಯಿತು. ಬಂದವರಿಗೆ ವಾಸಿಸಲು ವಸತಿ ಬೇಡವೇ? ಗಗನಚುಂಬಿ ಕಟ್ಟಡಗಳ ನಿರ್ಮಾಣವಾದ. ವಾಹನಗಳ ಸಂಖ್ಯೆ ಹೆಚ್ಚಾಯಿತು. ರಸ್ತೆಗಳ ಅಗಲೀಕರಣವಾಯಿತು. ಮೆಟ್ರೋ ಬಂದಿತು. ಪರಿಣಾಮ ಸಾಕಷ್ಟು ಮರಗಳ ಮಾರಣಹೋಮ ಆಯಿತು. ಈಗಾಗಲೇ ಬೇಸಿಗೆಯ ಆಗಮನವಾಗಿದೆ. ಆದರೆ ಕಳೆದ ವರ್ಷ ಸರಿಯಾಗಿ ಮಳೆಯಾಗದ ಕಾರಣ ಭೂಮಿಯೆಲ್ಲಾ ಒಣಗಿಹೋಗಿದೆ. ನೆಟ್ಟ ಗಿಡಗಳೆಲ್ಲಾ  ಮಂಕಾಗಿವೆ. ಈಗಲೇ ಹೀಗಾದರೆ ಇನ್ನು ಮುಂದಿನ ಗತಿ ಏನು? ಕುಡಿಯುವ ನೀರಿಗೂ ತತ್ವಾರ ಬರಬಹುದು. ಇದು ನಗರದ ಸ್ಥಿತಿ. ಉದ್ಯಾನ ನಗರಿಯಾದ ನಮ್ಮ ಬೆಂಗಳೂರು ಬರಡಾಗಿ ಹೋಗುತ್ತಿದೆ. ಆದ್ದರಿಂದ ಹಸಿರನ್ನು ಬೆಳೆಸುವಲ್ಲಿ ಎಲ್ಲರೂ ತಮಗೆ ಸಾಧ್ಯವಾದ ರೀತಿಯಲ್ಲಿ ಸಹಕರಿಸುವುದು ನಮ್ಮೆಲ್ಲರ ಉಳಿವಿನ ಪ್ರಶ್ನೆಯಾಗಿದೆ. ಅಂತೆಯೇ ಎಲ್ಲರೂ ಗಿಡ ಮರಗಳನ್ನು ನೆಡಲು, ಬೆಳೆಸಲು ಉತ್ಸುಕರಾಗಿದ್ದಾರೆ. ಮನೆಯ ಒಳಗೆ, ಹೊರಗೆ ಸ್ವಲ್ಪ ಸ್ಥಳವಿದ್ದರೂ ಅಲ್ಲಿಯೂ ಗಿಡಗಳನ್ನು ಬೆಳೆಸುವ ಆಸೆ. ಹಸಿರು ಜೀವನದ ಉಸಿರೂ ಹೌದು. ಜೊತೆಗೆ ನೋಡಲು ಕಣ್ಣಿಗೆ ಮುದವನ್ನೂ ನೀಡುತ್ತದೆ. ಎಷ್ಟೇ ಬಿಸಿಲಿದ್ದರೂ ಗಿಡಗಳ ನರ್ಸರಿಯಂತೂ ಎಲ್ಲೆಡೆ ಇದೆ. ಜೊತೆಗೆ ದಿನ ಬೆಳಗಾದರೆ ಪುಟ್ಟ ಪುಟ್ಟ ಹಸಿರು ಗಿಡಗಳು ಗಾಡಿಗಳಲ್ಲಿ ಮಾರಾಟಕ್ಕೆ ಲಭ್ಯ. ಹಾಗಾದರೆ ಮನಸು ಮಾಡಿದರೆ ಮನೆಯ ಮುಂದುಗಡೆ ಅಥವಾ ಪಕ್ಕವಾಗಲೀ, ಬಾಲ್ಕನಿಯಲ್ಲಾಗಲೀ ಜೊತೆಗೆ ಮನೆಯೊಳಗೆ ಪಡಸಾಲೆಯಲ್ಲೂ ಸಹ ಹಸಿರನ್ನು ಮೂಡಿಸಬಹುದು. ವಿದೇಶಗಳಲ್ಲಿ ಮನೆಯ ಮುಂದೆ ಇರುವ ಬಹಳ ಸಣ್ಣ ಜಾಗದಲ್ಲಿಯೇ ಪುಟ್ಟದೊಂದು ಉದ್ಯಾನವನವನ್ನು ನಿರ್ಮಿಸಿಬಿಡುತ್ತಾರೆ. ಒಂದು ಪುಟ್ಟ ಹಸಿರು ಹಾಸು, ಅದರ ಸುತ್ತಲೂ ಪುಟ್ಟ ಪುಟ್ಟ ಹೂವಿನ ಗಿಡಗಳು ಅಲ್ಲೊಂದು ವಾಟರ್‌ ಬಾಡಿ ಅರ್ಥಾತ್‌ ಚಿಕ್ಕದೊಂದು ಕೊಳ. ಅದರ ಜೊತೆ ಸಣ್ಣದೊಂದು ದಿಬ್ಬವನ್ನು ಕಟ್ಟಿ ಉದ್ಯಾನವನವನ್ನೇ ಮೂಡಿಸಿಬಿಡುತ್ತಾರೆ.

ಈಗ ನಮ್ಮಲ್ಲೂ ಹಸಿರನ್ನು ಕಾಣುವ ಆಸೆ ಎಲ್ಲರದು. ಅವರ ನಿವೇಶನದ ವಿಸ್ತೀರ್ಣಕ್ಕೆ ಅನುಗುಣವಾಗಿ ಸ್ವಲ್ಪ ಸ್ಥಳವನ್ನು ಪುಟ್ಟದೊಂದು ತೋಟಕ್ಕಾಗಿ ಮೀಸಲಿಟ್ಟಾಗ ಕಣ್ಣಿಗೆ ತಂಪೆನಿಸುವುದಲ್ಲದೆ, ಒಂದಷ್ಟು ಆಮ್ಲಜನಕ ದೊರಕೀತು. ದೊಡ್ಡ ನಿವೇಶನಗಳಲ್ಲಿ ಹೊಸದಾಗಿ ಮನೆ ಕಟ್ಟುವವರು ಶೇ.10 ಭಾಗವನ್ನು ಹಸಿರು ಮೂಡಿಸಲು ಮೀಸಲಿಟ್ಟಾಗ ಸುಂದರವಾದ ತೋಟವನ್ನು ನಿರ್ಮಿಸಬಹುದೆನ್ನುತ್ತಾರೆ ಆರ್ಕಿಟೆಕ್ಟ್ ರುದ್ರೇಶ್‌.

maneya-horagu-olagu-hasiru

ಒಂದು ಪುಟ್ಟ ಲಾನ್‌, ಸಣ್ಣ ಕೊಳ, ಸೇತುವೆ ಒಂದೆರಡು ಮರಗಳು ದಿನನಿತ್ಯ ಹೂವು ಬಿಡುವ ಗಿಡಗಳನ್ನು ಬೆಳೆಸಬಹುದು. ಸಣ್ಣದೊಂದು ವೀಳ್ಯದ ಬಳ್ಳಿಯನ್ನು ಸಹ ಹಬ್ಬಿಸಬಹುದು ಎನ್ನುವುದು ಅವರ ಅಭಿಪ್ರಾಯ.

``ನಾವು ಎಚ್‌.ಎಸ್‌.ಆರ್‌ ಲೇಔಟ್‌ಗೆ ಬಂದಾಗ ವೀಳ್ಯದೆಲೆಗಳನ್ನು ತರಲು ದೂರ ಹೋಗಬೇಕಾಗುತ್ತಿತ್ತು. ಆದರೆ ಈಗ ಮನೆಯಲ್ಲಿಯೇ ವೀಳ್ಯದ ಬಳ್ಳಿಯನ್ನು ಹಬ್ಬಿಸಿದ್ದೇವೆ. ಹಬ್ಬಗಳಿಗೂ ಮಾತ್ರವಲ್ಲ, ವೀಳ್ಯದ ಎಲೆ ಹಾಕಿಕೊಳ್ಳುವ ಗೆಳತಿಯರಿಗೂ ತಾಜಾ ಎಲೆಯನ್ನು ನೀಡುತ್ತೇನೆ. ಮನೆಯಲ್ಲಿಯೇ ಬೆಳೆಸಿದ ಬಳ್ಳಿಯಿಂದ ಹೋಮ್ ಮೇಡ್‌ ಬೀಡಾ ಅರ್ಥಾತ್‌ ಪಾನ್‌ನ್ನು ಊಟದ ನಂತರ ಮೆಲ್ಲಬಹುದು,'' ಎನ್ನುತ್ತಾರೆ ಎಚ್‌.ಎಸ್‌.ಆರ್‌ ಲೇಔಟ್‌ನ ನಿವಾಸಿ ಪದ್ಮಶ್ರೀ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ