ಇತ್ತೀಚಿನ ದಿನಗಳಲ್ಲಿ `ಸೆಲೆಬ್ರಿಟಿ ಬ್ರೇಕ್‌ಅಪ್‌' ಹೆಚ್ಚು ಸುದ್ದಿ ಮಾಡುತ್ತಿವೆ. ಸಲ್ಮಾನ್‌ ಕತ್ರೀನಾ ಕೈಫ್‌, ಬಿಪಾಶಾ ಜಾನ್‌ಅಬ್ರಹಾಂ ಆಕಸ್ಮಿಕ ಎಂಬಂತೆ ಬೇರೆ ಬೇರೆಯಾದರು. ಮಲೈಕಾ ಹಾಗೂ ಅರ್ಬಾಜ್ ಕೂಡ ಬೇರೆ ಬೇರೆಯಾಗಿ ಬಹು ದೊಡ್ಡ ಅಚ್ಚರಿ ಮೂಡಿಸಿದರು. ಕಿರುತೆರೆಯ ಹೆಸರಾಂತ ನಟ ಕರಣ್‌ ಗ್ರೋವರ್‌ ಮೊದಲ ಪತ್ನಿಗೆ ವಿಚ್ಛೇದನ ಕೊಟ್ಟ. ಬಳಿಕ ಜೆನಿಫರ್‌ಳೊಂದಿಗೆ ಮದುವೆ, ನಂತರ ವಿಚ್ಛೇದನ ಪಡೆದ. ಬಳಿಕ ಬಿಪಾಶಾ ಬಸು ಜೊತೆ ಮದುವೆ. ಅದಾದರೂ ಎಷ್ಟು ದಿನ? ನಾವು ಯಾರಾದರೂ ಸೆಲೆಬ್ರಿಟಿಗಳನ್ನು ನೋಡಿದಾಗ ಎಂತಹ ಅದ್ಭುತ ಜೋಡಿ ಅನಿಸುತ್ತದೆ. ಕೆಲವೇ ದಿನಗಳ ಬಳಿಕ ಆ ಜೋಡಿ ಈಗ ಜೊತೆಗಿಲ್ಲ ಎಂಬ ಸುದ್ದಿ ಬರುತ್ತದೆ. ಹೀಗಾಗಿ ಆಧುನಿಕ ಸಂಬಂಧಗಳ ಬಗೆಗಿನ ನಂಬಿಕೆಯೇ ಹೊರಟು ಹೋಗುತ್ತಿದೆ. ಹೃತಿಕ್‌ ರೋಶನ್‌ ಸುಜೈನಾ ಜೊತೆ ವಿವಾಹವಾದಾಗ ಹಲವರ ಹೃದಯ ಚೂರು ಚೂರಾಗಿತ್ತು. ಈಗ ಅವರು ಪ್ರತ್ಯೇಕಗೊಂಡಿದ್ದಾರೆ.

ಹಾಲಿವುಡ್‌ನ ಬ್ರಾಡ್‌ಫಿಟ್‌ ಮತ್ತು ಜೆನಿಫರ್‌ ಜೋಡಿ ಒಂದು ರೀತಿಯಲ್ಲಿ ಮಾದರಿಯಂತಿತ್ತು. ಆದರೆ ಏಂಜಲಿನಾ ಜೊತೆ ಬ್ರಾಡ್‌ಫಿಟ್‌ ಸಂಬಂಧ ಶುರುವಾದಾಗ ಅವರಿಬ್ಬರ ಬ್ರೇಕ್‌ಅಪ್‌ ಆಯಿತು. ಬೆನ್‌ಹಿಜಿನ್‌ ಸಾರೆನ್‌ ಬುಶ್‌ನೆ್‌, ಕೆಟೊಪೆರೊಓ್ಯಾಂಡೊ ಬ್ಲೂವ್‌, ರಿಚಡ್‌ ಪ್ಯಾರಿಜೆನ್‌ಘೇಂಡಾ, ನಿಕಿಮಿನಾಜ್‌ ಮಾಕ್‌ಮಿ್‌ ಇವರ ಬ್ರೇಕ್‌ಅಪ್ಸ್ ಎಲ್ಲರನ್ನೂ ಚಕಿತಗೊಳಿಸಿದವು.

ಟಿವಿಯ ಹೆಸರಾಂತಾ ನಟಿ ದಿವ್ಯಾಂಕಾ ತ್ರಿಪಾಠಿ ಮತ್ತು ಶರದ್‌ ಮಲ್ಹೋತ್ರಾ `ಬನೂ ಮೈ ತೇರಿ ದುಲ್ಹನ್‌' ಧಾರಾವಾಹಿಯ ಸೆಟ್‌ನಲ್ಲಿ ಭೇಟಿ ಆಗಿದ್ದರು. ಅವರ ಸಂಬಂಧ 7 ವರ್ಷಗಳ ಕಾಲ ಮುಂದುವರಿಯಿತು. ಆದರೆ ಒಂದು ದಿನ ಆ ಸಂಬಂಧ ತುಂಡರಿಸಿಯೇ ಹೋಯಿತು. ಕರಣ್‌ ಪಟೇಲ್ ಹಾಗೂ ಕಾಮ್ಯಾ ಪಂಜಾಬಿಯ ಸಂಬಂಧ ಕೂಡ ಸಾಕಷ್ಟು ಚರ್ಚೆಯಲ್ಲಿತ್ತು. ಆದರೆ ಸಂಬಂಧದಲ್ಲಿ ಆಕಸ್ಮಿಕವಾಗಿ ಬಂದ ಮನಸ್ತಾಪದಿಂದಾಗಿ ಆ ಸಂಬಂಧ ಮುರಿದು ಬಿತ್ತು. ಬಳಿಕ ಕರಣ್‌, ಅಂಕಿತಾ ಭಾರ್ಗವ್ ಜೊತೆಗೆ ವಿಜೃಂಭಣೆಯಿಂದ ಮದುವೆಯಾದ.

ಸಾಮಾನ್ಯರಲ್ಲೂ ಹೆಚ್ಚುತ್ತಿರುವ ಬ್ರೇಕ್‌ಅಪ್‌

ಹೆಸರಾಂತ ವ್ಯಕ್ತಿಗಳ ಮದುವೆ ಮುರಿದುಬೀಳುವ ಸುದ್ದಿಗಳು ಆಗಾಗ ಕೇಳಿ ಬರುತ್ತಿರುತ್ತವೆ. ಇಂತಹದರಲ್ಲಿ ಜನಸಾಮಾನ್ಯರು ಹೇಗೆ ಎಂದು ಯೋಚನೆ ಮಾಡಿದರೆ, ಅವರ ಜೀವನದಲ್ಲೂ ಬ್ರೇಕ್‌ಅಪ್‌ ಘಟನೆಗಳು ನಡೆಯುತ್ತಿರುವುದು ಗಮನಕ್ಕೆ ಬರುತ್ತದೆ.  ಎಷ್ಟು ವೇಗವಾಗಿ ಲವ್ ಮಾಡುತ್ತಾರೋ, ಅಷ್ಟೇ ವೇಗವಾಗಿ ಅವರ ಪ್ರೀತಿ ಮುರಿದು ಬೀಳುತ್ತಿದೆ.

ಮೈಸೂರಿನ ಜಯಾ ಮತ್ತು ಪ್ರಶಾಂತ್‌  4 ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರ ಮದುವೆಯ ಬಗೆಗೂ ಚರ್ಚೆ ನಡೆದಿತ್ತು. ಇಬ್ಬರ ಜಾತಿ ಬೇರೆ ಬೇರೆ. ಇಬ್ಬರ ಕುಟುಂಬಗಳು ಆಧುನಿಕ ಮನೋಭಾದವರು ಆಗಿದ್ದರಿಂದ ಮದುವೆ ನಡೆಯಬಹುದೆಂಬ ತರ್ಕ ಮಾಡಲಾಗಿತ್ತು. ಆದರೆ ಜಯಾಳ ಕುಟುಂಬದವರು ಇದಕ್ಕೆ ಒಪ್ಪಲಿಲ್ಲ. ಹೀಗಾಗಿ ಜಯಾ ಪ್ರಶಾಂತ್‌ನಿಂದ ದೂರ ಇರಲಾರಂಭಿಸಿದಳು. ಜಯಾಳ ನಿರ್ಧಾರ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತ್ತು. ಕುಟುಂಬದವರ  ವಿರೋಧ ಕಟ್ಟಿಕೊಂಡು ನಾವ್ಯಾಕೆ ಮದುವೆಯಾಗಬೇಕು? ಎಂಬ ತರ್ಕವನ್ನು ಜಯಾ ಮುಂದಿಟ್ಟಳು.

ಕೇಳಲು ಇದು ಒಂದು ಸಾಮಾನ್ಯ ಘಟನೆ ಎಂಬಂತೆ ಅನಿಸುತ್ತದೆ. ಜಯಾಳ ವ್ಯಾವಹಾರಿಕ ದೃಷ್ಟಿಕೋನ ಪ್ರಶಾಂತನ ಹೃದಯವನ್ನು ಚೂರು ಚೂರು ಮಾಡಿತು. ಅವನು ಹಲವು ದಿನಗಳ ಕಾಲ ಅದೇ ನೋವಿನಲ್ಲಿದ್ದ. ಆರು ತಿಂಗಳ ಬಳಿಕ ಅವಳು ಬೇರೆ ಹುಡುಗನ ಜೊತೆ ಮದುವೆಯಾದಳು. ಜೀವನದಲ್ಲಿ ಮುಂದೆ ಸಾಗುವುದು ತಪ್ಪಲ್ಲ. ಆದರೆ ಇಂದಿನ  ಆಧುನಿಕ ಯುಗದಲ್ಲಿ ಸಂಬಂಧದ ಎಳೆಗಳು ಅಷ್ಟೇಕೆ ದುರ್ಬಲವಾಗಿವೆ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ