ಭವಿಷ್ಯವನ್ನು ಸುರಕ್ಷಿತವಾಗಿಡಲು ಹಣದ ಹೂಡಿಕೆಯಂತೂ ಸರಿ. ಆದರೆ ಸಂಬಂಧದ ಜೀವಂತಿಕೆ ಕಾಯ್ದುಕೊಂಡು ಹೋಗಲು ಏನನ್ನು ಹೂಡಿಕೆ ಮಾಡಬೇಕು ಎಂಬುದನ್ನೊಮ್ಮೆ ತಿಳಿದುಕೊಳ್ಳಿ...!

ಇಂದಿನ ಧಾವಂತದ ಯುಗದಲ್ಲಿ ಮನುಷ್ಯನ ಜೀವನ ತಮ್ಮಷ್ಟಕ್ಕೆ ತಾವು ಎಂಬಂತಾಗಿ ಬಿಟ್ಟಿದೆ. ಅವಿಭಕ್ತ ಕುಟುಂಬಗಳು ವಿರಳಗೊಂಡು ಗಂಡ, ಹೆಂಡತಿ, ಮಗು ಎಂಬವಷ್ಟರ ಮಟ್ಟಿಗೆ ಸೀಮಿತವಾಗಿದೆ. ಉದ್ಯೋಗಸ್ಥ ದಂಪತಿಗಳು ತಮ್ಮ ಬಿಡುವಿನ ವೇಳೆಯಲ್ಲಿ, ರಜೆಯ ದಿನಗಳಂದು ಸಂಬಂಧಿಕರ ಮನೆಗಳಿಗೆ ಹೋಗದೆ ಹೊರಗಡೆ ಸುತ್ತಾಡಲು ಹೋಗುವುದನ್ನು ಇಷ್ಟಪಡುತ್ತಾರೆ. ಇದರ ದುಷ್ಪರಿಣಾಮ ಏನಾಗುತ್ತದೆ ಎಂದರೆ, ಅವರ ಮಕ್ಕಳಿಗೆ ಚಿಕ್ಕಪ್ಪ, ದೊಡ್ಡಪ್ಪ, ಅತ್ತೆ, ಅಜ್ಜಿ-ತಾತಾ ಇಂತಹ ಮಹತ್ವದ ಸಂಬಂಧಗಳ ಬಗ್ಗೆ ಅಪರಿಚಿತರಾಗಿ ಉಳಿದುಬಿಡುತ್ತಾರೆ. ಒಂದು ಕಟು ಸತ್ಯವೇನೆಂದರೆ, ಮನುಷ್ಯ ಎಷ್ಟೇ ಹಣ ಗಳಿಸಲಿ, ಹೊರಗಡೆ ಸುತ್ತಾಡಿ ಬರಲಿ, ಆದರೆ ಕುಟುಂಬ ದರ ಹಾಗೂ ಸಂಬಂಧಿಕರ ನಂಟಿನ ಹೊರತಾಗಿ ಈ ಖುಷಿ ಅಪೂರ್ಣ ಎಂದೇ ಹೇಳಬೇಕು. ತಂದೆ ತಾಯಿ, ಅಣ್ಣ ತಮ್ಮ, ಸ್ನೇಹಿತರ ಕೊರತೆಯನ್ನು ಯಾರೊಬ್ಬರೂ ಭರ್ತಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ನಮ್ಮ ಸಂಬಂಧಗಳನ್ನು ಕಾಯ್ದುಕೊಂಡು ಹೋಗುವುದು ಅತ್ಯವಶ್ಯಕ.

ನಮ್ಮ ಭವಿಷ್ಯವನ್ನು ಉಜ್ವಲಗೊಳಿಸಿ ಕೊಳ್ಳಲು ನಾವು ಹಣವನ್ನು ವಿನಿಯೋಗಿಸುತ್ತೇವೆ. ಅದೇ ರೀತಿ ಸಂಬಂಧಗಳ ಜೀವಂತಿಕೆಯನ್ನು ಕಾಪಾಡಿಕೊಂಡು ಹೋಗಲು ಸಮಯ, ಪ್ರೀತಿ, ಪರಸ್ಪರ ಆಗಮನ, ನಿರ್ಗಮನ ಹಾಗೂ ಸಮ್ಮಿಲನದ ಇನ್ ವೆಸ್ಟ್ ಮೆಂಟ್‌ ಮಾಡುವುದು ಅತ್ಯವಶ್ಯಕ. ಇವುಗಳ ಕೊರತೆಯಲ್ಲಿ ಸಂಬಂಧ ಎಷ್ಟೇ ನಿಕಟವಾಗಿದ್ದರೂ ಒಂದಿಲ್ಲೊಂದು ದಿನ ಅದು ಕೊನೆಯುಸಿರು ಎಳೆಯುತ್ತದೆ. ಒಂದು ನಿರ್ಜೀವ ವಸ್ತು ಚಾಕುವಿನ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅದನ್ನು ಬಹಳ ದಿನಗಳ ಕಾಲ ಬಳಸದೇ ಹೋದರೆ ಅದು ತನ್ನ ಹರಿತವನ್ನು ಕಳೆದುಕೊಳ್ಳುತ್ತದೆ. ಇನ್ನು ಸಂಬಂಧಗಳಂತೂ ಜೀವಂತ ಜನರೊಂದಿಗೆ ಆಗುತ್ತವೆ. ಅವುಗಳ ಹರಿತವನ್ನು ಕಾಯ್ದುಕೊಂಡು ಹೋಗಲು ಅಗತ್ಯ ಪ್ರಯತ್ನವನ್ನು ಮಾಡಬೇಕು.

ಪರಸ್ಪರ ಹೋಗಿಬರುವಿಕೆ ಅಗತ್ಯ

ರೇಣುಕಾ ಹಾಗೂ ಆಕೆಯ ಏಕೈಕ ಸೋದರಿ ಈ ವರ್ಷ ಹೇಗಾದರೂ ಮಾಡಿ 1 ಸಲ ಭೇಟಿ ಆಗುವುದಾಗಿ ನಿರ್ಧರಿಸಿದರು. ಅದಕ್ಕೂ ಒಂದು ಒಳ್ಳೆಯ ಉಪಾಯವೆಂಬಂತೆ ಇಬ್ಬರೂ ಸೇರಿಕೊಂಡು ಮಕ್ಕಳೊಂದಿಗೆ ಹೊರಗೆ ಸುತ್ತಾಡುವ ಯೋಜನೆ ಹಾಕಿದರು. ಇದರಿಂದಾಗಿ ಅವರ ನಡುವಿನ ಸಂಬಂಧ ಗಾಢವಾಗಿದೆ. ಇದಕ್ಕೆ ತದ್ವಿರುದ್ಧ ಎಂಬಂತೆ ಶೀಲಾ ಹಾಗೂ ಆಕೆಯ ಸೋದರಿ ಕಳೆದ 5 ವರ್ಷದಿಂದ ಒಂದೇ ಒಂದು ಸಲ ಭೇಟಿಯಾಗಿಲ್ಲ. ಇದರ ಪರಿಣಾಮ ಏನಾಯಿತೆಂದರೆ ಇಬ್ಬರ ಮಕ್ಕಳು ಪರಸ್ಪರ ಒಡನಾಟ ಹೊಂದಿಲ್ಲ. ವಾಸ್ತವದಲ್ಲಿ ಸಂಬಂಧದ ಮಾಧುರ್ಯವನ್ನು ಕಾಪಾಡಿಕೊಳ್ಳಲು ಆಗಾಗ ಪರಸ್ಪರ ಭೇಟಿಯಾಗುವುದು ಅತ್ಯವಶ್ಯ. ಯಾರಾದರೂ ಸಂಬಂಧಿಕರನ್ನು ಭೇಟಿಯಾಗಲು ಹೋದಾಗ ಅವರಿಗೆ ಉಪಯುಕ್ತವಾಗುವಂತಹ ಯಾವುದಾದರೊಂದು ಉಡುಗೊರೆಯೊಂದನ್ನು ತೆಗೆದುಕೊಂಡು ಹೋಗಿ. ಇದು ಪರಸ್ಪರ ಪ್ರೀತಿ ವಿಶ್ವಾಸವನ್ನು ಹೆಚ್ಚಿಸಲು  ನೆರವಾಗುತ್ತದೆ.

ಸಮತೋಲಿತ ಭಾಷೆಯ ಬಳಕೆ

`ಬಿತ್ತಿದಂತೆ ಬೆಳೆ' ಎಂಬ ಗಾದೆ ಮಾತಿನ ಪ್ರಕಾರ, ನೀವು ಜನರ ಜೊತೆ ಹೇಗೆ ವರ್ತಿಸುವಿರೊ, ಅವರು ಕೂಡ ನಿಮ್ಮೊಂದಿಗೆ ಹಾಗೆಯೇ ವರ್ತಿಸುವರು. ಶಾಲಿನಿಯವರು ಯಾರನ್ನಾದರೂ ಭೇಟಿಯಾದಾಗ ಮಾತನಾಡುವ ರೀತಿಯೇ ವಿಚಿತ್ರವಾಗಿರುತ್ತದೆ. ``ಏನ್ರಿ ಸುಷ್ಮಾ, ನಿಮಗೆ ಎಂದೂ ಬಿಡುವೇ ಸಿಗಲ್ವೇ? ಆಗಾಗ ನಮ್ಮ ಕಡೆಯೂ ಸ್ವಲ್ಪ ಗಮನ ಕೊಡ್ತಾ ಇರಿ.'' ಇನ್ನೊಬ್ಬರಿದ್ದಾರೆ ಅವರು ನಳಿನಿ. ಗೆಳತಿ ಅಪರೂಪಕ್ಕೆ ಫೋನ್‌ ಮಾಡಿದರೆ, ಅವರಿಗೆ ವ್ಯಂಗ್ಯ ಬಾಣ ಬಿಡುತ್ತಾರೆ, ``ಇವತ್ತು ನಿಮಗೆ ನಮ್ಮ ನೆನಪಾಯಿತೋ?''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ