ತುಳಸಿದಾಸರು ಒಂದು ಕಡೆ ಹೇಳುತ್ತಾರೆ, ``ಭಯ ಎನ್ನುವುದು ಮನುಷ್ಯನನ್ನು ಕೆಲಸ ಕಾರ್ಯ ಮಾಡಲು ಪ್ರೇರೇಪಿಸುತ್ತದೆ,'' ಶಿಕ್ಷಕರೊಬ್ಬರು ಕೈಯಲ್ಲಿ ಹಿಡಿದ ಕೋಲಿನಿಂದಾಗಿ ಮಕ್ಕಳು ಪುಸ್ತಕ ಹಿಡಿದು ಕುಳಿತುಕೊಳ್ಳುತ್ತಾರೆ. ಒಂದು ಹಂತದ ತನಕ ಭಯ ಎನ್ನುವುದು ಕೆಲಸಕಾರ್ಯಗಳಿಗೆ ಪ್ರೇರಣಾದಾಯಕವಾಗಿ ಕೆಲಸ ಮಾಡುತ್ತದೆ. ಆದರೆ ಅದೇ ಭಯ ಮಿತಿ ಮೀರಿದರೆ ಸ್ವಾರ್ಥಸಿದ್ಧಿಯ ಸಾಧನವಾಗಿ ಬಳಸಲ್ಪಡುತ್ತಿದ್ದರೆ ಅದು ನಮ್ಮ ಪ್ರಗತಿಗೆ ಅಡ್ಡಗಾಲಾಗಿ ಪರಿಣಮಿಸುತ್ತದೆ. ನಮ್ಮ ಭಾರತೀಯ ಸಮಾಜ ಇದೇ ಭಯದ ಅತಿರೇಕತನದಿಂದಾಗಿ 21ನೇ ಶತಮಾನದವರಂತೆ ಜೀವನ ನಡೆಸುತ್ತಿದೆ. ಜಪಾನ್‌, ಚೀನಾ, ಕೊರಿಯಾದಂತಹ ದೇಶಗಳು ನಿರಂತರ ಪ್ರಗತಿಯತ್ತ ದಾಪುಗಾಲು ಹಾಕುತ್ತಿದ್ದರೆ, ಭಾರತದಲ್ಲಿ ಮಾತ್ರ ಪೂಜೆ ಪುನಸ್ಕಾರ, ಮೂಢನಂಬಿಕೆಗಳಿಂದಾಗಿ ಪ್ರಗತಿಯಲ್ಲಿ ಹಿನ್ನಡೆ ಕಂಡುಬರುತ್ತಿದೆ. ಒಂದೆಡೆ ಭಾರತದ ಬಡ ರೈತರು ಬೆಳೆ ಹಾನಿಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ತಿರುಪತಿ, ಶಿರಡಿ, ಸಿದ್ಧಿವಿನಾಯಕ, ಪದ್ಮನಾಭದಂತಹ ದೇಗುಲಗಳ ಅರ್ಚಕರು ಕೋಟಿ ಕೋಟಿ ರೂ. ಗಳ ಗಳಿಕೆ ಮಾಡಿಕೊಳ್ಳುತ್ತಿದ್ದಾರೆ.

ದೇವರ ಭಯ ಇಲ್ಲಿನ ಶಿಕ್ಷಕರು ದೇಶದ ಭಾವಿ ಪ್ರಜೆಗಳನ್ನು ಸೃಷ್ಟಿಸಲು ಪ್ರಯತ್ನಶೀಲರಾಗಿದ್ದಾರೆ. ಅವರು ಸದಾ ಪಾಠಗಳನ್ನು ಹೇಳುತ್ತಾ ತಮ್ಮ ಗಂಟಲು ನೋಯಿಸಿಕೊಳ್ಳುತ್ತಿದ್ದಾರೆ. ಅದೇ ಪೂಜಾರಿ, ಪುರೋಹಿತರು, ಸ್ವಾಮಿಗಳು ಶ್ಲೋಕಗಳನ್ನು ಪಠಿಸುತ್ತಾ ಚಿತ್ರವಿಚಿತ್ರ ರೀತಿಯಲ್ಲಿ ಕುಣಿಯುತ್ತಾ ಜನರನ್ನು ಮೂರ್ಖರನ್ನಾಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರ ಮನೆಮಠದ ಆವರಣದಲ್ಲಿ ಬಗೆಬಗೆಯ ಬಣ್ಣದ ಕಾರುಗಳು ಕಂಡುಬರುತ್ತವೆ. ಭಾರಿ ಎತ್ತರೆತ್ತರದ ಅದ್ಧೂರಿ ಕಟ್ಟಡಗಳು, ಸುಂದರ ಸೇವಕಿಯರು ಕಣ್ಣಿಗೆ ಬೀಳುತ್ತಾರೆ.

ನಮ್ಮ ದೇಶದ ಈ ಧಾರ್ಮಿಕ ಲೂಟಿಕೋರರು ಪೂಜೆ ಹಾಗೂ ಧರ್ಮದ ಅಸಂಖ್ಯ ಬಂದೂಕುಗಳ ಸಹಾಯದಿಂದ ಮೂಢನಂಬಿಕೆಗೆ ತುತ್ತಾಗಿರುವ ಜನರನ್ನು ಮತ್ತಷ್ಟು ಮೂರ್ಖರನ್ನಾಗಿಸುತ್ತಿದ್ದಾರೆ. ಬಂದೂಕು ತೋರಿಸದೆಯೇ ಇವರು ಜನರನ್ನು ಹೇಗೆ ಹೆದರಿಸುತ್ತಿದ್ದಾರೆಂದರೆ ದೇವಿ ಕೋಪ ಮಾಡಿಕೊಂಡಿದ್ದಾಳೆ.

ಸಕಾರಾತ್ಮಕ ಶಕ್ತಿಗಳು ಅಲ್ಲೋಲ ಕಲ್ಲೋಲ ಸ್ಥಿತಿ ಉಂಟು ಮಾಡಬಹುದು. ಭೂತಪ್ರೇತಗಳು ನಿಮ್ಮ ನೆಮ್ಮದಿಯನ್ನು ಹಾಳು ಮಾಡಬಹುದು ಎಂದೆಲ್ಲ ಜನರ ಮನಸ್ಸಿನಲ್ಲಿ ಭಯ ಹುಟ್ಟು ಹಾಕುತ್ತಾರೆ. ಆಗ ಯಾವುದನ್ನೂ ಪ್ರಶ್ನೆ ಮಾಡದೆ ಜನ ತಮ್ಮ ಬಳಿ ಇರುವುದನ್ನೆಲ್ಲ ಅವರಿಗೆ ಒಪ್ಪಿಸಿಬಿಡುತ್ತಾರೆ. ಜನರನ್ನು ಪೂಜೆಪುನಸ್ಕಾರಗಳಲ್ಲಿ ಹೇಗೆ ತೊಡಗಿಸಿಬಿಟ್ಟಿದ್ದಾರೆಂದರೆ, ಅವರಿಗೆ ಬೇರೇನನ್ನೂ ಯೋಚಿಸದಂತೆ ಮಾಡಿದ್ದಾರೆ. ಜನರ ದುಡ್ಡಿನಲ್ಲಿ ಈ ಪೂಜಾರಿ ಪುರೋಹಿತರು ಸ್ವಾಮಿಗಳು ಐಶಾರಾಮಿ ಜೀವನ ನಡೆಸುತ್ತಿದ್ದಾರೆ.

ಕೇವಲ ಡಂಬಾಚಾರ

ನಿಮಗೆ ಹಸುಗಳ ಮೂತ್ರ ಕುಡಿಯಲು ಕೊಡಬಹುದು ಅಥವಾ ಸಲಹೆ ನೀಡಬಹುದು. ನಾವು ವೈಜ್ಞಾನಿಕ ಸತ್ಯ ಅರಿತೂ ಕೂಡ ಅವರ ಮಾತಿಗೆ ಮರುಳಾಗಿ ಬಿಡುತ್ತೇವೆ. ಯಾವ ಅಂಶವನ್ನು ದೇಹ ಹೊರಹಾಕುತ್ತೊ, ಅದು ದೇಹಕ್ಕೆ ಪುನಃ ಉಪಯುಕ್ತ ಆಗಲಾರದು. ಹೀಗಿದ್ದೂ ಕೂಡ ನಾವು ಜೈಕಾರ ಹಾಕುತ್ತಾ ಅದನ್ನು ಸೇವಿಸಿಬಿಡುತ್ತೇವೆ.

ವಾಸ್ತವದಲ್ಲಿ ಹಸುವಿನ ಕರುಳಿನಲ್ಲಿ ಕೆಲವು ಬಗೆಯ ವಿಷಕಾರಿ ರೋಗಾಣುಗಳು ಇರುತ್ತವೆ. ಒಂದು ವೇಳೆ ನಾವು ಅದರ ಮೂತ್ರವನ್ನು ಸೇವಿಸಿದಲ್ಲಿ ಆ ರೋಗಾಣುಗಳು ನಮ್ಮ ದೇಹದ ಮೇಲೆ ಯಾವ ರೀತಿಯ ದುಷ್ಪರಿಣಾಮ ಬೀರುತ್ತವೆ ಎಂಬುದು ನಿಮಗೆ ಗೊತ್ತಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ