ಮನುಷ್ಯ ಎಷ್ಟೋ ವಿಷಯಗಳನ್ನು ದೇಶ ಸುತ್ತುವುದರಿಂದ ತಿಳಿದುಕೊಳ್ಳುತ್ತಾನೆ. ದೇಶ ಸುತ್ತುವುದರಿಂದ ಕೋಶ ಓದಿದಷ್ಟೇ ಜ್ಞಾನ ಸಂಪಾದನೆಯಾಗುತ್ತದೆ. ಅಲ್ಲದೇ, ಮನಸ್ಸಿಗೆ ರಂಜನೆ, ಆನಂದ, ಉಲ್ಲಾಸ ದೊರಕುವುದರ ಜೊತೆಗೆ ಪಾಂಡಿತ್ಯ ಕೂಡ ಬೆಳೆಯುತ್ತದೆ.

ನಾವು ಎಷ್ಟೋ ಸಲ ಕೆಲವು ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತೇವೆ. ಆದರೆ ಅಲ್ಲಿಯೇ ಹತ್ತಿರವಿರುವ ಅನೇಕ ಎಲೆ ಮರೆಯ ಕಾಯಿಯಂತೆ ಇರುವ ತಾಣಗಳು ನಮ್ಮ ಕಣ್ಣಿಗೆ ಬೀಳದೇ ಹೋಗುವ ಸಾಧ್ಯತೆಯುಂಟು. ಅಂಥ ಸ್ಥಳಗಳ ಬಗ್ಗೆ ಕೇಳಿ ತಿಳಿದು ಭೇಟಿ ನೀಡಿದಾಗ ಆಗುವ ಸಂತಸ ಹೇಳತೀರದ್ದು. ಇತಿಹಾಸ ಪ್ರಸಿದ್ಧ ಹಂಪೆ ನೋಡಿದರು ಅದರ ಸಮೀಪವಿರುವ ಆನೆಗೊಂದಿಗೂ ಹೋಗುವುದುಂಟು. ಅಷ್ಟೇ ಅಲ್ಲ ಇತ್ತೀಚಿನ ದಿನಗಳಲ್ಲಿ ಕಿಷ್ಕಿಂಧಾ ರೆಸಾರ್ಟ್‌ ಕೂಡ ಇಲ್ಲಿನ ಮತ್ತೊಂದು ಆಕರ್ಷಣೆ. ಗಂಗಾವತಿ ಮೂಲಕ ಕಿಷ್ಕಿಂಧಾ ರೆಸಾರ್ಟ್‌ ಮಾರ್ಗದಲ್ಲಿ ಅಂಜನಾದ್ರಿ ಪರ್ವತವಿದೆ. ಇಲ್ಲಿ ಬರುವವರು ಮಾತ್ರ ವಿರಳ, ಏಕೆಂದರೆ ಇದೊಂದು ಬೆಟ್ಟ ಪ್ರದೇಶ, ಈ ಬೆಟ್ಟದ ಮೇಲೆ ದೇವಾಲಯ ಕಾಣುತ್ತದೆ. ಮೆಟ್ಟಿಲುಗಳನ್ನೇರುವ ದಮ್ ಇದ್ದವರಿಗೆ ಮಾತ್ರ ಅಂಜನಾದ್ರಿ ಪರ್ವತ ನೋಡಲು ಸಾಧ್ಯ. ಇಲ್ಲದಿದ್ದಲ್ಲಿ ಕೆಳಗೆ ನಿಂತು ಬೆಟ್ಟದ ತುದಿಯಲ್ಲಿ ಕಂಡು ಬರುವ ದೇವಾಲಯ ನೋಡಿ ಮುಂದೆ ಸಾಗಬೇಕಷ್ಟೆ.

devalaya-edurina-deepastamba

ನಿಜಕ್ಕೂ ಜೀವನದಲ್ಲಿ ಥ್ರಿಲ್ ‌ಬಯಸುವವರಿಗೆ, ಚಾರಣಿಗರು, ಸಾಹಸಿಗರು ದಿಲ್ ‌ಖುಷ್‌ ಆಗಬೇಕೆಂದರೆ ಒಮ್ಮೆಯಾದರೂ ಅಂಜನಾದ್ರಿ ಪರ್ವತಕ್ಕೆ ಬರಬೇಕು. ಇದು ಗಂಗಾವತಿಯಿಂದ ಕಿಷ್ಕಿಂಧಾ ಮಾರ್ಗದಲ್ಲಿ 16 ಕಿ.ಮೀ. ಅಂತರದಲ್ಲಿದೆ. ಹುಲಗಿಯಿಂದ ಕೂಡ 15 ಕಿ.ಮೀ. ಹುಲಗಿ ಅಥವಾ ಗಂಗಾವತಿ ಯಾವುದೇ ಮಾರ್ಗದಿಂದ ಸುಲಭವಾಗಿ ತಲುಪಬಹುದು, ಅಂದರೆ ಸಾರಿಗೆ ವ್ಯವಸ್ಥೆಯ ಅನುಕೂಲವಿದೆ.

ಈ ಪರ್ವತ ಕೇವಲ ಚಾರಣಕ್ಕಷ್ಟೇ ಸೀಮಿತವಾಗದೇ ಪುರಾಣಕ್ಕೂ ನಂಟನ್ನು ಹೊಂದಿದೆ. ರಾಮಾಯಣ ಕಾಲದ ಘಟನೆಗಳಿಗೆ ಸಾಕ್ಷಿಯಾಗಿ ನೆಲೆ ನಿಂತಿದೆ. ಐತಿಹಾಸಿಕ, ಸಾಂಸ್ಕೃತಿಕ ಮತ್ತು ಆಧುನಿಕ ಯಾವುದೇ ಪ್ರವಾಸೀ ತಾಣಗಳನ್ನು ಸುತ್ತಿದರೂ ಮಾನವನ ದೃಷ್ಟಿ ಬದಲಾಗುತ್ತದೆ. ಅವನ ಬುದ್ಧಿ ಬೆಳೆಯುತ್ತದೆ. ಈ ರೀತಿ ಜ್ಞಾನ ಪರಿವರ್ತನೆಗೆ ಕಾರಣವಾಗುವ ಸ್ಥಳಗಳನ್ನು ಸುತ್ತಲೂ ಹೊಂದಿದೆ. ರಾಮಾಯಣ ಕಾಲಕ್ಕೆ ವಾನರ ಸೇನೆಯ ತಾಣವಾಗಿದ್ದ ಕಿಷ್ಕಿಂಧಾ, ಅಂಜನಾದ್ರಿ, ವಿರೂಪಾಪುರದಡಿ ಹನುಮಾಪುರ, ಸನಾಪುರ, ತಿರುಮಾಪುರ ಸುತ್ತಲಿನ ಪರಿಸರಕ್ಕೆ ಹೊಂದಿಕೊಂಡಿದೆ. ಅಂಜನಾದ್ರಿ ಪರ್ವತ. ಇಲ್ಲಿ ಉದ್ಭವ ಆಂಜನೇಯ ವಿಗ್ರಹ ಪೂಜೆಗೊಳ್ಳುತ್ತಿರುವುದು. ಅಷ್ಟೇ ಅಲ್ಲ, ರಾಮಾಯಣದಲ್ಲಿ ಬರುವ ವಾನರ ರಾಜ ಕೇಸರಿ ಮತ್ತು ಅವನ ಪತ್ನಿ ಅಂಜನಾದೇವಿಯ ಪುತ್ರ ಆಂಜನೇಯನ ಜನ್ಮಸ್ಥಳ ಈ ಅಂಜನಾದ್ರಿ ಬೆಟ್ಟ.

ಇಂತಹ ಹಿನ್ನೆಲೆಯುಳ್ಳ ಅಂಜನಾದ್ರಿ ಪರ್ವತದ ಮೇಲೆ ಬರಲು ಕಡಿದಾದ ಬೆಟ್ಟದ ಮಧ್ಯದಲ್ಲಿ 575 ಮೆಟ್ಟಿಲುಗಳನ್ನು ನಿರ್ಮಿಸಿರುವರು. ಈ ಮೆಟ್ಟಿಲುಗಳನ್ನೇರುವುದೇ ಒಂದು ಹರಸಾಹಸ. ಕೆಲವೆಡೆ ಚಿಕ್ಕಪುಟ್ಟ ಮೆಟ್ಟಿಲುಗಳಿದ್ದರೆ, ಇನ್ನು ಕೆಲವೆಡೆ ವಿಸ್ತಾರವಾದ ಮೆಟ್ಟಿಲುಗಳು. ಮತ್ತೊಂದೆಡೆ ಬಂಡೆಗಲ್ಲುಗಳ ನಡುವೆ ಬಾಗುತ್ತ ಮೆಟ್ಟಿಲು ಏರುತ್ತ ಸಂದುಗಳಲ್ಲಿ ತೂರಿ ಮೇಲೆ ಬರುವಂತೆ ಮೆಟ್ಟಿಲುಗಳು. ಅಲ್ಲಲ್ಲಿ ಬೆಟ್ಟದಲ್ಲಿ ಜಿನುಗುವ ನೀರಿನ ಝರಿಗಳು, ಸುತ್ತಲೂ ಹಸಿರುಟ್ಟ ನಿಸರ್ಗ, ಇವುಗಳನ್ನೆಲ್ಲ ನೋಡುತ್ತ ಸಾಗಿ ಬೆಟ್ಟ ಏರಿ ಪೂರ್ಣ ಮೇಲ್ತುದಿಗೆ ಬಂದರೆ ಸಾಕು ಮೆಟ್ಟಿಲು ಏರಿರುವ ಆಯಾಸಿಲ್ಲ ಪ್ರಕೃತಿ ಮಡಿಲನ್ನು ಕಂಡಾಗ ಮಾಯವಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ಮೆಟ್ಟಿಲುಗಳನ್ನೇರಲು ದಮ್ ಬೇಕು.  ಬೆಟ್ಟದ ಮೇಲೆ ಧ್ಯಾನಮಂದಿರ, ಪೂಜಾರಿಗಳ ವಾಸದ ಕೊಠಡಿ, ಒಂದೆಡೆ ದೇವಾಲಯ, ಅದರ ಮುಂದೆ ತುಳಸಿಕಟ್ಟೆ, ದೀಪಮಾಲಿಕಾಸ್ತಂಭ ಇತ್ಯಾದಿ ಕಾಣುತ್ತೇವೆ. ದೊಡ್ಡ ಬಂಡೆಗಲ್ಲೊಂದರ ಮೇಲೆ ನಿರ್ಮಿಸಿದ ದೇವಾಲಯ ಪ್ರದಕ್ಷಿಣಾಪಥವನ್ನು ಹೊಂದಿದ್ದು, ದೇವಾಲಯದ ಒಳಗೆ ಬಂಡೆಗಲ್ಲಿನಲ್ಲಿ ಉದ್ಭ ಆಂಜನೇಯ ಮೂರ್ತಿ ಇದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ