ಅಪ್ರತಿಮ ಸಾಧಕಿ, ಲೇಖಕಿ, ಪತ್ರಕರ್ತೆ ಎನಿಸಿರುವ ಭಾರತಿ ಹೆಗಡೆಯವರ ಅನನ್ಯ, ಅಮೋಘ ಸಾಧನೆಗಳ ಬಗ್ಗೆ ವಿವರವಾಗಿ ತಿಳಿಯೋಣವೇ.....?

ಆಕರ್ಷಕ ಮುಗುಳ್ನಗೆ, ನೋಟದಲ್ಲಿ ದಿಟ್ಟತನ, ಎಲ್ಲನ್ನೂ ಸಾಧಿಸುವೆ ಎನ್ನುವ ಛಲದ ಮನೋಭಾವದ ಪ್ರತಿರೂಪ ಭಾರತಿ ಹೆಗಡೆ ಎನ್ನಬಹುದು. ಕನ್ನಡದ ಹಿರಿಯ ಪತ್ರಕರ್ತರು, ಕವಯಿತ್ರಿ, ಲೇಖಕಿ ಮತ್ತು ಕಥೆಗಾರ್ತಿ ಎನ್ನಿಸಿಕೊಂಡಿದ್ದಾರೆ. ಮೂಲತಃ ಉತ್ತರ ಕನ್ನಡದ ಸಿದ್ದಾಪುರದವರು. ಇವರ ಕೃತಿಗಳಲ್ಲಿ ಮಹಿಳಾ ಸಬಲೀಕರಣದ ವಿಚಾರಗಳೊಂದಿಗೆ ವಾಸ್ತವಕ್ಕೆ ಹತ್ತಿರವಾದ ವಿಚಾರಗಳನ್ನೂ ಕಾಣಬಹುದು.

ಚಿಕ್ಕಂದಿನಲ್ಲಿ ಓದು : ತಂದೆ ದಿವಂಗತ ಐನಕೈ ಗಜಾನನ ಶಾಸ್ತ್ರಿಗಳು ದೊಡ್ಡ ವಿದ್ವಾಂಸರು, ಸಂಸ್ಕೃತ ಶಿಕ್ಷಕರು, ಯಕ್ಷಗಾನದ ಅರ್ಥವನ್ನು ಹೇಳುತ್ತಿದ್ದರು. ಬಹಳ ಒಳ್ಳೆಯ ಓದುಗರಾಗಿದ್ದರು. ಸಂಸ್ಕೃತ, ಕನ್ನಡ, ಹಿಂದಿ ಮೂರೂ ಭಾಷೆ ಅರಿತವರಾಗಿದ್ದರು. ಅಕ್ಷರದ ಮಹತ್ವವನ್ನು ಅರಿತಿದ್ದ ಅವರು, ಕರೆಂಟ್‌ ಇಲ್ಲದ ಕಾಲದಲ್ಲೇ ಮಕ್ಕಳಿಗೆ ಓದಲು ಚಿತ್ರದ ಸಮೇತ ಇವರು ಕಾಮಿಕ್ಸ್ ಪುಸ್ತಕಗಳನ್ನು ತಂದು ಕೊಡುತ್ತಿದ್ದರು. ಇದು ತಮಗೂ ಓದಲು ಪ್ರೇರೇಪಿಸಿತೆಂದು ತಂದೆಯ ಬಗ್ಗೆ ಬಹಳ ಹೆಮ್ಮೆಯಿಂದ ಹೇಳುತ್ತಾರೆ ಭಾರತಿ ಹೆಗಡೆ.

ಅಪ್ಪನ ಯಕ್ಷಗಾನದ ಹ್ಯಾಸದಿಂದಾಗಿ ಚಿಕ್ಕಂದಿನಲ್ಲಿ ಜ್ಞಾನದ ಕಿಟಕಿಯನ್ನು ತೆರೆಯಲು ಕಾರಣವಾಯಿತು ಎನ್ನುತ್ತಾರೆ. ದಟ್ಟ ಹಸಿರಿನ ಮಲೆನಾಡಿನ ಪರಿಸರ, ಚಿಕ್ಕಂದಿನಿಂದ ಓದುವ  ಅಭ್ಯಾಸ, ಇವೆಲ್ಲ ಅವರನ್ನು ಲೇಖಕಿಯನ್ನಾಗಿಸಲು ಸಾಧ್ಯವಾಯಿತು. ವಿದ್ಯಾರ್ಥಿ ಜೀವನದಲ್ಲೇ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದ ಹಿರಿಮೆ ಭಾರತಿ ಅವರದು. ಖ್ಯಾತ ನಾಟಕಕಾರ ಮೈಸೂರು ಹುಲಿ ಎನ್ನುವ ಬಿರುದನ್ನು ಪಡೆದ ಹುಲಿಮನೆ ಸೀತಾರಾಮ ಶಾಸ್ತ್ರೀಯವರ ಮೊಮ್ಮಗಳು. ಅವರ ಪ್ರಭಾವ ಇವರ ಮೇಲಿತ್ತು. ಮದುವೆ, ಮಗುವಾದ ನಂತರ ಓದು ಮುಂದುವರಿಸಿದರು.

ಸಾಮಾನ್ಯವಾಗಿ ಎಲ್ಲ ಹೆಣ್ಣು ಮಕ್ಕಳಿಗಾಗುವಂತೆ ಮದುವೆ, ನಂತರ ಮಗು, ಸಂಸಾರದ ಜಂಜಾಟದ ನಡುವೆಯೂ ಏನಾದರೂ ಮಾಡಬೇಕೆಂಬ ತುಡಿತ, ಪರಿಣಾಮ ಭಾರತೀಯ ವಿದ್ಯಾಭವನದಲ್ಲಿ ಕನ್ನಡ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ ಪಡೆದು ಪತ್ರಿಕೆಗಳಿಗೆ ಬರೆಯಲು ಪ್ರಾರಂಭಿಸಿದರು. ಅಣ್ಣನ ಜೊತೆ ಜೊತೆಗೆ ಬೆಳೆದದ್ದರಿಂದ ಹುಡುಗರು ಮಾಡುವುದನ್ನು ನಾನೂ ಮಾಡುವೆ ಎನ್ನುವ ಮನೋಭಾವ ಆಗಲೇ ಇತ್ತು. ನಂತರ ಪತ್ರಿಕೆಗಳ ಮುಖ್ಯ ವಾಹಿನಿಗೆ ಪ್ರವೇಶ, ಕನ್ನಡ ಖ್ಯಾತ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ ಇವರದು. ಹೆಚ್ಚಾಗಿ ಮಹಿಳಾ ಪುರವಣಿಗಳಲ್ಲಿ ಕೆಲಸ ಮಾಡಿದ ಹೆಗ್ಗಳಿಕೆ. ಮೊಟ್ಟ ಮೊದಲಿಗೆ ಮಹಿಳಾ ಕಂಡಕ್ಟರ್‌ ಗಳ ಬಗ್ಗೆ ಲೇಖನ ಬರೆದರು. ಮನೆಯಲ್ಲಿ ಎಲ್ಲರೂ ಓದುಗರು ಮತ್ತು ವಿಮರ್ಶಕರು. ಹೀಗಾಗಿ ಸಾಹಿತ್ಯ ಇವರ ಲೇಖನಿಯಲ್ಲಿ ಸರಾಗವಾಗಿ ಹರಿದು ಬಂದುದರಲ್ಲಿ ಯಾವುದೇ ಅಚ್ಚರಿ ಇಲ್ಲ. ಪತ್ರಕರ್ತೆಯಾಗಿ ಇಪ್ಪತ್ತು ವರ್ಷಗಳ ಅನುಭವದ ಮೂಸೆಯಿಂದ ಹರಿದು ಬಂದ ಲೇಖನಗಳು ಎಲ್ಲವೂ ಓದುಗರನ್ನೂ ಮುಟ್ಟುವಂತಹವು. ಪ್ರಸ್ತುತ ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯ ಹುದ್ದೆಯನ್ನು ಅಲಂಕರಿಸಿದ್ದಾರೆ.

ವಾಹಿನಿಗಳೊಂದಿಗೆ ನಂಟು : ವಾಹಿನಿಗಳಿಗೆ ಇವರು ಪರಿಚಿತರು. ಧಾರಾವಾಹಿಗಳಿಗೆ ಕಥೆ ಮತ್ತು ಸಂಭಾಷಣೆಗಳ ಬರಹ, ದೂರದರ್ಶನ ಚಂದನದಲ್ಲಿ ದೀಪಾವಳಿ ಕಾರ್ಯಕ್ರಮದ ರೂಪಕ ಮತ್ತು ಹಲವಾರು ಸಾಕ್ಷ್ಯ ಚಿತ್ರಗಳಿಗೆ ಸ್ಕ್ರಿಪ್ಟ್ ಮತ್ತು ಹಿನ್ನೆಲೆ ಧ್ವನಿ ಒದಗಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ