ಬುದ್ಧಿಯನ್ನು ಕುಂಠಿತಗೊಳಿಸುವ ಹುನ್ನಾರ

ಒಂದು ಆಂಗ್ಲ ನಾಣ್ಣುಡಿ ಪ್ರಕಾರ, `ಕ್ಯಾಚ್‌ ದೆಮ್ ಯಂಗ್‌’ ಅಂತಿದೆ. ಅಂದ್ರೆ, ಮಕ್ಕಳು ಚಿಕ್ಕವರಿರುವಾಗಲೇ ಅವರನ್ನು ವಶಕ್ಕೆ ತೆಗೆದುಕೊಳ್ಳಿ ಅಂತ. ಬೇಸಿಕ್‌ ಲೆವೆಲ್‌ನಲ್ಲಿ ಎಲ್ಲ ಧರ್ಮಗಳೂ ಇದನ್ನೇ ಮಾಡುವುದು. ಹೀಗಾಗಿ ಮಕ್ಕಳು ಹುಟ್ಟಿದ ಕೆಲವೇ ದಿನಗಳಲ್ಲಿ ಅವನ್ನು ಧರ್ಮದ ಅನುಯಾಯಿಗಳು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ. ಆ ಮಕ್ಕಳ ತಾಯಿ ತಂದೆಯರೂ ಅದೇ ನಿಟ್ಟಿನಲ್ಲಿ ಸಾಗಿ ಬಂದಿರುವುದರಿಂದ, ಅವರಿಗೆ ಇದು ಆಪತ್ತಿನ ವಿಷಯ ಎನಿಸದು. ಹೀಗಾಗಿ ಅವರು ಸಂತೋಷದಿಂದಲೇ ತಮ್ಮ ಸಣ್ಣ ಮಕ್ಕಳ ಎಲ್ಲಾ ಸ್ವಾತಂತ್ರ್ಯವನ್ನೂ ಆ ಧರ್ಮಕ್ಕೆ ದಾನ ಮಾಡಿಬಿಡುತ್ತಾರೆ.

ಶಿಕ್ಷಣದ ವಿಷಯದಲ್ಲೂ ಹೀಗೆ ಮಾಡಲಾಗುತ್ತದೆ. ಮಗು ದೊಡ್ಡದಾಗತೊಡಗಿದಂತೆ, ಅದಕ್ಕೆ ವಿವೇಕ ಜಾಗೃತಗೊಳ್ಳುತ್ತದೆ. ತನ್ನದೇ ಸ್ವತಂತ್ರ ನಿರ್ಣಯ ತೆಗೆದುಕೊಳ್ಳಬೇಕೆಂಬ ಆಸೆಯಾಗುತ್ತದೆ. ಸತ್ಯ ಸುಳ್ಳು ಯಾವುದು ಎಂಬುದರ ವ್ಯತ್ಯಾಸ ತಿಳಿಯುತ್ತದೆ. ಆಗ ಧರ್ಮ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ತತ್ತರಿಸುತ್ತದೆ. ಆ ಮಗುವಿಗೆ ಹಲವಾರು ಲಾಲಸೆಗಳನ್ನು ಒಡ್ಡಲಾಗುತ್ತದೆ, ಆ ಬೆಳೆಯುತ್ತಿರುವ ವ್ಯಕ್ತಿಯನ್ನು ನಿಯಂತ್ರಿಸಲಾಗುತ್ತದೆ. ವಿಶ್ವದ 95% ಜನತೆ ಈ ಜಾಲದಲ್ಲಿ ಸಿಲುಕುತ್ತದೆ.

ಡಿಕ್ಟೇಟರ್ಸ್‌ ಸಹ ಇದನ್ನೇ ಬಳಸುತ್ತಾರೆ, ಅವರ ವಿರುದ್ಧ ಯಾರೂ ಸೊಲ್ಲೆತ್ತದಂತೆ ಶಿಕ್ಷಣ ಒದಗಿಸಲಾಗುತ್ತದೆ. ಹಿಂದೆಲ್ಲ ಎಷ್ಟೋ ವರ್ಷಗಳವರೆಗೆ ಕಲಿಯಲಿಕ್ಕೆ ಏನೂ ಇರುತ್ತಿರಲಿಲ್ಲ, ಕೇವಲ ಕೇಳಿಸಿಕೊಂಡದ್ದನ್ನು ಉರುಹೊಡೆದು ಹೇಳುವುದಷ್ಟೇ ಆಗಿತ್ತು. ಆದರೆ ಕಳೆದ 500 ವರ್ಷಗಳಲ್ಲಿ ಮುದ್ರಣ ಮಾಧ್ಯಮ ಬಂದ ಮೇಲೆ, ಯೋಚನಾಧಾಟಿಯಲ್ಲಿ ದೊಡ್ಡ ಕ್ರಾಂತಿ ಉಂಟಾಯಿತು. ಏಕೆಂದರೆ ಧರ್ಮ, ಹಿಟ್ಲರ್‌ ಗಿರಿಯೊಂದೇ ಕೊನೆಯ ಸತ್ಯವಾಗಿರಲಿಲ್ಲ. ಈ ರೀತಿ ವಿವೇಚಿಸುವ ವಿಚಾರಧಾರೆ ಕಾಗದದ ಮೇಲೆ ಸಾಕಾರಗೊಂಡು ಎಲ್ಲೆಡೆ ಮಾನ್ಯತೆ ಪಡೆಯಿತು. ಯಾರು ಇದನ್ನು ಓದಿಕೊಂಡರೋ ಅವರು ತಮ್ಮ ವಿಚಾರಗಳನ್ನು ಹೊಸ ವಿಧಾನದಲ್ಲಿ ಉಣ ಬಡಿಸತೊಡಗಿದರು. ಕಳೆದ 500 ವರ್ಷಗಳಲ್ಲಿ ವಿಶ್ವ ಕಂಡ ಪ್ರಗತಿ, ಅದು ಈ ಕಾಗದದ ಕುದುರೆಗಳಿಂದಾಗಿ ಎಂದರೆ ಅತಿಶಯೋಕ್ತಿಯಲ್ಲ. ಅದು ಈ ಧರ್ಮದ ಅಧಿಕಾರವನ್ನು ಅಲುಗಾಡಿಸಿತು, ಹಿಟ್ಲರ್‌ ಗಿರಿಗೆ ಕೊನೆ ಹಾಡಿತು. ಇದರಿಂದ ಪ್ರಜಾಪ್ರಭುತ್ವವೇನೋ ಸಾಕಾರಗೊಂಡಿತು, ಜೊತೆಯಲ್ಲಿ ಅಧುನಿಕ ವಿಜ್ಞಾನ, ತಂತ್ರಜ್ಞಾನ, ಸತ್ಯ ಸಾಕ್ಷಾತ್ಕಾರಗಳು ಹೊಸ ಸ್ವಾತಂತ್ರ್ಯಕ್ಕೆ ಹುಟ್ಟುಹಾಕಿದವು. ಇದು ಧರ್ಮವನ್ನು ಬೆಚ್ಚಿ ಬೀಳಿಸಿದೆ, ಬಹಳಷ್ಟು….! ಆದರೆ ಧರ್ಮದ ಅಧಿಕಾರ ಬಲು ಸಮರ್ಥವಾದುದು. ಹೀಗಾಗಿ ಅದು ಮತ್ತೆ ಕಾಗದದ ಮೇಲಿನ ಮುದ್ರಣಕ್ಕೆ ಫಿಲ್ಟರ್‌ ಹಾಕತೊಡಗಿತು. ಅದನ್ನೇ ಪ್ರಚಾರಕರ ಕೈಗಳಿಗೆ ವರ್ಗಾಯಿಸಿತು. ಈ ಪ್ರಚಾರಕರೇ ಧರ್ಮದ ಪ್ರಮುಖ ಸೈನಿಕರು, ಹೀಗಾಗಿ ಇವರು ಬಾಚಿಕೊಂಡ ಲೂಟಿಯಲ್ಲಿ ಪಾಲು ಹಂಚುತ್ತಾರೆ.

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಶಿಕ್ಷಣ ನೀತಿ 2020 ಇದೇ ಪ್ರಯಾಸದ ಒಂದು ಹೊಸ ಹೆಜ್ಜೆ. ಇದರ ಉದ್ದೇಶ ತರ್ಕ, ಪರೀಕ್ಷೆಗಳನ್ನು ರದ್ದುಗೊಳಿಸಿ ಮಕ್ಕಳನ್ನು ಮೊದಲನೇ ತರಗತಿಯಿಂದಲೇ ಸಂಸ್ಕೃತಿ, ಸಂಸ್ಕಾರಗಳ ಹೆಸರಿನಲ್ಲಿ ನಮ್ಮ ಈಗಿನ ಸಮಾಜವನ್ನು 2000 ವರ್ಷಗಳ ಹಿಂದಕ್ಕೆ ಎಳೆದೊಯ್ಯುವ ಹುನ್ನಾರವಾಗಿದೆ.

ಈ ನೀತಿಯ ಪ್ರತಿ ಪುಟಪುಟದಲ್ಲೂ, ಪ್ರತಿ ವಿದ್ಯಾರ್ಥಿಯೂ ಏಕಲವ್ಯನಂತಿದ್ದು ಆಧುನಿಕ ಗುರು ದ್ರೋಣಾಚಾರ್ಯರುಗಳಿಗೆ ತಮ್ಮ ಬುದ್ಧಿವಂತಿಕೆ ಅರ್ಪಿಸಬೇಕೆಂಬ ಅಭಿಲಾಷೆ ಅಡಗಿದೆ.

ಮಕ್ಕಳು ಎಲ್ಲಿ, ಎಷ್ಟು ವರ್ಷಗಳ ಕಾಲ, ಎಷ್ಟು ಫೀಸ್‌ ತೆತ್ತು ಓದಬೇಕು ಎಂದಿದೆ, ಇದೆಲ್ಲ ಸಣ್ಣ ವಿಷಯ ಬಿಡಿ. ಮುಖ್ಯ ವಿಷಯ ಎಂದರೆ ಕಲಿಸುವರು ಯಾರು ಹಾಗೂ ಅವರು ಏನು ಕಲಿಸುತ್ತಾರೆ ಎಂಬುದು. ಈ ಶಿಕ್ಷಣ ನೀತಿಯಲ್ಲಿ ಸ್ಪಷ್ಟ ನೇರ ಶಬ್ದಗಳಲ್ಲಿ ಜಾಲ ಹೇಗೆ ಹೆಣೆಯಾಗಿದೆ ಎಂದರೆ, ಪುರಾತನ ಶಿಲಾಯುಗಕ್ಕೆ ಹೋಗಿ ಅಂಧಕಾರದಲ್ಲಿ ಕೊರೆಯುವಂತಾಗಿದೆ. ಇಲ್ಲಿ ಮತ್ತೆ ಮತ್ತೆ ಹೇಳಲಾಗಿರುವುದೆಂದರೆ, ನಮ್ಮ ಬಳಿ ಜ್ಞಾನವೇನೋ ಅಖಂಡವಾಗಿತ್ತು, ನಮ್ಮ ವೇದ, ಶಾಸ್ತ್ರ, ಪರಂಪರೆ, ಸಂಪ್ರದಾಯಗಳಲ್ಲಿ ಅದು ಇತ್ತೆಂಬುದು. ಅಲ್ಲಿ ಜೆನಿಟಿಕ್ಸ್, ಅಂತರಿಕ್ಷ ಶೋಧ, ಭೌತ ವಿಜ್ಞಾನದ ಪರಮಾಣು ವಿಶ್ಲೇಷಣೆ, ಬಯೋಟೆಕ್‌ನ್ನು ಕೇಳುವವರೇ ಇಲ್ಲ!

ನಮ್ಮ ಪ್ರತಿಸ್ಪರ್ಧಿ ದೇಶಗಳಿಗಂತೂ ಈ ಹೊಸ ಶಿಕ್ಷಣ ನೀತಿ ಒಂದು ಹೊಸ ಖಜಾನೆಯೇ ಆಗಲಿದೆ. ಪುರಾತನ ಕಾಲದ ಜೇಡರಬಲೆ ತುಂಬಿದ ಪೌರಾಣಿಕ, ಪಾಖಂಡಿತನ ತುಂಬಿದ ಶಿಕ್ಷಣದ ಉದ್ದೇಶ, ಧರ್ಮ ಪ್ರಚಾರಕರ ಮಾತುಗಳನ್ನು ಅಂತಿಮ ಸತ್ಯವೆಂದೇ ಒಪ್ಪಿಕೊಳ್ಳಬೇಕು, ಯಾರಿಗೆ ಇಷ್ಟವಿಲ್ಲವೋ ಅವರು ವಿದೇಶಕ್ಕೆ ತೊಲಗಲಿ ಅಂತ. ಹಾಗೆ ನೋಡಿದರೆ ನಮ್ಮ ದೇಶದಲ್ಲಿ ಪ್ರತಿಭಾ ಪಲಾಯನ ಹೊಸದೇನಲ್ಲ, ಅದು ಇನ್ನಷ್ಟು ಹೆಚ್ಚಲಿದೆ.

ಇನ್ನೊಂದು ಕಡೆ ದೇಶದಲ್ಲಿ ಪುರಾತನಪಂಥ, ಮೂಢತನ, ಅತಾರ್ಕಿಕ ಪಾಖಂಡಿ ಸಮರ್ಥಕರ ದೊಡ್ಡ ಸಮೂಹ ಸಿದ್ಧವಾಗಲಿದೆ. ನಮ್ಮ ಶತ್ರು ಆಗಿರುವ ಚೀನಾ ಈ ನೀತಿಯಿಂದ ಆನಂದಿಸುತ್ತದೆ. ಏಕೆಂದರೆ ಅಲ್ಲಿ ಹಿಟ್ಲರ್‌ ಗಿರಿ, ಕಮ್ಯೂನಿಸಂ ಬಿಟ್ಟು ಮಹಾನ್ ಚೀನೀ ನಾಗರಿಕತೆಯ ಡಂಗೂರ ಸಾರುವುದಿಲ್ಲ.

ಆಫ್ರಿಕಾ, ದಕ್ಷಿಣ ಪೂರ್ವ ಏಷ್ಯಾ, ಯೂರೋಪ್‌, ಅಮೆರಿಕಾಗಳಿಗೆ ಲಾಭ ಕಟ್ಟಿಟ್ಟ ಬುತ್ತಿ. ಅದೇ ಇಸ್ಲಾಮಿ ಕಂದಾಚಾರಿ ದೇಶಗಳು ಸಹ ನೆಮ್ಮದಿಯ ನಿಟ್ಟುಸಿರಿಡುತ್ತವೆ. ಏಕೆಂದರೆ ಭಾರತ ಇನ್ನು ಮುಂದೆ 150-170 ಕೋಟಿ ಸತ್ತ ಹೆಣಗಳ ದೇಶವಾಗಲಿದೆ ಅಂತ.

ಇಲ್ಲಿ ದೊಡ್ಡ ದೊಡ್ಡ ಮಂದಿರಗಳೇಳುತ್ತವೆ, ಪ್ರತಿ ನದಿ ದಂಡೆಯೂ ಪುಣ್ಯಕ್ಷೇತ್ರವಾಗಲಿದೆ. ಆಯುರ್ವೇದ, ವೈದಿಕ ವಿಜ್ಞಾನ, ವೈದಿಕ ವಾಸ್ತುಕಲೆ ಹೆಸರಿನಲ್ಲಿ ಬೃಹದಾಕಾರದ ಭವನಗಳು ಏಳುತ್ತವೆ ಹಾಗೂ ಅದರಲ್ಲಿ ಸದಾ ಪೂಜೆ ಪುನಸ್ಕಾರಗಳ ಹೆಸರಿನಲ್ಲಿ ಗುಲಾಮರು ಇರುತ್ತಾರೆ. ಇವರುಗಳು ವಿಶ್ವಾಮಿತ್ರರ ಹೇಳಿಕೆ ಪ್ರಕಾರ ಮಾರೀಚರ ಮೇಲೆ ಬಾಣ ಬಿಡಲಾರಂಭಿಸುತ್ತಾರೆ. ಒಂದಿಷ್ಟೂ ವಿವೇಕದಿಂದ ಯೋಚಿಸದೆ ಶತ್ರು ಯಾರು, ಹೇಗಿರುತ್ತಾರೆ, ಅವರನ್ನು ಏಕೆ ಕೊಲ್ಲಬೇಕೆಂದೂ ಗೊತ್ತಿಲ್ಲದೆ ಬಾಣ ಬಿಡುವವರು ತಯಾರಾಗುತ್ತಾರೆ. ಗುರುವಿನ ಆದೇಶವೇ ಅಂತಿಮ. ಈ ನೀತಿ ಓದಿದ ಮೇಲೆ ಇದು ಸ್ಪಷ್ಟ ಹಾಗೆ ಕಾಣಿಸದಿದ್ದರೂ, ಈ ಹೊಸ ಶಿಕ್ಷಣ ನೀತಿಯ ಸಾರವಂತೂ ಒಂದು ಹೊಸ ತಲೆಮಾರಿನ ಸಮಾಜವನ್ನು ಇನ್ನಿಲ್ಲವಾಗಿಸುವುದೇ ಆಗಿದೆ.

ಹೆಂಗಸರೆಂದರೆ ಅಲಂಕಾರದ ಗೊಂಬೆಗಳಲ್ಲ

ಹೆಂಗಸರ ವಿಚಾರವಾಗಿ ಗಂಡಸರ ಆಸಕ್ತಿ ಯಾವ ಮಟ್ಟದ್ದು ಮತ್ತು ಅದು ಎಷ್ಟು ಆಳದ್ದು ಎಂಬುದು, ಈ ಆಧುನಿಕ, ಟೆಕ್ನಿಕ್‌ನಲ್ಲಿ ಎಲ್ಲರಿಗಿಂತ ಮುಂದಿರುವ ದೇಶವಾದ ಅಮೆರಿಕಾದ ರಾಷ್ಟ್ರಪತಿಯ ಮಹಾನ್‌ ಮಾತುಗಳಿಂದ ಸಾಬೀತಾಗುತ್ತದೆ. ಡೆಮೊಕ್ರೆಟಿಕ್‌ಪಾರ್ಟಿಯ ವಿರುದ್ಧ ಜೋ ಬೈಡನ್‌ರಿಂದ ಪ್ರೇರಿತರಾದ ಕಮಲಾ ಹ್ಯಾರಿಸ್‌ ಆರಿಸಲ್ಪಟ್ಟು ಬಂದ (ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ) ಮೇಲೆ ಈ ಟ್ರಂಪಣ್ಣ ಹೇಳಿದ್ದೆಂದರೆ, ಕೆಲವು ಗಂಡಸರು ಇದನ್ನು ಅಪಮಾನಕರ ಎಂದು ಭಾವಿಸುವಂಥದ್ದು. ಅಮೆರಿಕಾದ ವೈಟ್ ಹೌಸ್‌ನಲ್ಲಿ ಹೆಣ್ಣು ಕೇವಲ ಅಲಂಕಾರಿಕ ಗೊಂಬೆಯಾಗಿ ಉಳಿಯಬೇಕು ಎಂಬುದು ಇಂದಿಗೂ ಅಮೆರಿಕಾದಲ್ಲಿ ತುಂಬಾ ಹರಡಿದೆ ಹಾಗೂ 2016ರಲ್ಲಿ ಹಿಲೆರಿ ಕ್ಲಿಂಟನ್‌ರ ಸೋಲಿನ ಮುಖ್ಯ ಕಾರಣ, ಆಕೆ ಹೆಂಗಸು ಎಂಬುದು.

new-education-system

ಕಮಲಾ ಹ್ಯಾರಿಸ್‌ ಎಂದರೆ ದ. ಭಾರತದ ತಾಯಿ ಹಾಗೂ ಜಮೈಕಾ ಮೂಲದ ಆಫ್ರಿಕಾ ವಂಶಸ್ಥ ತಂದೆಗೆ ಹುಟ್ಟಿದ ಮಗಳು. ಅಮೆರಿಕಾದಲ್ಲೇ ಸೆಟಲ್ ಆದ ಈಕೆ ಮೊದಲು ರಾಷ್ಟ್ರಪತಿ ಪದವಿಯ ಸ್ಪರ್ಧೆಗೆ ಇಳಿದಿದ್ದರು. ಆದರೆ ಯಾವಾಗ ಅದು ಕೈಗೂಡದು ಎನಿಸಿತೋ ಆಗ, ಜೋ ಬೈಡನ್‌ರ ಪಕ್ಷ ಸೇರಿದರು. ಕ್ಯಾಲಿಫೋರ್ನಿಯಾದಲ್ಲಿ ಹಲವು ವರ್ಷಗಳ ಕಾಲ ಅಟಾರ್ನಿ ಜನರಲ್ ಹಾಗೂ ಹಲವಾರು ವರ್ಷಗಳು ಸೆನೆಟರ್‌ ಆಗಿ ಸೇವೆ ಸಲ್ಲಿಸಿದ ಈಕೆಯನ್ನು ಅಮೆರಿಕಾದ ಬಿಳಿಯರು ಖಂಡಿತಾ ಸಹಿಸರು, ಇಲ್ಲಿ ನಮ್ಮಲ್ಲಿ 2013ರಲ್ಲಿ ಸುಷ್ಮಾ ಸ್ವರಾಜ್‌ ಪ್ರಧಾನಿ ಪಟ್ಟಕ್ಕೆ ಸುಯೋಗ್ಯ ಮಹಿಳೆಯಾಗಿದ್ದರೂ ಬಿಜೆಪಿ ಅದನ್ನು ಆಗಗೊಡಲಿಲ್ಲವಲ್ಲ…. ಹಾಗೇ!

ನಮ್ಮ ದೇಶ ಮತ್ತು ಡೊನಾಲ್ಡ್ ಟ್ರಂಪ್‌ರ ಅಮೆರಿಕಾ ಸದ್ಯಕ್ಕಂತೂ ಒಂದೇ ರೀತಿ ಮುನ್ನಡೆಯುತ್ತಿದೆ. ಹೀಗಾಗಿಯೇ ನಮ್ಮ ಅಹಮದಾಬಾದ್‌ನಲ್ಲಿ ಟ್ರಂಪಣ್ಣನಿಗೆ ಭಾರಿ ಸ್ವಾಗತ ಕೋರುತ್ತಾ, `ಮತ್ತೊಮ್ಮೆ ಟ್ರಂಪ್‌ ಸರ್ಕಾರ’ ಎಂದು ಜಯಘೋಷ ಮೊಳಗಿಸಲಾಗಿತ್ತು. ಕಮಲಾರಲ್ಲಿ ಅಚ್ಚ ಭಾರತೀಯ ರಕ್ತ ಪ್ರವಹಿಸುತ್ತಿದ್ದರೂ, ಅಲ್ಲಿನ ಬಿಳಿಯರಂತೂ ಇಲ್ಲಿನ ಉನ್ನತ ವರ್ಗದ ಭಾರತೀಯರಂತೆಯೇ ಮತ್ತೊಮ್ಮೆ ಅಲ್ಲಿನ ಕಂದಾಚಾರಿಗಳು ಟ್ರಂಪಣ್ಣನಿಗೇ ಮತ ಹಾಕಿದರೆ ಆಶ್ಚರ್ಯವಿಲ್ಲ. ಅಲ್ಲಿ ಭಾರತೀಯ ಮೂಲದ ಅಮೆರಿಕನ್ನರು ಭಾರತೀಯ ಕಂದಾಚಾರಿಗಳ ಸಂಪ್ರದಾಯವನ್ನು ಹಾಡಿ ಹೊಗಳುತ್ತಿದ್ದರೂ, ತಮ್ಮನ್ನು ಆಳುವವರು ಭಾರತೀಯ ಮೂಲದವರಾಗಬಾರದು ಎಂದು ಬಯಸುವರು. ಹಾಗಾಗಿ ಅಲ್ಲಿನ ಭಾರತೀಯರು ಎಂದಿದ್ದರೂ ಎರಡನೇ ದರ್ಜೆ ನಾಗರಿಕರಾಗಿ ಅಮೆರಿಕಾದ ಬಿಳಿಯರ ಚರಣ ವಂದನೆಯಲ್ಲೇ ಧನ್ಯತೆ ಕಾಣುವರು. ಅಂಥವರಿಗೆ ಅಮೆರಿಕಾದಲ್ಲಿ ಸಮಾನತೆ ಬಯಸುವ ಲ್ಯಾಟಿನರು, ಕರಿಯರು, ಅಧಿಕಾರಸ್ಥ ಹೆಂಗಸರು ಎಂದಿಗೂ ಇಷ್ಟವಾಗುವುದಿಲ್ಲ.

ಕಮಲಾ ತಮ್ಮ ಭಾರತೀಯತ್ವವನ್ನು ಅತಿ ಕಡಿಮೆ ಪ್ರದರ್ಶಿಸುತ್ತಾರೆ ಹಾಗೂ ಅಲ್ಲಿನವರೇ ಎಂಬಂತೆ ಬಿಂಬಿಸಿಕೊಳ್ಳುತ್ತಾರೆ. ಏನೇ ಆದರೂ ಮೂಲ ಮಣ್ಣಿನ ವಾಸನೆ ಬಿಟ್ಟೀತೇ? ನಮ್ಮ ಪ್ರಧಾನಿಯವರಿಗೆ ಜೋ ಬೈಡನ್‌ ಪಕ್ಷದ ಗೆಲುವಿನಿಂದ ತುಸು ಕಷ್ಟ ತಪ್ಪಿದ್ದಲ್ಲ, ಏಕೆಂದರೆ ಅವರು ಖುಲ್ಲಂಖುಲ್ಲ ರಿಪಬ್ಲಿಕನ್‌ ಎಜೆಂಡಾದ ಸಮರ್ಥನೆ ಮಾಡಿಯಾಗಿದೆ. ಇದರಲ್ಲಿ ಚೀನಾ ಜೊತೆಗೂ ಕೈಕೈ ಮಿಲಾಯಿಸಬೇಕಾದೀತು.

ಅಮೆರಿಕಾದ ವೈಶಿಷ್ಟ್ಯವೆಂದರೆ, ಅದು ಇತ್ತೀಚೆಗಷ್ಟೆ ಅಮೆರಿಕಾಗೆ ಬಂದ ಸುಯೋಗ್ಯ ಮಂದಿಯನ್ನು ತೆರೆದ ಹೃದಯದಿಂದ ಒಪ್ಪಿಕೊಂಡಿದೆ. ಅಲ್ಲಿ ರೇಸಿಸಂ ಇದ್ದರೂ, ಬಹಳಷ್ಟಿದ್ದರೂ, ಉದಾರ ವ್ಯಕ್ತಿಗಳಿಗೇನೂ ಕಡಿಮೆ ಇಲ್ಲ. ಅವರು ಬಿಳಿಯ, ಕರಿಯ, ಕಂದು, ಹಳದಿ ಗಂಡಸರನ್ನೂ ನಿರರ್ಥಕರೆಂದು ಭಾವಿಸಿ ಜೆಂಡರ್‌ಗೆ ಮಹತ್ವ ನೀಡುವುದಿಲ್ಲ.

ಅತ್ತ ಡೆಮೊಕ್ರೆಟಿಕ್‌ ಅಭ್ಯರ್ಥಿ ನವೆಂಬರ್‌ 3ರಂದು ನಡೆಯಲಿರುವ ಚುನಾವಣೆಯಲ್ಲಿ ಗೆದ್ದುಬಿಟ್ಟರೆ, ಇತ್ತ ಭಾರತದಲ್ಲೂ ವಿಜಯದ ಪಟಾಕಿ ಸಿಡಿಯದೆ ಇರದು. ಒಬ್ಬ ಪರ್ಫೆಕ್ಟ್ ಭಾರತೀಯ ಹೆಣ್ಣಿನ ಮಗಳೀಗ ಅಮೆರಿಕಾದ ಉಪರಾಷ್ಟ್ರಪತಿ ಆಗುತ್ತಿದ್ದಾರೆ ಎಂದು. ಇದರಿಂದ ನಮ್ಮ ದೇಶಕ್ಕೆ ಆರ್ಥಿಕ, ಔದ್ಯಮಿಕ ಲಾಭ ಆಗದಿದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರೆಸ್ಟೀಜ್ ಮೇಲೇರುವುದಂತೂ ದಿಟ! ಇದರ ಪರಿಣಾಮ ನಮ್ಮ ಕಂದಾಚಾರಿ ರಾಜಕೀಯದ ಮೇಲೆ ಆಗಿಯೇ ಆಗುತ್ತದೆ.

ಯಾವ ಲಾಭಕ್ಕಾಗಿ ಈ ಧರ್ಮ?

ಒಂದು ದೃಷ್ಟಿಕೋನದಿಂದ ನೋಡಿದಾಗ ಈ ಪ್ರಕರಣ ಚಿಕ್ಕದು, ಇದರಲ್ಲಿ 19 ವರ್ಷದ ಒಬ್ಬ ಹುಡುಗಿ ಪ್ರಾಣಬಿಟ್ಟಳು. ಈ ತರಹದ  ಸಾವಿರಾರು ಪ್ರಾಣಗಳು ಈ ದೇಶದಲ್ಲಿ ಹೋಗುತ್ತಲೇ ಇರುತ್ತದೆ. ಈ ಹುಡುಗಿ ಉ.ಪ್ರದೇಶದ ಒಂದೂರಿನಿಂದ ಇನ್ನೊಂದು ಊರಿಗೆ ತನ್ನ ನೆಂಟನ ಜೊತೆ ಹೋಗುತ್ತಿದ್ದಳು. ಅವನು ಬಿದ್ದಿದ್ದರಿಂದ ಇವಳು ಸಾಯಬೇಕಾಯಿತು. ಅವಳು ಬಿದ್ದ ಕಾರಣ ಮಾಮೂಲಿಯದೇ.

ಈ ಇಬ್ಬರನ್ನು ಬೈಕ್‌ ಮೇಲೆ ನೋಡಿ, ಯಾರೋ ಇಬ್ಬರು ಯುವಕರು ತಮ್ಮ ಬೈಕ್‌ ಮೇಲೆ ಕುಳಿತೇ ಚುಡಾಯಿಸಲಾರಂಭಿಸಿದರು. ಆ ಊರಿನ ಜನಸಾಮಾನ್ಯರ ಭಾವನೆ ಎಂದರೆ, ಇಬ್ಬರು ಹುಡುಗ ಹುಡುಗಿ ಬೈಕ್‌ನಲ್ಲಿ ಒಟ್ಟಿಗೆ ಹೋಗುತ್ತಿದ್ದಾರೆಂದರೆ ಅವರು ಪ್ರೇಮಿಗಳೇ ಅಂತ! ಅಂಥವರನ್ನು ಚುಡಾಯಿಸುವ ಮೌಲಿಕ ಹಕ್ಕು ಬಲಿಷ್ಠರಾದವರಿಗೆ ಇದ್ದೇ ಇದೆ ಎನ್ನುತ್ತಾರೆ.

ಈ ಹುಡುಗಿಗೂ ಹಲವಾರು ಕನಸುಗಳಿದ್ದವು. ಆಕೆ ಆ ಉ.ಪ್ರ. ರಾಜ್ಯದ ಒಂದು ಸಣ್ಣ ಊರಿನ ಸಾಧಾರಣ ಬುಡಕಟ್ಟು ಕುಲದವಳು. 99% ಅಂಕ ಗಳಿಸಿ ಅಮೆರಿಕಾದ ವ್ಯಾಕ್ಸನ್‌ ಕಾಲೇಜ್‌, ಮೆಸಾಚುಸೆಟ್ಸ್ ನಲ್ಲಿ ಫುಲ್ ಸ್ಕಾಲರ್‌ಶಿಪ್‌ನೊಂದಿಗೆ ಕಲಿಯುತ್ತಿದ್ದಳು, ತನ್ನೂರನ್ನು ನೆನೆದು ಮಧ್ಯೆ ಇಲ್ಲಿಗೆ ಬಂದು ಲಾಕ್‌ ಡೌನ್‌ನಲ್ಲಿ ಇಲ್ಲೇ ಸಿಕ್ಕಿಬಿದ್ದಳು. ಈ ಬಲಿಷ್ಠ ಪುಂಡರ ಕಾಟದಿಂದಾಗಿ ಇಲ್ಲೇ ಪ್ರಾಣ ಬಿಟ್ಟಳು.

ನಮ್ಮ ದೇಶದ ಎಷ್ಟೋ ಭಾಗಗಳಲ್ಲಿ ರೋಮಿಯೋ ಸ್ಕ್ವಾಡ್‌ ಆದಾಗಿನಿಂದ ಈ ತರಹದ ಘಟನೆಗಳು ನಡೆಯುತ್ತಲೇ ಇವೆ. ಇದರ ಮೂಲ ಉದ್ದೇಶ, ಅಂತರ್ಜಾತೀಯ ಪ್ರೇಮಕ್ಕೆ ತಡೆಯೊಡ್ಡುವುದು ಮಾತ್ರವಲ್ಲ, ಯಾವ ಪ್ರೇಮ ಬೆಳೆಯದಂತೆ ತಡೆಯುವುದೇ ಆಗಿದೆ. ಕೇವಲ ಪುರೋಹಿತರ ಜಾತಕದ ಹೊಂದಾಣಿಕೆಯಿಂದ ಮಾತ್ರ ಮದುವೆಗಳು ನಡೆಯಲಿ ಎಂಬುದು ಇದರ ಹಿಂದಿನ ಘನ ಉದ್ದೇಶ.

ಈ ಸ್ಕ್ವಾಡ್‌ಗಳ ಮತ್ತೊಂದು ತರ್ಕವೆಂದರೆ, ಭಗವಾ ಗ್ಯಾಂಗಿಗೆ ಬಹುತೇಕ ಪೊಲೀಸ್‌ ಪವರ್‌ ನೀಡಬೇಕೆಂಬುದು. ಆಗ ಇವರು ಧರ್ಮದ ಹೆಸರಿನಲ್ಲಿ ಮುಸಲ್ಮಾನರು, ದಲಿತರು, ಹುಡುಗಿಯರನ್ನು ಧಾರಾಳ ಲೂಟಿ ಮಾಡಬಹುದೆಂಬುದು. ಆ ಲೂಟಿ ಹಣದಿಂದ ಭಾರಿ ಧಾರ್ಮಿಕ ಆಯೋಜನಗಳನ್ನು ಮಾಡಬೇಕೆಂಬುದು. ಕೆಲವೇ ದಿನಗಳ ಅಂತರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಖರ್ಚಿಗೆ ಅಷ್ಟೊಂದು ಹಣ ಸಂಗ್ರಹಗೊಳ್ಳಬೇಕಾದರೂ ಹೇಗೆ? ಜೊತೆಗೆ ಬೈಕ್‌ ಮೇಲೆ ಕಾಣಿಸುವ ಇಂಥ ಪ್ರೇಮಿಗಳನ್ನು ಬೆದರಿಸಿ ಚಂದಾ ವಸೂಲಿ ಮಾಡುವುದು ಮಾಮೂಲಿ. ದಲಿತರು, ಮುಸಲ್ಮಾನರು, ಅಂಗಡಿಯವರಿಂದ ದಬಾಯಿಸಿ ವಸೂಲಿ ಮಾಡುತ್ತಾರೆ.

ಈ ಪುಂಡರು ಎಲ್ಲಾ ತರಹದ ಶಕ್ತಿ ಹೊಂದಿರುತ್ತಾರೆ. ಪೊಲೀಸರೂ ಸಹ ಇವರಿಗೆ ಹೆದರುತ್ತಾರೆ, ಏಕೆಂದರೆ ಆಡಳಿತದ ಶಾಸನದಲ್ಲೂ ಇವರ ಹಿಡಿತವಿರುತ್ತದೆ. ತಮ್ಮನ್ನು ವಿರೋಧಿಸುವ ಪೊಲೀಸ್‌ ಅಧಿಕಾರಿಗಳನ್ನು ಕ್ಷಣ ಮಾತ್ರದಲ್ಲಿ ವರ್ಗಾವಣೆ ಮಾಡಿಸುವುದು ಇವರಿಗೆ ಚಿಟಿಕೆ ಹೊಡೆದಷ್ಟೇ ಸುಲಭ!

ಈ ಭಗವಾಧಾರಿಗಳು ಬಲು ಜೋರಾಗಿ ಧಾರ್ಮಿಕ ಕಾರ್ಯಕ್ರಮ ನಡೆಸಿ ಭಜನಾ ಮಂಡಳಿ ಏರ್ಪಡಿಸುತ್ತಾರೆ. ಭಕ್ತಿಯ ಅರ್ಥ ಲೂಟಿ ಮಾಡುವ, ದಬ್ಬಾಳಿಕೆ ನಡೆಸುವ ಎಂದು ಎಲ್ಲಿ ಹೇಳಿದೆ? ಧರ್ಮ ಕಲಿಸುವುದೇ ಹಿಂಸೆ. ನಮ್ಮಲ್ಲಿ ಹಿಂದೂ ಗ್ಯಾಂಗ್‌ಇರುವಂತೆಯೇ, ಇಸ್ಲಾಮಿ ದೇಶಗಳಲ್ಲಿ ಮುಸ್ಲಿಮರ, ಅಮೆರಿಕಾದಂಥ ಮುಂದುವರಿದ ದೇಶದಲ್ಲೂ ಕ್ರೈಸ್ತರ ಗ್ಯಾಂಗ್‌ ಇದ್ದೇ ಇರುತ್ತದೆ. ಅಮೆರಿಕಾದಲ್ಲಿ ಯುವಜನತೆ ಇದರಲ್ಲಿ ಪಾಲ್ಗೊಳ್ಳುವುದಿಲ್ಲ. 35-40ರ ನಂತರ ಈ ರೋಗ ಅಲ್ಲಿ ತಗುಲುತ್ತದೆ. ಒಂದಿಬ್ಬರು ಗರ್ಲ್ ಫ್ರೆಂಡ್ಸ್ ಬಿಟ್ಟುಹೋಗಿ ಮಾಡಲೇನೂ ಕೆಲಸ ಇಲ್ಲದಿದ್ದಾಗ ಇಂಥ ಆಲೋಚನೆ ಬರುವುದು ಸಹಜ.

ಧರ್ಮ ನಿಜವಾಗಿಯೂ ಸದ್ವರ್ತನೆ ಕಲಿಸುವುದಾದರೆ, ವಿಶ್ವದಲ್ಲಿ ಎಲ್ಲೂ ಪೊಲೀಸರ ಅಗತ್ಯವೇ ಇರುತ್ತಿರಲಿಲ್ಲ. ಪ್ರತಿ ದೇಶದ ಜೇಲುಗಳ್ಲೂ ಪಾದ್ರಿ, ಮುಲ್ಲಾ, ಪುರೋಹಿತರ ವತಿಯಿಂದ ಧಾರ್ಮಿಕ ಪ್ರವಚನ ಏರ್ಪಡಿಸಲಾಗುತ್ತದೆ, ಏಕೆಂದರೆ ಕೈದಿಗಳೆಲ್ಲ ಕಂದಾಚಾರಿಗಳೇ ಆಗಿರುತ್ತಾರೆ. ಮನುಷ್ಯರನ್ನು ಮಾನವೀಯತೆಯಿಂದ ತೊರೆಸುವುದಾದರೆ ಈ ಧರ್ಮದಿಂದ ಏನು ಲಾಭ? ಹೀಗೆ ಯಾರಾದರೂ ಕೇಳಿದರೆ ಅವರ ಬಾಯಿಗೆ ಬೀಗ ಜಡಿಯಲಾಗುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ