ಶ್ರಾವಣ ಮಾಸ ಮುಗಿದು ಭಾದ್ರಪದ ಮಾಸ ಆರಂಭವಾಗುತ್ತಿದ್ದಂತೆಯೇ, ಭಾರತದ ಬಹುತೇಕ ಮನೆಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟುತ್ತದೆ. ಮನೆಗಳ ಮುಂದೆ ರಂಗೋಲಿ, ಬಾಗಿಲಿಗೆ ಮಾವಿನ ಎಲೆಗಳ ತೋರಣ, ಹೂವಿನ ಅಲಂಕಾರ, ಸಿಹಿ–ಖಾರದ ತಿಂಡಿಗಳ ತಯಾರಿ… ಎಲ್ಲೆಡೆ ಒಂದೇ ಸಂಭ್ರಮ. ಅದೇ ನಮ್ಮ ಗೌರಿ–ಗಣೇಶ ಹಬ್ಬ! ಗಣೇಶ ಚತುರ್ಥಿ ಎಂದರೆ ಕೇವಲ ಮಕ್ಕಳಿಗೋ, ಮಹಿಳೆಯರಿಗೋ ಅಥವಾ ವಯಸ್ಕರಿಗೋ ಸೀಮಿತವಾದ ಹಬ್ಬವಲ್ಲ. ಆಬಾಲವೃದ್ಧರಾದಿಯಾಗಿ ಎಲ್ಲರೂ ಒಂದಾಗಿ ಆಚರಿಸುವ ಸಾರ್ವತ್ರಿಕ ಹಬ್ಬ ಇದು.

ಮನೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವುದರ ಜೊತೆಗೆ, ಸಣ್ಣ ಗಲ್ಲಿಗಳಿಂದ ಬಡಾವಣೆಗಳವರೆಗೆ ಸಾರ್ವಜನಿಕ ಗಣೇಶೋತ್ಸವಗಳು ನಡೆಯುತ್ತವೆ. ಕೆಲವೆಡೆ ಒಂದು ದಿನ, ಕೆಲವೆಡೆ ಐದು, ಏಳು ಅಥವಾ ಹನ್ನೊಂದು ದಿನಗಳ ಕಾಲ ಉತ್ಸವ ನಡೆಯುತ್ತದೆ. ಇನ್ನೂ ಕೆಲವು ಕಡೆ ಸ್ಥಳೀಯ ಸಂಪ್ರದಾಯಗಳ ಪ್ರಕಾರ ನಂತರದ ದಿನಗಳಲ್ಲೂ ಕಾರ್ಯಕ್ರಮಗಳು ಮುಂದುವರಿಯುತ್ತವೆ. ಆದರೆ ಗಣೇಶ ಹಬ್ಬದ ಹಿಂದೆ ಇರುವ ಕಥೆ ಕೇವಲ ಒಂದು ಪುರಾಣಕಥೆಯಲ್ಲ. ಇದರೊಳಗೆ ಪುರಾಣವಿದೆ, ತತ್ವಜ್ಞಾನವಿದೆ, ಸಾಮಾಜಿಕ ಸಂದೇಶವಿದೆ, ಸ್ವಾತಂತ್ರ್ಯ ಹೋರಾಟದ ಇತಿಹಾಸವಿದೆ, ಕಲೆ–ಸಂಸ್ಕೃತಿಯಿದೆ ಮತ್ತು ಪರಿಸರದ ಕುರಿತ ಚಿಂತನೆಯೂ ಇದೆ. ಹಾಗಾದರೆ ಗಣೇಶ ಚತುರ್ಥಿಯ ಈ ಬಹುಮುಖ ಇತಿಹಾಸವನ್ನು ತಿಳಿಯೋಣ ಬನ್ನಿ.

ಶ್ರೀ ಗಣೇಶನ ಜನನದ ಕಥೆ

ಶ್ರೀ ಗಣೇಶನ ಜನನದ ಕುರಿತು ವಿವಿಧ ಪುರಾಣಗಳಲ್ಲಿ ಬೇರೆಬೇರೆ ನಿರೂಪಣೆಗಳು ಕಂಡುಬರುತ್ತವೆ. ಜನಪ್ರಿಯವಾಗಿರುವ ಕಥೆಯ ಪ್ರಕಾರ, ಒಂದು ದಿನ ಪಾರ್ವತಿ ದೇವಿಯು ಸ್ನಾನಕ್ಕೆ ತೆರಳುವಾಗ ಯಾರೂ ತನ್ನ ಅಂತಃಪುರದೊಳಗೆ ಪ್ರವೇಶಿಸಬಾರದು ಎಂದು ನಿರ್ಧರಿಸುತ್ತಾಳೆ. ತನ್ನ ದೇಹಕ್ಕೆ ಹಚ್ಚಿಕೊಳ್ಳುವ ಅರಿಶಿನ, ಚಂದನ ಮತ್ತು ಇತರ ಲೇಪನಗಳಿಂದ ಪಾರ್ವತಿಯ ಮೈ ಮೇಲಿನ ಕೊಳೆ ಎಂದೇ ಬಹುತೇಕರು ನಂಬಿಸಿರುವುದು ಹುನ್ನಾರ) ಒಂದು ಬಾಲಕನ ಆಕೃತಿಯನ್ನು ನಿರ್ಮಿಸಿ, ಅದಕ್ಕೆ ಜೀವ ತುಂಬುತ್ತಾಳೆ. ನಾನು ಸ್ನಾನ ಮುಗಿಸಿ ಬರುವವರೆಗೆ ಯಾರನ್ನೂ ಒಳಗೆ ಬಿಡಬಾರದು ಎಂದು ಆ ಬಾಲಕನಿಗೆ ಆಜ್ಞಾಪಿಸುತ್ತಾಳೆ.

ಅಷ್ಟರಲ್ಲಿ ಶಿವನು ತನ್ನ ಗಣಗಳೊಂದಿಗೆ ಅಲ್ಲಿಗೆ ಬರುತ್ತಾನೆ. ಶಿವನನ್ನು ಆ ಬಾಲಕ ಹಿಂದೆಂದೂ ನೋಡಿರಲಿಲ್ಲ. ಹೀಗಾಗಿ ಪಾರ್ವತಿಯ ಆಜ್ಞೆಯನ್ನು ಪಾಲಿಸಿದ ಬಾಲಕ, ನನ್ನ ತಾಯಿಯ ಅನುಮತಿಯಿಲ್ಲದೆ ಯಾರನ್ನೂ ಒಳಗೆ ಬಿಡುವುದಿಲ್ಲ”ಎಂದು ಶಿವನನ್ನೇ ತಡೆಯುತ್ತಾನೆ. ಮಾತಿಗೆ ಮಾತು ಬೆಳೆದು, ಪರಿಸ್ಥಿತಿ ತೀವ್ರವಾಗುತ್ತದೆ. ಕೋಪಗೊಂಡ ಶಿವನು ತನ್ನ ತ್ರಿಶೂಲದಿಂದ ಆ ಬಾಲಕನ ಶಿರವನ್ನು ಕಡಿದುಹಾಕುತ್ತಾನೆ. ಇದನ್ನು ಕಂಡ ಪಾರ್ವತಿ ದೇವಿ ದುಃಖದಿಂದ ತನ್ನ ಮಗನನ್ನು ಬದುಕಿಸಬೇಕೆಂದು ಶಿವನಲ್ಲಿ ಬೇಡಿಕೊಳ್ಳುತ್ತಾಳೆ.

ganesha1

ಕೊನೆಗೆ ಶಿವನು ತನ್ನ ಗಣಗಳಿಗೆ ಉತ್ತರ ದಿಕ್ಕಿಗೆ ತಲೆ ಹಾಕಿಕೊಂಡು ಮಲಗಿರುವ ಮೊದಲ ಜೀವಿಯ ತಲೆಯನ್ನು ತರಲು ಸೂಚಿಸುತ್ತಾನೆ. ಗಣಗಳು ಹುಡುಕಿದಾಗ ಅಂತಿಮವಾಗಿ ಅವರಿಗೆ ಆನೆಯೊಂದು ಸಿಗುತ್ತದೆ. ಆನೆಯ ತಲೆಯನ್ನು ತಂದು ಬಾಲಕನ ದೇಹಕ್ಕೆ ಜೋಡಿಸಿ ಶಿವನು ಅವನಿಗೆ ಪುನರ್ಜೀವ ನೀಡುತ್ತಾನೆ. ನಂತರ ಅವನನ್ನು ತನ್ನ ಗಣಗಳ ಅಧಿಪತಿಯನ್ನಾಗಿ ಮಾಡಿ— ಗಣಪತಿ, ಗಣೇಶ ಎಂಬ ಹೆಸರು ನೀಡುತ್ತಾನೆ.

ಮತ್ತು ಯಾವುದೇ ಶುಭಕಾರ್ಯ, ಪೂಜೆ ಅಥವಾ ಧಾರ್ಮಿಕ ವಿಧಿ ಆರಂಭಿಸುವ ಮೊದಲು ಗಣೇಶನನ್ನು ಪೂಜಿಸಬೇಕು ಎಂಬ ವರವನ್ನು ನೀಡುತ್ತಾನೆ. ಆ ಕಾರಣಕ್ಕೇ ಗಣೇಶನಿಗೆ, ವಿಘ್ನೇಶ್ವರ, ವಿಘ್ನವಿನಾಶಕ, ಗಣಪತಿ, ಏಕದಂತ, ಲಂಬೋದರ, ಗಜಾನನ ಮುಂತಾದ ಅನೇಕ ಹೆಸರುಗಳು ಬಂದಿವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ