ಮಹೇಶ : ಗಂಡನನ್ನು ಸಾಮಾನ್ಯವಾಗಿ `ಮನೆದೇವ್ರು' ಅಂತಾರಲ್ಲ.... ಯಾಕೆ?
ಸುರೇಶ : ಯಾಕಂದ್ರೆ, ಅವನು ಮಾತಾಡೋ ಹಾಗೇ ಇಲ್ಲ! ದೇವರ ತರಹ ತೆಪ್ಪಗೆ ಕುಳಿತು, ತುಟಿ ಪಿಟಕ್ ಎನ್ನದೆ ಕೊಟ್ಟ ನೈವೇದ್ಯ ಸ್ವೀಕರಿಸಬೇಕು ಅಂತ!
ಸುಗುಣಾ : S.S.L.C ಓದಿದರ ರಿಸ್ಟ್ಬಂತು. PUC ಓದಿದವರ ರಿಸಲ್ಟ್ ಬಂದಾಯ್ತು. ಮತ್ತೆ.... ಇನ್ಯಾರದು ಬಾಕಿ ಇದೆ?
ಸುಮತಿ : ಅದೇ..... ಏನೂ ಓದದೆ ಚುನಾವಣೆಗೆ ನಿಲ್ಲುತ್ತಾರಲ್ಲ ಅವರದ್ದೇ ಇರಬೇಕು.
ಮಗ : ಅಪ್ಪ, `ಕಷ್ಟ ಕಾರ್ಪಣ್ಯಗಳ ಸುರಿಮಳೆ' ಅಂತಾರಲ್ಲ, ಅದು ಯಾವುದರ ಕುರಿತಾಗಿ ಹೇಳುತ್ತಾರೆ?
ಮಗನ ಆ ಪ್ರಶ್ನೆಗೆ ತಂದೆ ಮೌನವಾಗಿ ತಾಯಿಯ ಕಡೆ ತಿರುಗಿ ನೋಡಿದರು. ಆಕೆಯ ಉಗ್ರ ನೋಟ ಕಂಡು ಸುಮ್ಮನಾದರು. ಮಗರಾಯ ಸುಮ್ಮನಿರಬೇಡವೇ?
``ಗೊತ್ತಾಯ್ತು ಬಿಡಪ್ಪ, ನೀನು ಹೇಳಿದ ಉತ್ತರ!'' ಅನ್ನುವುದೇ?
ರಾಜೇಶ್ : ಅಲ್ಲ ಕಣಯ್ಯ, ನೀನೇಕೆ ಪಾರ್ಕಿಗೆ ಬಂದವನು ವಾಕಿಂಗ್ ಕಡೆ ಗಮನ ಕೊಡದೆ, ಇಲ್ಲಿನ ಹೆಂಗಸರ ಕಡೆ ತಿರುಗಿ ನೋಡ್ತಾ ಇರ್ತೀಯಾ? ಇಲ್ಲಿನ ಹೆಂಗಸರೆಲ್ಲ ಮದುವೆ ಆದರು ಅಂತ ನೆನಪಿರಲಿ!
ದಿನೇಶ್ : ಅದಕ್ಕೆ ಕಣಯ್ಯ ನೋಡ್ತಾ ಇರೋದು! ಅನ್ಯಾಯವಾಗಿ ಇಂಥ ಸೌಂದರ್ಯದ ರೂಪರಾಶಿಗಳು ಇತರರ ಪಾಲಾಯ್ತಲ್ಲ ಅಂತ.....
ಟೀಚರ್ : ಏಕವಚನ ಮತ್ತು ಬಹುವಚನಕ್ಕೆ ವ್ಯತ್ಯಾಸ ಹೇಳುವಿರಾ?
ಗುಂಡ : ನಮ್ಮಪ್ಪ ಆಡೋದು ಒಂದೇ ಮಾತು, ಅದು ಏಕವಚನ. ನಮ್ಮಮ್ಮ ಶುರು ಮಾಡಿದರೆ ಮಾತೇ ನಿಲ್ಲಿಸೋದಿಲ್ಲ, ಅದು ಬಹುವಚನ!
ಮಂಗನೂರಿನ ಪ್ರೈಮರಿ ಸ್ಕೂಲ್ ಟೀಚರ್ ಒಬ್ಬರು ಮಧ್ಯಾಹ್ನದ ಊಟದ ನಂತರ ಗಡದ್ದಾಗಿ ಕ್ಲಾಸಿನಲ್ಲೇ ಗೊರಕೆ ಹೊಡೆಯುತ್ತಿದ್ದರು.
ಆಕಸ್ಮಿಕಾಗಿ ಇನ್ ಸ್ಪೆಕ್ಷನ್ ಗೆಂದು ಶಿಕ್ಷಣದ ಅಧಿಕಾರಿ ಅಲ್ಲಿಗೆ ಆಗಮಿಸಿದರು.
ಮಕ್ಕಳೆಲ್ಲ ಸೇರಿ ಇವರನ್ನು ಎಷ್ಟು ಸಲ ಎಬ್ಬಿಸಿದರೂ ಈಕೆ ಎಚ್ಚರಗೊಂಡಿದ್ದರೆ ಕೇಳಿ.
ಅಂತೂ ಜ್ಞಾನೋದಯವಾಗಿ ಕಣ್ಣು ಬಿಟ್ಟು ನೋಡುತ್ತಾರೆ, ಎದುರಿಗೆ ಅಧಿಕಾರಿ!
``ಮಕ್ಕಳೇ, ನಿನ್ನೆ ನಿಮಗೆ `ರಾಕ್ಷಸರು ಕುಂಭಕರ್ಣನನ್ನು ಎಬ್ಬಿಸಿದ್ದು' ಪಾಠ ಮಾಡಿದ್ದೆನಲ್ಲ, ಅದು ಎಷ್ಟು ಕಷ್ಟಕರ ಅಂತ ನಿಮಗೆ ಹೀಗೆ ವಿವರಿಸುತ್ತಿದ್ದೆ. ಈಗ ಸ್ಪಷ್ಟ ಗೊತ್ತಾಯಿತಲ್ಲ....?'' ಎಂದಾಗ ಮಕ್ಕಳೇನೋ ತಲೆ ಆಡಿಸಿದರು. ಇದಕ್ಕೆ ಈ ಟೀಚರ್ ನ್ನು ಹೊಗಳುವುದೋ ತೆಗಳುವುದೋ ತಿಳಿಯದೆ ಅಧಿಕಾರಿ ಕಂಗಾಲಾದರಂತೆ!
ಒಂದು ಸಲ ಮಾಡರ್ನ್ ಮಾಲತಿ ತನ್ನ ಹೊಸ ಕಾರು ನಡೆಸುತ್ತಾ ಸ್ನಿಗಲ್ ಬಳಿ ಬಂದಾಗ, ಎಡವಟ್ಟಾಗಿ ಕಾರು ನಿಂತೇ ಹೋಗಬೇಕೇ?
ಗ್ರೀನ್ ಸಿಗ್ನಲ್ ಬಂದಿದೆ, ಆದರೂ ಜಪ್ಪಯ್ಯ ಅಂದ್ರೂ ಕಾರು ಮಾತ್ರ ಸ್ಟಾರ್ಟ್ ಆಗಲೇ ಇಲ್ಲ. ಹಿಂದೆ ನಿಂತಿದ್ದ ಗಾಡಿಯವರಿಗೆಲ್ಲ ಸಿಟ್ಟು ಬಂದು ಜೋರು ಜೋರಾಗಿ ಹಾರ್ನ್ ಮಾಡತೊಡಗಿದರು. ಸಿಗ್ನಲ್ ಗ್ರೀನ್ ಹೋಗಿ ಯೆಲ್ಲೋ ಆಗಿ, ರೆಡ್ ಗೂ ತಿರುಗಿತು! ಆದರೂ ಈಕೆಯ ಕಾರು ಸ್ಟಾರ್ಟ್ ಆಗಲಿಲ್ಲ. ಹಿಂದಿದ್ದವರ ಅಸಹನೆ ಹೆಚ್ಚಿ ಇಡೀ ಊರಿಗೇ ಕೇಳಿಸುವಂತೆ ಹಾರ್ನ್ ಮಾಡತೊಡಗಿದರು.
ಆಗ ಕೆಲಸಕ್ಕೆ ಹೊಸದಾಗಿ ಸೇರಿದ್ದ ಕ್ಯಾತಮಾರನ ಹಳ್ಳಿಯ ಸಿಗ್ನಲ್ ಮ್ಯಾನ್ ಸಿದ್ದಪ್ಪ ಪೊಲೀಸ್ ನಡಿಗೆಯಲ್ಲಿ ಓಡಿಬಂದು, ``ಏನಾಯ್ತು ಮೇಡಂ? 3 ಬಣ್ಣಗಳಲ್ಲಿ ನಿಮಗೆ ಯಾವ ಬಣ್ಣ ಇಷ್ಟ ಆಗ್ತಿಲ್ಲವೇ?'' ಎಂದು ಕಳಕಳಿಯಿಂದ ವಿಚಾರಿಸುವುದೇ?