50ನೇ ವಿವಾಹ ವಾರ್ಷಿಕೋತ್ಸವದಂದು ಗಂಡನ ಕಣ್ಣಲ್ಲಿ ಎರಡು ಹನಿ ಕಣ್ಣೀರನ್ನು ನೋಡಿದ ಹೆಂಡತಿ, ``ರೀ, ನೀವು ಇಷ್ಟು ಭಾವುಕರು ಅಂತ ತಿಳಿದಿರಲಿಲ್ಲ,'' ಎಂದಳು.
ಗಂಡ ಹೇಳಿದ, ``50 ವರ್ಷಗಳ ಹಿಂದೆ ನಾನು ಮಾಡಿದ ಸಣ್ಣ ತಪ್ಪಿಗೆ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡ ನಿಮ್ಮಪ್ಪ, ನನ್ನ ಮಗಳನ್ನು `ಲಗ್ನ ಆಗ್ತೀಯಾ..... ಇಲ್ಲ 50 ವರ್ಷ ನಿನ್ನ ಜೈಲಿಗೆ ತಳ್ಳಿಬಿಡಲಾ?' ಎಂದು ಘರ್ಜಿಸಿದಾಗ, ಜೈಲೇ ಇರಲಿ ಎಂದು ಒಪ್ಪಿಕೊಂಡಿದ್ದರೆ ಚೆನ್ನಾಗಿತ್ತು.... ಇವತ್ತಿಗೆ ನನ್ನ ಬಿಡುಗಡೆ ಆಗ್ತಿತ್ತು. ಅದನ್ನು ನೆನೆಸಿಕೊಂಡು ಕಣ್ಣೀರು ಬಂತು ಅಷ್ಟೇ....'' ಎನ್ನುವುದೇ?
ತಂದೆ : ಮಗನೇ, ಜೀವನದಲ್ಲಿ ಏನಾದರೂ ಸಾಧಿಸಬೇಕೆಂದಿದ್ದರೆ ಮದುವೆಗೆ ಮೊದಲು ಸಾಧಿಸಿ ಮುಗಿಸಿಬಿಡು.
ಮಗ : ಯಾಕಪ್ಪ ಹಾಗಂತೀಯಾ?
ತಂದೆ : ಮದುವೆಯಾದ ನಂತರ ಸಾಧಿಸಿದರೆ ಹೆಂಡತಿಯ ಕಾಲ್ಗುಣ ಅಂತಾರೆ!
ಅಜಯ್ : ನೀನು ಮಾಡದ ತಪ್ಪಿಗೆ ನೀನೇ ಶಿಕ್ಷೆ ವಿಧಿಸಿಕೊಳ್ಳುತ್ತಿದ್ದೀಯಂತೆ, ಹೌದಾ?
ವಿಜಯ್ : ಹೌದಯ್ಯ, ಮುಂದಿನ ತಿಂಗಳು ನಾನು ಮದುವೆ ಆಗ್ತಿದ್ದೀನಿ!
ಗುಂಡ : ಇತ್ತೀಚೆಗೆ ಒಂದೇ ಕಡೆ ನೋಡಿ ನೋಡಿ ನನ್ನ ಕಣ್ಣು ಸದಾ ನೋಯ್ತಾ ಇದೆ ಡಾಕ್ಟರ್.
ವೈದ್ಯರು : ಸ್ವಲ್ಪ ಲೇಡೀಸ್ ಹಾಸ್ಟೆಲ್ ಕಡೆ ಓಡಾಡೋದನ್ನು ಕಡಿಮೆ ಮಾಡಿ, ಸರಿಹೋಗುತ್ತೆ!
ಪತ್ನಿ : ಆ ಕಾಮಿಡಿ ಸಿನಿಮಾ ನೋಡಿ ನೋಡಿ ನಕ್ಕೂ ನಕ್ಕು ನನ್ನ ಅರ್ಧ ಜೀವಾನೇ ಹೋದ ಹಾಗಾಯ್ತು ರೀ.
ಪತಿ : ಹೌದಾ....? ಜಾಸ್ತಿ ದುಡ್ಡಾದರೂ ಪರವಾಗಿಲ್ಲ, ನಾನು ಕೊಡ್ತೀನಿ.... ಒಳ್ಳೆ ಥಿಯೇಟರ್ನಲ್ಲಿ ಇನ್ನೊಮ್ಮೆ ಆ ಸಿನಿಮಾ ನೋಡಿಬಿಡು!
ಪತ್ನಿ : ರೀ..... ಅಡುಗೆ ಏನು ಮಾಡಲಿ ಅಂತ ಆಗಿನಿಂದ ಬಹಳ ಯೇಚನೆ ಮಾಡ್ತಾ ಇದ್ದೀನಿ.
ಪತಿ : ನಿನಗೊಂದು ಯೋಚನೆ ಆದರೆ, ನನ್ನದು ಇನ್ನೊಂದು ತರಹದ ಯೋಚನೆ ಆಗಿದೆ.
ಪತ್ನಿ : ನಿಮ್ಮದೇನು ಅಂಥ ಯೋಚನೆ?
ಪತಿ : ನೀನು ಮಾಡಿದ್ದನ್ನು ತಿನ್ನುವುದು ಹೇಗೆ ಅಂತಾ?
ಪತಿ : ತುಂತುರು ಮಳೆ ಬಿದ್ದು ವಾತಾವರಣ ಇಷ್ಟು ಹಿತಕರ ಆಗಿರೋವಾಗ, ಈ ಸಮಯದಲ್ಲಿ ನೀನು ಏನಾದರೂ ವಿಶೇಷವಾದದ್ದನ್ನು ಹೇಳಬಾರದೇ.....?
ಪತ್ನಿ : ವಾವ್... ಹೌ ನೈಸ್! ನಡೆಯಿರಿ, ಹಾಗೇ ಸುತ್ತಾಡಿಕೊಂಡು ಶಾಪಿಂಗ್ ಮುಗಿಸೋಣ!
ಮಹೇಶ್ : ಏನೋ ನೀನು.... ಇಷ್ಟು ಸಂತೋಷದಿಂದ ಸ್ವೀಟ್ಸ್ ಹಂಚುತ್ತಾ ಇದ್ದೀಯಾ.... ಲಾಟರಿ ಹೊಡೀತೇನು?
ಸುರೇಶ್ : ಇಲ್ಲ ಕಣೋ... ನಾಳೆಯಿಂದ ನನ್ನ ಹೆಂಡತಿ ತನ್ನ ಘನಘೋರ ಅಡುಗಿ ಮಾಡುವುದನ್ನು ನಿಲ್ಲಿಸಲಿದ್ದಾಳಂತೆ. ಇನ್ನಾದರೂ ನಾನೇ ಬೇಯಿಸಿಕೊಂಡು ನೆಮ್ಮದಿಯಾಗಿ ಇರಬಹುದಲ್ಲ....!
ತಾಯಿ : ಮಮತಾ, ನೀನು ಚರ್ಚಾಕೂಟದ ಸ್ಪರ್ಧೆಯಲ್ಲಿ ಗೆದ್ದದ್ದಕ್ಕೆ ನಿಮ್ಮ ತಂದೆ ಏನೆಂದರು?
ಮಗಳು : ಮಮತಾ, ದಿನದಿಂದ ದಿನಕ್ಕೆ ಮಾತನಾಡುವುದರಲ್ಲಿ ನೀನು ನಿಮ್ಮಮ್ಮನನ್ನು ಮೀರಿಸುತ್ತಿದ್ದೀಯಾ ಅಂತ ಹೇಳಿದರು.
ಪ್ರಶ್ನೆ : 1983ರಲ್ಲಿ ಕ್ರಿಕೆಟ್ ವಿಶ್ವ ಕಪ್ ಯಾರಿಗೆ ಸಿಕ್ಕಿತು?
ಉತ್ತರ : ಅದನ್ನು ಗೆದ್ದವರಿಗೆ!
ವಿಮಲಮ್ಮ ಸೀರೆ ಕೊಳ್ಳಲೆಂದು ಅಂಗಡಿಗೆ ಹೋದರು. ಸೇಲ್ಸ್ ಮ್ಯಾನ್ ಎಂಥ ಸೀರೆ ತೋರಿಸಿದರೂ ಅವರು ಬಡಪಟ್ಟಿಗೆ ಒಪ್ಪುತ್ತಿರಲಿಲ್ಲ.





