ಮುಂಬೈನ ಒಂದು ವೈದ್ಯ ದಂಪತಿ ಪತ್ರಿಕೆಯಲ್ಲಿ  ಐವಿಎಫ್‌ ಬಗ್ಗೆ ನೀಡಿದ್ದ ಜಾಹೀರಾತನ್ನು ಮಹಾರಾಷ್ಟ್ರ ಮೆಡಿಕಲ್ ಕೌನ್ಸಿಲ್‌ ಆಫ್‌ ಇಂಡಿಯಾ ಸಮಿತಿಯು ರದ್ದುಪಡಿಸಿತು.

ಸ್ವಯಂ ಸೇವಾ ಸಂಸ್ಥೆಗಳ ವಾದಕ್ಕೆ ಹೆಚ್ಚಿನ ಬೆಂಬಲ ದೊರೆಯಲಿಲ್ಲ. ಏಕೆಂದರೆ ಐವಿಎಫ್‌ ಒಂದು ವೈಜ್ಞಾನಿಕ ಪಾರದರ್ಶಕ ಪದ್ಧತಿ. ಐವಿಎಫ್‌ ಸೆಂಟರ್‌ಗಳನ್ನು ನಡೆಸುತ್ತಿರುವ ಜನರು ಸಂತಾನಹೀನ ದಂಪತಿಗಳಿಂದ ಹಣ ಲೂಟಿ ಮಾಡುತ್ತಿದ್ದಾರೆ ಎಂಬ ಚರ್ಚೆಯನ್ನು ಸಾಮಾನ್ಯ ಜನರು ಸಮರ್ಥಿಸಲಿಲ್ಲ ಮತ್ತು ಆ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ತೋರಲಿಲ್ಲ.

ನಮ್ಮ ಸಮಾಜದಲ್ಲಿ ಪೂಜೆ, ಹೋಮ, ಶಾಸ್ತ್ರ, ತಂತ್ರಮಂತ್ರಗಳ ಮೂಲಕ ಸಂತಾನ ಭಾಗ್ಯವನ್ನು ಕರುಣಿಸುತ್ತೇನೆಂದು ಹೇಳುತ್ತಾ ಅವೈಜ್ಞಾನಿಕ ವಿಧಾನಗಳಿಂದ ಜನರನ್ನು ಸುಲಿಗೆ ಮಾಡುತ್ತಿರುವವರ ವಿರುದ್ಧವಾಗಿ ಯಾರೂ ಚಕಾರ ಎತ್ತುವುದಿಲ್ಲ ಮತ್ತು ಆ ಬಗ್ಗೆ ಕಾನೂನಿನ ಬೇಡಿಕೆಯನ್ನೂ ಮುಂದಿಡುವುದಿಲ್ಲ.

ಆ ಜನರ ಬಳಿ ಯಾವುದೇ ಉಪಕರಣ, ಔಷಧಗಳಿರುವುದಿಲ್ಲ. ವೈಜ್ಞಾನಿಕ ವಿಧಿ ವಿಧಾನಗಳೂ ಇಲ್ಲ. ಕೇವಲ ಶಾಸ್ತ್ರ ಗ್ರಂಥಗಳನ್ನಿರಿಸಿಕೊಂಡು ಜನರಿಗೆ ಪೊಳ್ಳು ಆಶ್ವಾಸನೆ ನೀಡುತ್ತಾ, ಜಪತಪ, ಪೂಜೆ ಪ್ರದಕ್ಷಿಣೆ ಎಂದು ಹೇಳಿ ಮೋಸ ಮಾಡುತ್ತಾರೆ. ವಿಪರ್ಯಾಸವೆಂದರೆ ಅಂತಹವರ ಬಗ್ಗೆ ಯಾರೂ ದೂರು ನೀಡುವುದಿಲ್ಲ ಮತ್ತು ಯಾವ ಕಾನೂನಿನ ಕ್ರಮ ಜರುಗುವುದಿಲ್ಲ. ಏಕೆಂದರೆ ಇದು ನಂಬಿಕೆಯ ಪ್ರಶ್ನೆ, ವಿಜ್ಞಾನಕ್ಕೆ ಸಂಬಂಧಿಸಿದ ವಿಷಯವಲ್ಲ.

ವೈದ್ಯರು ಮತ್ತು ವಿಜ್ಞಾನಿಗಳು ಅನೇಕ ಸಂಶೋಧನೆ ಮತ್ತು ಪ್ರಯೋಗಗಳ ನಂತರ ಸ್ತ್ರೀ ಪುರುಷರ ಅಂಡಾಣು ಮತ್ತು ವೀರ್ಯಾಣುಗಳನ್ನು ಶರೀರದಿಂದ ಹೊರಗೆ ಸಂಯೋಗಗೊಳಿಸಿ, ನಂತರ ಗರ್ಭಕೋಶದಲ್ಲಿರಿಸಿ ಸಂತಾನ ಪ್ರಾಪ್ತಿಯ ಸಾಧ್ಯತೆಯನ್ನು ಪ್ರದರ್ಶಿಸಿದಾಗ ಜನರ ಮೂಢನಂಬಿಕೆ ಹೋಗಬಹುದೆಂಬ ಭಾವನೆ ನಿಜವಾಗಲಿಲ್ಲ. ಭಾರತೀಯ ಸಮಾಜ ವೈಜ್ಞಾನಿಕ ರೀತಿಯಲ್ಲಿ ಆಲೋಚಿಸುವುದನ್ನೇ ಕಲಿತಿಲ್ಲವಾಗಿ ಜ್ಯೋತಿಷಿ, ಪೂಜಾರಿಗಳ ಬಲೆಯಿಂದ ಹೊರಬರುವುದಾದರೂ ಹೇಗೆ....?

ಐವಿಎಫ್‌ ಮೂಲಕ ಸಂತಾನ ಪಡೆಯುವುದು ಒಂದೇ ಸಲಕ್ಕೆ ಸಫಲವಾಗುವ ಖಾತರಿ ಇರುವುದಿಲ್ಲ. ಪದೇ ಪದೇ ಆ ಪ್ರಯತ್ನದಲ್ಲಿ ತೊಡಗುವ ದಂಪತಿಯು ಐವಿಎಫ್‌ ಸೆಂಟರ್‌ಗೆ ಹೋಗುವ ಮೊದಲು, ``ಈ ಸಲ ನಮ್ಮ ಕೆಲಸವನ್ನು ಯಶಸ್ವಿಗೊಳಿಸು ದೇವಾ,'' ಎಂದು ಹರಕೆ ಹೊರುತ್ತಾರೆ.

ಧರ್ಮಗ್ರಂಥಗಳಲ್ಲಿನ ಉಲ್ಲೇಖ

ಜೀವನದ ಪ್ರತಿಯೊಂದು ಕಾರ್ಯ ಭಗವಂತನ ಇಚ್ಛೆಯಿಂದಲೇ ಜರುಗುತ್ತದೆ ಎಂಬ ಪಾಠವನ್ನು ನಮ್ಮ ಮಕ್ಕಳು ಬಾಲ್ಯದಿಂದಲೂ ಕಲಿಯುತ್ತಾ ಬಂದಿರುತ್ತಾರೆ. ಹೀಗಾಗಿ ಮುಂದೆ ಅವರು ಸಂತಾನ ಭಾಗ್ಯ ಆ ಮೇಲಿನವನ ಕೃಪೆಯಿಂದ ಆಗುವುದೆಂದು ನಂಬುತ್ತಾರೆ. ಆದ್ದರಿಂದ ಜನರು ಪೂಜೆ, ಹರಕೆ, ಹೋಮ, ಜಪತಪಗಳಿಂದ ಅವನನ್ನು ಒಲಿಸಿಕೊಂಡು ಸಂತಾನ ಪಡೆಯುವ ಹುನ್ನಾರ ನಡೆಸುತ್ತಾರೆ.

ಹಿಂದೂಗಳ ಆರಾಧ್ಯ ದೈವವಾದ ಶ್ರೀರಾಮಚಂದ್ರನ ಜನನದ ಬಗೆಯನ್ನು ನೋಡೋಣ. ದಶರಥ ಮಹಾರಾಜನಿಗೆ ಸಂತಾನ ಪ್ರಾಪ್ತಿಗಾಗಿ ಋಷಿಯೋರ್ವನು ಪಾಯಸವನ್ನು ನೀಡಿ  ಮಹಾರಾಣಿಯರು ಅದನ್ನು ಸೇವಿಸಿ ಮಕ್ಕಳನ್ನು ಪಡೆಯಬಹುದೆಂದು ತಿಳಿಸುತ್ತಾನೆ. ರಾಣಿಯರು ಪಾಯಸವನ್ನು ಸೇವಿಸಿ ಮಕ್ಕಳನ್ನು ಪಡೆಯುತ್ತಾರೆ. ಮಹಾರಾಣಿ ಕೌಸಲ್ಯೆಯ ಮಗನೇ ಶ್ರೀರಾಮ. ಲಕ್ಷ್ಮಣ, ಶತೃಘ್ನ ಮತ್ತು ಭರತ ಇವರು ಮೂವರು ಶ್ರೀರಾಮನ ತಮ್ಮಂದಿರು. ಹಾಗೆಯೇ ಶ್ರೀರಾಮನ ಪತ್ನಿ ಸೀತೆಯು ಭೂಮಿಯ ಮಗಳಾಗಿ ಜನಿಸಿದಳೆಂದು ರಾಮಾಯಣದ ಕಥೆ ಹೇಳುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ