ಆರೋಗ್ಯ ಹಾಗೂ ಜೀವನದೊಂದಿಗೆ ಆಟ ಅಪಾಯಕಾರಿ

ಆಯುಷ್ಯ ಸಚಿವಾಲಯದ ಸರ್ಕಾರಿ ಸುತ್ತೋಲೆಯನ್ನು ಕೋವಿಡ್‌ ಚಿಕಿತ್ಸೆಯ ಬಾಬತ್ತಿನಲ್ಲಿ ಮೂಢನಂಬಿಕೆ ಹಾಗೂ ಕಂದಾಚಾರದಿಂದ ಕೂಡಿದ ಪ್ರೋಟೊಕಾಲ್‌ನ್ನು ಜಾರಿಗೊಳಿಸಿದೆ. ಆಯುರ್ವೇದಾಚಾರ್ಯರು, ಯೋಗಾಚಾರ್ಯರು ಎಂದು ಕತ್ತಿನಲ್ಲಿ ಡಿಗ್ರಿ ನೇತು ಹಾಕಿಕೊಂಡು ಹೋಗುವವರು ಮಂತ್ರ ತಂತ್ರ ಷಡ್ಯಂತ್ರದ ಮುಖಾಂತರ ಕೋವಿಡ್‌ನ್ನು ನಿಯಂತ್ರಣದಲ್ಲಿಡಲು ಆಗಲಿಲ್ಲ. ಯಜ್ಞಹನ ಕೀರ್ತನೆಗಳ ಮೂಲಕ ಭರವಸೆ ಕೊಡಲಾಗಲಿಲ್ಲ.

ಈಗ ಆಯುಷ್‌ ಸಚಿವಾಲಯ ಕೋವಿಡ್‌ ಗ್ರಸ್ತ ರೋಗಿಗಳು ಗುಣಮುಖರಾದ ಬಳಿಕ ಶಭಾಷ್‌ಗಿರಿ ಪಡೆದುಕೊಳ್ಳಲು ಈ ಆದೇಶವನ್ನು ಜಾರಿಗೊಳಿಸಿದ್ದಾರೆ. ಏಕೆಂದರೆ ಭಗವಾ ಬ್ರಿಗೇಡ್‌ಗೆ ಹಣ ಮಾಡಿಕೊಳ್ಳಲು ದಾರಿ ಆಗಲೆಂದು.

ಸೆಪ್ಟೆಂಬರ್‌ನಲ್ಲಿ ಜಾರಿಗೊಳಿಸಲಾದ ಈ ಆದೇಶದ ರಕ್ಷಣೆಗೆಂಬಂತೆ ಮೊದಲೇ ಹೇಳಲಾಗಿತ್ತು, ಕೋವಿಡ್‌ನಿಂದ ಗುಣಮುಖರಾದವರಿಗೆ ಇದು ಸುಲಭಕ್ಕೆ ಹೊರಟು ಹೋಗದು.

ಆದರೆ ಆರೋಗ್ಯ ಸಚಿವಾಲಯದ ಸಚಿವ ಹರ್ಷವರ್ಧನ್‌ ಈ ಆದೇಶದ ಬಗ್ಗೆ ಏಕೆ ಅಷ್ಟೊಂದು ಬೊಬ್ಬೆ ಹಾಕುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಸರ್ಕಾರದ ಪ್ರಕಾರ, ಇದು ಕೆಲವರಿಗೆ ಆದಾಯದ ಮೂಲವಾಗಿದೆ.

ಈ ಆದೇಶದಲ್ಲಿ ರೋಗಿಗಳಿಗೆ ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನ ಮಾಡಬೇಕೆಂದು ಹೇಳಲಾಗಿದೆ. ಅವರಿಗೆ ಸಹಜವಾಗಿಯೇ ಗುರುವಿನ ಅಗತ್ಯ ಉಂಟಾಗುತ್ತದೆ. ಭಗವಾ ರೇಷ್ಮೆ ಬಟ್ಟೆ ತೊಟ್ಟವರು ಕಂಡುಬರುತ್ತಾರೆ. ಇತ್ತೀಚೆಗೆ ಹಣ ಕೊಟ್ಟು ಆನ್‌ಲೈನ್‌ ಕ್ಲಾಸ್‌ ಕೂಡ ಜಾಯಿನ್‌ ಆಗಬಹುದು.

ಉಸಿರಾಟ ಪ್ರಕ್ರಿಯೆ ಹಾಗೂ ವ್ಯಾಯಾಮದ ಉಪಾಯಗಳನ್ನು ನಿಮ್ಮ ವೈದ್ಯರನ್ನು ಕೇಳಿ ಪಡೆದುಕೊಳ್ಳಿ ಎಂಬ ಆದೇಶ ಅದರಲ್ಲಿದೆ. ಪ್ರಾಣಾಯಾಮ ಹಾಗೂ ಧ್ಯಾನ ಎರಡೇ ಸಾಕಿದ್ದರೆ, ವೈದ್ಯರ ಸಲಹೆ ಏಕೆ? ನಂತರ ಏನಾದರೂ ಸಮಸ್ಯೆ ಉಂಟಾದರೆ ಅದರ ತಪ್ಪನ್ನು ಡಾಕ್ಟರ್‌ ತಲೆ ಮೇಲೆ ಹಾಕಬೇಕಲ್ಲ.

ವೈದ್ಯರು ಸೂಚಿಸಿದ ಔಷಧಿಗಳನ್ನು ಸೇವಿಸಿ ಗಿಡಮೂಲಿಕೆಗಳ ಪುಡಿಯನ್ನು ತೆಗೆದುಕೊಳ್ಳಿ ಎಂಬ ಆದೇಶ ಇದೆ. ಅಂದರೆ ಆಯುಷ್‌ತಜ್ಞರಿಗೂ ಹಣ ಕೊಟ್ಟು ಕೇಳಿ ಹಾಗೂ ಡಾಕ್ಟರ್‌ಗೂ ಹೇಳಿ.

ಧರ್ಮಗುರುಗಳ ಒಳ್ಳೊಳ್ಳೆ ಸಲಹೆ ಪಡೆದುಕೊಳ್ಳಿ ಎಂದು ಅದರಲ್ಲಿ ಹೇಳಲಾಗಿದೆ. ಆದರೆ ಈ ಪ್ರವಚನ ಉಚಿತವಾಗಿ ಎಲ್ಲಿ ಸಿಗುತ್ತದೆ? ಏನಾದರೂ ಕಾಣಿಕೆ ಕೊಡಬೇಕು, ಅವರ ಸಲಹೆ ಪಡೆದುಕೊಳ್ಳಿ ಎಂದು ಹೇಳಿರುವುದರಿಂದ ಅವರಿಗೆ ಬೇಡಿಕೆ ಕೂಡ ಹೆಚ್ಚುತ್ತದೆ. ಅವರು ಘೋಷಿಸಿದ ಗುರುಗಳು ಕಳೆದ ಕೆಲವು ದಿನಗಳಿಂದ ಖಾಲಿ ಇದ್ದರು. ಅವರ ಆದಾಯ ಹೆಚ್ಚಿಸುವುದು ಧಾರ್ಮಿಕ ಸರ್ಕಾರದ ಕರ್ತವ್ಯ ಅಲ್ಲವೇ.

ಆಯುಷ್‌ವರ್ಧಾ, ಸಾಮಿನಿಬಟಿ, ಗಿಲೋಯ್‌ ಪೌಡರ್‌, ಅಶ್ವಗಂಧ ಪೌಡರ್‌, ನೆಲ್ಲಿಕಾಯಿ ಚ್ಯವನ್‌ ಪ್ರಾಶ್‌ ಮುಂತಾದ ಔಷಧಿಗಳ ಉಲ್ಲೇಖವಿದ್ದು, ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳುವ ಆದೇಶವಿದೆ.

ಈ ಎಲ್ಲ ಔಷಧಿಗಳನ್ನು ಕೋವಿಡ್‌ ರೋಗಿಗಳ ಮೇಲೆ ಸಂಶೋಧನೆ ಮಾಡಲಾಗಿದೆಯೇ? ಯಾರು ಇದನ್ನು ಅನುಸರಿಸಿದ್ದಾರೊ ಅವರಿಗೆ ಕೋವಿಡ್‌ ಪುನಃ ಬರುವುದಿಲ್ಲ. ಎಷ್ಟು ಜನರ ಡೇಟಾ ಪಡೆಯಲಾಗಿದೆ? ಅದರ ವರದಿ ಎಲ್ಲಿದೆ? ಅದೇನೂ ಇಲ್ಲ. ಹಾಗಾಗಿಯೇ ಐಎಂಎ ಇದರ ಬಗ್ಗೆ ಗಂಭೀರ ಆಕ್ಷೇಪ ಎತ್ತಿದ್ದು, ಸರ್ಕಾರದ ಆದೇಶ ದಾರಿ ತಪ್ಪಿಸುವಂಥದು ಎಂದು ಹೇಳಲಾಗಿದೆ.

ಐಎಂಎ ಪ್ರಕಾರ, ರೋಗಿಗಳು ಕೇವಲ ವೈದ್ಯರ ಸಲಹೆ ಮನ್ನಿಸಬೇಕೇ ಹೊರತು ಸೆಲ್ಫ್ ಮೆಡಿಕೇಶನ್‌ ಮಾಡಬಾರದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ