ನಮ್ಮ ಹಿಂದೂಸ್ಥಾನದ ಮೇಲೆ ಸತವಾಗಿ ಎಂಟನೇ ಶತಮಾನಗಳಿಂದಲೂ ಧಾಳಿ ಮಾಡುತ್ತಲೇ ಬಂದ ಮೊಘಲರು ಅಂತಿಮವಾಗಿ ಹನ್ನೆರಡನೇ ಶತಮಾನದಲ್ಲಿ ದೆಹಲಿ ಸುಲ್ತಾನರಿಂದ ಆರಂಭವಾದ ಮೊಘಲ್ ಸಾಮ್ರಾಜ್ಯದ 1800ರ ದಶಕದ ಮಧ್ಯಭಾಗದವರೆಗೂ ಸುಮಾರು 500 ರಿಂದ 700 ವರ್ಷಗಳ ಕಾಲ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ವಿವಿಧ ಭಾಗಗಳಲ್ಲಿ ಆಳ್ವಿಕೆ ನಡೆಸಿದ ಮೊಘಲರು ಭಾರತವನ್ನು ಕೇವಲ ಆರ್ಥಿಕವಾಗಿ ಲೂಟಿ ಮಾಡಿದ್ದಷ್ಟೇ ಅಲ್ಲದೇ, ಇಲ್ಲಿನ ಹಿಂದೂಗಳನ್ನು ಆಮಿಷಗಳಿಂದಲೋ ಇಲ್ಲವೇ ಬಲವಂತದಿಂದಲೋ ಆರಂಭಿಸಿದ ಮತಾಂತರ ಸ್ವಾತ್ರಂತ್ರ ಬಂದು 79 ವರ್ಷಗಳ ನಂತರವೂ ವಿವಿಧ ರೂಪದಲ್ಲಿ ನಡೆದುಕೊಂಡು ಬರುತ್ತಲೇ ಇರುವುದು ಆಘಾತಕಾರಿ ವಿಷಯವಾಗಿದೆ.

ಅದರಲ್ಲೂ 2007-2009ರ ಅವಧಿಯಲ್ಲಿ ಕೇರಳ ಮತ್ತು ಕರ್ನಾಟಕದ ಕರಾವಳಿ ಭಾಗಗಳಲ್ಲಿ ಹಿಂದೂ ಅಥವಾ ಕ್ರಿಶ್ಚಿಯನ್ ಧರ್ಮೀಯ ಯುವತಿಯರನ್ನು ಕೆಲ ಮುಸ್ಲಿಂ ಯುವಕರು ಪ್ರೀತಿಸುವ ನಾಟಕವಾಡಿ, ಮದುವೆಯ ಮೂಲಕ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಸಿ ಅವರಿಗೆ ನಾಲ್ಕಾರು ಮಕ್ಕಳನ್ನು ಕರುಣಿಸಿ ಕಡೆಗೆ ಬೀದಿಗೆ ಇಲ್ಲವೇ ದೂರದ ಊರುಗಳ ವೇಶ್ಯಾವಾಟಿಕೆಗೆ ತಳ್ಳುವ ಧಂದೆಯೊಂದು ನಡೆಯುತ್ತಿದೆ ಎಂದು 2009ರಲ್ಲಿ ಕೇರಳದ ಕ್ಯಾಥೋಲಿಕ್ ಚರ್ಚ್ಗಳು ಮತ್ತು ಕರ್ನಾಟಕದ ಸಂಘಟನೆಗಳು ಆರೋಪಿಸಿದ್ದಲ್ಲದೇ ಇಂತಹ ಸಂಘಟಿತ ಮತಾಂತರಕ್ಕೆ ಲವ್ ಜೆಹಾದ್ ಎಂದು ಕರೆದರು. ಇದರ ವಿರುದ್ಧವಾಗಿ ಕರ್ನಾಟಕ ಸೇರಿದಂತೆ ದೇಶದ ಹಲವಾರು ರಾಜ್ಯಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ (ಮತಾಂತರ ವಿರೋಧಿ ಕಾನೂನು) ಜಾರಿಗೆ ತರಲಾಗಿದ್ದರೂ ಇಂದಿಗೂ ವಿವಿಧ ಆಮಿಷ, ಬಲವಂತ ಇಲ್ಲವೇ ಅಧಿಕಾರಾದ ಮೂಲಕ ಮತಾಂತರ ನಡೆಯುತ್ತಿದೆ ಎನ್ನುವುದಕ್ಕೆ ಇತ್ತೀಚೆಗೆ ಐಟಿ ದಿಗ್ಗಜ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್) ಸಂಸ್ಥೆಯ ನಾಸಿಕ್ಕಿನ ಬಿಪಿಓ ಕಚೇರಿಯಲ್ಲಿ ವ್ಯವಸ್ಥಿತ ಲೈಂಗಿಕ ಮತ್ತು ಧಾರ್ಮಿಕ ಶೋಷಣೆಯ ಆರೋಪ ಕೇಳಿ ಬಂದಿದ್ದು ಈ ಸಂಬಂಧವಾಗಿ ಅಲ್ಲಿನ ಮಹಿಳಾ ಉದ್ಯೋಗಿಗಳು ನೀಡಿದ ದೂರಿನ ಮೇರೆಗೆ ಒಬ್ಬ ಮಹಿಳಾ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕರೂ ಸೇರಿದಂತೆ 09 ವ್ಯಕ್ತಿಗಳನ್ನು ಮಹಾರಾಷ್ಟ್ರದ ಪೋಲೀಸರು ಬಂಧಿಸಿದ ಸುದ್ದಿ ಈ ಪಂಚರಾಜ್ಯ ಚುನಾವಣೆಯ ಭರಾಟೆಯಲ್ಲಿ ಮುನ್ನಲೆಗೆ ಬಾರದೇ ಹೋಗಿರುವುದು ವಿಷಾಧನೀಯವಾಗಿದೆ.

ಈ ಮೂದಲು ಬೆಂಗಳೂರಿನ ಕಾರ್ಪೊರೇಟ್ ಕಂಪನಿಗಳಲ್ಲಿ ಉತ್ತರ ಭಾರತೀಯರು, ಮಲೆಯಾಳಿಗಳು ಮತ್ತು ತಮಿಳರ ಪ್ರಾಭಲ್ಯವಿದ್ದು, ಅಲ್ಲಿ ಉನ್ನತ ಹುದ್ದೆಯಲ್ಲಿರುವವರು ತಮ್ಮ ತಂಡಕ್ಕೆ ಅವರವರ ಊರು ಮತ್ತು ಭಾಷಿಕರಿಗೇ ಕೆಲಸ ಕೊಡುವ ಮತ್ತು ಕೆಲಸದಲ್ಲಿ ಭಡ್ತಿ ಕೊಡುತ್ತಿದ್ದ ಆರೋಪ ನಿರಂತವಾಗಿ ಕೇಳಿ ಬರುತ್ತಿತ್ತು. ಆದರೆ ಈಗ ಉದ್ಯೋಗದ ಅಗತ್ಯತೆ ಮತ್ತು ವೃತ್ತಿಜೀವನದ ಬೆಳವಣಿಗೆಯನ್ನೇ ಪ್ರಭಲವಾದ ಅಸ್ತ್ರವಾಗಿ ಬಳಸಿಕೊಂಡು ಪ್ರಸ್ತುತ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಆಗುತ್ತಿರುವ ಉದ್ಯೋಗ ಕಡಿತದ ಭೀತಿಯನ್ನು ದುರುಪಯೋಗ ಮಾಡಿಕೊಳ್ಳುತ್ತಾ, ಹಿಂದೂ ಮಹಿಳಾ ಉದ್ಯೋಗಿಗಳ ಧಾರ್ಮಿಕ ನಿಷ್ಠೆಯನ್ನು ಬದಲಿಸಲು ಅವ್ಯಾಹತವಾಗಿ ಸುಮಾರು ಫೆಬ್ರವರಿ 2022ರಿಂದ ಮಾರ್ಚ್ 2026ರ ಅವಧಿಯಲ್ಲಿ ನಡೆಸುತ್ತಾ, ಅದರಲ್ಲಿ ಭಾಗಶಃ ಯಶಸ್ವಿಯಾಗಿರುವುದು ನಿಜಕ್ಕೂ ಆತಂಕಕಾರಿಯಾದ ಸಂಗತಿಯಾಗಿದೆ. ಸಾಮಾನ್ಯವಾಗಿ ಒಂದು ನಿರ್ಧಿಷ್ಟ ಧರ್ಮದ ಅಥವಾ ಏಕವ್ಯಕ್ತಿಯ ಕಂಪನಿಗಳಲ್ಲಿ ಈ ರೀತಿಯ ಸಂಭನೀಯತೆ ಹೆಚ್ಚಾಗಿದ್ದರೆ, ವೃತ್ತಿಪರತೆಗೆ ಹೆಸರಾಗಿರುವ ಟಿಸಿಎಸ್ ನಂತಹ ಅಪ್ಪಟ ಭಾರತೀಯ ಕಾರ್ಪೊರೇಟ್ ಕಂಪನಿಯಲ್ಲಿ ಈ ರೀತಿಯ ಮತಾಂಧತೆಯ ನಡೆದಿರುವುದು ನಿಜಕ್ಕೂ ಆತಂಕವನ್ನು ಹೆಚ್ಚುಮಾಡಿದೆ.





