ಒಬ್ಬ ಭಿಕ್ಷುಕ ಭಿಕ್ಷೆ ಬೇಡಲೆಂದು ಮನೆಯಿಂದ ಹೊರಟ. ತನ್ನ ನಂಬಿಕೆಯ ಪ್ರಕಾರ ಖಾಲಿ ಕೈಯಲ್ಲಿ ಹೊರಡಬಾರದೆಂದು ಜೋಳಿಗೆಯಲ್ಲಿ ಒಂದೆರಡು ಬೊಗಸೆ ಜೋಳ ಹಾಕಿಕೊಂಡು ಹೊರಟ. ಎದುರುಗಡೆಯಿಂದ ರಾಜನ ಸವಾರಿ ಬರುತ್ತಿತ್ತು. ತನಗೆ ಒಳ್ಳೆಯ ಭಿಕ್ಷೆ ಸಿಗಬಹುದೆಂಬ ಆಶಾಭಾವನೆ ಭಿಕ್ಷುಕನಲ್ಲಿ ಮೂಡಿತು. ಆದರೆ ನಡೆದದ್ದೇನು? ಭಿಕ್ಷುಕನ ಎದುರಿನಲ್ಲಿಯೇ ರಾಜ ತನ್ನ ಜೋಳಿಗೆಯನ್ನು ಹಿಡಿದ. ಭಿಕ್ಷುಕನಿಗೆ ಏನು ಮಾಡಬೇಕೆಂದು ಒಂದು ಕ್ಷಣ ತೋಚಲೇ ಇಲ್ಲ. ಅವನು ಎಂದೂ ಯಾರಿಗೂ ಭಿಕ್ಷೆ ಹಾಕಿದವನಲ್ಲ. ಬೇರೆಯವರಿಂದ ತೆಗೆದುಕೊಂಡೇ ರೂಢಿ. ಇಂದು ರಾಜನೇ ಅವನೆದುರು ಜೋಳಿಗೆ ಹಿಡಿದು ನಿಂತಿದ್ದ. ಕೊನೆಗೆ ಮನಸ್ಸಿಲ್ಲದ ಮನಸ್ಸಿನಿಂದ ಅವನು ತನ್ನ ಜೋಳಿಗೆಗೆ ಕೈ ಹಾಕಿ ಎರಡೇ ಎರಡು ಕಾಳು ಧಾನ್ಯವನ್ನು ರಾಜನ ಜೋಳಿಗೆಗೆ ಹಾಕಿದ. ಅವನಿಗೆ ಆ ಎರಡು ಕಾಳು ಹಾಕಿದ್ದಕ್ಕೆ ಇಡೀ ದಿನ ಖೇದ ಆಗುತ್ತಲೇ ಇತ್ತು.

ಅಂದಹಾಗೆ, ಇಡೀ ದಿನ ಅವನು ಅಲ್ಲಿ ಇಲ್ಲಿ ಸುತ್ತಾಡಿ ಭಿಕ್ಷೆ ಬೇಡಿಕೊಂಡು ಸುಸ್ತಾಗಿ ಮನೆಗೆ ಬಂದ. ಮನೆಯಲ್ಲಿ ಜೋಳಿಗೆ ಬಗ್ಗಿಸಿ ಪಾತ್ರೆಗೆ ಹಾಕುವಾಗ ಅವನ ಕಣ್ಣನ್ನು ಅವನಿಗೆ ನಂಬಲು ಆಗಲಿಲ್ಲ. ಧಾನ್ಯಗಳ ಮಧ್ಯೆ 2 ಬಂಗಾರದ ಜೋಳದ ಕಾಳುಗಳು ಅವನ ಕಣ್ಣು ಕುಕ್ಕುತ್ತಿದ್ದವು. ಅವನು ರಾಜನಿಗೆ ಹಾಕಿದ್ದು ಒಂದೆರಡು ಕಾಳು ಜೋಳ. ಕಥೆಯ ನೀತಿ : ದಾನದ ಮಹಿಮೆ.

ದಾನಶೂರ ಕರ್ಣನ ಪ್ರಕರಣ ನಿಮಗೆ ಗೊತ್ತೇ ಇದೆ. ದಾನವೇ ಕರ್ಣನ ಪ್ರಾಣವನ್ನು ಕಿತ್ತುಕೊಂಡಿತು. ಮಹಾಭಾರತದ ಯುದ್ಧದಲ್ಲಿ ಅರ್ಜುನನ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ದೇವರಾಜ ಇಂದ್ರ ಕರ್ಣನಿಂದ ಆ ಕವಚವನ್ನು ಕೇಳಿ ಪಡೆದುಕೊಂಡ. ಇದಕ್ಕೆ ಪ್ರತಿಯಾಗಿ ಇಂದ್ರ ಕರ್ಣನಿಗೆ 5 ಬಾಣಗಳನ್ನು ಕೊಟ್ಟ. ಬಳಿಕ ಕೃಷ್ಣ ಯೋಜನೆ ರೂಪಿಸಿ ಅಲ್ಲಿಗೆ ಕುಂತಿಯನ್ನು ಕಳುಹಿಸಿಕೊಟ್ಟ. ಕುಂತಿ ಕರ್ಣನಿಂದ ಆ ಬಾಣಗಳನ್ನು ಕೇಳಿ ಪಡೆದುಕೊಂಡಳು. ಇದೇ ದಾನದ ಕಾರಣದಿಂದ ಕರ್ಣ ಸಾವನ್ನಪ್ಪುತ್ತಾನೆ. ಹಾಗೆ ನೋಡಿದರೆ ಕರ್ಣ ಅರ್ಜುನನಿಗಿಂತಲೂ ಬಹುದೊಡ್ಡ ವೀರ.

ದಾನ ದಕ್ಷಿಣೆಯ ಬಗ್ಗೆ ಪ್ರಸ್ತಾಪಿಸಿದಾಗ ಏಕಲವ್ಯನ ಬಗ್ಗೆ ಉಲ್ಲೇಖ ಮಾಡದೇ ಇರಲು ಆಗುವುದಿಲ್ಲ. ನಿಷಾರದ ಪುತ್ರನಾಗಿರುವ ಕಾರಣ ದ್ರೋಣಾಚಾರ್ಯರು ಅವನನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಲು ನಿರಾಕರಿಸಿದರು. ಆಗ ಏಕಲವ್ಯ ದೂರದಿಂದಲೇ ಬಾಣ ಬಿಡುವುದನ್ನು ನೋಡಿದ. ಅವರನ್ನೇ ತನ್ನ ಗುರುಗಳೆಂದು ಭಾವಿಸಿ ಅಭ್ಯಾಸ ಮುಂದುವರಿಸಿ ಬಿಲ್ವಿದ್ಯೆಯಲ್ಲಿ ಪ್ರಾವೀಣ್ಯತೆ ಪಡೆದ. ಅದೊಂದು ದಿನ ದ್ರೋಣಾಚಾರ್ಯರ ಎದುರು ಏಕಲವ್ಯನ ಧನುರ್ವಿದ್ಯೆಯ ಕಲೆ ಬೆಳಕಿಗೆ ಬರುತ್ತದೆ. ಧನುರ್ವಿದ್ಯೆಯ ಬಗೆಗಿನ ಅವನ ಸಮರ್ಪಣೆ ಕಂಡು ದ್ರೋಣಾಚಾರ್ಯರಿಗೆ ನಡುಕ ಉಂಟಾಗುತ್ತದೆ. ಅವರು ಅವನಿಂದ ಗುರುದಕ್ಷಿಣೆಯಾಗಿ ಅವನ ಹೆಬ್ಬೆರಳನ್ನೇ ಕೇಳುತ್ತಾರೆ. ಇದಕ್ಕೆ ಮುಖ್ಯ ಕಾರಣ ಅರ್ಜುನನ ಹೊರತಾಗಿ ಧನುರ್ವಿದ್ಯೆಯಲ್ಲಿ ಬೇರಾರೂ ಮಿಂಚಬಾರದೆಂಬುದು ಅವರ ಇಚ್ಛೆಯಾಗಿರುತ್ತದೆ. ಏಕಲವ್ಯ ತೋರು ಬೆರಳು ಮತ್ತು ಮಧ್ಯ ಬೆರಳಿನ ಸಹಾಯದಿಂದ ಬಿಲ್ಲು ವಿದ್ಯೆಯ ಅಭ್ಯಾಸ ಮುಂದುವರಿಸುತ್ತಾನೆ ಎನ್ನುವುದು  ಬೇರೆ ಮಾತು. ಏಕಲವ್ಯನಿಗೆ ಒಂದಿಷ್ಟೂ ವಿದ್ಯೆ ಕಲಿಸದ ದ್ರೋಣಾಚಾರ್ಯರು ಅವನ ಹೆಬ್ಬೆರಳನ್ನು ಹೇಗೆ ಕೇಳಿ ಪಡೆದರು ಎಂಬುದೇ ಆಶ್ಚರ್ಯದ ಸಂಗತಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ