``ಶೈಲಜಾ, ನಾಳೆ ನೀನು ಆಫೀಸಿಗೆ ರಜೆ ಹಾಕಬೇಕು. ನಾಳೆ ನಮ್ಮ ಮನೆಯಲ್ಲಿ ಕೀರ್ತನೆಯ ವ್ಯವಸ್ಥೆ ಇಟ್ಟುಕೊಂಡಿದ್ದೇವೆ. ಆ ಮೂಲಕ ನಾವು ದೇವಿಯ ಸ್ಮರಣೆಯಲ್ಲಿ ಕಾಲ ಕಳೆಯೋಣ,'' ಎಂದು ಅತ್ತೆ ಹೇಳಿದಾಗ ಶೈಲಜಾ ಒಪ್ಪಿಗೆಯಿಂದ `ಹ್ಞೂಂ...' ಎಂದಳು.

ಶೈಲಜಾಳಿಗೆ ಹೊಸದಾಗಿ ಮದುವೆಯಾಗಿತ್ತು. ಅತ್ತೆ ಮನೆಯಲ್ಲಿ ಧಾರ್ಮಿಕ ವಾತಾವರಣ ಹೆಚ್ಚಿಗೆ ಇದೆ ಎನ್ನುವುದು ಅವಳಿಗೆ ಮದುವೆಯ ದಿನದಂದೇ ಅರಿವಿಗೆ ಬಂದಿತ್ತು. ಪ್ರತಿಯೊಬ್ಬ ವಿವಾಹಿತ ಮಹಿಳೆ ತನ್ನ ಅತ್ತೆಮನೆಯ ಪ್ರಕಾರವೇ ನಡೆದುಕೊಳ್ಳಬೇಕಾಗುತ್ತದೆ ಎಂದು ಶೈಲಜಾ ಯೋಚಿಸಿ ಅತ್ತೆಮನೆಯ ಪ್ರತಿಯೊದು ರೀತಿ ರಿವಾಜುಗಳನ್ನು ಕಲಿಯತೊಡಗಿದಳು.

ನಗರದಲ್ಲಿ ಬೆಳೆದಿದ್ದ ಆಧುನಿಕ ಮನೋಭಾವದ ಯುವತಿಯಾಗಿಯೂ ಕೂಡ ಆಕೆ ಒಳ್ಳೆಯ ಸೊಸೆ ಎನಿಸಿಕೊಳ್ಳಲು ತನ್ನ ತಾರ್ಕಿಕ ಯೋಚನೆಯನ್ನು ಮನದಲ್ಲಿಯೇ ಹತ್ತಿಕ್ಕಿದಳು.

ಶಾಸ್ತ್ರದ ಪ್ರಕಾರ, ನಮ್ಮ ಉಸಿರಾಟಕ್ಕೆ ಯಾವುದೇ ಭರವಸೆ ಇಲ್ಲ. ಹೀಗಾಗಿ ಬಾಲ್ಯದಿಂದಲೇ ಭಜನೆ ಕೀರ್ತನೆಯಲ್ಲಿ ಮನಸ್ಸು ತೊಡಗಿಸಬೇಕು. ಇದೇ ಯೋಚನೆಯ ಲಾಭವನ್ನು ಹಸುವಿನ ವೇಷ ತೊಟ್ಟು ತೋಳಗಳಂತಿರುವ ಭ್ರಷ್ಟ ಗುರುಗಳು ಪಡೆದುಕೊಳ್ಳುತ್ತಿದ್ದಾರೆ. ಬಾಲ್ಯದಿಂದಲೇ ಭಜನೆ ಕೀರ್ತನೆಯಲ್ಲಿ ಮನಸ್ಸು ತೊಡಗಿಸಬೇಕೆಂಬ ನಿಯಮವನ್ನು ಪ್ರತಿಯೊಬ್ಬ ಪೋಷಕರು ಅನುಷ್ಠಾನಗೊಳಿಸಲು ಶುರು ಮಾಡಿದರೆ, ಮಕ್ಕಳಿಗೆ ಓದಲು ಸಮಯವಾದರೂ ಎಲ್ಲಿ ಸಿಕ್ಕೀತು? ಆಸಾರಾಮ್ ಹಾಗೂ ರಾಮ ರಹೀಮ್ ರಂತಹ ಗುರುಗಳೇನಾದರೂ ದೊರೆತರೆ ಅದರ ಪರಿಣಾಮ ಏನಾಗಬಹುದು ಎಂಬುದು ಎಲ್ಲರಿಗೂ ಗೊತ್ತೇ ಇದೆ.

ಕೀರ್ತನೆಯ ಹಿಂದಿನ ಮಾನಸಿಕತೆ ಏನಾಗಿದೆಯೆಂದರೆ, ಪುಣ್ಯ ಸಂಪಾದಿಸಬೇಕೆಂದರೆ ಕೀರ್ತನೆ ಸತ್ಸಂಗ ಮಾಡಬೇಕು. ಯಾರು ದೇವರ ಸ್ಮರಣೆ ಮಾಡುವುದಿಲ್ಲವೋ ಅಥವಾ ಇತರರ ಸ್ಮರಣೆಗೆ ಅಡ್ಡಿ ಉಂಟು ಮಾಡುತ್ತಾರೊ ಅವರು ಪಾಪದಲ್ಲಿ ಭಾಗಿಯಾಗುತ್ತಾರೆ.

ಕೀರ್ತನೆ ಏರ್ಪಡಿಸುವುದರ ಎರಡು ಲಾಭಗಳೆಂದರೆ, ತಮ್ಮ ಶ್ರೀಮಂತಿಕೆ ವೈಭವ ತೋರಿಸಿಕೊಳ್ಳುವುದು ಹಾಗೂ ಸಮಾಜದಲ್ಲಿ ತಮ್ಮದೇ ವರ್ಚಸ್ಸು ಕಾಯ್ದುಕೊಳ್ಳುವುದು.

ಕೀರ್ತನೆ ಮತ್ತು ಆಡಂಬರ

ಕೀರ್ತನೆ ಎಂದರೆ ಕೇವಲ ದೇವರಲ್ಲಿ ಮನಸ್ಸು ತೊಡಗಿಸುವುದಲ್ಲ, ಸಮಾಜದಲ್ಲಿ ತಮ್ಮ ಶ್ರೀಮಂತಿಕೆಯನ್ನು ಪ್ರದರ್ಶಿಸುವ ಒಂದು ವಿಧಾನವಾಗಿದೆ. ಪೂಜೆಯ ಮಂಟಪವನ್ನು ಅದ್ಧೂರಿಯಾಗಿ ಅಲಂಕರಿಸಿ, ವಿದ್ಯುದ್ದೀಪಗಳನ್ನು ಬೆಳಗಿಸಿ ಹೂಗಳಿಂದ ಅಂದವಾಗಿ ಪೇರಿಸಲಾಗುತ್ತದೆ. ಅಲ್ಲಿ ಬರುವ ಮಹಿಳೆಯರಿಗಾಗಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡುವುದು, ಧೂಪ ಶ್ರೀಗಂಧದ ಕಡ್ಡಿಗಳನ್ನು ಗ್ಲಾಸಿನಲ್ಲಿ ಅಲಂಕರಿಸಿ ವಿವಿಧ ಬಗೆಯ ಸಂಗೀತ ಉಪಕರಣಗಳನ್ನು ತರಲಾಗುತ್ತದೆ. ಅಷ್ಟೇ ಅಲ್ಲ, ವ್ರತಸ್ಥರೂ ತಿನ್ನಬಹುದಾದಂತಹ ಪ್ರಸಾದವನ್ನು ವಿತರಿಸಲಾಗುತ್ತದೆ.

ಕೀರ್ತನೆಯ ಬಳಿಕ ಬಹು ಉಪಹಾರದ ವ್ಯವಸ್ಥೆ ಕೂಡ ಇರುತ್ತದೆ. ಕೀರ್ತನೆಯನ್ನು ಆಯೋಜಿಸುವ ಮಹಿಳೆ ಅದೆಷ್ಟು ಶ್ರೀಮಂತರು ಎನ್ನುವುದು ಅವರು ಏರ್ಪಡಿಸುವ ಕೀರ್ತನೆಯ ಮ್ಯಾನೇಜ್‌ಮೆಂಟ್‌ನ್ನು ಅವಲಂಬಿಸಿರುತ್ತದೆ.

ಮೋಕ್ಷದ್ದಲ್ಲ, ಪ್ರಶಂಸೆಯ ದುರಾಸೆ

ಒಂದು ಕಥೆಯ ಪ್ರಕಾರ, ನಾರದ ಮುನಿ ಬ್ರಹ್ಮರ್ಷಿಗಳಿಗೆ ಕೇಳುತ್ತಾರೆ. ನಾನು ಕಲಿಯುಗದ ಭಯಾನಕ ಜಾಲಕ್ಕೆ ಸಿಲುಕದಿರಲು ಏನು ಮಾಡಬೇಕೆಂದು ಕೇಳುತ್ತಾರೆ.

ಆ ಮಾತಿಗೆ ಬ್ರಹ್ಮ ಉತ್ತರಿಸುತ್ತಾರೆ : ಆದಿ ಪುರುಷ ನಾರಾಯಣಸ್ಯ ನಮೋಚ್ಚಾರಣ ಮಾತ್ರೇಣ ನಿರ್ಧೂತ ಕಲಿರ್ಭತಿ.

ಅಂದರೆ ಮನುಷ್ಯನು ದೇವರ ಜಪ ಮಾಡುತ್ತಿರಬೇಕು. ಅದೇ ಉಪಾಯದಿಂದ ಹುಟ್ಟು ಸಾವಿನ ಜಾಲದಿಂದ ಮುಕ್ತನಾಗುತ್ತಾನೆ. ಅಂತಹುದೇ ಒಂದು ಶ್ಲೋಕ ಪದ್ಮ ಪುರಾಣದಲ್ಲೂ ಬರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ