ಕಷ್ಟಪಟ್ಟರೆ ಲಕ್ಷ್ಮಿ ಒಲಿಯುತ್ತಾಳೆ ನಿಜ. ಆದರೆ ಸರಸ್ವತಿ ಒಲಿಯುವುದು ಅಷ್ಟು ಸುಲಭದ ಮಾತಲ್ಲ, ಅವಳು ಆಯ್ಕೆ ಮಾಡಿಕೊಂಡ ಕೆಲವೇ ಕೆಲವರಲ್ಲಿ ಮಾತ್ರ ನಿಲ್ಲುತ್ತಾಳೆ. ನಿಂತರೆ ಸಾಕೇ? ಉಹೂಂ..... ಮನೆ ಮಾಡಿಕೊಂಡು ನೆಲೆಸಬೇಕು. ಆಗ ಸರಸ್ವತಿ ಅವರ ನಾಲಿಗೆಯಲ್ಲಿ ನಲಿದಾಡುತ್ತಾಳೆ.  ಅಂತಹ ಭಾಗ್ಯ ದೊರೆಯೋದು ಕೆಲವರಿಗೆ  ಮಾತ್ರ. ಆ ಭಾಗ್ಯವಂತೆ ಈ ಪ್ರತಿಭೆಯಲ್ಲೂ ಮನೆ ಮಾಡಿ ನಿಂತಿದ್ದಾಳೆ. ಅವಳಿಗೆ ಒಲಿದಿದ್ದಾಳೆ! ಇವರೇ ತುಮಕೂರಿನಲ್ಲಿ ನೆಲೆಸಿ ದಿನಂಪ್ರತಿ ವಿದ್ಯಾಭ್ಯಾಸಕ್ಕಾಗಿ ಸಾಧನೆಯ ಹಾದಿಗಾಗಿ ಹಲವು ಕಾರ್ಯಕ್ರಮಗಳಿಗಾಗಿ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣ ಬೆಳೆಸುವ ಶ್ರಮಜೀವಿ ಸಾಧಕಿ ಕುಸುಮಾ ಜೈನ್‌.

ಇವರೆಷ್ಟು ಕಷ್ಟಪಡುತ್ತಾರೊ, ಅದಕ್ಕಿಂತ ದುಪ್ಪಟ್ಟು ಕಷ್ಟಪಡುತ್ತಿರುವವರು ವಕೀಲರಾದ ತಾಯಿ ವಿ. ಜಲಜಾಕ್ಷಿ, ತಂದೆ ಟಿ.ಪಿ. ಲಕ್ಷ್ಮಿಪ್ರಸಾದ್‌ ವ್ಯಾಪಾರಿ. ಈ ದಂಪತಿಗಳಿಗೆ 23 ಮಾರ್ಚ್‌, 1991ರಂದು ಕುಸುಮಾ ಜನಿಸಿದರು. ಜನಿಸಿದಾಗಿನಿಂದಲೂ ಬಾಹ್ಯ ದೃಷ್ಟಿಯಿಲ್ಲ! ಮನಸ್ಸಿನ ದೃಷ್ಟಿ ಅಗಾಧ! ಕಲಾದೇವತೆಯ ಆಗರ! ಮಗಳ ಜೀವನಕ್ಕಾಗಿ ವೃತ್ತಿಯನ್ನೇ ತೊರೆದ ತಾಯಿಯ ತ್ಯಾಗ ಅಪಾರ!

ಮನೆಯೇ ಮೊದಲ ಶಾಲೆ ತಾಯಿಯೇ ಮೊದಲ ಗುರು....

ಮೂರೂವರೆ ವರ್ಷದವಳಿದ್ದಾಗಲೇ ತಾಯಿಯಿಂದ ಭಾವಗೀತೆ, ಜಾನಪದ, ಚಿತ್ರಗೀತೆಗಳನ್ನು ಹಾಡಲು ಪ್ರಾರಂಭಿಸಿದಳು. ಧಾರ್ಮಿಕ ಸಮಾರಂಭಗಳಾದ ವಾಸವಿ, ಬಸವ, ಮಹಾವೀರ್‌, ಶಂಕರ ಜಯಂತಿಗಳಲ್ಲಿ ಭಾಗವಹಿಸಿ ಹೆಚ್ಚಿನ ಬಹುಮಾನಗಳನ್ನು ಪಡೆಯುತ್ತಾ ಬೆಳೆದವಳು. ತುಮಕೂರಿನ ಅತ್ತಿಮಬ್ಬೆ ವಿದ್ಯಾಮಂದಿರ ಮತ್ತು ವಾಸವಿ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿ. ಹತ್ತನೇ ತರಗತಿಯಲ್ಲಿ 83% ತೆಗೆದು ನೆಚ್ಚಿನ ವಿದ್ಯಾರ್ಥಿಯಾದಳು. ತದನಂತರ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪಿಯುಸಿ, ಜೈನ್‌ ಕಾಲೇಜಿನಲ್ಲಿ ಸಂಗೀತದಲ್ಲಿ ಬಿ.ಎ., ಎಂ.ಎ. ಓದಿರುವರು.

1995ರ ಆಸುಪಾಸಿನಲ್ಲಿ ಸಾಧನೆಗಳ ಹಾದಿಯು ತೆರೆದುಕೊಂಡಿತು. 1995 ಡಿಸೆಂಬರ್‌ 20 ಪ್ರಪ್ರಥಮವಾಗಿ, ಕರ್ನಾಟಕ ನೃತ್ಯ ಮತ್ತು ಸಂಗೀತ ಅಕಾಡೆಮಿಯವರ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಭಾಗವಹಿಸಿ ದ್ವಿತೀಯ ಬಹುಮಾನ ಪಡೆದು ಎಲ್ಲರ ಮುದ್ದಿನ ಕಣ್ಮಣಿಯಾದಳು ಈ ಮೂರರ ಪೋರಿ!

1996ರಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯವರು ಏರ್ಪಡಿಸಿದ್ದ ರಾಜ್ಯ ಮಟ್ಟದ ಬಾಲಪ್ರತಿಭೆ ಮತ್ತು ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ಶಾಸ್ತ್ರೀಯ, ಜಾನಪದ, ಭಾವಗೀತೆ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಬಹುಮಾನಗಳನ್ನು ಪಡೆದರು.

ಶಾಸ್ತ್ರೀಯ ಸಂಗೀತ ಜ್ಯೂನಿಯರ್‌ ಹಾಗೂ ಸೀನಿಯರ್‌ ವಿಭಾಗಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುವರು. ಟಿ.ಎಚ್‌. ತ್ಯಾಗರಾಜ್‌ರವರಲ್ಲಿ ಸಂಗೀತಾಭ್ಯಾಸ ಪ್ರಾರಂಭಿಸಿ ಬೆಂಗಳೂರಿನ ಸರಸ್ವತಿ ಸಂಗೀತ ಶಾಲೆಯ ಶ್ಯಾಮಲಾ ಜಿ ಭಾವೆಯವರಲ್ಲಿ ಸೀನಿಯರ್‌ ಶಾಸ್ತ್ರೀಯ, ರಮಾ ಕೃಷ್ಣಸ್ವಾಮಿ ಸೀನಿಯರ್‌ ಶಾಸ್ತ್ರೀಯ ಸಂಗೀತ, ಬಿ.ಆರ್‌. ಗೀತಾ ಆಕಾಶವಾಣಿ ಕಲಾವಿದೆ. ಜೊತೆಗೆ ಹಿಂದೂಸ್ಥಾನಿ ಪ್ರಕಾರವನ್ನೂ ಕಲಿಯುತ್ತಿರುವರು. ತುಮಕೂರಿನ ಪಂಚಾಕ್ಷರಿ ಹಿರೇಮಠ್‌ರವರಲ್ಲಿ  ಬಸವರಾಜ್‌ ಕಡಕೋಟಿಯವರ ಬಳಿ ಕಲಿಕೆ.

ಸುಗಮ ಸಂಗೀತವನ್ನು ಬಿ.ಆರ್‌. ಗೀತಾ ಹಾಗೂ ಇಂದೂ ವಿಶ್ವನಾಥ್‌ರಲ್ಲಿ ಕಲಿತಿರುವರು. ಬಿ.ಕೆ. ಸುಮಿತ್ರಾ, ಯಶವಂತ್‌ ಹಳಿಬಂಡಿ ಹಾಗೂ ಡಾ. ಜಯಶ್ರೀ ಅರವಿಂದ್‌ರವರು ನಡೆಸಿಕೊಟ್ಟ ಸಂಗೀತ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದು ಒಂದು ವಿಶೇಷ ಅನುಭವ ನೀಡಿತು. ಸಂಗೀತಾ ಕಟ್ಟಿಯವರ ಮಾರ್ಗದರ್ಶನ ದೊರೆತದ್ದೂ ಒಂದು ವಿಶೇಷವೇ ಹೌದು. ಕುಮಾರ ಪಾರ್ಕ್‌ನಲ್ಲಿರುವ ರಿಧಂ ಸ್ಕೂಲ್ ‌ಆಫ್‌ ಮ್ಯೂಸಿಕ್‌ನ ವಿಶ್ವನಾಥ್‌ ಪ್ರಸಾದ್‌ರ ಬಳಿ ಕೀಬೋರ್ಡ್‌ ಹಾಗೂ ಪಾಶ್ಚಾತ್ಯ ಸಂಗೀತ ಕಲಿಯುತ್ತಿದ್ದಾರೆ. ಹಿಂದಿ ಚಿತ್ರಗೀತೆಗಳನ್ನು ಖ್ಯಾತ ಮ್ಯಾಂಡೋಲಿನ್‌ ವಾದಕ ಎನ್‌.ಎಸ್‌. ಪ್ರಸಾದ್‌ ಮತ್ತು ಖ್ಯಾತ ಶಾಸ್ತ್ರೀಯ ಮತ್ತು ಗಜಲ್ ಎಚ್‌.ಕೆ. ಹರಿಕೃಷ್ಣಪಾದ ಮತ್ತು ಬಾಂಬೆ ಗಾಯಕರಾದ ಮೋಹನ್‌ ಲಾಲ್‌ರವರಿಂದ ಕಲಿಕೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ