ಮದುವೆ ಹೊರೆ ಎನಿಸಿದಾಗ....

ರೋಗಗ್ರಸ್ತ ಮದುವೆಯೊಂದಿಗೆ ಇರುವುದು, ಮದುವೆಯೊಂದನ್ನು ಕೊನೆಗೊಳಿಸುವುದಕ್ಕಿಂತ ಒಳ್ಳೆಯದೆ? ಈ ಪ್ರಶ್ನೆ ಹಲವು ಪುರುಷರು ಮತ್ತು ಮಹಿಳೆಯರ ಮನಸ್ಸಿನಲ್ಲಿ ಕೊರೆಯುತ್ತಿರುತ್ತದೆ. ಯಾವ ಗಂಡ-ಹೆಂಡತಿಯರು ಸದಾ ಪರಸ್ಪರರ ದೂಷಿಸುತ್ತಿರುತ್ತಾರೊ, ಪರಸ್ಪರರ ತಪ್ಪುಗಳನ್ನು ಹೆಕ್ಕಿ ತೆಗೆಯುತ್ತಿರುತ್ತಾರೊ, ಅವರು ಈ ವಿವಾಹದ ಸುಳಿಯಲ್ಲಿ ಯಾಕಾದರೂ ಸಿಲುಕಿದೆನೊ, ಈ ವಿವಾಹ ಸಂಬಂಧ ಮುರಿದುಕೊಂಡುಬಿಟ್ಟರೆ ಹೇಗೆ ಎಂದು ಅವರಿಗೆ ಅನಿಸುತ್ತಿರುತ್ತದೆ.

ಇದು ಜೀವನದ ಉತ್ತರ ಸಿಗಲಾರದ ಪ್ರಶ್ನೆಯಂತೆಯೇ ಇದೆ. ಮದುವೆ, ಇದು ಯಾವುದೇ ಸಂಸ್ಕಾರವಲ್ಲ, ದೇವರ ಕೃಪೆ ಅಲ್ಲ, ಅದು ಜೀವನದ ಖಾಯಂ ಭಾಗವಲ್ಲ. ಅದನ್ನು ಮೊದಲಿನಿಂದಲೂ ಮುರಿದುಕೊಂಡು ಬರಲಾಗುತ್ತಿದೆ. ನಮ್ಮ ಪೌರಾಣಿಕ ಇತಿಹಾಸದಲ್ಲಂತೂ ಗಂಡ-ಹೆಂಡತಿ ಸದಾ ವಿವಾದಗ್ರಸ್ತರು. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಆದರ್ಶ ಸತಿಪತಿಗಳಾಗಿ ಗೋಚರಿಸಬಹುದು. ಯಾರು ದೇವರ ಅವತಾರದಲ್ಲಿದ್ದಾರೊ, ಅವತಾರಗಳ ಸಂತಾನ ಎಂದು ಕರೆಯಲ್ಪಡುತ್ತಾರೊ, ಅವರೂ ಕೂಡ ಆದರ್ಶ ಸತಿಪತಿಯ ಉದಾಹರಣೆಯನ್ನು ಪ್ರಸ್ತುತಪಡಿಸಲು ಆಗಿಲ್ಲ.

ಹೀಗಾಗಿ ಯಾರೊಬ್ಬರೂ ವಿವಾಹ ಸಂಬಂಧ ಮುರಿದುಬಿದ್ದದ್ದಕ್ಕಾಗಿ ಅಪರಾಧಿ ಭಾವನೆಯನ್ನು ತಾಳಬಾರದು. ಮದುವೆ ಸಂಬಂಧದಿಂದಾಗಿ ಮಕ್ಕಳು ಹುಟ್ಟಿದರೋ ಇಲ್ಲವೋ, ಆ ರೋಗಗ್ರಸ್ತ ದೇಹವನ್ನು ಹೊತ್ತುಕೊಂಡು ಹೋಗುವುದಕ್ಕಿಂತ ಅದರಿಂದ ಮುಕ್ತಿ ಪಡೆದುಕೊಳ್ಳುವುದೇ ಒಳ್ಳೆಯದು ಎಂಬ ನಿರ್ಧಾರಕ್ಕೆ ಬರುವುದು ಸೂಕ್ತ.

ಒಂದು ವೇಳೆ ಮುಸ್ಲಿಂರ ಒಂದು ಪಂಗಡ ತ್ರಿವಳಿ ತಲಾಖ್‌ನ್ನು ಒಪ್ಪುತ್ತದೆ ಎಂದಾದರೆ, ಅದು ತಪ್ಪಲ್ಲ. ಏಕೆಂದರೆ ಅದು ಒಮ್ಮುಖ ನಿರ್ಧಾರವಾಗಿರುವುದರ ಜೊತೆಗೆ ರೋಷ, ಬೇಸರಭರಿತ ಸಂಬಂಧ ಮುರಿದುಕೊಳ್ಳಲು ಸಹಜ ಮತ್ತು ಸುಲಭ ವಿಧಾನವಾಗಿದೆ.

ಭಾರತೀಯ ಜನತಾ ಪಾರ್ಟಿಯಂತೂ ಇದನ್ನು ಮಾಡಲು ಸಾಧ್ಯವಿಲ್ಲ. ಆದರೆ ಬೇರೆ ಪಕ್ಷಗಳಿಗೆ ಮಾತ್ರ ಇದು ಬೇಕಿದೆ. ತಲಾಖ್‌ನ ಈ ಹಕ್ಕು ಪುರುಷರ ಜೊತೆ ಜೊತೆಗೆ ಮಹಿಳೆಗೂ ದೊರಕಬೇಕು ಎನ್ನುವುದು ಅವುಗಳ ಪ್ರತಿಪಾದನೆ. ಏಕೆಂದರೆ ಕಾನೂನು ಪ್ರಕಾರ ಸಮಾನ ಹಕ್ಕು ದೊರೆಯಬೇಕು. ಭೇದಭಾವದ ಅನ್ವಯದಡಿ ಹಿಂದೂ ಅಜೆಂಡಾವನ್ನು ಅನ್ವಯಿಸಲು ಕೊಡಬಾರದು.

ಈ ವ್ಯವಸ್ಥೆ ಹಿಂದೂಗಳಿಗೂ ಕೂಡ ದೊರೆಯಬೇಕು. ಏಕೆಂದರೆ ಹೊರೆಯಾದ ಮದುವೆಯನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಕೊನೆಗೊಳಿಸಲು ಸಾಧ್ಯವಾಗಬೇಕು.

ಆದರೆ ಇಲ್ಲೊಂದು ಪ್ರಶ್ನೆ ಉದ್ಭವಿಸುತ್ತದೆ. ಯಾವ ಮದುವೆ ಹೊರೆಯಾಗಿದೆ? ಯಾವ ಮದುವೆ ರೋಗಗ್ರಸ್ತವಾಗಿದೆ? ಗುಣಪಡಿಸಲಾಗದ ರೋಗವೊಂದರಿಂದ ಬಳಲುತ್ತಿರು ಮಗ ಅಥವಾ ತಂದೆಯನ್ನು ಹೇಗೆ ಸಹಿಸಿಕೊಳ್ಳುತ್ತೇವೋ ಹಾಗೆಯೇ ಮದುವೆ ಎನ್ನುವುದು ಎಲ್ಲಿಯವರೆಗೆ ಜೀವಂತಾಗಿರುತ್ತದೋ, ಅಲ್ಲಿಯವರೆಗೆ ಅದನ್ನು ಸಹಿಸಿಕೊಳ್ಳಲೇಬೇಕು ಹಾಗೂ ಅದನ್ನು ಒಪ್ಪಿಕೊಳ್ಳಲೇಬೇಕು. ಅವಶ್ಯಕತೆ ಇರುವುದು ಚಿತಿತ್ಸೆ. ಅದಕ್ಕೆ ವಿಷ ಉಣಿಸುವುದರಲ್ಲಿ ಇಲ್ಲ.

ವಾಸ್ತದಲ್ಲಿ ಮದುವೆ ಮುರಿದುಕೊಳ್ಳುವುದು ನಿಕಟ ಸಂಬಂಧಿಯ ಮೃತ್ಯುವಿಗೆ ಸಮಾನ. ಅಷ್ಟೇ ಅಲ್ಲ, ಅದಕ್ಕೂ ಮಿಗಿಲಾದುದು. ಯಾವಾಗ ಮದುವೆ ಎನ್ನುವುದು ಸೋಂಕಿನ ಕಾರಣದಿಂದ ತಂತಾನೇ ಸತ್ತು ಹೋಗುತ್ತದೋ ಆಗ ಅದನ್ನು ಊದಿಬಿಡಬಹುದು. ಈ ಸೋಂಕು ಒಬ್ಬ ಸಂಗಾತಿ ಇನ್ನೊಬ್ಬ ಸಂಗಾತಿಯನ್ನು ಹುಡುಕಿಕೊಳ್ಳಬಹುದು. ಪ್ರತ್ಯೇಕವಾಗಿ ಇರುವುದಾಗಿರಬಹುದು.

ಕೇವಲ ಅಸಮ್ಮತಿ, ನಿಂದಿಸುವುದು, ಜೋರಾಗಿ ಮಾತನಾಡುವುದು, ಅತ್ತು ಕರೆದು ಮಾಡುವುದು, ತಡವಾಗಿ ಮನೆಗೆ ಬರುವುದು, ಗದರಿಸುವುದು, ಇವೇ ಮುಂತಾದವುಗಳನ್ನು ವಿವಾಹದ ಚಿಕ್ಕ ದೊಡ್ಡ ರೋಗದ ಕಾರಣಗಳೆಂದು ಪಟ್ಟಿ ಮಾಡಬಹುದು. ಅವನ್ನು ಮದುವೆ ಮುರಿದು ಬೀಳುತ್ತಿರುವ ಚಿಹ್ನೆಗಳೆಂದು ಭಾವಿಸಬಾರದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ