ಗಾಳಿಯಲ್ಲಿ ತೇಲಾಡುತ್ತಿರುವ ಸರ್ಕಾರಕ್ಕೆ ಮೂಗುದಾರ

ಸಾಮಾನ್ಯವಾಗಿ ಸರ್ಕಾರದ ರಚನೆ ಮತ್ತು ಬದಲಾವಣೆಯ ಬಗ್ಗೆ ಮನೆ ಮಹಿಳೆಯರಿಗೆ ಅಷ್ಟೇನೂ ವ್ಯತ್ಯಾಸ ಅನಿಸದು. ಆದರೆ ಸರ್ಕಾರ ಅಡುಗೆಮನೆಗೆ ನುಗ್ಗಿ ಜೀವನವನ್ನು ದುಸ್ತರಗೊಳಿಸುತ್ತಿದ್ದಲ್ಲಿ, ಅಂತಹ ಸರ್ಕಾರ ಕುಸಿಯತ್ತಿದೆ ಎಂದೆನಿಸಿದಾಗ ಒಂದಿಷ್ಟು ಸಮಾಧಾನ ಅನಿಸುತ್ತದೆ. ಕರ್ನಾಟಕದಲ್ಲಿ ಸರ್ಕಾರ ರಚಿಸಲು ಆಗದೇ ಇರುವುದು, ಆ ಬಳಿಕ ನಡೆದ ಉಪಚುನಾವಣೆಯ 15 ಸೀಟುಗಳಲ್ಲಿ 12ರಲ್ಲಿ ಸೋತು ನರೇಂದ್ರ ಮೋದಿ ಹೇಳುವುದು ಹೀಗೆ, ಚಹಾ ತಡವಾಗಿ ಸಿಕ್ಕಾಗ ಪತಿ ಜಗಳವಾಡುವ ಹಕ್ಕು ನೈತಿಕ ಹಾಗೂ ನೈಸರ್ಗಿಕವಾಗಿದೆ ಎಂದು.

ಶ್ರೀಮಾನ್‌ ನರೇಂದ್ರ ಮೋದಿಯವರು ಮನೆಯೊಳಗೆ ನುಗ್ಗಿ ಅಗ್ಗದ ಗ್ಯಾಸ್‌ ಸಿಲಿಂಡರ್‌ಗಳನ್ನು ಕೊಟ್ಟು ಶಭಾಷ್‌ ಗಿರಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಒಬ್ಬ ಮಹಿಳೆಯಿಂದ ಹೇಳಿಸಿಯೂ ಬಿಟ್ಟರು. ಈಗ ಸಿಲಿಂಡರ್‌ ಇರುವ ಕಾರಣದಿಂದ ಚಹಾ ತಡವಾಗುವ ಪ್ರಶ್ನೆ ಇಲ್ಲ. ಅದಕ್ಕಾಗಿ ಗಂಡ ಬೈಯುವುದೂ ಇಲ್ಲ. ಇದರರ್ಥ ಚಹಾ ತಡವಾಗಿ ಸಿಕ್ಕರೆ ಬೈಯುವುದು ತಪ್ಪಲ್ಲ. ಅದೇ ಪಕ್ಷದ ಕೆಲವರು, “ಮಹಿಳೊಬ್ಬಳ ಬಲಾತ್ಕಾರವಾದರೆ ಅದಕ್ಕೆ ಆಕೆಯೇ ಹೊಣೆ,” ಎಂದು ಹೇಳುತ್ತಾರೆ. ಆ ಪಕ್ಷದ ಸಮರ್ಥಕರು ಜನರ ಮನೆಗೆ ನುಗ್ಗಿ ರೆಫ್ರಿಜರೇಟರ್‌ನಲ್ಲಿರುವ ಮಾಂಸ ಹಸುವಿನದ್ದಲ್ಲ ತಾನೇ ಎಂದು ಇಣುಕಿ ನೋಡುವ ಹಕ್ಕನ್ನು ಹೊಂದಿರುವುದಾಗಿ ಭಾವಿಸುತ್ತಾರೆ.

ಬಿಂದಿ ಬೊಟ್ಟಿಗೆ ಭಾರಿ ಜಿಎಸ್‌ಟಿ ಹಾಕಿರುವುದನ್ನು  ಅದೇ ಪಾರ್ಟಿಯ ಜನರು ಸರಿ ಎಂದು ಹೇಳುತ್ತಾರೆ. ಆ ಪಾರ್ಟಿಗೆ ದೇವಸ್ಥಾನಗಳು, ಯೋಗಾಸನ ಹಾಗೂ ಬ್ರಾಹ್ಮಣರ ಬಗ್ಗೆ ಕಾಳಜಿ ಇದೆ. ಆದರೆ ಕಳೆದ 4 ವರ್ಷಗಳಲ್ಲಿ ಅದು ಮಹಿಳೆಯರ ಹಿತಾಸಕ್ತಿಗೆ ಸಂಬಂಧಿಸಿದ ಒಂದೇ ಒಂದು ಕಾನೂನನ್ನು ಪಾಸ್‌ ಮಾಡಲಿಲ್ಲ. ತ್ರಿವಳಿ ತಲಾಕ್‌ ಕಾನೂನೇನೊ ಪಾಸ್‌ ಆಗಿದೆ. ಇದಕ್ಕೆ ಕಾರಣ ಮುಸ್ಲಿಂ ಕಾನೂನಿನಲ್ಲಿ ತಾನು ಹಸ್ತಕ್ಷೇಪ ಮಾಡಬಹುದು ಎಂಬುದನ್ನು ಹಿಂದೂ ಸಮಾಜಕ್ಕೆ ತೋರಿಸಿಕೊಡಲು.

ವಾಸ್ತವದಲ್ಲಿ ಸರ್ಕಾರದ ನಿರ್ಧಾಗಳು ಉದ್ಯಮಗಳು, ಕಾರ್ಖಾನೆಗಳ ಮೇಲೆ ಪ್ರಭಾವ ಬೀರುವ ಹಾಗೆಯೇ ಕುಟುಂಬಗಳ ಮೇಲೂ ಪ್ರಭಾವ ಬೀರುತ್ತದೆ ಎಂದು ಅದಕ್ಕೆ ಗೊತ್ತಾಗದಿದ್ದರೆ ಆ ಸರ್ಕಾರ ನಿಷ್ಪ್ರಯೋಜಕವೇ ಸರಿ.

ನೋಟು ರದ್ದು ಲಕ್ಷಾಂತರ ಮಹಿಳೆಯರ ಗುಪ್ತ ನಿಧಿಯನ್ನು ಹೊರ ತೆಗೆಯಿಸಿತು. ಈಗಲೂ ಕೆಲವು ಮಹಿಳೆಯರ ಮನೆಗಳಲ್ಲಿ ಅಂತಹ ನೋಟುಗಳಿವೆ. ಅವು ಬೆವರು ಸುರಿಸಿ ಗಳಿಸಿ, ಉಳಿಸಿದ ಹಣ. ಸರ್ಕಾರದ ಮೂರ್ಖತನದ ನಿರ್ಧಾರದಿಂದಾಗಿ ಆ ನೋಟು ಗಳೀಗ ಬಣ್ಣದ ತುಂಡುಗಳಾಗಿವೆ ಅಷ್ಟೇ. ಅಂತಹ ಸರ್ಕಾರಕ್ಕೆ ಆಘಾತ ಉಂಟಾದರೆ ಅದು ಸರಿ. ಅದು ಹೇಗೆಂದರೆ, ಮನೆಯಲ್ಲಿ ಮಗಳು ತುಂಬಾ ಗಲಾಟೆ ಮಾಡುತ್ತಿದ್ದರೆ, ಅಮ್ಮ ಅವಳನ್ನು ಗದರಿಸುವುದು ತಪ್ಪಲ್ಲ. ಹಾಗೆಯೇ ಮತದಾರರು ಆಗಾಗ ಕೊಡುವ ಇಂತಹ ಏಟು ಸರಿಯಾಗಿಯೇ ಇರುತ್ತದೆ.

ಈಗ ಸರ್ಕಾರದ ಸ್ಥಿತಿ ಹೇಗಿದೆ ಎಂದರೆ, ಗಂಡನ ತಪ್ಪಿನಿಂದ ದುಬಾರಿ ಬೆಲೆಯ ಮಗ್‌ ಕೈ ಜಾರಿ ಹೋದ ನಂತರ ಹೆಂಡತಿಯ ಸ್ಥಿತಿ ಹೇಗಿರುತ್ತೋ ಹಾಗೆ ತನ್ನ ಬಳಿ ಯಾವ ಹಕ್ಕು ಇದೆಯೋ, ಅದನ್ನು ಕೊಟ್ಟಿದ್ದು ಜನತೆ ಎಂಬುದು ಸರ್ಕಾರಕ್ಕೆ ಅರಿವಾಗಬೇಕು. ಹುಟ್ಟಿನಿಂದಲೇ ಪೂಜಾರಿಗಳಿಗೇ ದೊರೆತ ರೀತಿಯಲ್ಲಿ ಅಲ್ಲ.

ಧರ್ಮ ಹಾಗೂ ಅದರ ವಿಶೇಷ ಜಾತಿಯೊಂದರ ಪ್ರತಿಯೊಬ್ಬ ನಾಗರಿಕನ ಮನೆಯನ್ನು ಸುರಕ್ಷಿತ ಮತ್ತು ಸುಖಕರವಾಗಿಸಲು ಸರ್ಕಾರ ಕೆಲಸ ಮಾಡಬೇಕು. ಆದರೆ ಅದು ಆ ರೀತಿ ಮಾಡುವ ಹಾಗೆ ಕಾಣುತ್ತಿಲ್ಲ. ಆಯ್ಕೆಯಾದ ಬಳಿಕ ಸರ್ಕಾರಗಳು ಅಧಿಕಾರದಲ್ಲಿ ಅದು ಹೇಗೆ ಮಗ್ನವಾಗುತ್ತವೆಂದರೆ, ತಮ್ಮನ್ನು ಆಯ್ಕೆ ಮಾಡಿದ ಮತದಾರರಲ್ಲಿ ಶೇ.50ರಷ್ಟು ಮಹಿಳೆಯರೇ ಇರುತ್ತಾರೆ ಎಂಬುದನ್ನು ಮರೆತುಬಿಡುತ್ತವೆ. ಅವರು ಯಾವುದೇ ಜಾತಿ ಧರ್ಮದವರಾಗಲಿ, ಸರ್ಕಾರದ ನಿರ್ಧಾರಗಳು ಅವರ ಮೇಲೆ ಸಾಕಷ್ಟು ಪರಿಣಾಮ ಬೀರುತ್ತವೆ.

ಚುನಾವಣೆಯ ಫಲಿತಾಂಶಗಳು ಆಕಾಶದಲ್ಲಿ ಹಾರಾಡುತ್ತಿದ್ದ ಸರ್ಕಾರಕ್ಕೆ ದಾರದಿಂದ ಕಟ್ಟಿ ಹಾಕಿದ್ದು ಮಾತ್ರ ಒಳ್ಳೆಯದೇ. ಕಾನೂನು ಕುತ್ತಿಗೆಯ ಕುಣಿಕೆಯಾದಾಗ

ಜನಾಭಿಪ್ರಾಯದ ಮೂಲಕ ಗರ್ಭಪಾತದ ಬಗೆಗಿನ ಕಾನೂನನ್ನು ಐರ್ಲೆಂಡ್‌ ಬದಲಿಸಿತು. ಅಲ್ಲಿನ ಕೆಥೋಲಿಕ್‌ ಧಾರ್ಮಿಕ ಕಾನೂನಿನ ಪ್ರಕಾರ ಗರ್ಭಪಾತ ನಡೆಸುವುದು ಪಾಪ ಎಂದು ತಿಳಿಯಲಾಗುತ್ತಿತ್ತು. ಅಂದಹಾಗೆ 6 ವರ್ಷಗಳ ಹಿಂದೆ ಕರ್ನಾಟಕ ಮೂಲದ ಸವಿತಾರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಪ್ರಕಾರ, ಗರ್ಭಪಾತ ಮಾಡಿದರೆ ಸವಿತಾ ಹಾಲಪ್ಪನವರ ಜೀವ ಉಳಿಸಬಹುದಿತ್ತು. ಆದರೆ ಅಲ್ಲಿನ ಕಾನೂನು ಗರ್ಭಪಾತಕ್ಕೆ ವಿರುದ್ಧವಾಗಿತ್ತು. ನ್ಯಾಯಾಲಯ ಕೂಡ ಈ ನಿಟ್ಟಿನಲ್ಲಿ ಹಸ್ತಕ್ಷೇಪ ನಡೆಸಲು ನಿರಾಕರಿಸಿತ್ತು. ಧರ್ಮದ ಕರಾಳ ನೀತಿಯಿಂದಾಗಿ ಸವಿತಾ ಜೀವ ಕಳೆದುಕೊಳ್ಳಬೇಕಾಯಿತು.

ಸವಿತಾ ಸಾವಿನ ಬಳಿಕ ಅಲ್ಲಿ ಈ ಕಾನೂನನ್ನು ಬದಲಿಸಬೇಕೆಂದು ಒಂದು ರೀತಿಯ ನಿರಂತರ ಚಳವಳಿಯೇ ನಡೆದಿತ್ತು. ಅದಕ್ಕೆ ಮಣಿದು ಸರ್ಕಾರ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಯಿತು. ಕೆಥೋಲಿಕ್‌ ಸಂಪ್ರದಾಯವಾದಿಗಳ ವಿರೋಧದ ನಡುವೆಯೂ ಅಲ್ಲಿನ ಜನರು ಸವಿತಾರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದರು.

ಸರ್ಕಾರ, ಸಮಾಜ ಹಾಗೂ ಧರ್ಮ ಇವು ಈಗಲೂ ಜನರ ಖಾಸಗಿ ನಿರ್ಧಾರಗಳಲ್ಲಿ ಹಸ್ತಕ್ಷೇಪ ನಡೆಸುತ್ತಿವೆ. ಗರ್ಭಪಾತ ಕೂಡ ಲೈಂಗಿಕ ಚಟುವಟಿಕೆಯ ಹಾಗೆ ಅವರವರ ಖಾಸಗಿ ನಿರ್ಧಾರ. ಮದುವೆಯ ಬಳಿಕ ಅಥವಾ ಮದುವೆ ಇಲ್ಲದೆ ಸೆಕ್ಸ್ ಸಂಬಂಧ ಕೂಡ ಧರ್ಮದ ಕಾರಣದಿಂದಾಗಿ ಕಾನೂನಿನ ವ್ಯಾಪ್ತಿಯಲ್ಲಿ ಬರುತ್ತವೆ. ಕ್ರಮೇಣ ಸ್ವಾತಂತ್ರ್ಯ ರಕ್ಷಕರು ಅನ್ನುವ ವ್ಯಕ್ತಿಯೊಬ್ಬನ ವೈಯಕ್ತಿಕ ಇಚ್ಛೆ ಎಂದು ಪರಿಗಣಿಸಿದರು.

ಯಾರೋ ಒಬ್ಬರು ಬೆಳಗಿನ 4 ಗಂಟೆಗೆ ಮಲಗುತ್ತಾರೆ ಅಥವಾ 8 ಗಂಟೆಗೆ. ಅದರ ಮೇಲೆ ಯಾರ ನಿಯಂತ್ರಣ ಇಲ್ಲ. ಅವರಿಗೆ ಬೇರೊಬ್ಬರ ಬಗ್ಗೆ ಯಾವ್ಯಾವ ಹೊಣೆಗಾರಿಕೆ ಇರುತ್ತದೋ, ಅದನ್ನು ಅವರು ನೆರವೇರಿಸಿಬಿಟ್ಟರೆ ಆ ಬಗ್ಗೆ ಯಾರ ಆಕ್ಷೇಪ ಇರುವುದಿಲ್ಲ, ಇರಲೂಬಾರದು. ಕೆಲವು ಆಶ್ರಮಗಳಲ್ಲಿ ಹಾಸ್ಟೆಲ್‌ಗಳಲ್ಲಿ ಈ ಬಗ್ಗೆ ಆಕ್ಷೇಪಗಳು ಇರುತ್ತದೆ. ಶಿಸ್ತಿನ ನೆಪದಲ್ಲಿ ಹಾಗೆ ಮಾಡಲಾಗುತ್ತದೆ. ವಾಸ್ತವದಲ್ಲಿ ವ್ಯಕ್ತಿಯೊಬ್ಬನನ್ನು ವಿವೇಕಹೀನನ್ನಾಗಿಸುವ ಪ್ರಯತ್ನ ಮಾಡಲಾಗುತ್ತದೆ. ನೈಟ್‌ ಔಟ್‌ನ ಸಿದ್ಧಾಂತ ಇದನ್ನೇ ಅವಲಂಬಿಸಿದೆ.

ಆರೋಗ್ಯದಿಂದಿರಲು ಮಲಗುವ ಸಮಯನ್ನು ನಿರ್ಧರಿಸುವುದೇನೊ ಸರಿ, ಆದರೆ ಅದನ್ನು ವ್ಯಕ್ತಿಯೊಬ್ಬನ ಮೇಲೆ ಹೇರುವುದು ತಪ್ಪು. ಗರ್ಭಪಾತದ ನಿರ್ಣಯ ಕೂಡ ಹಾಗೆಯೇ. ಅದು ಗರ್ಭಿಣಿ ಹಾಗೂ ವೈದ್ಯರ ವಿಷಯ. ಅವರಿಗೆ ಹೇಗೆ ನಿರ್ಧಾರ ಕೈಗೊಳ್ಳಬೇಕೊ ಹಾಗೆ ಮಾಡಬಹುದು. ಇಷ್ಟು ವಾರದೊಳಗೆ ಎಂಬ ಕಾನೂನು ಕೂಡ ತಪ್ಪು. ಅದು ಈಗಲೂ ಭಾರತದಲ್ಲಿ  ಚಾಲ್ತಿಯಲ್ಲಿದೆ. ವಿಶೇಷ ಅನುಮತಿ ಪಡೆದುಕೊಳ್ಳಲು ಸುಪ್ರೀಂ ಕೋರ್ಟ್‌ಗೆ ಹೋಗಬೇಕಾಗುತ್ತದೆ. ಇದೂ ಕೂಡ ಐರ್ಲೆಂಡ್‌ನಲ್ಲಿ ಚರ್ಚ್‌ ಸರ್ಕಾರದ ಮುಖಾಂತರ ಜನತೆಯ ಮೇಲೆ ಹೇರಿದಂತೆಯೇ ಇದೆ.

ಗುಲಾಮ ಮನೋಭಾವವನ್ನು ಕಾಯ್ದುಕೊಂಡು ಹೋಗುವುದು ಸರ್ಕಾರಕ್ಕೆ ಲಾಭಕರವೇ ಹೌದು. ಏಕೆಂದರೆ ಅದು ಬಗೆಬಗೆಯ ನಿಯಂತ್ರಣಗಳನ್ನು ಹೇರಲು ಇಚ್ಛಿಸುತ್ತದೆ.

ಐರ್ಲೆಂಡ್‌ ಜನಾಭಿಪ್ರಾಯದ ಮೂಲಕ ಈ ಒಂದು ಕಠೋರ ಪದ್ಧತಿಯಿಂದ ಮುಕ್ತಗೊಂಡಿತು. ಶ್ರೀಮಂತ, ಸುಶಿಕ್ಷಿತ ಮತ್ತು ಸಮೃದ್ಧ ರಾಷ್ಟ್ರವೊಂದರಲ್ಲಿ ಇನ್ನೂ ಅದೆಷ್ಟು ನಿಯಂತ್ರಣಗಳಿವೆಯೊ, ಅವನ್ನೆಲ್ಲ ಜನರು ಕಣ್ಮುಚ್ಚಿಕೊಂಡು ಅನುಸರಿಸುತ್ತಿದ್ದಾರೆ. ಪರಕೀಯ ಅಥವಾ ವಿದೇಶಿ ಸರ್ಕಾರಗಳಿಂದ ಮುಕ್ತಿ ದೊರಕುವ ಹಾಗೆ ಸಾಮಾನ್ಯ ಜನರಿಗೂ ಕೂಡ ಸರ್ಕಾರದಿಂದ ಸ್ವಾತಂತ್ರ್ಯ ದೊರಕಬೇಕು.

ಸಿಗರೇಟಿನ ಪ್ರತಿ ದಮ್ಮಿನಲ್ಲೂ ಇದೆ ಸವಾಲು!

ಸಿಗರೇಟಿನಿಂದ ಕ್ಯಾನ್ಸರ್‌ ಉಂಟಾಗುತ್ತದೆಂಬ ಸಂಗತಿ 4 ದಶಕಗಳ ಹಿಂದೆಯೇ ಪತ್ತೆ ಆಗಿತ್ತು. ಆದರೂ ಈಗಲೂ ಜನರು ಸಿಗರೇಟು ಸೇದುತ್ತಾರೆ. ಪ್ರತಿವರ್ಷ 70 ಲಕ್ಷ ಜನರು ಕೇವಲ ಧೂಮಪಾನದಿಂದಲೇ ಸಾಯುತ್ತಿದ್ದಾರೆ. ಫ್ರಾನ್ಸ್ ನಲ್ಲಿ ಶೇ.34 ರಷ್ಟು ಜನರು ಸಿಗರೇಟು ಸೇದುತ್ತಾರೆ. ಭಾರತದಲ್ಲಿ ಶೇ.14ರಷ್ಟು ಜನರು ಧೂಮಪಾನದ ಚಟಕ್ಕೆ ದಾಸರಾಗಿದ್ದಾರೆ. ಭಾರತದಲ್ಲಿ ಈ ಪ್ರಮಾಣ ಕಡಿಮೆ. ಏಕೆಂದರೆ ಇಲ್ಲಿ ಪಾನ್‌ ಮಸಾಲಾ, ಖೈನಿ ಮುಂತಾದವುಗಳಲ್ಲಿ ತಂಬಾಕನ್ನು ಸೇರಿಸಿ ಸೇವಿಸುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಒಂದು ಮಿತಿಯಲ್ಲಿ ತಂಬಾಕು ಸೇವನೆ ಒಳ್ಳೆಯದೆಂಬುದು ಕೂಡ ತಪ್ಪು ಕಲ್ಪನೆ. ಮದ್ಯದ ಕುರಿತೂ ಹೀಗೆಯೇ ಹೇಳಲಾಗುತ್ತದೆ. ಸ್ವಲ್ಪ ಸೇವನೆಯಿಂದ ಏನೂ ಹಾನಿಯಿಲ್ಲ ಎಂಬುದು ತಪ್ಪು. ಒಂದೇ ಸಿಗರೇಟು ಸೇದಿ ಅಥವಾ ಇಪ್ಪತ್ತು, ಅದು ರೋಗಕ್ಕೆ ಮೂಲ ಎನ್ನುವುದು ನಿಜ. ಕಡಿಮೆ ಸೇವನೆ ಮಾಡುವವರು ದುಡ್ಡಿದ್ದರೆ ಅದಕ್ಕೆ ಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ.

ಮಿತವಾಗಿ ಸೇದುವವರು ಒತ್ತಡದಲ್ಲಿದ್ದಾಗ ಒಂದಾದ ನಂತರ ಒಂದು ಸಿಗರೇಟು ಸೇದುತ್ತಾರೆ. ಅವರನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಜಗತ್ತಿನಾದ್ಯಂತ 28,000 ಶತಕೋಟಿ ರೂ.ಗಳನ್ನು ಸಿಗರೇಟು ಸೇದುವ ರೋಗಿಗಳ ಮೇಲೆ ಖರ್ಚು ಮಾಡಲಾಗುತ್ತದೆ. ತಂಬಾಕು ಕಂಪನಿಗಳು ಹಾಗೂ ವಾಣಿಜ್ಯ ಆಸ್ಪತ್ರೆಗಳು ಈ ನಿಟ್ಟಿನಲ್ಲಿ ಭಾರಿ ಲಾಭ ಮಾಡಿಕೊಳ್ಳುತ್ತಿವೆ.

ಮನೆಯಲ್ಲಿ ಸೇಗರೇಟಿನ ಹೊಗೆ ಬರದೇ ಇರದಂತೆ ಸ್ತ್ರೀಯರೇ ನೋಡಿಕೊಳ್ಳಬೇಕು. ಪ್ರೀತಿ ಮಾಡುವ ಹಂತದಲ್ಲಿಯೇ ಪುರುಷರ ಮೇಲೆ ನಿರ್ಬಂಧ ಹೇರಬೇಕು. ಏಕೆಂದರೆ ಧೂಮಪಾನಿ ಯಾವಾಗ ಅಪಾಯ ಉಂಟುಮಾಡುತ್ತಾನೋ ಹೇಳಲಾಗದು. ಮನೆಯಲ್ಲಿ ಧೂಮಪಾನ ಮಾಡಿದರೆ ಅದರ ದುಷ್ಪ್ರಭಾವ ಮಕ್ಕಳ ಮೇಲೂ ಆಗದೇ ಇರದು.

ಭಾರತ ಬಿಡಿ, ಇಟಲಿಯಂಥ ಮಹಾನಗರಗಳ ಫುಟ್‌ಪಾತ್‌ಗಳು ಸ್ವಚ್ಛವಾಗಿ ಏನೋ ಕಾಣುತ್ತವೆ. ಆದರೆ ಸಿಗರೇಟಿನ ತುಂಡುಗಳು ಎಲ್ಲೆಂದರಲ್ಲಿ ಗೋಚರಿಸುತ್ತವೆ. ಇಟಲಿ ಮತ್ತು ಭಾರತದಲ್ಲಿ ಸಿಗರೇಟ್‌ ಮಹಿಳೆಯರ ನಂಬರ್‌ ಒನ್‌ ವೈರಿ.

ಕೆಲವು ದೇಶಗಳಲ್ಲಿ ಪುರುಷರಿಗೆ ಸರಿ ಸಮಾನವಾಗಿ ಮಹಿಳೆಯರೂ ಸಿಗರೇಟು ಸೇದುತ್ತಾರೆ. ಅವರು ತಮ್ಮನ್ನು ತಾವು ಹಾಳು ಮಾಡಿಕೊಳ್ಳುವುದಲ್ಲದೇ ಮಕ್ಕಳ ಆರೋಗ್ಯಕ್ಕೂ ಹಾನಿ ಮಾಡುತ್ತಾರೆ. ಮಕ್ಕಳು 7-10ನೇ ವಯಸ್ಸಿನಲ್ಲೇ ಕದ್ದು ಮುಚ್ಚಿ ಸಿಗರೇಟು ಸೇದಲು ಆರಂಭಿಸುತ್ತಾರೆ. ಅದೇ ಮುಂದೆ ಕೆಲವರನ್ನು ಮಾದಕ ದ್ರವ್ಯಗಳ ಚಟಕ್ಕೆ ಸಿಲುಕಿಸುತ್ತದೆ. ಇದಕ್ಕೆ ಚಿಕಿತ್ಸೆಯೇ ಇಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ