ನಮ್ಮ ದೇಶದ 3 ಮಹಾನಗರಗಳು ಪ್ರತಿ ವರ್ಷ, 2 ವರ್ಷಗಳಿಗೊಮ್ಮೆ ಭಾರಿ ಮಳೆಯ ನಂತರ ಎಲ್ಲೆಲ್ಲೂ ಜಲಸಾಗರಗಳಲ್ಲಿ ಮುಳುಗಿಹೋಗುತ್ತವೆ. ಇತ್ತೀಚೆಗಂತೂ ಬೆಂಗಳೂರು ಈ ನಿಟ್ಟಿನಲ್ಲಿ ಮುಂದಿದೆ. ಇದಕ್ಕೆ ಮೊದಲು ಚೆನ್ನೈ, ಮುಂಬೈ ಇದಕ್ಕೆ ಬಲಿಯಾಗುತ್ತಿತ್ತು. ಟಿವಿ ವೀಕ್ಷಕರಿಗಂತೂ ಈ ದೃಶ್ಯ ರೋಚಕ ಎನಿಸಬಹುದು….. ಅದರಲ್ಲಿ ಆಧುನಿಕ ಯುವತಿಯರು ಎಂದೂ ಫ್ಯಾಷನೆಬಲ್ ಡ್ರೆಸ್‌, ಮೇಕಪ್‌ ಇಲ್ಲದೆ ಹೊರಗೆ ಹೊರಡದವರು ಮಳೆರಾಯನ ಆರ್ಭಟಕ್ಕೆ ಸಿಲುಕಿ ಸಾಧಾರಣ ಉಡುಗೆಗಳಲ್ಲಿ, ಗಲೀಜು ನೀರಿಗಿಳಿದು ಕಾಲ್ನಡಿಗೆ, ಟ್ರಾಕ್ಟರ್‌, ವ್ಯಾನ್, ಟ್ರಕ್ಕುಗಳಲ್ಲಿ ಮನೆಯ ಸಾಮಗ್ರಿ ಹೊತ್ತು ಅಂತೂ ಹೇಗೋ ಓಡಾಡುತ್ತಿದ್ದರು.

ಇದು ಮೊದಲೇ ಗೊತ್ತಿದ್ದರೆ ಬಹುಶಃ ನ್ಯೂಸ್‌ ಚಾನೆಲ್ಸ್, FB‌, ಟ್ವಿಟರ್‌ ಇತ್ತೀಚೆಗೆ ಬೆಂಗಳೂರಿನ ಜನ ಗೋಳಾಡುತ್ತಿದ್ದರೆ, ತಮ್ಮ ಜೀವಮಾನದ ಸಂಪಾದನೆ ಹಾಳಾಗುತ್ತಿರುವುದನ್ನು ಕಂಡು ಕಂಬನಿ ಮಿಡಿಯುತ್ತಿದ್ದರೆ, ಇವು ಐಬಾಲ್ಸ್ ಗಾಗಿ ಭಾರತ ಪಾಕಿಸ್ತಾನ ಕ್ರಿಕೆಟ್‌ ಮ್ಯಾಚ್‌ ನಂಥ ಜಾಹೀರಾತುಗಳನ್ನು ತೆಗೆದುಕೊಳ್ಳುವುದರಲ್ಲಿ ಬಿಝಿ.

ಈ ನಗರಗಳ ಸೈಟ್‌ ಬೆಲೆ ಗಗನದಲ್ಲಿದೆ. ಆದರೆ ಅವೆಂಥ ದುರ್ಬಲ ಎಂದೀಗ ಸ್ಪಷ್ಟವಾಗಿದೆ. ಬಿಲ್ಡರ್ಸ್‌ ಏನೋ ಮಹಡಿ ಮೇಲೆ  ಮಹಡಿ ಕಟ್ಟಿ ಅಪಾರ್ಟ್‌ ಮೆಂಟ್‌ ಎಬ್ಬಿಸುತ್ತಾರೆ, ರಾಜ್ಯ ಸರ್ಕಾರ ನಗರಪಾಲಿಕೆಗಳು ಟ್ಯಾಕ್ಸ್ ಮತ್ತು ಲಂಚ ಗುಳುಂ ಮಾಡುತ್ತಾರೆ. ಆದರೆ ನಗರಗಳ ಮ್ಯಾನೇಜ್‌ ಮೆಂಟ್‌ ಮಾತ್ರ ಗೊತ್ತಿಲ್ಲ.

flood-and-city-1

ಈ ಮಾತು ಗೊತ್ತಿರದ ಮನೆ ಮಂದಿ, ತಮ್ಮ ಜೀವನವಿಡಿಯ ಸಂಪಾದನೆಯನ್ನು ಇಲ್ಲಿನ ಫ್ಲಾಟ್‌ ಕೊಳ್ಳುವುದಕ್ಕೆ ಸುರಿಯುತ್ತಾರೆ. ಅದು ಯಾವಾಗ ನೀರಿನಲ್ಲಿ ಮುಳುಗಿಹೋಗುವುದೋ ಹೇಳಲಾಗದು. ಈ ನಗರಗಳ ಜನತೆಗಂತೂ ಈ ವಿಷಯದಲ್ಲಿ ಅಂಥ ವ್ಯತ್ಯಾಸಗಳೂ ಗೊತ್ತಾಗುವುದಿಲ್ಲ. ಏಕೆಂದರೆ ಇದರಲ್ಲಿ 50%ಗೂ ಅಧಿಕ ಜನತೆ, ಸಾಮನ್ಯವಾಗಿ ಮೊದಲಿನಿಂದಲೂ ಇಂಥ ಮನೆಗಳಲ್ಲೇ ಇದ್ದುಬಿಟ್ಟಿದ್ದಾರೆ. ಮಳೆಯಲ್ಲಿ ಹೀಗೆ ಮನೆ ಮನೆಯೇ ಮುಳುಗೇಳುವುದೂ ಮಾಮೂಲಿ. ಮಳೆ ಬರಲಿ, ಬಿಡಲಿ, ಬರ ಇರಲಿ….. ಎಲ್ಲಕ್ಕೂ ಇವರು ಹೊಂದಿಕೊಂಡು ಬಿಟ್ಟಿದ್ದಾರೆ.

ಈ ನಗರಗಳಲ್ಲಿ ಚಿಂತೆಗೊಳಗಾಗುವವರು ಎಂದರೆ, ತಮ್ಮ ಕೈಯಲ್ಲೇ ನಿರ್ಧಾರ ತಳೆಯಬಲ್ಲಂಥವರು. ಇವರು ರಾಜಕಾರಣಿಗಳ ಅಧಿಕಾರ ಅಲುಗಿಸಬಲ್ಲರು, ಇಂಥವರು ಬಯಸಿದರೆ ಈ ನಗರಗಳನ್ನು ನೀರಿನ ಮುಳುಗಡೆ ಹಾಗೂ ಬರಗಳಿಂದ ಕಾಪಾಡಬಲ್ಲರು. ಈಗಂತೂ ಎಲ್ಲಾ ಬಗೆಯ ಟೆಕ್ನಿಕ್ಸ್ ಲಭ್ಯ. ತೊಂದರೆ ಎಂದರೆ ಎತ್ತರೆತ್ತರದ ಮಿರಿಮಿರಿ ಮಿಂಚುವ ಫ್ಲಾಟ್‌ ಗಳ ಈ ಜನ, ಎಷ್ಟು ಇಂಟ್ರೊವರ್ಟ್‌ ಆಗಿರುತ್ತಾರೆಂದರೆ, ಇವರೆಲ್ಲ ಒಗ್ಗಟ್ಟಾಗಿ ನಗರಕ್ಕೆ ಒಳ್ಳೆಯದಾಗುವುದರತ್ತ ಕಿಂಚಿತ್ತು ಚಿಂತಿಸುವುದಿಲ್ಲ.

ತಮ್ಮದೇ ಯಶಸ್ಸಿನ ಸ್ವಾರ್ಥದಲ್ಲಿ ಟೆಕ್‌ ಕ್ಯಾಪಿಟಲ್ ಬೆಂಗಳೂರು ಫೈನಾನ್ಸ್ ಕ್ಯಾಪಿಟಲ್ ಮುಂಬೈನ ಈ ರಿಚ್‌ ಸೆಕ್ಷನ್‌ ಸ್ವಲ್ಪ ನಗರಕ್ಕಾಗಿ ಹೋರಾಡಲು, ಏನಾದರೂ ಮಾಡಲು ಖಂಡಿತಾ ತಯಾರಿಲ್ಲ. ಇಂಥವರ ಬಳಿ ಸದಾ ಸಮಯದ ಅಭಾವ, ಅದಕ್ಕಿಂತ ದೊಡ್ಡ ಕಾರಣ, ಅವರ ಒಳಮನಸ್ಸಿನಲ್ಲಿ, ಅವರೇನೇ ಮಾಡಿದರೂ ಅದರ ದೊಡ್ಡ ಲಾಭ ಮಾಮೂಲಿ ಜನತೆಗೇ ಆಗುತ್ತದೆ. ಅಂಥ ಸಾಧಾರಣ ಮಂದಿಯ ಏಳಿಗೆ ಇವರಿಗೆ ಕಿಂಚಿತ್ತೂ ಬೇಕಿಲ್ಲ.

ಬೆಂಗಳೂರು, ಮುಂಬೈ, ಚೆನ್ನೈ ಮಹಾನಗರಗಳ ಮೋರಿ, ನಾಲೆ, ಕೆರೆಗಳು ನಗರಕ್ಕೆ ಆಗಮಿಸಿದ ಸ್ಲಂನವರ ಪಾಲಾಗಿದೆ. ಅವರಿಗೆ ಯಾವ ಕೊಳಕೂ ಏನೂ ಮಾಡದು. ಎಂಥ ಕೆಸರಿನಲ್ಲೂ ಹೇಗೋ ಬದುಕಿಕೊಳ್ಳುತ್ತಾರೆ. ಅವರುಗಳು ಗುಡಿಸಲು, ಜೋಪಡಿಗಳಿಗಾಗಿ ಅಕ್ಕಪಕ್ಕದ ಮರ ಕತ್ತರಿಸಿದರು, ಕಾಡನ್ನು ಕೊನೆಗಾಣಿಸಿದರು, ಉರುವಲಿಗಾಗಿ ಎಲ್ಲೆಲ್ಲಿಂದೋ ಸೌದೆ ಸರಿ ಮಾಡಿಕೊಂಡರು. ಇವರುಗಳು ನಗರಕ್ಕೆ ದೊಡ್ಡ ಹೊರೆ, ಆದರೆ ಇವರುಗಳಿಲ್ಲದೆ ಯಾವ ಕೂಲಿ ಕೆಲಸ ನಡೆಯದು. ಈ ಹೆಂಗಸರಿಲ್ಲದೆ ಮನೆಗೆಲಸ ಆಗಲ್ಲ. ಈ ಮಂದಿ ಅಮೆಝಾನ್‌, ಸ್ವಿಗ್ಗಿ, ಝೊಮ್ಯಾಟೊಗಳಲ್ಲಿ ದುಡಿಯದಿದ್ದರೆ ನಮ್ಮವರಿಗೆ ಬೆಳಕು ಹರಿಯದು. ಉಳ್ಳವರಿಗೆ ಇವರ ಸೇವೆ ಬೇಕು, ಆದರೆ ಅವರ ಜೀವನಶೈಲಿ ಸುಧಾರಿಸುವ ಉಸಾಬರಿ ಬೇಡ.

ಇವರಿಗೆಲ್ಲ ಬುದ್ಧಿ ಕಲಿಸುವಂತೆ ಪ್ರಕೃತಿ ನಡುನಡುವೆ ಸೇಡು ತೀರಿಸಿಕೊಳ್ಳುತ್ತಿರುತ್ತದೆ. ಬರ, ಪ್ರವಾಹ, ಚಂಡಮಾರುತ, ಕಾಳ್ಗಿಚ್ಚು, ಭೂಕಂಪ…. ಏನು ಬೇಕಾದರೂ ಆಗಬಹುದು. ಪ್ರಕೃತಿಗೆ ಬಡಬಲ್ಲಿದರೆಂಬ ಭೇದವಿಲ್ಲ. ಅದು ಎಲ್ಲರಿಗೂ ಒಟ್ಟಿಗೇ ಹಾನಿ ಮಾಡುತ್ತದೆ.

ಪ್ರವಾಹದ ವೇಗ ತಗ್ಗಿದಾಗ ಕೆಲವು ವಾರಗಳಲ್ಲಿ ಅದು ಮರೆತೂ ಹೋಗುತ್ತದೆ. ಮನೆಗಳ ರಿಪೇರಿ ಹೇಗೋ ಆಗುತ್ತದೆ. ಕೆಲವು ದೊಡ್ಡ ಮೋರಿ ಪೈಪುಗಳು ಬಂದು ಅಲ್ಪಸ್ವಲ್ಪ ಬದಲಾವಣೆ ಆದೀತು. ಇಲ್ಲಿನ ಸಾಲು ಎಂದರೆ, ಬರ ಅಥವಾ ಪ್ರವಾಹ ಇರಲಿ, ಜನ ಇಂದಿಗೂ ಈ ಆಧುನಿಕ ಯುಗದಲ್ಲಿ ಇಷ್ಟು ನಿಸ್ಸಹಾಯಕರೇಕೆ? ಇನ್ನೆಲ್ಲ ಮ್ಯಾನೇಜ್‌ ಮಾಡಲು ನಮಗೆ ಬರುವುದಿಲ್ಲವೇ?

ನಾವು ಅತಿ ಶ್ರೀಮಂತರ ಮಕ್ಕಳು, ನಾವು ಅತಿ ಗಳಿಸುತ್ತೇವೆ ಎಂದಾಗ ಇತರರ ಗೊಡವೆ ನಮಗೇಕೆ…. ಇತ್ಯಾದಿ ಏಕೆ ಭಾವಿಸುತ್ತೇವೆ? ರೋಟರಿ ಕ್ಲಬ್‌, ಲಯನ್ಸ್ ಕ್ಲಬ್‌, ಕಿಟಿ ಪಾರ್ಟಿಗಳಲ್ಲಿ ಈ ಬಗ್ಗೆ ಒಂದಿಷ್ಟು ಭಾಷಣ ಬಿಗಿದರೆ ಎಲ್ಲವು ಸರಿಹೋದೀತು ಎಂದೇಕೆ ಭಾವಿಸುತ್ತೇವೆ?

ನಗರಗಳ ಜವಾಬ್ದಾರಿ ಎಲ್ಲರಿಗೂ ಸೇರಿದ್ದು. ನಗರ ಜೀವನ ಸುಖೀ, ಸುರಕ್ಷಿತ ಆಗಿಸಬೇಕಾದ್ದು ಎಲ್ಲರ ಕರ್ತವ್ಯ. ಎಲ್ಲರಿಗೂ ಒಂದು ಅಂಡರ್‌ ಬೆಲಿ ಇರುತ್ತದೆ, ಆದರೆ ನಮ್ಮಲ್ಲಿ ಪ್ರತಿ ನಗರಕ್ಕೂ ಅಂಡರ್‌ ಬೆಲಿ ಇದ್ದು, ಇದರಲ್ಲಿ ಸ್ಲಮ್ಸ್ ತುಂಬಿವೆ. ಆದರೆ ಒಂದಂತೂ ನಿಜ, ಈ ಅಂಡರ್‌ ಬೆಲಿ ಕೆಟ್ಟಾಗ ಗಬ್ಬುನಾತ ಎಲ್ಲೆಡೆ ಸಮನವಾಗಿ ಹರಡುತ್ತದೆ, ಉದಾ : ಚಳಿಗಾಲದಲ್ಲಿ ದೆಹಲಿ ಹೊಗೆಯಿಂದ ತುಂಬಿಕೊಳ್ಳುವಂತೆ, ಇಡೀ ನಗರ ಉಸಿರಾಡಲಾಗದೆ ಒದ್ದಾಡುತ್ತದೆ.

ಎಚ್ಚರ ತಪ್ಪಿದ್ದೇ ಅಪಘಾತಕ್ಕೆ ಮೂಲ

ಮೊಬೈಲ್‌ನಲ್ಲಿ ಇಡೀ ವಿಶ್ವದ ಸತ್ಯ ಅಡಗಿದೆ ಎಂಬುದೇನೋ ಸರಿ, ಇದರಿಂದ ಏನಾದರೂ ಕೊಳ್ಳಬಹುದು, ಬೇಕಾದ್ದನ್ನು ಮಾರಬಹುದು, ಕುಳಿತ ಕಡೆ ಯಾವ ಸೇವೆ ಬೇಕಾದರೂ ಪಡೆಯಬಹುದು. ಆದರೆ ಇದೇ ಮೊಬೈಲ್ ‌ನಿಮ್ಮ ಅಪ್ರಮಾಣಿಕತೆ, ಖಾಸಗಿ ಜೀವನದ ಅನಾವರಣಗೊಳಿಸುವ ಅತಿ ಸುಲಭ ಸಾಧನವಾಗಿದೆ. ನಿಮ್ಮ ಮೊಬೈಲ್ ‌ನಲ್ಲಿ ಏನೇ ಇರಲಿ, ಬರೆದದ್ದು, ಹೇಳಿದ್ದು, ಪಿಕ್ಚರ್‌ ತೆಗೆದಿದ್ದು, ನೋಡಿದ್ದು ಮಾಡಿದ್ದು…. ಇವೆಲ್ಲ ನಿಮ್ಮನ್ನು ಲೂಟಿ ಮಾಡಲು ಕಾಯುತ್ತಿರುವ ಹೊರಗಿನ ಮಂದಿಗೆ ಸುಲಭವಾಗಿ ತಿಳಿಯುತ್ತದೆ.

ಹೆಂಗಸರಿಗಂತೂ ಇದು ಬ್ಲ್ಯಾಕ್‌ ಮೇಲ್‌, ಜಗಳ, ನೀನಾ ನಾನಾ ಎಂಬ ವಾಗ್ವಾದ, ರಹಸ್ಯ ಬಯಲಾಗುವ ಸಂಭವ….. ಇತ್ಯಾದಿ ಆಗುತ್ತದೆ. ಸಾಮಾನ್ಯವಾಗಿ ಇದೆಲ್ಲ ನಮಗೆ ಗೊತ್ತೇ ಆಗುವುದಿಲ್ಲ. ಏಕೆಂದರೆ ಒಬ್ಬ ಅತಿ ಸಾಮಾನ್ಯ ವ್ಯಕ್ತಿ ಕುರಿತು ಯಾರಿಗೂ ಆಸಕ್ತಿ ಇರುವುದಿಲ್ಲ. ಆದರೆ ಸಮಯ ಬಂದಾಗ ನೀವು ಏನು ಹೇಳಿದ್ದಿರಿ ಎನ್ನುವುದನ್ನು ಹುಡುಕಾಡಲು ಸುಲಭ. ನಿಮ್ಮ ಮೊಬೈಲ್‌ಅಂತೂ ಸದಾ ಸರ್ವದಾ ಆನ್‌ ಆಗಿರುತ್ತದೆ. ರಾತ್ರಿ ಮಲಗಿದಿರಾ ಬಿಟ್ಟಿರಾ, ಯಾವ ಸಂಗಾತಿಗೆ (?) ಏನು ಹೇಳಿದಿರಿ ಎಂಬುದೆಲ್ಲ ಗೊತ್ತಾಗುತ್ತದೆ.

ಮೊಬೈಲ್ ‌ನ್ನು ಆಯುಧ ಆಗಿಸಿಕೊಂಡು, ಈಗೆಲ್ಲ ಅತಿ ಅಗ್ಗದ ಸಾಲ ನೀಡಿ ಪುಸಲಾಯಿಸು ದಂಧೆ ನಡೆಯುತ್ತಿದೆ. ಡೆಲ್ಲಿ ಪೊಲೀಸ್ ಅಂತೂ ಇದೇ ನೆಪದಲ್ಲಿ 3 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ಲೂಟಿ ಹಿಡಿಯಲು ಸಾಧ್ಯವಾಯಿತು. ನಿಮ್ಮ ಕಾಂಟ್ಯಾಕ್ಟ್ ಯಾವುದೇ ದೊಡ್ಡ ಅಂಗಡಿ, ಕಾಂಪ್ಲೆಕ್ಸ್, ಊಬರ್‌, ಸ್ವಿಗ್ಗಿ ಆ್ಯಪ್‌, ಮೆಡಿಕಲ್ ಏನೇ ಇರಲಿ…… ನಿಮ್ಮನ್ನು ಗುರಿ ಆಗಿಸಿಕೊಂಡು 5 ಸಾವಿರದಿಂದ 5 ಲಕ್ಷದವರೆಗೂ ಸಾಲ ನೀಡುವ ಹುನ್ನಾರ ನಡೆಸಬಹುದು.

ದೂರಿನ ಫೋನ್‌ ಕಾಲ್‌, ಕ್ರೆಡಿಟ್‌ ಕಾರ್ಡ್ಸ್ ಇತ್ಯಾದಿಗಳ ನೆಪವೊಡ್ಡಿ ಕಂಪ್ಯೂಟರ್‌ ಮೂಲಕ ಹಣ ಬೇಕಿರುವವರ ಪಟ್ಟಿ ಬೇರೆ ಮಾಡಬಹುದು. ಇಂಥವರಿಗೆ ಫೋನ್‌ ಮಾಡಿ ಆಕರ್ಷಕ ಮಾತಿನ ಜಾಲ ಬೀಸಲಾಗುತ್ತದೆ. ಒಂದು ಆ್ಯಪ್‌ ಮೂಲಕ ಮಾಹಿತಿ ನೀಡಿ, ಪ್ಯಾನ್‌ ಕಾರ್ಡ್‌, ಬ್ಯಾಂಕ್‌ ಅಕೌಂಟ್‌ ನಂಬರ್‌, ನೋಟ್‌ ಮಾಡಿ, ಪರ್ಮಿಶನ್‌ ನೀಡಿ….. ಹಣ ಸಿಕ್ಕಿಯೇ ಬಿಟ್ಟಿತು! ಯಾವುದೇ ದಸ್ತಾವೇಜು ಬೇಡ, ಡಾಕ್ಯುಮೆಂಟ್ಸ್ ಬೇಡ…. ಇದು ಸಾಲದ ಜೇಡರ ಬಲೆಯೇ ಸರಿ.

ಇದಾದ ಮೇಲೆ ವಸೂಲಿಯ ವರಾತ ಶುರುವಾಗುತ್ತದೆ. 50 ಸಾವಿರದ ಸಾಲಕ್ಕೆ ಬಡ್ಡಿ  ಚಕ್ರಬಡ್ಡಿ ಸೇರಿ ಸೇರಿ 45 ಲಕ್ಷದವರೆಗೂ ಕಟ್ಟಬೇಕಾಗುತ್ತದೆ. ಸಾಲ ಪಡೆದರ ಎಲ್ಲ ನೆಂಟರು, ಇಷ್ಟರು, ಕಾಂಟ್ಯಾಕ್ಟ್ ನವರಿಗೆಲ್ಲ ಇವರ ಸಾಲದ ಕಥೆ ಆ್ಯಪ್‌ ಕಾರಣ ಟಾಂ ಟಾಂ ಆಗಿಹೋಗಿರುತ್ತದೆ. ಪಬ್ಲಿಕ್‌ ಆಗಿ ಮಾನ ಹೋಯ್ತು. ಹೀಗಾಗಿ ಸಾಲ ಪಡೆದವರು ಅನಿವಾರ್ಯವಾಗಿ ತಮ್ಮ ಎಲ್ಲಾ ಆನ್‌ ಲೈನ್‌ ವ್ಯವಹಾರ, ಮೊಬೈಲ್ ನಂಬರ್‌ ಇತ್ಯಾದಿ ಬದಲಾಯಿಸಬೇಕಾಗುತ್ತದೆ.

ಕೋಲ್ಕತಾದ ಒಬ್ಬ ಟೀಚರ್‌ ಗೆ ಅಲ್ಲಿನ ವೈಸ್‌ ಚಾನ್ಸೆಲರ್‌ ನೌಕರಿಯಿಂದಲೇ ತೆಗೆದು ಹಾಕಿದರು, ಏಕೆಂದರೆ ಅವರ ಇನ್ ಸ್ಟಾಗ್ರಾಂನಲ್ಲಿ ಸ್ವಿಮ್ ಸೂಟಿನ ಫೋಟೋಗಳಿದ್ದಂತೆ! 21 ದಾಟಿದ ಆ ಯುವತಿ ಸ್ವಿಮ್ ಸೂಟ್‌ ಧರಿಸುವುದು, ಬಿಡುವುದು ಅವರವರ ವೈಯಕ್ತಿಕ ವಿಚಾರವಲ್ಲವೇ? ಆದರೆ ಇದು ಜಗಜ್ಜಾಹೀರು ಆಗಿದ್ದರಿಂದ ಅವರನ್ನು ಕೆಲಸದಿಂದ ವಜಾ ಮಾಡಲಾಯಿತು. ಇದು ಅವರ ಅಪರಾಧಾಯ್ತು.

ಯಾರೋ ಪರಿಚಿತರೊಂದಿಗೆ ಎಲ್ಲೋ ತೆಗೆಸಿಕೊಂಡ ಒಂದು ಸೆಲ್ಛಿ, ಇಂದು ಆಪತ್ತಿಗೆ ಆಹ್ವಾನ! ಅದು 4 ದಿನ ಅಥವಾ 4 ವರ್ಷ ಆಗಿರಬಹುದು.

ಇಂದು ಗಲ್ಲಿಗಲ್ಲಿಗಳಲ್ಲೂ ಹಾಕಿರುವ ವ್ಯೂವ್ ಕ್ಯಾಮೆರಾಗಳು ನಾಗರಿಕರನ್ನು ಕಾಪಾಡುತ್ತಾ ಇರಬಹುದು, ಆದರೆ ಮಾಮೂಲಿ ಒಬ್ಬ ನಾಗರಿಕನಿಗೆ ಸದಾ ಹೆಡ್‌ ಮಾಸ್ಟರ್‌ ರೂಲ್ ‌ದೊಣ್ಣೆ ಹಿಡಿದು ಬೆನ್ನ ಹಿಂದೆ ನಿಂತಿರುವಂತಿರುತ್ತದೆ. ಯಾರ ಮನೆಯ ಕೌಟುಂಬಿಕ ಕಲಹ ಈ ಕ್ಯಾಮೆರಾದಲ್ಲಿ ಕೈದಾಗಿರುತ್ತದೋ ತಿಳಿಯದು. ನಂತರ ಅದಂತೂ ಸಾರ್ವಜನಿಕ ಆಗೇ ಆಗುತ್ತದೆ. ವಾಟ್ಸ್ ಆ್ಯಪ್‌, ಟ್ವಿಟರ್‌, ಇನ್‌ ಸ್ಟಾಗ್ರಾಂ ಅಥವಾ ಪೋರ್ನ್‌ ಸೈಟ್‌ ವರೆಗೂ ಈ ಫೋಟೋ ವಿಶ್ವದ ಮೂಲೆ ಮೂಲೆಗೂ ತಲುಪಬಹುದು.

ನಿಮ್ಮನ್ನು ನೀವು ಸುರಕ್ಷಿತವಾಗಿ ಇರಿಸಬಯಸಿದರೆ ಸ್ಮಾರ್ಟ್‌ ಫೋನ್‌, ಎಲ್ಲಕ್ಕಿಂತಲೂ ಅತಿ ಅಗ್ಗದ ಕೇವಲ ಮಾತಿಗೆ ಸೀಮಿತವಾದ ಫೋನ್‌ ಕೊಳ್ಳಿರಿ. ಇದರಿಂದ ನಿಮಗೆ ತುಸು ಕಷ್ಟ ಆಗಬಹುದು, ಹೆಚ್ಚಿನ ಮಾಹಿತಿ ಸಿಗದಿರಬಹುದು, ಆದರೆ ನಿಮ್ಮ ಜೀವನ ನಿಮ್ಮದೇ ಆಗಿರುತ್ತದೆ. ಚೀನಾ, ಅಮೆರಿಕಾದ ಕ್ಲೋಸ್ಡ್ ಸರ್ವರ್ ಗಳಲ್ಲವಲ್ಲ!

ಇದೆಂಥ ಆಧುನಿಕತೆ?

ಯಾವುದೋ ಗೊಡ್ಡು ಸಂಪ್ರದಾಯ, ಕಂದಾಚಾರಗಳನ್ನು ಪಾಲಿಸುವುದು ಭಾರತೀಯರಿಗೆ ಒಂದು ಹೊಸ ಜೀವನಶೈಲಿಯೇ ಆಗಿಹೋಗಿದೆ. ಯಾರು ಉತ್ತಮ ತಾರ್ಕಿಕರು, ವೈಜ್ಞಾನಿಕ ವಿಚಾರಧಾರೆಯುಳ್ಳವರು ಆಗಿರುತ್ತಾರೋ, ಅವರೂ ಸಹ ತಮ್ಮ ಮೂಲ ಪ್ರದರ್ಶಿಸಲು ಅರ್ಧ ಆಧುನಿಕರು, ಅರ್ಧ ಕಂದಾಚಾರಿಗಳೂ ಆಗಿರುತ್ತಾರೆ.

ಒಂದು ಉದಾ: ಗಮನಿಸಿ. ಇಬ್ಬರು ಹುಡುಗಿಯರು ಅಪ್ಪಟ ತಮಿಳು ಅಯ್ಯರ್‌ ಸ್ಟೈಲ್ ‌ನಲ್ಲಿ ಮದುವೆ ಆದರು! ಇವರಲ್ಲಿ ಒಬ್ಬಳು ತಮಿಳುನಾಡಿನ ಅಪ್ಪಟ ಸಾಂಪ್ರದಾಯಿಕ ಅಯ್ಯರ್‌ ಹುಡುಗಿ, ಇನ್ನೊಬ್ಬಳು ಬಾಂಗ್ಲಾದೇಶಿ. ಇಬ್ಬರೂ ಕೆನಡಾದ ಕೆಲಗರಿ ನಗರದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿನ ಡೇಟಿಂಗ್‌ ಆ್ಯಪ್‌ ನಲ್ಲಿ ಇಬ್ಬರೂ ಭೇಟಿ ಆದರು.

6 ವರ್ಷಗಳ ಕಾಲ ಒಟ್ಟೊಟ್ಟಿಗೆ ಲಿವ್ ‌ಇನ್‌ ಇದ್ದು, ನಂತರ ಮದುವೆಯಾಗಲು ನಿರ್ಧರಿಸಿದಾಗ, ಭಾರತದಲ್ಲಿ ಲೆಸ್ಪಿಬಿಯನ್‌ ವಿವಾಹ ನಿಷಿದ್ಧವಾದ್ದರಿಂದ, ತಂದೆಯ ಮಡಿಲಲ್ಲಿ ಮಗಳು ಕುಳಿತು ಕನ್ಯಾದಾನ ಮಾಡುವಂತೆ ಈ ಮದುವೆಯೂ ಸಾಂಗೋಪಾಂಗವಾಗಿ ನಡೆಯಿತು. ಕನ್ಯಾದಾನದ ಈ ಪರಂಪರೆ ಅಪ್ಪಟ ಪೌರಾಣಿಕವೇ ಸರಿ. ಇದನ್ನು ಕೆನಡಾದಂಥ ಕಡೆ ಅದೂ ಲೆಸ್ಬಿಯನ್‌ ವಿವಾಹಕ್ಕೆ ಬಳಸಿದ್ದು….. ಅಪ್ಪಟ ಸ್ಪುಪಿಡಿಟಿ ಅಲ್ಲವೇ?

ವಿದೇಶಗಳಲ್ಲಿ ವಾಸಿಸುವ ಭಾರತೀಯರು ಬ್ರಾಹ್ಮಣ, ವೈಶ್ಯರಾಗಿದ್ದರೆ ತಮ್ಮ ಮಹತ್ವ ಪ್ರದರ್ಶಿಸಲು, ತಮ್ಮ ಪರಿಚಿತರೆದುರು ಇಂಥ ಸಾಂಪ್ರದಾಯಿಕ ನಾಟಕ ಪ್ರದರ್ಶಿಸಿ ನಮ್ಮ ಸಂಸ್ಕೃತಿ ನೋಡಿ ಎಂದು ಹೆಮ್ಮೆ ಪಡುತ್ತಾರೆ. ಈ ಮಹಾನ್‌ ಭಾರತದ ಕೊಳಕು, ದುರ್ವಾಸನೆ, ನಿರುದ್ಯೋಗ, ಭ್ರಷ್ಟಾಚಾರ, ಇತರ ಗೋಳನ್ನೆಲ್ಲ ಮರೆತು ವಿದೇಶದಲ್ಲಿ ಹೊಟ್ಟೆ ಹೊರೆಯಲು ಹೋದದ್ದು ನೆನಪಿಗೇ ಬಾರದು. ಅಲ್ಲಿ ಯಶಸ್ಸು ಕಂಡದ್ದೇ ತಮ್ಮ ಹಳೆಯ ನಾಟಕಗಳನ್ನು ಮುಂದುವರಿಸುತ್ತಾರೆ. ಏಕೆಂದರೆ ತಮ್ಮ ಐಡೆಂಟಿಟಿ ಪ್ರದರ್ಶಿಸಲು ಈ ಸ್ಟಂಟ್‌ ಅನಿವಾರ್ಯ ಎನಿಸುತ್ತದೆ.

ಸುಬಿಶ್ರಾ ಟೀನಾರ ಈ ಮದುವೆಯಲ್ಲಿ ಮಗಳನ್ನು ವರ(?)ನಿಗೆ ಕೂರ್ಮ ಪುರಾಣದ 8ನೇ ಅಧ್ಯಾಯದಲ್ಲಿ ವರ್ಣಿತ ಕಥೆಯಂತೆ, ದಕ್ಷ ಪ್ರಜಾಪತಿ ಪತ್ನಿ ಪ್ರಸೂತಿಯೊಂದಿಗೆ 24 ಕನ್ಯೆಯರ ಪಿತ ಎನಿಸಿ, ಅವರಲ್ಲಿ 13 ಮಂದಿಯನ್ನು ಧರ್ಮಾಧಿಕಾರಿ ಚ್ಯವನ ಖುಷಿಗೆ ಧಾರೆ ಎರೆದ. ಇತರ 11 ಮಂದಿಯನ್ನು ಭೃಗು, ಮರೀಚಿ, ಅಂಗೀರಸ, ಪುಲಸ್ತ್ಯ ಪುಲಹಕೃತು, ಅತ್ರಿ ಹಾಗೂ ವಸಿಷ್ಠರಿಗೆ ಧಾರೆ ಎರೆದುಕೊಟ್ಟ.

ಇದೇ ತರಹದ ಕನ್ಯಾದಾನವನ್ನು ಕೆನಡಾದ ಆ ತಮಿಳು ಬ್ರಾಹ್ಮಣ ಪರಿವಾರ ಲೆಸ್ಬಿಯನ್‌ ವಿವಾಹದಲ್ಲೂ ಪ್ರದರ್ಶಿಸಿ ಯಾವ ಮಹಾನ್‌ ಘನಕಾರ್ಯ ಸಾಧಿಸಿತು? ಪೌರಾಣಿಕ ಗ್ರಂಥಗಳು ಸಾವಿರಾರು ಕಪೋಲ ಕಲ್ಪಿತ ಕಥೆಗಳಿಂದ ತುಂಬಿವೆ. ಆದರೆ ಅವನ್ನು ಇಂದಿನ ವೈಜ್ಞಾನಿಕ ನಿಟ್ಟಿನಲ್ಲೂ ಫಾಲೋ ಮಾಡುವುದು ಎಷ್ಟು ಸರಿ? ಕೆನಡಾದ ಮಂದಿ ಇಂಥ ಹುಚ್ಚಾಟಗಳಿಗೆ ಏನೊಂದೂ ಭಾವಿಸದೆ ತೆಪ್ಪಗಿರುತ್ತಾರೆ. ಇಬ್ಬರ ವಿದೇಶಿ ಫ್ರೆಂಡ್ಸ್ ಇದನ್ನು ಕಂಡು ಚಪ್ಪಾಳೆ ತಟ್ಟಿ ಮೆಚ್ಚುಗೆ ಬೇರೆ ವ್ಯಕ್ತಪಡಿಸಿದ್ದು ವಿಡಂಬನೆಯೇ ಸರಿ.

ಇದೇ ತರಹದ ಪುರಾಣಗಳಲ್ಲಿ ಮತ್ತೆ ಮತ್ತೆ ನಾರಾಯಣನ ಬಾಯಿಂದ, ವರ್ಣಾಶ್ರಮ ಧರ್ಮ ಪಾಲಿಸಿದಾಗ ಮಾತ್ರ ಮೋಕ್ಷ ಪಾಪ್ತಿ ಎಂದು ಹೇಳಿಸಲಾಗಿದೆ. ತಮ್ಮ ಜಾತಿಯ ಶ್ರೇಷ್ಠತೆಯನ್ನು ಕೆನಡಾದಲ್ಲೂ ಎಸ್ಟಾಬ್ಲಿಶ್‌ ಮಾಡುವ ಇಂಥ ನಾಟಕಗಳಿಗೆ ಏನೆನ್ನಬೇಕು? ವಿದೇಶಗಳಲ್ಲಿ ಭಾರತೀಯರು ಇವನ್ನು ಬೇಕೆಂದೇ ವೈಭವದಿಂದ ಆಚರಿಸುತ್ತಾರೆ. ಇದನ್ನು ಕೆಲಗೆರಿಯ ಪರಿವಾರದ ಮಂದಿಯ ಮೂಢನಂಬಿಕೆ ಎನ್ನದೆ ಬೇರೆ ದಾರಿ ಇಲ್ಲ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ