ನನ್ನ ಮದುವೆಯಾದಾಗಿನ ಸಂಗತಿ. ನನ್ನ ಗಂಡ ಬೆಳಗ್ಗೆ ಬೆಳಗ್ಗೆಯೇ ಎಲ್ಲೋ ಹೊರಟಿದ್ದರು. ಅವರು ಹೋಗುತ್ತಿರುವುದನ್ನು ನೋಡಿ ನಾನು ಹಿಂದೆ ಹಿಂದೆಯೇ ಧಾವಿಸಿದೆ ಹಾಗೂ ಅವರನ್ನು ಕೂಗಿ ಕೂಗಿ ಕರೆದು, ``ನೀವು ಎಲ್ಲಿಯಾದರೂ ಹೊರಟಿದ್ದೀರಾ?'' ಎಂದು ಕೇಳಿದೆ.

ಇಷ್ಟು ಕೇಳುತ್ತಿದ್ದಂತೆ ಅವರು ಕ್ರೋಧಕ್ಕೊಳಗಾದರು ಹಾಗೂ ಕೋಪದಿಂದಲೇ, ``ಈ ರೀತಿಯಾಗಿ ಹಿಂದಿನಿಂದ ಬಂದು ಏಕೆ ಕೂಗುತ್ತಿರುವೆ?'' ಎಂದು ಕೇಳಿದರು.

ಮೂರ್ಖಳಾದ ನಾನು ಆಗಲೂ ಅರ್ಥ ಮಾಡಿಕೊಳ್ಳದೆ ಅವರ ಎದುರಿಗೆ ಹೋಗಿ, ``ಈಗ ಹೇಳಿ, ನೀವು ಹೊರಟಿರುವುದಾದರೂ ಎಲ್ಲಿಗೆ?'' ಎಂದು ಕೇಳಿದೆ.

ಅವರು ನನ್ನನ್ನು ಹೇಗೆ ದಿಟ್ಟಿಸಿ ನೋಡಿದರೆಂದರೆ, ನಾನು ಯಾರನ್ನೋ ಕೊಲೆ ಮಾಡಿದ್ದೇನೆ ಎಂಬಂತೆ. ಆದರೆ ಅವರು ನನ್ನನ್ನು ಹಾಗೇಕೆ ನೋಡಿದರೆಂದು ತಿಳಿಯಲಿಲ್ಲ.

2 ಗಂಟೆ ನಂತರ ಅವರು ಮನೆಗೆ ವಾಪಸ್‌ ಬಂದಾಗ, ಸಾಕಷ್ಟು ಗರಂ ಆಗಿದ್ದರು. ``ನೀನು ಮಹಾ ಮೂರ್ಖ ಹೆಂಗಸು. ಯಾರಾದರೂ ಕೆಲಸಕ್ಕೆಂದು ಹೊರಟು ನಿಂತಾಗ, ಅವರ ಹಿಂದೆ ಹಿಂದೆ ಬಂದು ಕೂಗಬಾರದು ಎಂದು ನಿನಗೆ ಗೊತ್ತಿಲ್ವಾ? ನೀನು ಹಿಂದೆ ಬಂದು ಕೂಗಿದ್ದರಿಂದ ನಾನು ಹೋದ ಕೆಲಸ ಆಗಲಿಲ್ಲ,'' ಎಂದು ಕೋಪದಿಂದ ಹೇಳಿದರು.

dharm-aur-andhvishwas1

ಇದೆಂಥ ಮೂಢನಂಬಿಕೆ? ನಾನು ಕೂಗಿ ಕರೆದಿದ್ದರಿಂದ ಅವರ ಕೆಲಸ ಆಗಲಿಲ್ಲವಂತೆ, ಅದ್ಹೇಗೆ? ಒಂದು ವೇಳೆ ಯಾರದ್ದಾದರೂ ಕೆಲಸ ಆಗಬಾರದೆಂದರೆ ಹಿಂದಿನಿಂದ ಕೂಗಿದರೆ ಸಾಕೆ? ಕೆಲವರಿಗೆ ಇದೇ ಒಂದು ಅಸ್ತ್ರ ಆಗುತ್ತಲ್ವೇ?

ಪೂಜೆ ಪುನಸ್ಕಾರ ಮಾಡುವವರು ಅದೆಷ್ಟು ಇದ್ದಾರೆಂದರೆ, ಬೆಳಗ್ಗೆ, ಸಂಜೆ ಎರಡೆರಡು ಗಂಟೆ ದೊಡ್ಡ ಧ್ವನಿಯಲ್ಲಿ ಮಂತ್ರ ಹೇಳುತ್ತಾ ಪೂಜೆ ನಡೆಸುತ್ತಿರುತ್ತಾರೆ. ಕಷ್ಟಪಟ್ಟು ದುಡಿದ ಹಣ ಪಂಡಿತರು ಪುರೋಹಿತರ ತಟ್ಟೆಗೆ ಹೋಗಿಬಿಡುತ್ತದೆ. ಯಾರಾದರೂ ಬಡವ ಬಂದು ಒಂದು ರೂ. ಕೇಳಿದರೆ ಅವನತ್ತ ತಿರಸ್ಕಾರದಿಂದ ನೋಡುತ್ತಿರುತ್ತಾರೆ. ಗಂಡ ಅತ್ತೆ ಯಾವಾಗ ನೋಡಿದರೂ ಪುರೋಹಿತರ ಹೊಟ್ಟೆ ತುಂಬಿಸುತ್ತಿರುತ್ತಾರೆ.

ದೀರ್ಘ ಉಪದೇಶ

ತಡೆಯುವ ಪ್ರಯತ್ನ ಮಾಡಿದಾಗ ದೀರ್ಘ ಉಪದೇಶ ಸಿಗುತ್ತದೆ. ಬ್ರಾಹ್ಮಣರಿಗೆ ದಾನ ಕೊಡಬೇಕೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಬ್ರಾಹ್ಮಣರಿಗೆ ಎಷ್ಟು ಹೆಚ್ಚೆಚ್ಚು ದಾನ ಮಾಡುತ್ತೀರೊ ಅಷ್ಟು ಹೆಚ್ಚು ಪುಣ್ಯ ಸಿಗುತ್ತದೆ. ಅದರಿಂದ ನನಗೆ ಎಷ್ಟು ಲಾಭವಾಗುತ್ತೋ ಗೊತ್ತಿಲ್ಲ. ಆದರೆ ಪಂಡಿತರು ಪುರೋಹಿತರಿಗೆ ಮಾತ್ರ ಖಂಡಿತ ಲಾಭ ಸಿಗುತ್ತದೆ. ಅವರ ಬೊಜ್ಜು ಹೊಟ್ಟೆಯನ್ನು ನೋಡಿದರೆ ಅದು ಸ್ಪಷ್ಟವಾಗುತ್ತದೆ. ಜನ ಅವರಿಗೆ ಹೇಗೆ ಅಷ್ಟು ಬೇಗ ಮೂರ್ಖರಾಗುತ್ತಾರೋ ಗೊತ್ತಿಲ್ಲ.

ಇಂದಿನ ಆಧುನಿಕ ಯುಗದಲ್ಲಿ ನಾವು ಆಧುನೀಕರಣದ ವೇಷಭೂಷಣ ಮಾತ್ರ ಧರಿಸುತ್ತೀದ್ದೇವೆ. ನಮ್ಮ ಮಾನಸಿಕತೆ ಹಿಂದೆ ಹೇಗಿತ್ತೋ, ಹಾಗೆಯೇ ಇದೆ. ಇದು ನಿಜಕ್ಕೂ ಆಶ್ಚರ್ಯವನ್ನುಂಟು ಮಾಡುತ್ತದೆ. ಬದಲಾಗುತ್ತಿರುವ ಕಾಲದ ಜೊತೆಗೆ ನಾವು ನಮ್ಮ ಯೋಚನೆಯ ಧಾಟಿಯನ್ನು ಮಾತ್ರ ಬದಲಿಸಿಕೊಳ್ಳುತ್ತಿಲ್ಲ. ಇದರ ಸಂಪೂರ್ಣ ಯಶಸ್ಸು ಇಂದಿನ ಮೀಡಿಯಾ ಚಾನೆಲ್ ಗಳಿಗೆ ಸಲ್ಲುತ್ತದೆ. ಅವು ಇಡೀ ದಿನ ಮೂಢನಂಬಿಕೆಗಳನ್ನು ಪಸರಿಸುತ್ತಿರುತ್ತವೆ.

ಪ್ರತಿದಿನ ಚಾನೆಲ್ ‌ಗಳಲ್ಲಿ ಇಂತಹ ಕಾರ್ಯಕ್ರಮಗಳು ಹೇರಳವಾಗಿ ಪ್ರಸಾರವಾಗುತ್ತಿರುತ್ತವೆ. ಅವನ್ನು ನೋಡುವ ಪ್ರೇಕ್ಷಕರ ಸಂಖ್ಯೆ ಕಡಿಮೆ ಏನಿಲ್ಲ. ಅದೊಂದು ದಿನ ನನ್ನ ಅತ್ತೆಗೆ ಹಸುವೊಂದು ತನ್ನ ಕೋಡುಗಳಿಂದ ಇರಿಯುತ್ತಿರುವ ಕನಸು ಕಾಣಿಸಿತು. ಅದನ್ನು ಕಂಡು ಅವರಿಗೂ ಭೂಕಂಪವಾದಂತೆ ಭಾಸವಾಯಿತು. ಪುರೋಹಿತರಿಗೆ ಬುಲಾವ್ ‌ಹೋಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ