ಮೂಲತಃ ಕುಂದಾಪುರ ತಾಲ್ಲೂಕು ಅಂಪಾರು ಗ್ರಾಮದವರಾದ ಆರ್‌. ವಿದ್ಯಾಧರ್‌ ಹಾಗೂ ಶೋಭಾ ವಿ.ಎಸ್‌ ದಂಪತಿಯವರ ಸುಪುತ್ರಿಯಾಗಿ ಪ್ರಿಯಾ ಕೆ.ವಿ. ದಿನಾಂಕ. 2002ರಲ್ಲಿ ಜನಿಸಿದರು. ಪ್ರಸ್ತುತ ಬಿ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ.

ಸಂಗೀತ ಕ್ಷೇತ್ರದಲ್ಲಿ ಮಗಳಿಗಿದ್ದ ಅಪಾರ ಆಸಕ್ತಿಯನ್ನು ಮನಗಂಡ ತಾಯಿ ಶೋಭಾ ಮೈಸೂರಿನ ಶಾರದಾ ಕಲಾ ಕೇಂದ್ರ ಎಂಬ ಶಾಲೆಗೆ ಸೇರಿಸಿದರು. ಅಂದಿನಿಂದ ವಿದುಷಿ ರೇಖಾ ವೆಂಕಟೇಶ್‌ ಮಾರ್ಗದರ್ಶನದಲ್ಲಿ ಪ್ರಿಯಾ ಕರ್ನಾಟಕ ಶಾಸ್ತ್ರೀಯ ಸಂಗೀತ, ಜಾನಪದ ಗೀತೆ ಹಾಗೂ ಸುಗಮ ಸಂಗೀತವನ್ನು ಅಭ್ಯಸಿಸುತ್ತಿದ್ದಾರೆ.

ಸಂಗೀತ ಕ್ಷೇತ್ರದಲ್ಲಿ ಗುರು ವಿದುಷಿ ರೇಖಾ ವೆಂಕಟೇಶ್‌ ಪ್ರಿಯಾರಿಗೆ ಹೆಚ್ಚಿನ ಪ್ರೋತ್ಸಾಹ, ಸಹಕಾರ ನೀಡುತ್ತಿದ್ದಾರೆ. ಶಾಲಾ ಕಾಲೇಜು ಶಿಕ್ಷಕರು, ಕುಟುಂಬ ವರ್ಗದವರು ಇವರಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಅಪರಿಮಿತ ಸಾಧನೆಯ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಯುವ ಪ್ರತಿಭೆ ಪ್ರಿಯಾ, ಇತ್ತೀಚೆಗೆ ತಮ್ಮ ಪ್ರೀತಿಪಾತ್ರ ತಾಯಿಯವರನ್ನು ಕಳೆದುಕೊಳ್ಳಬೇಕಾಯಿತು. ಅನಾರೋಗ್ಯದಿಂದ ಪ್ರಿಯಾ ತಾಯಿ ಶೋಭಾ ನಿಧನರಾದರು. ತಾಯಿಯ ಅನನ್ಯ ಪ್ರೀತಿ ವಾತ್ಸಲ್ಯದಿಂದ ವಂಚಿತರಾಗಬೇಕಾದ ಪರಿಸ್ಥಿತಿ ಬಂದಿದ್ದರೂ ಪ್ರಿಯಾ ಅದನ್ನು ಲೆಕ್ಕಿಸದೇ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿ ಇನ್ನೂ ಹೆಚ್ಚಿನ ಕೀರ್ತಿ ಮತ್ತು ಯಶಸ್ಸು ಸಂಪಾದಿಸಲು ಅನವರತ ಶ್ರಮಿಸುತ್ತಿದ್ದಾರೆ.

ಪ್ರಿಯಾ ಪ್ರಸ್ತುತ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಸೀಝನ್‌ರ ಸ್ಪರ್ಧಿಯಾಗಿ ಮೈಸೂರನ್ನು ಪ್ರತಿನಿಧಿಸಿ ಸೆಮಿ ಫೈನಲ್ ಹಂತಕ್ಕೆ ತಲುಪಿದರು. ಹಾಗೆಯೇ ವಾಯ್ಸ್ ಆಫ್‌ ಕರ್ನಾಟಕ 2018ರ ರನ್ನರ್‌ ಅಪ್‌ ಕೂಡ ಆಗಿದ್ದಾರೆ. ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ 200ಕ್ಕೂ ಹೆಚ್ಚು ಬಹುಮಾನಗಳನ್ನು ಗಳಿಸಿದ್ದಾರೆ. 30ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಪ್ರಿಯಾ ಪಡೆದ ಬಹುಮಾನಗಳು

ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ. 2011-12, 2013-14, 2015-16, 2017-18, 2019-20ನೇ ಸಾಲಿನ ಕ್ಲಸ್ಟರ್‌. ತಾಲ್ಲೂಕು, ಜಿಲ್ಲಾ ವಿಭಾಗ ಮತ್ತು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳಲ್ಲಿ ಭಾಗವಹಿಸಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆದಿರುತ್ತಾರೆ. ಮೈಸೂರಿನ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ನಡುವೆ ರಾಜ್ಯ ಮಟ್ಟದ ಭಾವಗೀತೆ ಸ್ಪರ್ಧೆಗಳಲ್ಲಿ 2011-2020ರವರೆಗೆ ನಿರಂತರವಾಗಿ ಭಾಗವಹಿಸಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿರುತ್ತಾರೆ. ಮೈಸೂರಿನ ಸಮರ್ಪಣಾ ಟ್ರಸ್ಟ್ ನ 2013-14, 2015-16ರ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಮೈಸೂರಿನ ರೋಟರಿ ಸಂಸ್ಥೆ, ಅಮರಕಲಾ ಸಂಘ, ಸಂಗೀತ ಗಂಗಾ, ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ, ಜನಚೇತನ ಟ್ರಸ್ಟ್, ಕಲ್ಪವೃಕ್ಷ ಟ್ರಸ್ಟ್, ಸ್ನೇಹ ಸಿಂಚನ ಟ್ರಸ್ಟ್, ಶ್ರೀಕೃಷ್ಣ ಗಾನಸಭಾ, ದಿ. ಇನ್‌ಸ್ಟಿಟ್ಯೂಟ್‌ ಆಫ್‌ಎಂಜಿನಿಯರ್ಸ್, ಕನಕದಾಸ ಜಂಯತೋತ್ಸವ, ವಿವೇಕಾನಂದ ಕೇಂದ್ರ, ಕನ್ಯಾಕುಮಾರಿ (ಕರ್ನಾಟಕ ವಿಭಾಗ), ಯಶು ಚಿಲ್ಡ್ರನ್‌ಕಲ್ಚರ್‌ ಅಕಾಡೆಮಿ, ಅರೋರಾ ಎಜುಕೇಶನ್‌ ಟ್ರಸ್ಟ್ ನವರು ನಡೆಸಿದ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆದಿರುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ