ಹುಟ್ಟೂರು ಚೆನ್ನೈ, ಬಾಲ್ಯ, ಓದು ಅಲ್ಲಿಯೇ. ಅಲ್ಲಿನ ಕೇಂದ್ರೀಯ ವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ಚಿಕ್ಕಂದಿನಿಂದಲೂ ಭರತನಾಟ್ಯದಲ್ಲಿ ಆಸಕ್ತಿ, ಒಳ್ಳೆಯ ನಾಟ್ಯ ಕಲಾವಿದೆ, ಸಾಕಷ್ಟು ಕಾರ್ಯಕ್ರಮಗಳನ್ನೂ ಸೃಷ್ಟಿಸಿಕೊಟ್ಟಿದ್ದಾರೆ. ಕಲಾವಂತಿಕೆಯ ಜೊತೆಗೆ ಸೇವಾ ಮನೋಭಾವ ಕೂಡಾ, ಬಾಲ್ಯದಿಂದಲೂ ಅನೇಕ ಸೇವಾ ಸಂಸ್ಥೆಯ ನೆಂಟಸ್ತಿಕೆ ಹೊಂದಿದ್ದರು. ಮದುವೆಯ ನಂತರ ಬೆಂಗಳೂರಿಗೆ ಆಗಮನ. ಮೊದಲಿನಿಂದಲೂ ಇದ್ದ ಆಸೆ, ಈಗ ಮೊಳಕೆ ಒಡೆಯಿತು.

ಯುವಜನತೆಯನ್ನು ಕಂಡಾಗೆಲ್ಲಾ ರೇಖಾರಲ್ಲಿ ಮೂಡುತ್ತಿದ್ದ ಭಾವ, `ಅವರೊಂದಿಗೆ ಬೆರೆಯಬೇಕು. ಯೌವನವೆಂದರೆ ಬರಿಯ ಮಜಾ ಅಲ್ಲ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿ ಕೊಡಬೇಕು. ಜೀವನದಲ್ಲಿ ಒಮ್ಮೆಯಾದರೂ ತಮ್ಮ ದೇಶ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ ತಮ್ಮಲ್ಲಿರುವ ಅಪಾರ ಶಕ್ತಿಯ ಅರಿವನ್ನು ಮೂಡಿಸಬೇಕು.'

ಯುವ ಜನತೆಯಲ್ಲಿ ಮೌಲ್ಯಗಳು

ಅವರಲ್ಲಿ ಮೌಲ್ಯಗಳನ್ನು ತುಂಬಿ ಅದನ್ನು ಬೀಜದ ರೂಪದಲ್ಲಿ ಹುಟ್ಟುಹಾಕಿದಾಗ ಅದು ಎಲ್ಲರಿಗೂ ನೆರಳು ನೀಡುವ ಮರವಾಗಬಹುದೆನ್ನುವುದು ರೇಖಾರವರ ಆಸೆ. ಇದೊಂದು  ರೀತಿಯ ವ್ಯಕ್ತಿತ್ವ ವಿಕಸನ ಎನ್ನಬಹುದು. ಯುವ ಜನಾಂಗ ತಮ್ಮಲ್ಲಿರುವ ಸಕಾರಾತ್ಮಕ ಭಾವನೆಗಳನ್ನು ಅರಿತು ವೃದ್ಧಿಪಡಿಸಿಕೊಳ್ಳಬೇಕು. ಹುಟ್ಟಿದ ದೇಶದ ಮಣ್ಣಿನ ಗುಣ ಎಲ್ಲರಲ್ಲೂ ಇರುತ್ತದೆ. ಅವರಲ್ಲಿ ದೇಶದ ಬೇರುಗಳ ಬಗ್ಗೆ ಅರಿವು ಮೂಡಿದಾಗ ಭವಿಷ್ಯವನ್ನು ಕಟ್ಟುವಲ್ಲಿ ಉತ್ಸಾಹ ಹೆಚ್ಚಾಗುತ್ತದೆ. ಆಗಲೇ ಅವರು ತಮ್ಮ ವ್ಯಕ್ತಿತ್ವವನ್ನು ಬಲಪಡಿಸಿಕೊಳ್ಳುವುದರ ಜೊತೆಗೆ ದೇಶದ ಬಗ್ಗೆಯೂ ಒಲವು ಮತ್ತು ಅಭಿಮಾನವನ್ನು  ಬೆಳೆಸಿಕೊಳ್ಳಲು ಸಾಧ್ಯ. ರೇಖಾರಲ್ಲಿ ಈ ಭಾವನೆಗಳ ಒತ್ತಡ ಮೊಳಕೆಯೊಡೆದು `ದಿಶಾ' ಸಂಸ್ಥೆಯ ಹುಟ್ಟಿಗೆ ಕಾರಣವಾಯಿತು.

ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಬಹಳ ಹತ್ತಿರದಿಂದ ನೋಡಿರುವ ರೇಖಾ, ಈ ಇಬ್ಬರ ಬೇಕುಗಳನ್ನು ಅರ್ಥ  ಮಾಡಿಕೊಂಡಿದ್ದಾರೆ ಮತ್ತು ತಮ್ಮ ಕನಸಿನ ಕೂಸು ದಿಶಾ ಮೂಲಕ ಅದನ್ನು ಪೂರೈಸುವ ಆಶಯ ಅವರದು.

ಬದಲಾವಣೆ ಅತ್ಯಗತ್ಯ

ಯುವಜನತೆ ತಮ್ಮ ಜೀವನದ ಪ್ರಮುಖ ಹಂತದಲ್ಲಿ ಬದಲಾವಣೆಯ ಪರ್ವವನ್ನು ಎದುರಿಸಬೇಕಾಗುತ್ತದೆ. ಒಮ್ಮೆಲೇ ಬದಲಾವಣೆಗಳನ್ನು ಅವಳಡಿಸಿಕೊಳ್ಳಬೇಕೆಂದಾಗ ನಿರ್ಣಯಗಳನ್ನು ತೆಗೆದುಕೊಳ್ಳಲು ಕಷ್ಟವೆನಿಸುತ್ತದೆ. ಓದುವಾಗ ಪಡೆಯುವ ಶಿಕ್ಷಣ ಹೇಳುವುದೇ ಒಂದು, ಆದರೆ ಜೀವನದ ವಾಸ್ತವಿಕತೆಯೇ ಬೇರೆ. ಇಂತಹ ಕ್ಲಿಷ್ಟ ಸಂದರ್ಭಗಳಲ್ಲಿ ಮಾನಸಿಕ ಸ್ಥೈರ್ಯ ಅತ್ಯಗತ್ಯ.

ಗಾಂಧೀಜಿಯಿಂದ ಹಿಡಿದು ವಿವೇಕಾನಂದರವರೆಗೆ ಎಲ್ಲರ ಮಾತೂ ಒಂದೇ.... `ಏಳು, ಎದ್ದೇಳು, ಗುರಿ ಮುಟ್ಟುವವರೆಗೂ ಮುನ್ನುಗ್ಗುತ್ತಿರು! ಅಂದರೆ ಗುರಿ ಸಾಧಿಸುವ ಶಕ್ತಿ ಯುವಜನತೆಯ ಅಗತ್ಯ ಹೌದು. ವಿದ್ಯಾರ್ಥಿಗಳಿಗೆ ಪಾಠವೊಂದೇ ಮುಖ್ಯವಲ್ಲ. ಪಾಠದ ಜೊತೆ ಅವರಲ್ಲಿ ಮಾನವೀಯ ಮೌಲ್ಯಗಳನ್ನು ಮೂಡಿಸುವ, ಜೊತೆಗೆ ದೇಶ ಭಾಷೆ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆಯೂ ಅರಿವನ್ನು ಮೂಡಿಸುವ ಬಗ್ಗೆ ಗಂಭೀರವಾದ ಚಿಂತನೆಯನ್ನು ನಡೆಸಬೇಕಿದೆ.

ಯುವಶಕ್ತಿಯ ಸಬಲೀಕರಣ

ಯುವಶಕ್ತಿಯ ಸಬಲೀಕರಣಕ್ಕೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೌಲ್ಯಗಳ ಅಳವಡಿಕೆಯ ಅಗತ್ಯವಿದೆ. ಮನೆಯ ವಾತಾವರಣದ ಜೊತೆಗೆ ಶಾಲಾ ಕಾಲೇಜುಗಳಲ್ಲೂ ಪೂರಕವಾದ ಕಾರ್ಯಕ್ರಮಗಳು ನಡೆದಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವದ ನಿರ್ಮಾಣದಲ್ಲಿ ಪರಿಣಾಮ ಬೀರುವುದು ಸಾಧ್ಯವಿದೆ. ಹಳ್ಳಿಯಿಂದ ದಿಲ್ಲಿಯವರೆಗೂ ದೇಶದ ಜನಸಂಖ್ಯೆಯ ಶೇ.60ರಷ್ಟು ಭಾಗವಾಗಿರುವ ಯುವ ಜನಾಂಗ ದೇಶದ ಬಲ ಹೌದು. ಯುವ ಜನಾಂಗ ದೇಶ, ಭಾಷೆ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಒಲವನ್ನು ಮೂಡಿಸಿಕೊಳ್ಳುವುದರ ಜೊತೆಗೆ ನಮ್ಮ ಬೇರುಗಳನ್ನೂ ಮುರಿಯಬಾರದೆನ್ನುವ ತತ್ವವನ್ನು ಅರಿತುಕೊಂಡಾಗಲೇ ಸ್ವಯಂ ಉದ್ಧಾರದ ಜೊತೆ ದೇಶದ ಪ್ರಗತಿಯೂ ಸಾಧ್ಯ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ