ಜೇಲು ಅಪರಾಧಗಳ ಸ್ಕೂಲು

ಜೇಲು ಅಪರಾಧಗಳಿಗೆ ಪರಿಹಾರವೇ ಇಲ್ಲ ಎಂಬಂತೆ ಆಗಿಬಿಟ್ಟಿದೆ, ಅದನ್ನು ಈ 3 ಪ್ರಕರಣಗಳು ಮತ್ತಷ್ಟು ಸ್ಪಷ್ಟಪಡಿಸಿವೆ. ದೆಹಲಿಯಲ್ಲಿ 25 ವರ್ಷದ ಒಬ್ಬ ವಿವಾಹಿತ ಮಹಿಳೆಯನ್ನು (ಇತ್ತೀಚೆಗೆ ಬೆಂಗಳೂರಿನಲ್ಲಿ ಹಾಡು ಹಗಲೇ ಅತ್ತೆಸೊಸೆಯರನ್ನು ಕೊಂದಂತೆ) ನೆರೆಮನೆಯವನು ಕೊಂದು ಹಾಕಿ ತಾನೂ ಆತ್ಮಹತ್ಯೆ ಮಾಡಿಕೊಂಡ. ಇದನ್ನು ಕಂಡ ಅಕ್ಕಪಕ್ಕದವರು ದಂಗುಬಡಿದುಹೋದರು. ಈ ಹೆಂಗಸರು ಆ ಕೊಲೆಗಡುಕನ ವಿರುದ್ಧ ಈಗಾಗಲೇ ದೂರು ಕೊಟ್ಟಿದ್ದಳು ಹಾಗೂ ಆತನನ್ನು 2 ತಿಂಗಳ ಮೊದಲೇ ಜೇಲಿಗೂ ಕಳುಹಿಸಲಾಗಿತ್ತು, ಆದರೆ ಜಾಮೀನು ಕೊಟ್ಟು ಹೊರಗೆ ಕರೆತರಲಾಗಿತ್ತು. 6 ತಿಂಗಳಿನಿಂದ ಆತ ಈಕೆಯನ್ನು ಹಿಂಸಿಸುತ್ತಿದ್ದ.

ಉ.ಪ್ರದೇಶದ ರಾಮಪುರದಲ್ಲಿ ಒಬ್ಬ ಯುವಕನನ್ನು ದಸ್ತಗಿರಿ ಮಾಡಲಾಯಿತು. ಏಕೆಂದರೆ ಆತ 10 ವರ್ಷದ ಬಾಲೆಯನ್ನು ರೇಪ್ ಮಾಡಿದ್ದ. ಅವನು ಈ ಹಿಂದೆ 2012ರಲ್ಲಿ 8 ವರ್ಷದ ಹುಡುಗಿಗೂ ಹೀಗೆ ಮಾಡಿದ್ದ, ಜೊತೆಗೆ 4 ವರ್ಷದ ಸೆರೆವಾಸ ಅನುಭವಿಸಿದ್ದ.

ಮತ್ತೊಂದು ಪ್ರಕರಣದಲ್ಲಿ 34 ವರ್ಷದ ಒಬ್ಬ ವ್ಯಕ್ತಿ 21 ವರ್ಷದ ತರುಣಿಯನ್ನು ನಡುಬೀದಿಯಲ್ಲಿ 24 ಸಲ ಕತ್ತರಿಯಿಂದ ಇರಿದು ಕೊಲೆ ಮಾಡಿದ್ದ. ಸುತ್ತಲೂ ನೋಡುತ್ತಿದ್ದವರು ಏನೂ ಮಾಡಲಾರದೆ ಹೋದರು. ಈ ಹುಡುಗ ಲವ್ ಲವ್ ಎಂದು ಅವಳ ಹಿಂದೆ ಅಲೆಯುತ್ತಿದ್ದ.

ಈ ಕುರಿತಾಗಿ ಅಪರಾಧ ತಜ್ಞರು ಸದಾ ಹೇಳುವುದೆಂದರೆ, ಜೇಲಿಗೆ ತಳ್ಳಿದರೆ ಅಪರಾಧಿ ಸುಧಾರಿಸುತ್ತಾನೆಯೇ ಅಥವಾ ಬಲಂತವಾಗಿ ಸಮಾಜದಿಂದ ಅವನನ್ನು ಅಷ್ಟು ಕಾಲ ದೂರ ಇರಿಸುವುದೇ? ಅವರು ಹೇಳುವ ಮತ್ತೊಂದು ವಿಷಯ, ಜೇಲಿನಲ್ಲಿ ಜೀವನ ಎಷ್ಟೇ ಕಷ್ಟಕರವಾಗಿರಲಿ ಅದು ಅಪರಾಧಗಳ ಸ್ಕೂಲು ಸಹ ಹೌದು! ಇಲ್ಲಿ ಅಪರಾಧ ಮಾಡುವುದು ಹೇಗೆಂದು ಕಲಿಸಲಾಗುತ್ತದೆ. (`ಮಿಂಚಿನ ಓಟ' ಚಿತ್ರ ನೆನಪಿಸಿಕೊಳ್ಳಿ) ಅಪರಾಧಗಳ ಮೇಲೆ ನಿಯಂತ್ರಣ ಎಂಬುದು ಅಸಲಿಗೆ ಜೇಲುಗಳಲ್ಲಿ ಕಡಿಮೆ ಹಾಗೂ ಕಲಿಯುವ ಶಿಕ್ಷಣದಿಂದ ಹೆಚ್ಚು ದೊರಕುತ್ತದೆ ಎಂಬುದು ನಿಜ. ಪ್ರಾಮಾಣಿಕವಾಗಿ ನಡೆದುಕೊಂಡರೆ ಹೆಚ್ಚು ಆದಾಯ ಗಳಿಸಲು ಸಾಧ್ಯ ಎಂದು ಅರಿವಾದಾಗ, ಜನ ಅಪರಾಧ ಕಡಿಮೆ ಮಾಡುತ್ತಾರೆ. ಆದರೆ ಇದು ಅಕ್ಷರಶಃ ನಿಜವಲ್ಲ, ಏಕೆಂದರೆ, ಸಭ್ಯ ದೇಶ ಅಮೆರಿಕಾದಲ್ಲೂ ಸಹ ಜನಸಂಖ್ಯೆಯ ಅನುಪಾತದಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುತ್ತಿರುತ್ತವೆ.

ಅಲ್ಲಿನ ಜೇಲುಗಳಂತೂ ಕೈದಿಗಳಿಂದ ಸದಾ ತುಂಬಿ ತುಳುಕುತ್ತಿವೆ. ಜೇಲಿಗೆ ಹೋಗಿಬರುವುದೇ ಅಲ್ಲಿ ದೊಡ್ಡ ಬಿಸ್‌ನೆಸ್‌. ಅಲ್ಲಿನ ಹಲವು ರಾಜ್ಯಗಳು ಈ ಕೆಲಸವನ್ನು ಕಾಂಟ್ರಾಕ್ಟ್ ಗೆ ಒಪ್ಪಿಸಿವೆ, ಅವು ನ್ಯಾಯಾಧೀಶರನ್ನು ಪ್ರಭಾವಿತಗೊಳಿಸಿ, ಗ್ರಾಹಕರು ಅಂದರೆ ಕೈದಿಗಳ ಸಂಖ್ಯೆ ಹೆಚ್ಚಿಸುವಲ್ಲಿ ಧಾವಿಸುತ್ತಿವೆ.

ಅಮೆರಿಕಾ ಶ್ರೀಮಂತ ರಾಷ್ಟ್ರವಾದರೂ ಸುರಕ್ಷಿತವಲ್ಲ. ಅದು ನಗರ ಅಥವಾ ಗ್ರಾಮೀಣ ಪ್ರದೇಶವಾಗಿರಲಿ, ಅಪರಾಧಿಗಳಿಂದ ತುಂಬಿಹೋಗಿದೆ. ಹಾಗಾಗಿ ಅಲ್ಲಿ ಗನ್‌ ಕಂಟ್ರೋಲ್ ನಡೆಯದು. ಏಕೆಂದರೆ ಕೈಲಿ ಗನ್‌ ಇದೆ ಎಂಬುದನ್ನೇ ದೊಡ್ಡದಾಗಿಸಿಕೊಂಡರು ಎಷ್ಟೋ ಅಮಾಯಕರನ್ನು ನಿರ್ದಾಕ್ಷಿಣ್ಯವಾಗಿ ಕೊಂದಿದ್ದಾರೆ.

ಭಾರತದಲ್ಲಿ ಅತ್ಯಾಚಾರ, ಹೆಂಗಸರ ಮೇಲೆ ದೌರ್ಜನ್ಯ, ವರದಕ್ಷಿಣೆ ಹತ್ಯಾಕಾಂಡ.... ಇತ್ಯಾದಿಗಳಿಗೆ ಒಮ್ಮೆಲೇ ಆಪಾದಿತರನ್ನು ಜೇಲಿಗೆ ತಳ್ಳಿಬಿಡಬೇಕು ಅಥವಾ ಗಲ್ಲು ಶಿಕ್ಷೆ ಕೊಡಿಸಬೇಕು ಎಂಬುದು ಆಧಾರವಿಲ್ಲದ ಮಾತು. ಕೋರ್ಟುಗಳು  ಪ್ರತಿ ಅಪರಾಧಿಗೂ ಒಂದಿಷ್ಟು ಕಾಲಾವಕಾಶ ಕೊಡಬೇಕು, ಅವನು ತನ್ನನ್ನು ತಾನು ರಕ್ಷಿಸಿಕೊಳ್ಳಲು, ಜೊತೆಗೆ ಪೆರೋಲ್ ‌ಅಥವಾ ಜಾಮೀನಿನ ಸೌಲಭ್ಯಗಳೂ ಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ