ನವೆಂಬರ್‌ 1 ಬಂದಾಗ, ರಾಜ್ಯೋತ್ಸವದ ಹೆಸರಿನಲ್ಲಿ ಕನ್ನಡದ ಬಗ್ಗೆ ನಾನಾ ಭಾಷಣ ಕೊರೆಯುವ, ಕನ್ನಡದ ಸೇವೆಯ ಬಗ್ಗೆ ಬರಿದೇ ಮಾತನಾಡುವ ಜನರೇ ತುಂಬಿರುವ ನಮ್ಮ ನಾಡಲ್ಲಿ, ಕನ್ನಡ ಸಾಹಿತ್ಯ ಸೇವೆಯನ್ನೇ ಉಸಿರಾಗಿಸಿಕೊಂಡಿರುವ ವೀಣಾ ನಾಯಕ್ಅವರ ಸಾಧನೆಗಳ ಬಗ್ಗೆ ವಿವರವಾಗಿ ತಿಳಿಯೋಣವೇ.....?

ಪ್ರತಿ ವರ್ಷ ಮಾರ್ಚ್‌ 8ರಂದು ಮಹಿಳಾ ದಿನಾಚರಣೆ ಆಚರಿಸುತ್ತೇವೆ. ಈ ಸಂದರ್ಭದಲ್ಲಿ ನಮ್ಮ ಅಕ್ಕಪಕ್ಕದಲ್ಲಿ ಇರುವ ಮಹಿಳೆಯರ ಬಗ್ಗೆ ಹೇಳಲು ನಮಗೆ ಖುಷಿಯಾಗುತ್ತದೆ. ಈಗ ನಾನು ನಿಮಗೆ ಡಿಫರೆಂಟ್‌ ಆಗಿ ಸಾಹಿತ್ಯ ಬೆಳೆಸಿ, ಉಳಿಸುವ ಕಾಯಕದಲ್ಲಿ ನಿರತರಾಗಿರುವವರ ಬಗ್ಗೆ, ಒಂದು ರೀತಿಯಲ್ಲಿ ಸಾಹಿತ್ಯಾರಾಧನೆ ಮಾಡುತ್ತಿರುವವರ ಬಗ್ಗೆ ಹೇಳುತ್ತೇನೆ, ಅವರೇ ವೀಣಾ ನಾಯಕ್‌.

ಸಾಹಿತ್ಯಾರಾಧನೆ, ಸಾಹಿತ್ಯದ ಬಗ್ಗೆ ಪ್ರೀತಿ, ಸಾಹಿತ್ಯ ಬೆಳೆಸುವುದು ಅಂದಾಗ ತಕ್ಷಣ ನೆನೆಪಾಗುವವರು ವೀಣಾ ನಾಯಕ್‌. ಇವರು ಮಂಗಳೂರಿನವರು. ಕಾರ್ಪೋರೇಷನ್‌ ಬ್ಯಾಂಕ್‌ ನಲ್ಲಿ ಚೀಫ್‌ ಮ್ಯಾನೇಜರ್‌ ಆಗಿ ಕೆಲಸ ಮಾಡಿ, ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಇವರ ಪತಿ ಎಂ. ಜಯರಾಮ ನಾಯಕ್‌. ಸಿಂಡಿಕೇಟ್‌ ಬ್ಯಾಂಕ್‌ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರಿಬ್ಬರೂ ಪ್ರಸ್ತುತ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಇಬ್ಬರು ಮಕ್ಕಳು. ಮಗಳು ಎಂಜಿನಿಯರ್‌, ಅಳಿಯ ಸೈಂಟಿಸ್ಟ್ ಅವರಿಗೆ ಇಬ್ಬರು ಮಕ್ಕಳು ಬೆಂಗಳೂರಿನಲ್ಲಿದ್ದಾರೆ. ಮಗ ಮತ್ತು ಸೊಸೆ ಡಾಕ್ಟರ್ಸ್‌, ಮಣಿಪಾಲದಲ್ಲಿದ್ದಾರೆ. ಅವರಿಗೆ ಒಬ್ಬ ಮಗ. ಇದು ಇವರ ಪುಟ್ಟ ಸಂಸಾರದ ವಿವರ.

ಹಲವು ಭಾಷೆಗಳ ಒಲವು

ಇವರಿಗೆ ಭಾಷೆಗಳ ಬಗ್ಗೆ ತುಂಬಾ ಒಲವು. ಕನ್ನಡ, ಇಂಗ್ಲಿಷ್‌ ಹಾಗೂ ಹಿಂದಿ ಮೂರು ಭಾಷೆಗಳಲ್ಲಿಯೂ ಪ್ರಾವೀಣ್ಯತೆ ಸಾಧಿಸಿದ್ದಾರೆ. ನಾನಂತೂ ಪುಸ್ತಕ ಮಾತೆ, ಪುಸ್ತಕ ಸರಸ್ವತಿಯಾಗಿ ಇವರನ್ನು ನೋಡುತ್ತಿದ್ದೇನೆ. ಇವರಿಗಿರುವ ಪುಸ್ತಕ ಪ್ರೀತಿ, ಸಾಹಿತ್ಯದ ಬಗ್ಗೆ ಒಲವು ಇನ್ನೆಲ್ಲಿಯೂ ಕಂಡಿಲ್ಲ.

ಇವರು ಹೆಚ್ಚು ಕಡಿಮೆ ಕನ್ನಡ ಲೇಖಕರ ಎಲ್ಲಾ ಪುಸ್ತಕಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಹಾಗೆ ಎಲ್ಲವನ್ನೂ ಓದಿಯೂ ಇದ್ದಾರೆ. ಹಾಗೆಯೇ ಇಂಗ್ಲಿಷ್‌ ಸಾಹಿತ್ಯದಲ್ಲೂ ಇವರಿಗೆ ಒಲವಿದೆ. ಅನುಕೂಲ ಇದೆ, ಹಣ ಇದೆ ಎಲ್ಲವನ್ನೂ ಕೊಂಡುಕೊಂಡಿದ್ದಾರೆ. ಇದರಲ್ಲಿ ಏನೂ ಹೆಚ್ಚುಗಾರಿಕೆ ಎನ್ನಬಹುದು.... ಆದರೆ ಹಣವಿದ್ದರೆ ಸಾಲದು, ಪುಸ್ತಕ ಓದು ಒಲವಿರಬೇಕು, ಕೊಳ್ಳುವ ಮನಸ್ಸಿರಬೇಕು ಅಲ್ಲವೇ......?

ಈ ವಿಷಯದ ಬಗ್ಗೆ ಅವರ ಮಾತಿನಲ್ಲೇ ಕೇಳೋಣ ಬನ್ನಿ.....

ಮೇಡಂ ನಿಮಗೆ ಪುಸ್ತಕ ಓದುವ ಆಸಕ್ತಿ ಯಾವಾಗ ಶುರು ಆಯಿತು....? ಮತ್ತೆ ಪುಸ್ತಕ ಸಂಗ್ರಹಣೆ ಮಾಡುವ ಯೋಚನೆ ಹೇಗೆ ಶುರುವಾಯಿತು....?

ನನಗೆ ಪುಸ್ತಕಗಳನ್ನು ಓದುವ ಹವ್ಯಾಸ ಚಿಕ್ಕ ವಯಸ್ಸಿನಲ್ಲಿಯೇ ಇತ್ತು. ಶಾಲೆ, ಕಾಲೇಜಿನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಅಧ್ಯಾಪಕರಿಂದ/ಉಪನ್ಯಾಸಕರಿಂದ ಬಹಳ ಪ್ರಭಾವಿತಳಾಗಿದ್ದೆ. ಇದರಿಂದ ಭಾಷೆಯ ಮೇಲೆ ಆಸಕ್ತಿ ಹೆಚ್ಚಾಯಿತು. ಪದವೀಧರೆಯಾದ ಕೂಡಲೇ ಉದ್ಯೋಗ ಸಿಕ್ಕಿತು. ಮುಂದೆ ವೃತ್ತಿ ಮತ್ತು ಸಾಂಸಾರಿಕ ಜವಾಬ್ದಾರಿಗಳ ನಡುವೆ ಹೆಚ್ಚಿನ ಓದು ಕಷ್ಟಸಾಧ್ಯವೆನಿಸಿದ ಕಾರಣ ಭಾಷಾ ಸಂಬಂಧಿ ಪರೀಕ್ಷೆಗಳಿಗೆ ಪ್ರವೇಶ ಪಡೆದುಕೊಂಡೆ. ಇದರಿಂದ ಕಡ್ಡಾಯವಾಗಿ ಓದಲೇಬೇಕಾದ ಸಂದರ್ಭ ಬಂತು. ಆಗ ಸಾಹಿತ್ಯದ ಹಲವು ಪ್ರಕಾರಗಳ ಅಧ್ಯಯನ ಸಾಧ್ಯವಾಯಿತು. ಎಂ.ಎ (ಇಂಗ್ಲಿಷ್‌), ರತ್ನ (ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಪರೀಕ್ಷೆ), ಪ್ರವೀಣ್‌ (ದಕ್ಷಿಣ ಭಾರತ ಹಿಂದಿ ಪ್ರಚಾರ ಸಮಿತಿ, ಚೆನ್ನೈ) ಈ ಪರೀಕ್ಷೆಗಳಲ್ಲಿ ಉತ್ತೀರ್ಣಳಾದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ