ಅದು 1982, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗನದಲ್ಲಿ ಕರ್ನಾಟಕ ಮತ್ತು ಮುಂಬೈ ನಡುವಿನ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ, ಮಂಕಡ್ ಬೌಲಿಂಗ್‌ನಲ್ಲಿ ವೆಂಗ್‌ಸರ್ಕಾರ್ ಕ್ಯಾಚ್ ನಿಂದಾಗಿ ಕರ್ನಾಟಕದ ಆಟಗಾರೊಬ್ಬರಿಗೆ ಅಂಪೈರ್ ಔಟ್ ನೀಡಿದಾಗ, ಸಾಮಾನ್ಯವಾಗಿ ಅಂಪೈರ್ ನಿರ್ಣಯಕ್ಕೆ ಎಂದೂ ಕಾಯಾದ ಆ ಆಟಗಾರ ಕೆಲಕ್ಷಣ ತಮ್ಮ ಕೈಗಳನ್ನು ಸೊಂಟದ ಮೇಲೆ ಇಟ್ಟುಕೊಂಡು ಆಂಪೈರ್ ಅವರನ್ನು ದಿಟ್ಟಿಸಿ ಮೌನವಾಗಿ ನೀವು ತಪ್ಪು ನಿರ್ಣಯ ನೀಡಿದ್ದೀರಿ ಎಂದು ಸೂಚಿಸಿ ನಂತರ ಹೊರನಡೆಯುತ್ತಿದ್ದಂತೆಯೇ, ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರಲ್ಲಿ ಅಸಹನೆ ಮೂಡಿದ ಪರಿಣಾಮ ಗ್ಯಾಲರಿಯಲ್ಲಿದ್ದ ಕುರ್ಚಿಗಳೆಲ್ಲವೂ ಹಾಳಾದರೆ, ಇನ್ನೂ ಕೆಲವು ಉದ್ರಿಕ್ತ ಪ್ರೇಕ್ಷಕರು ಮೈದಾನಕ್ಕೆ ನುಗ್ಗಿ ಅಂಪೈರ್‌ಗಳನ್ನು ಹಲ್ಲೆ ಮಾಡುವ ಮಟ್ಟಕ್ಕೆ ಹೋಗಿತ್ತು.

ಆಟಗಾರನಿಗೆ ಔಟ್ ನೀಡಿದ್ದಕ್ಕಾಗಿ ಪ್ರೇಕ್ಷಕರು ನಡೆಸಿದ ದಾಂದಲೆ ಸರಿಯಲ್ಲವಾದರೂ, ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಕಲಾತ್ಮಕ, ಸಭ್ಯ ಮತ್ತು ಅಂತ್ಯಂತ ಕ್ರೀಡಾಸ್ಪೂರ್ತಿ (Sportsman Spirit)ಗೆ ಹೆಸರಾಗಿದ್ದ ಆ ಆಟಗಾರನ ಕ್ರೀಡಾಸ್ಪೂರ್ತಿ ಎಂತಹದ್ದು ಎನ್ನುವುದಕ್ಕೆ ಈ ಪ್ರಸಂಗವೇ ಸಾಕ್ಷಿಯಾಗಿದೆ. 1979-80ರಲ್ಲಿ ಇಂಗ್ಲೆಂಡ್ ಮತ್ತು ಭಾರತದ ನಡುವೆ ಸುವರ್ಣ ಮಹೋತ್ಸವ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡಿನ ಪ್ರಮುಖ ಆಟಗಾರರು ಅದಾಗಲೇ ಪೆವಿಲಿಯನ್ನಿಗೆ ಮರಳಿ ದುಸ್ಥಿತಿಯಲ್ಲಿತ್ತು. ಆಗ ಬೋಥಮ್ ಮತ್ತು ಟೇಲರ್ ಆಟವಾಡುತ್ತಿದ್ದಾಗ, ಅಂಪೈರ್ ಆವರು ಟೇಲರ್ ಅವರು ಔಟ್ ಎಂದು ತೀರ್ಮಾನಿಸಿದಾಗ, ಟೇಲರ್ ಸಹಾ ಮರುಮಾತಿಲ್ಲದೇ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದಾಗ, ಭಾರತದ ಪರ ಆ ಪಂದ್ಯದಲ್ಲಿ ಹಂಗಾಮಿ ನಾಯಕರಾಗಿದ್ದ ಆಟಗಾರನ ಆತ್ಮಸಾಕ್ಷಿಗೆ ಆ ನಿರ್ಣಯ ಒಪ್ಪಿಗೆಯಾಗದೇ, ಅವರೇ ಖುದ್ದಾಗಿ ಟೇಲರ್ ಅವರನ್ನು ಮತ್ತೆ ಆಡಲು ಅನುವು ಮಾಡಿಕೊಟ್ಟರು. ನಾಯಕನ ಕ್ರೀಡಾಸ್ಪೂರ್ತಿಗೆ ಇಡೀ ಕ್ರೀಡಾಂಗಣವೇ ಎದ್ದು ನಿಂತು ಚಪ್ಪಾಳೆ ಹೊಡೆದಿತ್ತು. ಇಂತಹ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಟೇಲರ್ ಬೋಥಮ್ ಅವರೊಂದಿಗೆ ಆಟವನ್ನು ಮುಂದುವರೆಸಿ ಅಂತಿಮವಾಗಿ ಭಾರತವನ್ನು ಸೋಲಿಸುವುದರಲ್ಲಿ ಸಫಲರಾದರು. ಪಂದ್ಯದಲ್ಲಿ ಭಾರತವೇನೂ ಸೋತರೂ ಸಜ್ಜನ ಸಭ್ಯರ ಆಟ ಎಂದೇ ಪ್ರಸಿದ್ಧಿ ಪಡೆದಿರುವ ಕ್ರಿಕೆಟ್ ಆಟವನ್ನು ಗೆಲ್ಲಿಸಿದ ಪರಿಣಾಮ ಆ ಆಟಗಾರನ ಹೃದಯ ವೈಶ್ಯಾಲ್ಯದಿಂದ ಆತನ ಹೆಸರು ಕ್ರಿಕೆಟ್ ಕ್ಷೇತ್ರದಲ್ಲಿ ಆಜರಾಮರವಾಗಿ ಉಳಿದಿದೆ.

ಹೀಗೆ ವಯಕ್ತಿಕ ಹಿತಾಸಕ್ತಿಯನ್ನು ಮರೆತು ತಂಡಕ್ಕಾಗಿ ಜೀವಮಾನವಿಡೀ ಆಪದ್ಬಾಂಧವನಾಗಿದ್ದ, ತಾನು ಸಿಡಿಸಿದ ಶತಕಗಳ ಪಂದ್ಯಗಳಲ್ಲಿ ಎಂದೂ ಭಾರತ ಸೋಲು ಬಿಡದ, ಭಾರತೀಯ ಕ್ರಿಕೆಟ್ ರಂಗ ಕಂಡ ಅತ್ಯಂತ ಕಲಾತ್ಮಕ ಆಟಗಾರನೇ ಗುಂಡಪ್ಪ ರಂಗನಾಥ್ ವಿಶ್ವನಾಥ್ (GR Vishwanath) ಅರ್ಥಾತ್ ಎಲ್ಲರ ಪ್ರೀತಿಯ ವಿಶಿ. 12 ಫೆಬ್ರವರಿ 1949ರಂದು ಭದ್ರಾವತಿಯಲ್ಲಿ ಜನಿಸಿ ವಿಶ್ವವಿಖ್ಯಾತರಾದ ವಿಶಿಯವರ ಜನ್ಮ ದಿನದಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ.

ಮಧ್ಯವವರ್ಗದ ಸಾಮಾನ್ಯ ಹಿನ್ನಲೆಯ ಕುಟುಂಬದ ವಿಶ್ವನಾಥ್ ಅವರಿಗೆ ಬಾಲ್ಯದಿಂದಲೂ ಕ್ರಿಕೆಟ್ ಆಟದ ಮೇಲೆ ಬಹಳ ಪ್ರೀತಿ ಇದ್ದ ಕಾರನ, ತಮ್ಮ ಶಾಲಾ ಮೈದಾನಗಳಲ್ಲಿ ಮತ್ತು ಮನೆಯ ಮುಂದಿನ ಬೀದಿಗಳಲ್ಲೇ ಆಟವಾಡುತ್ತಾ, ಹೊಡಿ ಬಡಿ ಕಡಿ ಎನ್ನುವುದಕ್ಕಿಂತಲೂ ಕಲಾತ್ಮಕ ಆಟವನ್ನು ರೂಡಿಸಿಕೊಂಡ ಪರಿಣಾಮ ಎಲ್ಲರ ಮನ ಸೆಳೆದು, ತಮ್ಮ ೨೦ನೇ ವಯಸ್ಸಿನಲ್ಲಿಯೇ ಅಂದಿನ ಮೈಸೂರು ರಾಜ್ಯದ ಪರವಾಗಿ ರಣಜಿ ಪಂದ್ಯಾವಳಿಗೆ ಆಯ್ಕೆಯಾದಾಗ, ಸಣ್ಣಗೆ ಕುಳ್ಳಗಿದ್ದ ಈ ವ್ಯಕ್ತಿ ಏನು ಆಡುತ್ತಾನೇ? ಎಂದು ಎಲ್ಲರೂ ಯೋಚಿಸುತ್ತಿರುವಾಗಲೇ ತನ್ನ ಚೊಚ್ಚಲು ಪಂದ್ಯದಲ್ಲೇ ಆಕರ್ಷಕ ದ್ವಿಶತಕವನ್ನು ಬಾರಿಸಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಲ್ಲದೇ ತಮ್ಮ ತಾಳ್ಮೆಯುತ ಸುಂದರ ಆಟದ ಶೈಲಿ ಮತ್ತು ಸಮಯೋಚಿತ ತಂತ್ರದಿಂದ ಗಮನ ಸೆಳೆದು, ಅದರಲ್ಲೂ ಸ್ಕ್ವೈರ್ ಕಟ್ ಬಾರಿಸುವುದಲ್ಲಿ ಎತ್ತಿದ ಕೈ ಆಗಿದ್ದು ಅತ್ಯಂತ ಸ್ಟೈಲಿಶ್ ಬ್ಯಾಟ್ಸ್‌ಮನ್ ಎಂದೇ ಪ್ರಖ್ಯಾತರಾದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ