ಮಿನಿಕಥೆ - ಗೀತಾ ಪ್ರಸಾದ್‌ 

ವೇಣುಗೋಪಾಲ್ ಮನೆಗೆ ಕೆಲಸ ಕೇಳಿಕೊಂಡು ಬಂದ ಅಪರಿಚಿತನಿಗೆ  ಮಾಡಿದ ಸಹಾಯ ಮತ್ತು ಅದಕ್ಕೆ ಅವನು ತೋರಿದ ಕೃತಜ್ಞತೆ ಎಲ್ಲ ನಮ್ಮಲ್ಲಿರುವ ಮಾನವೀಯ ಗುಣಕ್ಕೆ ಒಂದು ಉದಾಹರಣೆಯಾಗುತ್ತದೆ.......!

ಅಂದು ಭಾನುವಾರದ ಒಂದು ಸಂಜೆ. ವೇಣುಗೋಪಾಲ್‌ ಮನೆಯ ವರಾಂಡದಲ್ಲಿ ಕುಳಿತು ಯಾವುದೋ ವಾಹನ ರಸ್ತೆಯ ತುದಿಯಲ್ಲಿ ಚಲಿಸುತ್ತಿದ್ದುದನ್ನು ನೋಡುತ್ತಿದ್ದ. ಅಂದು ಹೇಳಿಕೊಳ್ಳುವಂತಹ ಯಾವ ಕೆಲಸಗಳೂ ಇರಲಿಲ್ಲ. ಪತ್ನಿ ಪರಿಮಳಾ ಒಳಗೆಲ್ಲೋ ಇದ್ದಳು. ಮಕ್ಕಳು ಅವರ ಪಾಡಿಗೆ ಅವರು ಆಡಿಕೊಳ್ಳುತ್ತಿದ್ದರು.

ತಿಂಗಳ ಕೊನೆಯಾದ್ದರಿಂದ ಮುಂದಿನ ದಿನದಲ್ಲಿ ಸಂಬಳ ಆಗುವವರೆಗೂ ಇರುವ ಉಳಿತಾಯದಲ್ಲೇ ಜೀವನ ಸಾಗಬೇಕಿತ್ತು. ಹೀಗಾಗಿ ಮಾಲ್ ಗಳಿಗೆ ಹೋಗಿ ಶಾಪಿಂಗ್‌ ಅಥವಾ ಸಿನಿಮಾಗಾಗಲೀ ಹೋಗದೆ ಎಲ್ಲರೂ ಮನೆಯಲ್ಲಿಯೇ ಇದ್ದರು. ಹೀಗೆ ಎಲ್ಲರಲ್ಲಿಯೂ ಒಂದು ಬಗೆಯ ಆಲಸ್ಯ ಮನೆ ಮಾಡಿತ್ತು. ಇಂಥ ಸಂದರ್ಭದಲ್ಲಿ ಮನೆಯ ಮುಂಬಾಗಿಲು ಸದ್ದಾಯಿತು.

ಪರಿಮಳಾ ತಾನೇ ಮುಂದಾಗಿ ಬಾಗಿಲು ತೆರೆದಳು. ಎದುರಿಗೆ ಸುಮಾರು 24 ಪ್ರಾಯದ ಯುವಕ ನಿಂತಿದ್ದ. ತೊಟ್ಟಿದ್ದ ಬಟ್ಟೆ ಕೊಳೆಯಾಗಿತ್ತು. ಹಾಕಿದ್ದ ಚಪ್ಪಲಿ ಸವೆದು ಹೋಗಿತ್ತು. ಕೈಯಲ್ಲಿ ಕೆಲವು ಹಾಳೆಗಳಿರಬಹುದಾದ ಒಂದು ಚೀಲವಿತ್ತು. ಕಣ್ಣುಗಳು ಮಾತ್ರ ಚಿರಚೇತನದಿಂದ ಹೊಳೆಯುತ್ತಿದ್ದವು.

``ಏನಪ್ಪಾ, ಏನಾಗಬೇಕು?''

``ನಿಮ್ಮ ಹಸ್ಪೆಂಡ್‌ ಜೊತೆ ಮಾತನಾಡಬೇಕಿತ್ತು.''

``ಸರಿ ಇಲ್ಲೇ ಇರು ಇದೀಗ ಕರೆಯುತ್ತೇನೆ,'' ಎಂದ ಪರಿಮಳಾ ಗಂಡನಿದ್ದಲ್ಲಿಗೆ ಬಂದು ವಿಚಾರ ತಿಳಿಸಿದಾಗ, ಅವನು ಯುವಕನಿದ್ದಲ್ಲಿ ಬಂದು ಮಾತಿಗೆ ಪ್ರಾರಂಭಿಸಿದ್ದ.

ಆ ಯುವಕ ಮೂಲತಃ ಹೈದರಾಬಾದ್‌ನವನಾಗಿದ್ದ.  ಅಜರ್‌ ಎನ್ನುವ ಆ ಯುವಕ ಹಾರ್ಡ್‌ವೇರ್‌ ನೆಟ್‌ವರ್ಕಿಂಗ್‌ನಲ್ಲಿ ಡಿಪ್ಲೊಮಾ ಮಾಡಿಕೊಂಡಿದ್ದು ಹೈದರಬಾದ್‌ನ ಸಂಸ್ಥೆಯೊಂದರ ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದ.

ಆದರೆ ಕೆಲವು ತಿಂಗಳ ನಂತರ ಆ ಸಂಸ್ಥೆಯವರು ಇವನನ್ನು ಬೆಂಗಳೂರಿನ ಒಂದು ಸಂಸ್ಥೆಗೆ ಕಳಿಸಿದ್ದರು. ಅಲ್ಲಿ ಕೆಲಸ ಮಾಡುತ್ತಿರುವಾಗಲೇ ಮುಖ್ಯ ಶಾಖೆ ಇದ್ದ ಹೈದರಾಬಾದ್‌ನಲ್ಲಿ ಸಂಸ್ಥೆ ನಷ್ಟಕ್ಕೀಡಾಗಿ ಮುಚ್ಚಿಹೋಗಿತ್ತು. ಇದರ ಪರಿಣಾಮ ಬೆಂಗಳೂರಿನಲ್ಲಿ ದುಡಿಯುತ್ತಿದ್ದವರಿಗೂ ಸಂಬಳ ಬರದಂತಾಗಿ ಜೀವನ ನಿರ್ವಹಣೆ ಕಷ್ಟಕರವಾಗಿ ಪರಿಣಮಿಸಿತ್ತು.

``ಸರ್‌, ನಾನು ನಿಮ್ಮಲ್ಲಿ ಬಂದದ್ದು ಭಿಕ್ಷೆ ಬೇಡುವುದಕ್ಕಾಗಿ ಅಲ್ಲವೇ ಅಲ್ಲ. ಬದಲಾಗಿ ನನ್ನ ಪರಿಚಯಸ್ಥರೊಬ್ಬರು ನಿಮ್ಮ ವಿಳಾಸ ನೀಡಿ ಇವರ ಹತ್ತಿರ ಹೋದಲ್ಲಿ ಕೆಲಸ ಸಿಗುವುದೆಂದು ಹೇಳಿದ್ದರು.''

``ಓಹೋ....., ನಮ್ಮ  ವರ್ಕ್‌ಶಾಪ್‌ನಲ್ಲಿ ಸದ್ಯಕ್ಕೆ ಯಾವ ಕೆಲಸ ಖಾಲಿ ಇಲ್ಲವಲ್ಲ.......?''

``ಹಾಗೆನ್ನಬೇಡಿ, ನಿಮ್ಮನ್ನು ನಂಬಿ ನಾನು ಇಷ್ಟು ದೂರ ಬಂದಿದ್ದೇನೆ.''

ವೇಣುಗೋಪಾಲ್ ಕ್ಷಣಕಾಲ ಮೌನವಾದ. ನಂತರ ಒಂದು ಕ್ಷಣ ಇಲ್ಲೇ ಇರು ಎಂದು ಹೇಳಿ ಕೋಣೆಯತ್ತ ಹೆಜ್ಜೆ ಹಾಕಿದ. ಅಲ್ಲಿ ಪರಿಮಳಾ ಜೊತೆ ಚರ್ಚೆಯಲ್ಲಿ ತೊಡಗಿದ. ಈ ಯುವಕನಿಗೆ  ಏನು ಹೇಳುವುದು? ತಮ್ಮ ಸ್ನೇಹಿತರ ಕಡೆಯಿಂದಲೇ ಬಂದಿದ್ದಾನೆ. ಆದುದರಿಂದ ತಕ್ಷಣಕ್ಕೆ  ನಿರಾಕರಿಸಲೂ ಆಗುದಿಲ್ಲವಲ್ಲ.....?

ಹೀಗೆಯೇ ಚರ್ಚೆ ನಡೆಸಿ ಕಡೆಗೆ ಸದ್ಯ ಅವನಿಗೆ ಹೈದರಾಬಾದ್‌ನಲ್ಲಿರುವ ಪರಿಮಳಾಳ ಸಂಬಂಧಿಕರೊಬ್ಬರ ಸಂಸ್ಥೆಯಲ್ಲಿ ಕೆಲಸದ ಏರ್ಪಾಡು ಮಾಡಿಸುವುದು, ಈಗ ಅವನಿಗೆ ಹೈದರಾಬಾದ್‌ಗೆ ವಾಪಸ್ಸು ಹೋಗಲು ಹಣ ನೀಡಿ ಕಳಿಸುವುದು ಎಂದು ತೀರ್ಮಾನಿಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ