ಬೊಜ್ಜು ಆಧುನಿಕ ನಾಗರಿಕತೆಯ ಕೊಡುಗೆಯಾಗಿದೆ. ಕೆಲವು ದಶಕಗಳ ಹಿಂದಿನ ತನಕ ಭಾರತೀಯರು ಅಪೌಷ್ಟಿಕತೆಗೆ ತುತ್ತಾಗುತ್ತಿದ್ದರು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮಾತ್ರ ಬೊಜ್ಜು ಪ್ರತ್ಯಕ್ಷವಾಗುತ್ತಿತ್ತು. ಆದರೆ ಈಗ ಭಾರತರಲ್ಲಿ ಅಪೌಷ್ಟಿಕತೆ ಹಾಗೂ ಬೊಜ್ಜು ಎರಡೂ ಇವೆ. 2014ರ ಮೆಡಿಕಲ್ ಜನರಲ್ ಪ್ರಕಾರ, 1979ರಲ್ಲಿ ಜಾಗತಿಕ ಬೊಜ್ಜಿನ ಸೂಚ್ಯಂಕದಲ್ಲಿ 19ನೇ ಸ್ಥಾನದಲ್ಲಿತ್ತು. ಅದೇ 2014ರಲ್ಲಿ ಮಹಿಳಾ ವಿಭಾಗದಲ್ಲಿ ಭಾರತ 3ನೇ ಕ್ರಮಾಂಕ ಹಾಗೂ ಪುರುಷರ ವಿಭಾಗದಲ್ಲಿ 5ನೇ ಸ್ಥಾನದಲ್ಲಿತ್ತು.

ಭೌತಿಕ ಸುಖ ಸೌಲಭ್ಯಗಳ ಅತಿಯಾದ ಬಳಕೆ ಹಾಗೂ ಊಟತಿಂಡಿಗಳಲ್ಲಿ ಯಾವುದೇ ನಿಯಂತ್ರಣ ಇಲ್ಲದೆ ಇರುವುದು ಹಾಗೂ ತಪ್ಪು ಜೀವನ ಶೈಲಿಯಿಂದಾಗಿ ಅನೇಕ ಬಗೆಯ ರೋಗಗಳು ಮನುಷ್ಯನ ಮೇಲೆ ದಾಳಿ ಮಾಡುತ್ತಿವೆ. ಅತಿ ರಕ್ತದೊತ್ತಡ, ಮಧುಮೇಹ, ಹೃದ್ರೋಗ, ಕೀಲುನೋಗಳ ಸಮಸ್ಯೆ ಕಾಲುಗಳಲ್ಲಿ ನೋವು, ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆ ಹಾಗೂ ಬಂಜೆತನದ ಸಮಸ್ಯೆಗಳು ಬೊಜ್ಜಿನಿಂದಾಗಿ ಕಾಣಿಸಿಕೊಳ್ಳುತ್ತಿವೆ.

ನ್ಯೂಜಿಲ್ಯಾಂಡ್‌ನ ಆಕ್ಲಂಡ್‌ ತಾಂತ್ರಿಕ ವಿ.ವಿ ನಡೆಸಿದ ಒಂದು ಸಂಶೋಧನೆಯ ಪ್ರಕಾರ, ಜಗತ್ತಿನ ಸುಮಾರು ಶೇ.75ರಷ್ಟು ಜನಸಂಖ್ಯೆ ಬೊಜ್ಜಿಗೆ ತುತ್ತಾಗಿದೆ. ಶೇ.14 ರಷ್ಟು ಜನರ ತೂಕ ಮಾತ್ರ ಸಾಮಾನ್ಯವಾಗಿದೆ.

ಬೊಜ್ಜನ್ನು ಯಾರು ತಾನೇ ಕಡಿಮೆಗೊಳಿಸಲು ಇಚ್ಛಿಸುವುದಿಲ್ಲ? ಎಷ್ಟೋ ಸಲ ಜನರು ತಪ್ಪು ಉಪಾಯಗಳನ್ನು ಅನುಸರಿಸಿ ಹಣ ಕಳೆದುಕೊಳ್ಳುತ್ತಾರೆ, ಅಷ್ಟೇ ಅಲ್ಲ, ಅಪಾಯವನ್ನೂ ತಂದುಕೊಳ್ಳುತ್ತಾರೆ. ಬಸ್‌ಗಳು, ಆಟೋಗಳಲ್ಲಿ, ರಸ್ತೆ ಬದಿಯ ಸಾರ್ವಜನಿಕ ಗೋಡೆಗಳ ಮೇಲೆ ಅಂತಹ ಜಾಹೀರಾತುಗಳನ್ನು ಅಂಟಿಸಲಾಗಿರುತ್ತದೆ. ಸ್ಲಿಮ್ ಆಗಬೇಕಿದ್ದರ ಈ ಕ್ರಮಸಂಖ್ಯೆಗೆ ಡಯೆಲ್‌ ಮಾಡಿ ಎಂದು ಅದರಲ್ಲಿ ಸೂಚಿಸಲಾಗಿರುತ್ತದೆ. ಇವು ಜನರಿಗೆ ಭ್ರಮನಿರಸನ ಮಾಡುತ್ತವೆ. ಶಸ್ತ್ರಚಿಕಿತ್ಸೆಯ ನಂತರ ಬೊಜ್ಜು ಬರುವುದಿಲ್ಲ ಎಂದೇನೂ ಅಲ್ಲ. ಒಂದು ವೇಳೆ ನಿಮ್ಮ ಆಹಾರ, ಜೀವನಶೈಲಿ ಬದಲಿಸಿಕೊಳ್ಳದಿದ್ದರೆ ನೀವು ದಪ್ಪಗಿರುವವರ ಸಾಲಿನಲ್ಲಿ ಸೇರಿಕೊಳ್ಳುವುದಂತೂ ಗ್ಯಾರಂಟಿ. ಆದರೆ ನೀವು ಗಾಬರಿಯಾಗುವ ಅಗತ್ಯವಿಲ್ಲ ಬೊಜ್ಜು ಕಡಿಮೆ ಮಾಡುವುದು ಅಷ್ಟು ಕಷ್ಟದ ಕೆಲಸವೇನಲ್ಲ. ಬೊಜ್ಜು ಕಡಿಮೆಗೊಳಿಸಲು ನುರಿತ ವೈದ್ಯರು ಈ ಕೆಳಕಂಡ ಉಪಾಯಗಳನ್ನು ಸೂಚಿಸಿದ್ದಾರೆ.

ಸಾಕಷ್ಟು ನೀರು ಕುಡಿಯಿರಿ : ಒಂದು ವೆಬ್‌ಸೈಟ್‌ನ ಪ್ರಕಾರ, ಯಾರು ಹೆಚ್ಚು ನೀರು ಕುಡಿಯುತ್ತಿರುತ್ತಾರೊ, ಅವರು ಬೇರೆಯವರಿಗೆ ಹೋಲಿಸಿದಲ್ಲಿ ಬಹುಬೇಗ ತೂಕ ಕಡಿಮೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಕಾರಣವೇನೆಂದರೆ, ನೀರಿನಿಂದ ಹೊಟ್ಟೆ ತುಂಬುತ್ತದೆ ಹಾಗೂ ಹಸಿವು ಕಡಿಮೆ ಆಗುತ್ತದೆ. ನಾವು ಕಡಿಮೆ ಆಹಾರ ಸೇವಿಸುತ್ತೇವೆ.

ಊಟತಿಂಡಿ ಸೇವನೆ ಅಂತರ ಕಡಿಮೆ ಮಾಡಿ : ಒಂದೇ ಸಲಕ್ಕೆ ಹೆಚ್ಚು ಆಹಾರ ಸೇವನೆ ಮಾಡುವ ಬದಲಿಗೆ ಆಗಾಗ ಒಂದಿಷ್ಟು ಆಹಾರ ಸೇವನೆ ಮಾಡುತ್ತ ಇರಿ. ಹೀಗೆ ಮಾಡುವುದರಿಂದ ದಿನವಿಡೀ ಶಕ್ತಿ ಕಾಯ್ದುಕೊಂಡು ಹೋಗುತ್ತದೆ. ನೇರವಾಗಿ ಹೇಳಬೇಕೆಂದರೆ, ಹಸಿವು ಇದ್ದರೆ ಮಾತ್ರ ತಿನ್ನಿ. ಹೊಟ್ಟೆ ತುಂಬಿದ ಬಳಿಕ ನಿಲ್ಲಿಸಿ ಬಿಡಿ.

ನಿಮ್ಮ ದೇಹದ ಮಾತನ್ನು ಕೇಳಿ :  ನಮ್ಮಲ್ಲಿ ಬಹಳಷ್ಟು ಜನ ಬಾಹ್ಯ ಸಂಕೇತಗಳನುಸಾರ ಆಹಾರ ಸೇವನೆ ಶುರು ಮಾಡುತ್ತಾರೆ ಇಲ್ಲವೇ ತರಾತುರಿಯಲ್ಲಿ ತಿಂದು ಮುಗಿಸುತ್ತಾರೆ. ಬೇರೆಯವರು ಊಟ ಮಾಡಿ ಮುಗಿಸಿದರೆಂದು ನಾವು ಮಾಡಿ ಮುಗಿಸುವುದು, ಅದರ ಬದಲು ನಾವು ನಮ್ಮ ಆಂತರಿಕ ಸಂಕೇತಗಳ ಬಗ್ಗೆ ಗಮನ ಕೊಡಬೇಕು. ನಿಮಗೆ ಹಸಿವಾಗಿದೆಯೋ ಇಲ್ಲವೋ ಎನ್ನುವುದನ್ನು ಕಂಡುಕೊಳ್ಳಬೇಕು. ಆಹಾರ ಬಹಳ ರುಚಿಯಾಗಿದೆ ಎಂದು ಅತಿಯಾಗಿ ಸೇವಿಸಲು ಹೋಗಬೇಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ