ಕಿಯಾರಾಗೆ ಏನು ಇಷ್ಟವಿಲ್ಲವಂತೆ?

ಹೊಸ ಚಿತ್ರ `ಶೇರ್‌ ಶಾಹ್‌’ ಯಶಸ್ವಿ ಆದದ್ದೇ ತಡ, ಎಲ್ಲರೂ ನಾಯಕಿ ಕಿಯಾರಾಳನ್ನು ಹೊಗಳಿದ್ದೇ ಹೊಗಳಿದ್ದು! ಅದು ಅವಳ ಪಾತ್ರದ್ದಾಗಿರಬಹುದು ಅಥವಾ ಚಿತ್ರದ ನಾಯಕ ಸಿದ್ಧಾರ್ಥನ ಜೊತೆಗಿನ ಅವಳ ಖಾಸಾ ದೋಸ್ತಿ ಬಗ್ಗೆ ಇರಬಹುದು. ವಿಷಯ ಅದಲ್ಲ ಇತ್ತೀಚೆಗೆ ಇವಳನ್ನೇ `ಐಡಿಯಲ್ ಶೀ’ ಎಂದು ಭಾವಿಸುವ ಒಬ್ಬ ಹುಡುಗಿ ಐಶ್ವರ್ಯಾ FBನಲ್ಲಿ ಇವಳಂತೆಯೇ ಲುಕ್ಸ್ ಹೊಂದಿ ಎಲ್ಲರ ಗಮನ ಸೆಳೆದಿದ್ದಾಳೆ. ಕಿಯಾರಾ ಅವಳನ್ನು ಹೊಗಳಿದಳು ಕೂಡ. ಎಲ್ಲರೂ ಅವರವರ ಇಷ್ಟದಂತೆ ನಡೆದುಕೊಳ್ಳಬೇಕು, ನಾನಂತೂ ಯಾರ ಕಾರ್ಬನ್‌ಕಾಪಿ ಆಗಲು ಬಯಸಲಾರೆ ಅಂತಾಳೆ. ಮತ್ತೆ ಜನ ನಿನ್ನನ್ನು ಹೇಮಾಮಾಲಿನಿಗೆ ಹೋಲಿಸುತ್ತಾರಲ್ಲ ಎಂದು ಟ್ರೋಲಿಗರು ಕೇಳಿದರೆ ಇವಳು ಜವಾಬು ಕೊಡ್ತಾಳಾ ಕೇಳಿ……!

ರಿಚಾ ಕೊಟ್ಟ ಜವಾಬು

richa_1

ಬಾಲಿವುಡ್‌ ಮಂದಿ FBನಲ್ಲಿ ಎಲ್ಲರಿಗೂ ದಿನೇದಿನೇ ನಿಕಟವಾಗುತ್ತಿದ್ದಂತೆ, ಪಬ್ಲಿಕ್‌ ಇವರನ್ನು ಹೇಗಾದರೂ ಕೆಣಕಬಹುದು ಎಂದು ಭಾವಿಸಿದಂತಿದೆ. ಆದರೆ ರಿಚಾ ಅಂಥದ್ದಕ್ಕೆ ಅವಕಾಶ ಕೊಡಲಿಲ್ಲ. ಜನ, ಅಲಿ ಫಝಲ್ ಜೊತೆ ಇವಳ ಸಂಬಂಧದ ಕುರಿತಾಗಿ, ಆಮೀರ್‌ ಖಾನ್‌ ಕಿರಣ್‌ ರಾವ್‌ ತರಹ ಇವರ ದಾಂಪತ್ಯ ಗೊಟಕ್‌ ಎನ್ನುತ್ತದೆ ಅಂದಾಗ, ರಿಚಾ ಅವರಿಗೆ ಸರಿಯಾಗಿ ತಿರುಗೇಟು ಕೊಟ್ಟಳು! ಅವಳು ಕಡಕ್‌ ಮಾತುಗಳಲ್ಲಿ ಹೇಗೆ ಚಾಟಿ ಬೀಸಿದಳೆಂದು ಇಲ್ಲಿ ನೇರ ಹೇಳುವಂತಿಲ್ಲ…. ಅಂದಿನಿಂದ ಟ್ರೋಲಿಗರು ಬಿಲ್ ಕುಲ್‌ತೆಪ್ಪಗಾದರು. ತನ್ನ ಪಾಡಿಗೆ ತಾನಿದ್ದ ಈ ಪಂಜಾಬಿ ಹುಡುಗಿಯನ್ನು ಅವರೇಕೆ ಹೀಗೆ ಕೆಣಕಬೇಕಿತ್ತು?

ಹಿಂದಿನ ದಮ್ ಖಂಡಿತಾ ಇಲ್ಲ!

kapil-1 - Copy

ಕೊರೋನಾ ನಂತರ ಸೋನಿ ಟಿವಿಯ `ದಿ ಕಪಿಲ್ ಶರ್ಮ ಶೋ’ ಶುರುವಾದಾಗ ಜನ ಸಖತ್‌ ಕಾಮಿಡಿಯ ಕಚಗುಳಿಗಾಗಿ ಕಾದಿದ್ದೇ ಬಂತು, ಆದರೆ ಈ ಶೋ ಮಾತ್ರ ದಿನೇದಿನೇ ಸಪ್ಪೆ ಸಪ್ಪೆ ಅನಿಸತೊಡಗಿದೆ. ಮತ್ತೆ ಮತ್ತೆ ಅದೇ ಹಳೆ ಮುಖಗಳಾದ ಗೋವಿಂದ, ಧರ್ಮೇಂದ್ರ, ಮತ್ತಾರೋ ಹಿರಿಯ ಕಲಾವಿದರು ಬಂದು ಇಡೀ ಕಂಟೆಂಟ್‌ ಠುಸ್‌ ಪಟಾಕಿ ಆಗಿಹೋಗಿದೆ. ಮತ್ತೆ ಮತ್ತೆ ಎಷ್ಟು ಅಂತ ಬಾಡಿ ಶೇಮಿಂಗ್‌ ಜೋಕ್ಸ್ ಸಹಿಸಲು ಸಾಧ್ಯ? ಹಿಂದಿನಂತೆ ಕಳೆಕಳೆಯಾಗಿರದೆ, ಕೇವಲ ಫಿಲ್ಮೀ ಪ್ರಮೋಶನ್‌ ಗಷ್ಟೇ ಸೀಮಿತ ಆಗಿಹೋಗಿದೆ. ಸ್ಟಾಂಡ್‌ ಅಪ್‌ ಕಾಮಿಡಿ, ಕಚಗುಳಿಯ ಜೋಕ್ಸ್ ಮರೆಯಾಗಿ ಬರೀ ಬಾಡಿ ಶೇಮಿಂಗ್‌ ಒಂದೇ ಉಳಿದುಬಿಟ್ಟಿದೆ ಎಂಬುದು ಕಪಿಲ್‌ ಗಮನಕ್ಕೆ ಬಂದಂತಿಲ್ಲ. ಮತ್ತೆ ಹೊಸತನ ಕಟ್ಟಿಕೊಂಡು ಗರಿಗೆದರದೆ ಇದ್ದರೆ, ಈ ಶೋ ಟೋಟಲ್ ಫ್ಲಾಪ್‌ ಎನಿಸುವ ದಿನ ದೂರವಿಲ್ಲ.

ತಾರೆಗೇಕೆ ನೆಲಕ್ಕೆ ಇಳಿಯುವ ಸ್ಥಿತಿ?

aaryan_

ಇತ್ತೀಚೆಗೆ ಬಾಲಿವುಡ್‌ ನಲ್ಲಿ ಎಲ್ಲೆಡೆ ಒಬ್ಬನೇ ಸ್ಟಾರ್‌ ಪುತ್ರ ಆವರಿಸಿಕೊಂಡು ಬಿಟ್ಟಿದ್ದಾನೆ, ಆರ್ಯನ್‌ ಖಾನ್‌! ತನ್ನ ಫಿಲ್ಮಿ ಡೆಬ್ಯು ಕಾರಣದಿಂದಲ್ಲ, ಮಾದಕ ವಸ್ತುಗಳ ಜಾಲದಡಿ ಬಂಧಿಸಲ್ಪಟ್ಟು ಇವನಪ್ಪ ಮಹಾನ್‌ ಖಾನ್‌ ತಲೆ ತಗ್ಗಿಸದಂತೆ ಮಾಡಿದ್ದಾನೆ. ಇಲ್ಲಿ ಪೇರೆಂಟಿಂಗ್‌ ಬಲು ಮುಖ್ಯ ಪಾತ್ರ ವಹಿಸುತ್ತದೆ. ಇಂದಿನ ಯುವಜನತೆಯಂತೂ ಉತ್ತಮ ಸಾಹಿತ್ಯದಿಂದ ಮಾರು ದೂರ….. ಸದಾ ಸೋಶಿಯಲ್ ಮೀಡಿಯಾ ಒಂದಿದ್ದುಬಿಟ್ಟರೆ ಸಾಕು. ತಾಯಿ ತಂದೆ, ಕುಟುಂಬ, ಅಣ್ಣತಂಗಿ…. ಯಾರೂ ಬೇಡ! ನಿರರ್ಥಕ ಅರೆಬರೆ ಮಾಹಿತಿಯ ಕಣಜವಾದ ಸೋಶಿಯಲ್ ಮೀಡಿಯಾ, ಇಂದಿನ ಯುವಜನತೆಯನ್ನು ದಾರಿ ತಪ್ಪಿಸಿ ಮತ್ತೆ ಹಿಂದಿನ ಜೀವನಕ್ಕೆ ಮರಳದಂತೆ ಮಾಡಿದೆ ಎಂದೇ ಹೇಳಬೇಕು. ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ, ಕುಟುಂಬದ ಮಹತ್ವ, ಉತ್ತಮ ಸಾಹಿತ್ಯ ಕಲಿಸಿದ್ದರೆ, ಅವರ ಕೆರಿಯರ್‌ ಮಾತ್ರವಲ್ಲ, ಅವರ ಭವಿಷ್ಯ ಬಂಗಾರವಾದೀತು, ಸಮಯ ಇರುವಾಗಲೇ ಎಚ್ಚೆತ್ತುಕೊಳ್ಳಬೇಕು!

ಬರಲಿದೆ ಬೆಸ್ಟ್ ನೆಕ್ಸ್ಟ್

manish_1 - Copy

ನಿ ಟಿವಿಯ `ಇಂಡಿಯಾಸ್‌ ಬೆಸ್ಟ್ ಡ್ಯಾನ್ಸರ್‌’ ಶೋನ ಎರಡನೇ ಸೀಸನ್‌ ಶುರುವಾಗಿಯೇ ಬಿಟ್ಟಿತು! ಸೋಇದರ ಹೋಸ್ಚ್ ಮನೀಶ್‌ ಪಾಲ್‌ ತನ್ನ ಮಜವಾದ ಮಾತುಗಳಿಂದ ಸ್ಪರ್ಧಿಗಳು ಜಡ್ಜ್ ಗಳನ್ನು ನಗಿಸಲು ಬರುತ್ತಿದ್ದಾನೆ. ಮನೀಶ್‌ ಹೇಳುತ್ತಾನೆ, ಈ ಸೀಸನ್‌ ಹಿಂದಿನ ಸೀಸನ್‌ ಗಿಂತಲೂ ಬಹಳ ಚಾಲೆಂಜಿಂಗ್‌ ಆಗಿರುತ್ತದಂತೆ. ಹಿಂದೆಲ್ಲ ಒಂದು ಪವರ್‌ ಮೂವೀನಿಂದಲೇ ಕೆಲಸ ಆಗಿಹೋಗುತ್ತಿತ್ತು, ಆದರೆ ಈ ಸಲ ಜಡ್ಜ್ ಗಳನ್ನು ಇಂಪ್ರೆಸ್‌ ಮಾಡಲು ಕನಿಷ್ಠ 3 ಪವರ್‌ ಮೂವೀಸ್ ಅನಿವಾರ್ಯ. ಸಾಲುಗಳು, ಮೋಜು ಮಸ್ತಿ ತುಂಬಿದ ಈ ಶೋ ಈಗಾಗಲೇ ಗೆಲ್ಲುವ ಲಕ್ಷಣ ತೋರುತ್ತಿದೆ!

ಎತ್ತರಕ್ಕೆ ಏರಿದ ಪರಿಣೀತಿ

pariniti_1 - Copy

 

ಅರೆ, ಈಕೆ ತನ್ನ ಕೆರಿಯರ್‌ ನಲ್ಲಿ ಅತಿ ಎತ್ತರಕ್ಕೆ ಏರಿಬಿಟ್ಟಳು ಅಂದುಕೊಳ್ಳಬೇಡಿ! ಅಸಲಿ ವಿಷಯ ಅಂದ್ರೆ, ಪರಿಣೀತಿ ಚೋಪ್ರಾ, ಅಮಿತಾಬ್, ಅನುಪಮ್ ರಂಥ ಮಹಾನ್‌ ಘಟಾನುಘಟಿಗಳ ಮಲ್ಟಿ ಸ್ಟಾರ್‌`ಊಂಚಾಯಿ’ ಚಿತ್ರದ ಸೆಟ್ಟೇರಿದಳು. ಈ ಆಲದ ಮರಗಳ ನಡುವೆ ಈ ಸಣ್ಣ ಗಿಡಗಂಟಿ ಕಂಡೀತೇ ಎಂಬುದು ಚಿತ್ರ ರಿಲೀಸ್‌ಆದ ನಂತರವೇ ತಿಳಿಯಬೇಕು. ಆದರೆ ಸೂರಜ್‌ ಬಡ್ ಜಾತ್ಯಾರಂಥ ಮಹಾನ್‌ ನಿರ್ದೇಶಕರ ಕ್ಯಾಂಪ್‌ ಸೇರಿದ್ದಾಳೆಂದ ಮೇಲೆ ಪರಿಣೀತಿ ಪರಿಣಿತಳಾಗುವುದರಲ್ಲಿ ಸಂದೇಹವಿಲ್ಲ. ಅಕ್ಕಾ ಪ್ರಿಯಾಂಕಾ ಚೋಪ್ರಾಳ ಆಸರೆಯಂತೂ ಇದ್ದೇ ಇದೆ.

ಇದರಲ್ಲಿ ಮುಚ್ಚಿಡುವ ವಿಷಯ ಏನಿದೆ?

vidhut_1

ಯಾವ ರೀತಿ ವಿದ್ಯುತ್‌ ಜಮಾಲ್ ಓಪನ್‌ ಆಗಿ ಡೂಪ್‌ ಇಲ್ಲದೇ ತನ್ನ ಆ್ಯಕ್ಷನ್‌ ಸೀನ್ಸ್ ತಾನೇ ನಿಭಾಯಿಸುತ್ತಾನೋ ಅದೇ ತರಹ ಓಪನ್‌ ಮೈಂಡೆಡ್‌ ಆಗಿ ಬಡಬಡ ಮಾತನಾಡುತ್ತಾನೆ. ಇತ್ತೀಚೆಗೆ ಅವನು ತನ್ನ ಗರ್ಲ್ ಫ್ರೆಂಡ್‌ ನಂದಿತಾಳ ಜೊತೆ ಎಂಗೇಜ್‌ಮೆಂಟ್‌ ಮಾಡಿಕೊಂಡು, ಅದನ್ನು ಪಬ್ಲಿಕ್‌ ಜೊತೆ ಹಂಚಿಕೊಂಡ. ಮದುವೆಯೇ ಆಗಿದ್ದರೂ ಅದನ್ನು ಮುಚ್ಚಿರಿಸಿ, ನಾವಿಬ್ಬರೂ ಉತ್ತಮ ಸ್ನೇಹಿತರು ಎಂದು ಹೇಳಿಕೊಳ್ಳುವ ಎಷ್ಟೋ ಸಿನಿ ತಾರೆಯರಿಗಿಂತ, ಎಂಗೇಜ್‌ ಆಗಿದ್ದೇನೆ ಎಂದು ಹೇಳುಕೊಳ್ಳುವುದು ಮೇಲಲ್ಲವೇ….?

ಬಾಲಿವುಡ್ನಲ್ಲಿ ಹೆಚ್ಚುತ್ತಿರುವ ರೇಸಿಸಮ್

nawaj_1 - Copy

ಹಿರಿಯ, ಗಂಭೀರ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ನವಾಜುದ್ದೀನ್‌ ಪ್ರಕಾರ, ಬಾಲಿವುಡ್‌ ನಲ್ಲಿ ಕೇವಲ ತಾವು ತಮ್ಮವರು ಎಂದು ರಕ್ತಸಂಬಂಧಿಗಳಿಗೆ ಆದ್ಯತೆ ನೀಡುವುದು ಮಾತ್ರವಲ್ಲದೆ, ವರ್ಣಭೇದ ನೀತಿ (ರೇಸಿಸಮ್) ಧಾರಾಳ ಹೆಚ್ಚುತ್ತಿದೆಯಂತೆ! ನಂಬಲರ್ಹ ಮೂಲಗಳ ಪ್ರಕಾರ ಈ ಕಾರಣದಿಂದಲೇ ನವಾಜುದ್ದೀನ್‌ ಹಲವು ಚಿತ್ರಗಳಿಂದ ರಿಜೆಕ್ಟ್ ಆದನಂತೆ. ಏನು ಮಾಡುವುದು? ಬಾಲಿವುಡ್‌ ಸಹ ಈ ಧಾರ್ಮಿಕ ಸಮಾಜದ ಒಂದು ಭಾಗವೇ ಅಲ್ಲವೇ? ಜಾತಿ, ಕೋಮು, ವರ್ಣಭೇದಗಳಿಂದ ಅದು ಜನರನ್ನು ಭೇದ ಮಾಡುತ್ತಲೇ ಇರುತ್ತದೆ. ನವಾಜ್‌ ನಂಥ ಪ್ರತಿಭಾವಂತರಿಗೆ ಇದು ದೊಡ್ಡ ಸಾವೇನಲ್ಲ.

ಆಯುಷ್ಮಾನ್ಇದೀಗ ಆ್ಯಕ್ಷನ್ಚಿತ್ರಗಳಲ್ಲಿ

aaushmaan-1 - Copy

ಇದುವರೆಗೂ ತನ್ನ ಪಾತ್ರಗಳಲ್ಲಿ ಅತಿ ವೈವಿಧ್ಯತೆ ಉಳಿಸಿಕೊಳ್ಳಲು ರೊಮ್ಯಾಂಟಿಕ್‌ ಅಥವಾ ಸಾಮಾಜಿಕ ಸಂದೇಶವಿರುವ ಚಿತ್ರಗಳಲ್ಲಿ ನಟಿಸುತ್ತಿದ್ದ ಆಯುಷ್ಮಾನ್‌ ಖುರಾನಾ, ಇದೀಗ `ಆ್ಯಕ್ಷನ್‌ ಹೀರೋ’ ಚಿತ್ರದಲ್ಲಿ ಪಕ್ಕಾ ಆ್ಯಕ್ಷನ್‌ ಹೀರೋ ತರಹ ಫೈಟ್‌ಮಾಡಲಿದ್ದಾನಂತೆ. ತನಗೆ ಖಂಡಿತಾ ಹೊಡೆದಾಟ ಬರಲ್ಲ, ಅದಕ್ಕಾಗಿ ತರಬೇತಿ ಪಡೆಯುತ್ತಿದ್ದೇನೆ ಎನ್ನುತ್ತಾನೆ. ನಿನಗೆ ಹೊಡೆದಾಟ ಬರಲ್ಲ ಅಂದವರಾರು? ಘಟಾನುಘಟಿಗಳನ್ನೇ ಬಾಕ್ಸ್ ಆಫೀಸ್‌ ಪೈಪೋಟಿಯಲ್ಲಿ ಮಣ್ಣು ಮುಕ್ಕಿಸಿದ್ದಿ, ಎಂದು ಬಾಲಿವುಡ್‌ ತಜ್ಞರು ಅಭಿಪ್ರಾಯ ಪಡುತ್ತಾರೆ.

ಬೆಟರ್ಬಿಗ್ಬೀ ಗೆಟ್ಸ್ ರಿಟೈರ್ಡ್‌!

amitabh-1 - Copy

ಅಯ್ಯಯ್ಯೋ…. ನಾವು ಹೀಗೆ ಹೇಳ್ತಿಲ್ಲ, ಬದಲಿಗೆ ಬಾಲಿವುಡ್‌ ನ ಖ್ಯಾತ ಸಂಭಾಷಣೆಕಾರ, ಲೇಖಕ, ಸಲ್ಮಾನ್‌ ತಂದೆ ಸಲೀಂ ಖಾನ್‌ ಹೇಳುತ್ತಿದ್ದಾರೆ! ಅವರ ಪ್ರಕಾರ, ಅಮಿತಾಭ್ ತಮ್ಮ ಕೆರಿಯರ್‌ ನಲ್ಲಿ ಈಗಾಗಲೇ ಸಾಕಷ್ಟು ಪ್ರಭಾವಿ ಪಾತ್ರಗಳನ್ನು ನಿರ್ವಹಿಸಿದ್ದಾರೆ, ಭಾರತೀಯ ಚಿತ್ರರಂಗದ ಎಲ್ಲ ಎತ್ತರದ ಗಿರಿಶಿಖರ ಮುಟ್ಟಿದ್ದಾರೆ. ಇತ್ತೀಚೆಗೆ ಅವರಿಗೆ ಸಿಗುತ್ತಿರುವ ಪಾತ್ರಗಳನ್ನು ಕಂಡರೆ, ಅವರಿಗೆ ಒಪ್ಪುವ ಪಾತ್ರಗಳ ಕುರಿತು ಯಾರೂ ಸರಿಯಾಗಿ ಬರೆಯುತ್ತಿಲ್ಲ ಎನಿಸುತ್ತದೆ. ಇದರರ್ಥ ಇವರು ಬಾಲಿವುಡ್‌ ಗೆ ವಿದಾಯ ಕೋರುವುದೇ ಸರಿ. ಇವರು ಸಲಹೆ ಏನೋ ಕೊಟ್ಟರು. ಆದರೆ ಸಿನಿಮಾ, ಟಿವಿ, ಜಾಹೀರಾತುಗಳು ಬಚ್ಚನ್‌ ಗೆ ವಿದಾಯ ಕೋರಲು ರೆಡಿಯೇ? ಅಮಿತಾಭ್ ಏನು ಹೇಳುತ್ತಾರೆ….? ಕಾದು ನೋಡೋಣ.

ನನಗೆ ಸರಿಸಾಟಿ ಯಾರಿಹರು….?

ranveer_1 - Copy

ದೀಪಿಕಾಳ ಪತಿ ರಣವೀರ್‌ ಸಿಂಗ್‌ ಬಗ್ಗೆ ಒಪ್ಪಬೇಕಾದದ್ದೇ…. ನಂಬಲರ್ಹ ಸುದ್ದಿಗಳ ಪ್ರಕಾರ ಅಮಿತಾಭ್, ಅಜಯ್‌ ದೇವಗನ್‌, ಅಕ್ಷಯ್‌ ಕುಮಾರ್‌ ರಂಥ ಘಟಾನುಘಟಿಗಳ ಸಾಲಿಗೆ ತಾನು ಮಾತ್ರ ಸೇರಬಲ್ಲೆ ಎಂದು ರಣವೀರ್‌ ಎದೆಯೊಡ್ಡಿ ಹೇಳಿಕೊಳ್ಳುತ್ತಿದ್ದಾನಂತೆ ಅಂಥ ಸಕ್ಸೆಸ್‌ ತಾನು ಅಂತ. ಏನಪ್ಪ, ಅಹಂಕಾರ ನೆತ್ತಿಗೇರಿದೆ ಎಂದು ಕೇಳುತ್ತಿದ್ದಾರೆ ಬಾಲಿವುಡ್‌ ತಜ್ಞರು. ಇದೀಗ ತಾನೇ ಮೊಟ್ಟೆಯಿಂದ ಮರಿಯಾಗಿ ಹೊರಬಂದ ಈ ಹಕ್ಕಿ ಈಗಾಗಲೇ ಬಾಂದಳದ ಅತಿ ಎತ್ತರದಲ್ಲಿ ಹಾರಾಡಲು ಸಾಧ್ಯವೇ? ಕೊರೋನಾ ಮಹಿಮೆಯಿಂದಾಗಿ ಕಿರುತೆರೆಯ ಅವಕಾಶ ಸಿಕ್ಕರೆ ಸಾಕೆಂದು ಮಹಾನ್‌ ಸ್ಟಾರ್‌ ಗಳೇ ತಿಣುಕುತ್ತಿರುವಾಗ ಇದೆಂಥ ದುರಂಹಕಾರದ ಮಾತುಗಳು…..? ಮಾತಲ್ಲಿ ಸ್ವಲ್ಪ ಹಿಡಿತವಿರಲಿ ಎನ್ನುತ್ತಾರೆ ಬಾಲಿವುಡ್‌ ತಜ್ಞರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ