ರಾಘವೇಂದ್ರ ಅಡಿಗ ಎಚ್ಚೆನ್.

“ನನ್ನ ಸೊಸೆ ರಾಧಿಕಾ ಪಂಡಿತ್ ಮಹಾನ್ ಕಿಲಾಡಿ, ನಮ್ಮ ರಾಧಿಕಾ ತುಂಬಾ ಚೆನ್ನಾಗಿ ಕಥೆ ಸೆಲೆಕ್ಟ್‌ ಮಾಡುತ್ತಾಳೆ. ಕಥೆ ಆಯ್ಕೆ ಮಾಡೋದರಲ್ಲಿ ಅವಳು ಯಶ್ ಗಿಂತಲೂ ಕಿಲಾಡಿ. ” ಎಂದು ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಹೇಳಿದ್ದಾರೆ.
ʻಪಿಎ ಪ್ರೊಡಕ್ಷನ್ಸ್‌ʼ ಹೆಸರಿನ ಹೊಸ ರ್ಮಾಣ ಸಂಸ್ಥೆ ಆರಂಭಿಸಿರುವ ಪುಷ್ಪಾ ಅರುಣ್ ಕುಮಾರ್  ಈ ಬ್ಯಾನರ್‌ ಅಡಿಯಲ್ಲಿ ಚೊಚ್ಚಲ ಸಿನಿಮಾ ʻಕೊತ್ತಲವಾಡಿʼ ಎನ್ನುವ ಸಿನಿಮಾ ಹೊರತರುತ್ತಿದ್ದು ಅದರ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
“ನನ್ನ ಮಗಳು, ಮಗ ಯಾರಿಗೂ ನಾನು ನಿರ್ಮಾಣ ಸಂಸ್ಥೆ ಪ್ರಾರಂಭಿಸುವ ಬಗ್ಗೆ ಗೊತ್ತಿರಲಿಲ್ಲ. ನಾನೊಂದು ಚಿಕ್ಕ ಪ್ರಯತ್ನ ಮಾಡಿದ್ದೇನೆ. ಅದರಲ್ಲಿಯೂ ನನ್ನ ಸೊಸೆ ರಾಧಿಕಾ ಪಂಡಿತ್ ಕಥೆಗಳ ಆಯ್ಕೆಯಲ್ಲಿ ಯಶ್ ಅನ್ನು ಮೀರಿಸುತ್ತಾಳೆ. ಅವಳು ನನ್ನ ಸೊಸೆ ಆಗುವುದಕ್ಕೆ ಮುನ್ನವೂ ನಾನು ಅವಳ ಫ್ಯಾನ್!  ಕಥೆ ವಿಚಾರದಲ್ಲಿ ತುಂಬಾ ಚೆನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾಳೆ. ಆ ವಿಚಾರದಲ್ಲಿ ನಾನು ಅವಳಿಂದ ಕಲಿಯಬೇಕಾಗಿರೋದು ತುಂಬಾ ಇದೆ” ಎಂದು ಅವರು ಹೇಳಿದ್ದಾರೆ.

WhatsApp-Image-2025-05-21-at-5.13.15-PM-768x512

ಯಶ್ ಸಂಪಾದನೆ ಬೇರೆ ನನ್ನ ಸಂಪಾದನೆ ನನ್ನದು!
“ಯಶ್ ಇದಾಗಲೇ ಒಂದು ನಿರ್ಮಾಣ ಸಂಸ್ಥೆ ಪ್ರಾರಂಭಿಸಿರಬಹುದು ಆದರೆ ಅವನ ಸಂಪಾದನೆ ಬೇರೆ ನನ್ನ ಸಂಪಾದನೆ ಬೇರೆ” ಎಂದ ಪುಷ್ಪಾ “ಎಲ್‌ಐಸಿಯಲ್ಲಿ ನಿಮ್ಮ ಹಣವನ್ನು ನೀವೆ ಪಾವತಿಸಬೇಕು. ಗಂಡನ ಅಕೌಂಟ್‌ನಿಂದ ಹಣ ಕೊಡುತ್ತೇವೆ ಅಂತಂದರೆ ಎಲ್‌ಐಸಿ ಒಪ್ಪಿಕೊಳ್ಳುವುದಿಲ್ಲ. ಅದನ್ನು ರಿಜೆಕ್ಟ್‌ ಮಾಡುತ್ತದೆ. ಆಗ ಮಗ ಬೇರೆ, ಗಂಡ ಬೇರೆ, ಮಗಳು ಬೇರೆ, ಸಂಪಾದನೆ ಎಲ್ಲರದ್ದೂ ಬೇರೆ ಬೇರೆ ಅನ್ನೋ ಪಾಠವನ್ನು  ನಾನು ಅಲ್ಲಿಂದ ಕಲಿತಿದ್ದೇನೆ. ಯಶ್ ದುಡಿಯುವುದು ಅವನ ಸಾಮರ್ಥ್ಯದ ಮೇಲೆ ನಿಂತಿದೆ. ಹಾಗೆಂದು ನಾನು ಯಶ್ ತಾಯಿ ಎನ್ನುವ ಕಾರಣದಿಂದ ಎಷ್ಟು ದಿನ ನನಗೆ ಗೌರವ ಕೊಡುತ್ತೀರಾ? ಅದೇ ನಾನು ನಿರ್ಮಾಪಕಿಯಾದರೆ ಆಗ ಸಿಕ್ಕುವ ಗೌರವವೇ ಬೇರೆ.” ಎಂದು ಹೇಳಿದ್ದಾರೆ.
ಇನ್ನು ತಮ್ಮ ಪುತ್ರಿಯ ಬಗ್ಗೆ ಮಾತನಾಡಿದ ಪುಷ್ಪಾ “ನನ್ನ ಮಗಳಿಗೆ ಸಿನಿಮಾ ಬಗ್ಗೆ ಆಸಕ್ತಿ ಇಲ್ಲ. ನಾನೇನು ಮಾಡುತ್ತಿದ್ದೇನೆ  ಎನ್ನುವುದು ಗೊತ್ತು ಆದರೆ ಸಿನಿಮಾ ಬಗೆಗೆ ಹೆಚ್ಚೇನೂ ಕೇಳುವುದಿಲ್ಲ. ಅಮ್ಮ, ಅಣ್ಣ ಅವರೇನೋ ಮಾಡುತ್ತಿದ್ದಾರೆ ಎಂದು ಗೊತ್ತು. ಆದರೆ ಹೆಚ್ಚು ಆಸಕ್ತಿ ತೋರಿಸಲ್ಲ” ಎನ್ನುತ್ತಾರೆ.

WhatsApp-Image-2025-05-21-at-5.13.15-PM-1-768x512

ಇದಲ್ಲದೆ ‘ಕೆಲಸ ಮಾತನಾಡಬೇಕು, ನಾವು ಮಾತನಾಡಬಾರದು. ಯಶ್‌ ಮನೆಯವರ ಸಿನಿಮಾ ಎಂದರೆ ಇಡೀ ದೇಶ ನೋಡುತ್ತದೆ. ಅದಕ್ಕೆ ತಕ್ಕ ರೀತಿ ಮಾಡಿ. ಇಲ್ದಿದ್ದರೆ ಮಾಡಬೇಡಿ. ಸಿನಿಮಾ ಏನು ಕೇಳುತ್ತದೆಯೋ ಅದನ್ನು ಕೊಡಬೇಕು. ಸಿನಿಮಾಗೆ ಮೋಸ ಮಾಡಬಾರದು ಅಂತ ಚಿತ್ರತಂಡಕ್ಕೆ ನಾನು ಹೇಳಿದ್ದೆ. ಪ್ರೇಕ್ಷಕರ ಪ್ರತಿಕ್ರಿಯೆ ನಾವು ಕಾಯುತ್ತೇವೆ’ ಎಂದಿದ್ದಾರೆ ಯಶ್ ತಾಯಿ ಪುಷ್ಪ ಅರುಣ್‌ ಕುಮಾರ್‌.
ಇದೇ ವೇಳೆ “ನಮಗೆಲ್ಲಾ ಅಣ್ನಾವ್ರ ಮನೆಯೇ ಆದರ್ಶ. ರಾಜ್ ಕುಮಾರ್ ಅಭಿಮಾನಿ ನಾನು. ಮುಂಬರುವ ದಿನಗಳಲ್ಲಿ ಅಣ್ನಾವ್ರ ಮಗ ಶಿವಣ್ಣನಿಗಾಗಿ ಒಂದು ಸಿನಿಮಾ ಮಾಡುವ ಆಸೆ ಇದೆ.” ಎಂದು ಪುಷ್ಪಾ ತಮ್ಮ ಮನದಿಂಗಿತ ಹೇಳಿದ್ದಾರೆ.

WhatsApp-Image-2025-05-21-at-5.13.15-PM-3-683x1024

ಮುಂದಿನ ಚಿತ್ರಕ್ಕೆ ಶರಣ್ ನಾಯಕ!
“ಕೊತ್ತಲವಾಡಿ” ಸಿನಿಮಾ ನನ್ನ ಸಂಸ್ಥೆಯಿಂದ ಬರುತ್ತಿರೋ ಮೊದಲ ಚಿತ್ರ. ನಿರ್ಮಾಣ ಸಂಸ್ಥೆಯಿಂದ ಬರುವ ಮೊದಲ ಚಿತ್ರ ಹೇಗೋ ಏನೋ ಎನ್ನುವ ಕಾರಣದಿಂದ ಶರಣ್ ಅವರಿಗೆ ನಾನು ಸಿನಿಮಾ ಮಾಡಲಿಲ್ಲ. ಇದು ನನಗೊಂದು ಅನುಭವ ಪಾಠ. ಆದರೆ ನಮ್ಮ ಸಂಸ್ಥೆಯಿಂದ ಬರುವ ಮುಂದಿನ ಚಿತ್ರದಲ್ಲಿ ಶರಣ್ ನಾಯಕನಾಗಲಿದ್ದಾರೆ.” ಎಂದು ನಿರ್ಮಾಪಕಿಯಾಗಿರುವ ಯಶ್ ತಾಯಿ ಪುಷ್ಪಾ ಮಾಧ್ಯಮಗೋಷ್ಟಿಯಲ್ಲಿ ಘೋಷಿಸಿದ್ದಾರೆ. “ನಾನು ಹಾಗೂ ಶರಣ್ ಅವರ ತಾಯಿ ಆತ್ಮೀಯರು, ಅವರ ಮನೆ ಹಾಗೂ ನಮ್ಮ ನಡುವೆ ಬಹಳ ಹಿಂದಿನ ಸ್ನೇಹವಿದೆ. ಆದರೆ ಶರ್ಣ ನೂರಾರು ಚಿತ್ರಗಳಲ್ಲಿ ಅಭಿನಯಿಸಿ ಅನುಭವ ಗ್ಳಿಸಿಕೊಂಡಿದ್ದಾರೆ. ನಾನಿನ್ನೂ ಈ ಕ್ಷೇತ್ರಕ್ಕೆ ಹೊಸಬಳು ಹಾಗಾಗಿ ಮೊದಲ ಚಿತ್ರದಲ್ಲೇ ಅವನನ್ನು ನಾಯಕನನ್ನಾಗಿ ಮಾಡಿಕೊಳ್ಳುವ ಧೈರ್ಯವಾಗಲಿಲ್ಲ” ಎಂದು ಅವರು ಹೇಳಿದ್ದಾರೆ.

kothalavadi-movie-team

ರಾಕಿಂಗ್ ಸ್ಟಾರ್’ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ಇತ್ತೀಚೆಗೆ ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿದರು. ಅವರ ‘ಪಿಎ ಪ್ರೊಡಕ್ಷನ್ಸ್’ ಸಂಸ್ಥೆಯಿಂದ ‘ಕೊತ್ತಲವಾಡಿ’ ಸಿನಿಮಾ ಸಿದ್ಧವಾಗುತ್ತಿದೆ. ಇದು ಅವರ ಮೊದಲ ಸಿನಿಮಾ. ಈ ಚಿತ್ರದ ಟೀಸರ್‌ ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಯಶ್‌ ತಂದೆ ಅರುಣ್‌ ಕುಮಾರ್‌, ನಿರ್ಮಾಪಕಿ ಪುಷ್ಪ ಅರುಣ್‌ ಕುಮಾರ್‌, ಪೃಥ್ವಿ ಅಂಬಾರ್‌ , ಕಾವ್ಯಾ ಶೈವ, ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ, ನಿರ್ದೇಶಕ ಶ್ರೀರಾಜ್ ಮುಂತಾದವರು ಪಾಲ್ಗೊಂಡಿದ್ದರು. ಶರಣ್‌ ಅವರು ಟೀಸರ್‌ ಬಿಡುಗಡೆ ಮಾಡಿ ಶುಭ ಕೋರಿದರು.
ಹಿರಿಯ ನಿರ್ದೇಶಕರಾದ ಕೆವಿ ರಾಜು, ರವಿಶ್ರೀವತ್ಸ ಗರಡಿಯಲ್ಲಿ ಕೆಲಸ ಮಾಡಿರುವ ನಿರ್ದೇಶಕ ಶ್ರೀರಾಜ್‌  ಪಾಲಿಗಿದು ಚೊಚ್ಚಲ ಸಿನಿಮಾ. ಸಿನಿಮಾದಲ್ಲಿ ಪೃಥ್ವಿ ಅಂಬಾರ್ ಅವರು ಮಾಸ್ ಆಗಿರುವ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಹಾಡುಗಳಿಗೆ ವಿಕಾಸ್‌ ವಸಿಷ್ಠ ಸಂಗೀತ ಸಂಯೋಜಿಸಿದ್ದಾರೆ. ಕಾರ್ತಿಕ್ ಎಸ್. ಛಾಯಾಗ್ರಹಣ ಮಾಡಿದ್ದಾರೆ. ರಾಮಿಸೆಟ್ಟಿ ಪವನ್ ಸಂಕಲನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ವಿ. ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್, ಪ್ರಮೋದ್ ಮರವಂತೆ, ಗೌಸ್ ಪಿರ್ ಸಾಹಿತ್ಯ ಬರೆದಿದ್ದಾರೆ. ಅಭಿನಂದನ್‌ ಕಶ್ಯಪ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ