ಹಳೆಯ ಕಂದಾಚಾರದ ವಿಚಾರಗಳ ಮಾವನನ್ನು ಜಾಗೃತಗೊಳಿಸಲು ಅಳಿಯ ಸುರೇಶ್ ಅಂತಹ ಯುವ ಉಪಾಯವನ್ನು ಹುಡುಕಿದ…..? ಅದರಿಂದ ಹಾವು ಸತ್ತಿತು, ಆದರೆ ಕೋಲು ಮುರಿಯಲಿಲ್ಲ, ಇದಾದುದು ಹೇಗೆ……..?
ಬಾಗಿಲು ಕರೆಗಂಟೆ ಬಾರಿಸುವ ಬದಲು ಬಾಗಿಲು ಮೇಲೆ ಟಕ್…. ಟಕ್… ಎಂದು ಶಬ್ದ ಕೇಳಿ ಬಂತು. ಬಂದವರ ಧ್ವನಿ ಕೇಳಿ ಯಾರು ಬಂದಿದ್ದಾರೆಂದು ನನಗೆ ಗೊತ್ತಾಗಿಹೋಯಿತು.
“ನಿಲ್ಲು…… ನಿಲ್ಲು…. ನಾನು ಬರುತ್ತಿದ್ದೇನೆ,” ಎಂದು ಕುಳಿತಲ್ಲಿಂದಲೇ ಹೇಳಿದೆ.
ಧ್ವನಿ ಕೇಳಿಸಿಕೊಂಡ ನನ್ನ ಹೆಂಡತಿ, “ಬಹುಶಃ ಅಣ್ಣ ಬಂದಿದ್ದಾರೆಂದು ಅನಿಸುತ್ತದೆ,” ಎಂದು ಹೇಳುತ್ತಲೇ ಅವಳು ಬಾಗಿಲು ತೆಗೆದಳು.
“ಬನ್ನಿ…. ಬನ್ನಿ…… ಬಹಳ ದಿನಗಳ ಬಳಿಕ ತಮ್ಮ ಆಗಮನವಾಯ್ತು.”
“ಅತ್ತಿಗೆ ನಾನು ಒಂದು ವಿಶೇಷ ಕೆಲಸದ ಪ್ರಯುಕ್ತ ನಿಮ್ಮ ಬಳಿ ಬಂದಿದ್ದೀನೆ. ಎಲ್ಲಕ್ಕೂ ಮೊದಲು ನೀವು ಚಹಾ ಮಾಡಿ.”
ನಂದಿತಾಳಿಗೆ ಚಹಾದ ಬೇಡಿಕೆ ಕೊಡುತ್ತಿದ್ದಾರೆಂದು, ಇಂದು ಅವರಿಗೆ ಅವರದ್ದೇ ಆದ ವಿಶೇಷ ಕೆಲಸ ಇದೆ ಅನಿಸುತ್ತೆ. ನಾನು ನನ್ನ ಮುಂದಿದ್ದ ಕಾಗದ ಪತ್ರಗಳನ್ನೆಲ್ಲ ಬದಿಗೆ ತೆಗೆದಿಟ್ಟೆ. ಏಕೆಂದರೆ ಅವರ ಆಗಮನದಿಂದ ನನಗೂ ಬಹಳ ಖುಷಿಯಾಗಿತ್ತು.
“ಹ್ಞಾಂ ಹೇಳಿ…. ಅಂಥದ್ದೇನು ಕೆಲಸ?” ನಾನು ಪ್ರಶ್ನಿಸಿದೆ.
“ನೋಡಿ ಸುರೇಶ್, ನಾನು ನನ್ನ ಮಗಳು ಚಿತ್ರಾಳ ಮದುವೆ ನಿಗದಿ ಮಾಡಲು ನಿರ್ಧರಿಸಿದ್ದೇನೆ. ಹುಡುಗ ಕೂಡ ಒಳ್ಳೆಯವನು. ಅವನ ಮನೆತನ ಕೂಡ ಚೆನ್ನಾಗಿದೆ. ನನಗೆ ಹಣದ ಯಾವುದೇ ಕೊರತೆ ಇಲ್ಲ. ನನಗಿರುವವರು ಇಬ್ಬರೇ ಹೆಣ್ಣುಮಕ್ಕಳು. ನನ್ನದೆಲ್ಲ ಅವರದ್ದೇ. ನಾನು ಅವರಿಗೆ ಬಹಳಷ್ಟು ಕೊಡ್ತೀನಿ ಸರಿ ಅಲ್ವಾ? ಆದಾಗ್ಯೂ ಹುಡುಗನ ಬಗ್ಗೆ ತಿಳಿದಿರುವುದು ಒಳ್ಳೆಯದು ಅಲ್ವೇ? ಅದೇ ಕೆಲಸವಿಟ್ಟುಕೊಂಡು ನಾನು ನಿಮ್ಮ ಬಳಿ ಬಂದಿದ್ದೇನೆ.”
ಅವರ ಮಗಳು ಚಿತ್ರಾ ಸುಂದರ ಹುಡುಗಿ ಅಲ್ಲದೇ, ಒಳ್ಳೆಯ ಸ್ವಭಾವದವಳು ಕೂಡ ಆಗಿದ್ದಳು. ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿ ಬೆಳದ ಹೊರತಾಗಿಯೂ ಬಹಳ ಸಾದಾಸೀದಾ ಆಗಿದ್ದಳು. ನಮ್ಮಿಬ್ಬರಿಗೂ ಯಾವಾಗಲೂ ಒಂದು ಪ್ರಶ್ನೆ ಕಾಡುತ್ತಿರುತ್ತದೆ. ಅದೇನೆಂದರೆ, ಚಿತ್ರಾಳ ಅಮ್ಮ ದೊಡ್ಡ ಮನೆತನದವಳು. ತನ್ನೊಂದಿಗೆ ಅಪಾರ ಸಂಪತ್ತನ್ನು ತೆಗೆದುಕೊಂಡು ಬಂದಿದ್ದಳು. ಅವಳು ತನ್ನ ದೊಡ್ಡಸ್ತಿಕೆಯ ಬೊಗಳೆ ಹೊಡೆಯುತ್ತಿರುತ್ತಾಳೆ. ಅವಳು ಹೆಚ್ಚು ಓದಿದವಳಲ್ಲ, ಅವಳಿಗೆ ಯಾವುದೇ ಹವ್ಯಾಸಗಳಾಗಲಿ, ಕಲೆಯ ಬಗೆಗಿನ ಜ್ಞಾನವಾಗಲಿ ಇರಲಿಲ್ಲ. ಅವಳು ಯಾವಾಗಲೂ ತನ್ನ ಶ್ರೀಮಂತಿಕೆಯ ಕನಸಿನಲ್ಲಿಯೇ ಮುಳುಗಿರುತ್ತಿದ್ದಳು. ಅದೇ ಕಾರಣದಿಂದ ಅವಳಿಗೂ ನನ್ನ ಪತ್ನಿಗೂ ಅಷ್ಟಾಗಿ ಹೊಂದಾಣಿಕೆ ಆಗುತ್ತಿರಲಿಲ್ಲ.
“ನೋಡಿ, ನನ್ನ ಬಳಿ ಹಣ ಆಸ್ತಿ ಯಾವುದಕ್ಕೂ ಕೊರತೆ ಇಲ್ಲ. ನನ್ನ ಮಗಳು ಕೂಡ ಒಳ್ಳೆಯವಳು. ಹಾಗಿದ್ದಾಗ ನಮಗೆ ಒಳ್ಳೆಯ ಅಳಿಯನೇ ಸಿಗಬೇಕು ಅಲ್ವೇ?”
“ಹೌದೌದು. ನೀವು ಸರಿಯಾಗಿಯೇ ಹೇಳಿರುವಿರಿ. ನೀವು ನೋಡಿದ ಹುಡುಗ ಅವಶ್ಯವಾಗಿ ಒಳ್ಳೆಯವನೇ ಆಗಿರಬೇಕು.”
ಅವರು ಹೇಳಿದ್ದನ್ನು ಕೇಳಿ ನಾನು ಚಕಿತನಾದೆ. ಅವರು ಬಿಸಿದ ಬಲೆಯಲ್ಲಿ ನಾನು ಮತ್ತೆ ಸಿಕ್ಕಿ ಬೀಳುತ್ತೇನಾ? ನನ್ನ ಮನಸ್ಸಿನಲ್ಲಿ ವಿಚಾರ ಬಂದುಬಿಟ್ಟಿತು.
“ಸುರೇಶ್. ಹುಡುಗ ನಿಮಗೆ ಗೊತ್ತಿರುವವನೇ ನಿಮ್ಮ ಚಿಕ್ಕಪ್ಪನ ಮಗ. ಅವನು ಅನ್ನಪೂಣೇಶ್ವರಿ ನಗರದಲ್ಲಿ ಇದ್ದಾನೆ.”
ಈ ಬಗ್ಗೆ ನಾನು ಒಮ್ಮೆಲೇ ಪ್ರತಿಕ್ರಿಯೆ ಕೊಡದೆ ಪತ್ನಿ ಹಾಗೂ ನಾನು ಪರಸ್ಪರ ನೋಡಿಕೊಂಡೆ. ಇತ್ತೀಚೆಗಷ್ಟೇ ನಾವು ಒಂದು ಮದುವೆ ನಿರ್ಧಾರ ಮಾಡುವಲ್ಲಿ ಪರಿಶ್ರಮ ಪಟ್ಟಿದ್ದೆ. ಆದರೆ ಈ ಸ್ನೇಹಿತನಿಗೆ ಏನು ತಾನೇ ಹೇಳಬೇಕು? ನಾನು ಹಾಗೆಯೇ ಎದ್ದು ನಿಂತೆ ಹಾಗೂ ಕಪಾಟಿನಲ್ಲಿದ್ದ ಸುರೇಶ್ ಬರೆದ ಪತ್ರವನ್ನು ಅವರಿಗೆ ಕೊಟ್ಟೆ.
“ತಾತಾ, ನಿಮ್ಮ ಚಿತ್ರಾಳ ಮದುವೆ ನಿಗದಿ ಆಗುತ್ತಿರುವುದು ಖುಷಿ ತರುತ್ತಿದೆ. ಚಿತ್ರಾ ಒಳ್ಳೆಯ ಸ್ವಭಾವದ ಹುಡುಗಿ. ಹೀಗಾಗಿ ಅವಳಿಗೆ ಒಳ್ಳೆಯ ಮನೆತನವೇ ಸಿಗಬೇಕು. ಇದು ನಮ್ಮ ಆಶಯ ಕೂಡ. ಆದರೆ ಈಗ ಮೊದಲಿನಂತೆ ಪರಿಸ್ಥಿತಿ ಇಲ್ಲ. ಈಗ ಪ್ರತಿ ಮನೆಯಲ್ಲೂ ಒಂದು ಅಥವಾ ಎರಡು ಮಕ್ಕಳು ಮಾತ್ರ ಇರುತ್ತಾರೆ. ತಾಯಿ ತಂದೆಯರು ತಮ್ಮ ಪುತ್ರಿಯರಿಗೆ ಸಾಕಷ್ಟು ಆಸ್ತಿ, ಧನ, ಕನಕ ಕೊಡುತ್ತಾರೆ. ನಿಮ್ಮಂತಹ ಶ್ರೀಮಂತರು ಕೇವಲ ಕೊಡುವುದಿಲ್ಲ, ಅದರ ಬಗ್ಗೆ ಸಾಕಷ್ಟು ಪ್ರಚಾರ ಕೂಡ ಮಾಡುತ್ತೀರಾ.
“ಮೇಲಿಂದ ಮೇಲೆ ನಾವು ಮಗಳಿಗೆ ಇಷ್ಟು ಕೊಟ್ಟಿದ್ದೆವು, ಅಷ್ಟು ಕೊಟ್ಟಿದ್ದೆವು ಎಂದು ಹೇಳಿಕೊಳ್ಳುತ್ತೀರಿ. ಇದು ಕೆಲವರಿಗೆ ಇಷ್ಟವಾಗುತ್ತದೆ ಮತ್ತೆ ಕೆಲವರಿಗೆ ಇಷ್ಟವಾಗುವುದಿಲ್ಲ. ಇನ್ನು ಕೆಲವರಿಗೆ ಅದು ಅವಮಾನ ಎನ್ನಿಸುತ್ತದೆ. ಇದಕ್ಕೆ ಅವರು ಏನು ಮಾಡುತ್ತಾರೆ ಎನ್ನುವುದನ್ನು ನೀವು ಈ ಪತ್ರದಲ್ಲಿ ಓದಿ. ನಾನು ಏನು ಹೇಳಲು ಬಯಸುತ್ತೇನೆ ಎನ್ನುವುದು ನಿಮಗೆ ಗೊತ್ತಾಗುತ್ತದೆ.
“ಚಿಕ್ಕಪ್ಪ ನಮಸ್ಕಾರ, ನಾನು ಈ ಪತ್ರವನ್ನು ಉದ್ದೇಶಪೂರ್ವಕವಾಗಿ ಬರೆಯುತ್ತಿರುವೆ. ಏಕೆಂದರೆ ಇವತ್ತು ಅಥವಾ ನಾಳೆ ಕೆಲವು ವಿಷಯಗಳು ನಿಮ್ಮ ಗಮನಕ್ಕೆ ಬರುತ್ತವೆ. ಹಾಗಾಗಿ ನಾನು ನಿಮಗೆ ವಿಷಯವನ್ನು ಮೊದಲೇ ಮನವರಿಕೆ ಮಾಡಿಕೊಳ್ಳುತ್ತಿದ್ದೇನೆ. ಕಳೆದ ಕೆಲವು ದಿನಗಳಿಂದ ನಾನು ಬಹಳ ಗೊಂದಲದಲ್ಲಿದ್ದೇನೆ. ಆ ಬಳಿಕ ನೀವು ಮೊದಲೇ ಏಕೆ ಹೇಳಲಿಲ್ಲವೆಂದು ನನ್ನನ್ನು ಕೇಳಬಹುದು. ಯಾವುದು ಘಟಿಸಿ ಹೋಗಿದೆಯೋ, ಆ ಸಮಸ್ಯೆಗೆ ನಾನೇ ಪರಿಹಾರ ಕಂಡುಕೊಳ್ಳಬೇಕಿತ್ತು.
“ನಾನು ಕಂಡುಕೊಂಡ ಪರಿಹಾರ ನಿಮಗೆ ಬಹುಶಃ ಇಷ್ಟ ಆಗದೇ ಇರಬಹುದು. ನಿಮ್ಮ ಮೇಲೆ ಯಾವುದೇ ದೋಷಾರೋಪ ಹೊರಿಸಬಾರದು ಎನ್ನುವುದೇ ನನ್ನ ಇಚ್ಛೆ. ನೀವು ನಮ್ಮ ಮದುವೆ ನಿರ್ಧರಿಸಲು ಬಹಳ ಶ್ರಮ ಪಟ್ಟಿರುವಿರಿ. ಅಂದರೆ ಮದುವೆಗಳನ್ನು ನಿಗದಪಡಿಸುವುದು ನಿಮ್ಮ ಸಾಮಾಜಿಕ ಕಾರ್ಯವೇ ಆಗಿದೆ. ಆದರೆ ಒಮ್ಮೊಮ್ಮೆ ಹೀಗೂ ಆಗುತ್ತದೆ ಎಂದು ತಿಳಿಯಪಡಿಸಲು ಈ ಪತ್ರ ಬರೆಯುತ್ತಿರುವೆ.
“ಮದುವೆಯ ಬಳಿಕ ನಾನು ಹೆಂಡತಿಯ ಜೊತೆಗೆ ಆಗಾಗ ಅವಳ ತವರುಮನೆಗೆ ಹೋಗುತ್ತಿದ್ದೆ. ಆದರೆ ಪ್ರತಿಸಲ ಯಾವುದಾದರೂ ಕಾರಣದಿಂದ ಅಲ್ಲಿಂದ ನಿರಾಶೆ ಬೇಸರದಿಂದಲೇ ಮರಳುತ್ತಿದ್ದೆ.
“ಅತ್ತೆ ಸಾಮಾನ್ಯವಾಗಿ ಹೇಳುತ್ತಿರುತ್ತಾರೆ, ನೀವು ಯಾವ ಪ್ಯಾಂಟ್ ಧರಿಸಿದ್ದೀರೊ, ಅದನ್ನು ನಾವೇ ಕೊಟ್ಟಿದ್ದು. ಹೌದು ತಾನೇ? ನೀವು ನಿಮ್ಮ ಹೆಂಡತಿಗೆ ಯಾವುದಾದರೂ ಹೊಸ ಸೀರೆ ಕೊಡಿಸಿದ್ದೀರಾ ಅಥವಾ ನಾವು ಕೊಟ್ಟದ್ದರಲ್ಲಿಯೇ ದಿನ ದೂಡುತ್ತಿದ್ದೀರಾ? ಆ ಬಳಿಕ ಮಗಳನ್ನು ಪ್ರಶ್ನಿಸುತ್ತೀರಿ, ಮಗಳೇ, ಯಾವುದಾದರೂ ಹೊಸ ಆಭರಣ ಖರೀದಿಸಿದ್ದೀರಾ? ಅಥವಾ ನಾವು ಕೊಟ್ಟಿದ್ದ ಆಭರಣಗಳನ್ನೇ ಧರಿಸುತ್ತಿದ್ದೀರಾ? ಕೊರಳಿನಲ್ಲಿ ಈವರೆಗೆ ಸಾಧಾರಣ ಮಂಗಳಸೂತ್ರವೇ ಇದೆ. ನಾನು ನಿನಗೆ ನನ್ನ ಕೊರಳಿನಿಂದ ತೆಗೆದುಕೊಡಬೇಕಾ? ನಿನ್ನ ಅತ್ತೆಮನೆಯವರು ಕೊಡಿಸುತ್ತಾರಾ ಅಥವಾ ಇಲ್ಲವಾ ಎಂದು ನಾನು ಗಮನಿಸುತ್ತಿರುವೆ.
“ನನ್ನ ಅತ್ತೆ ನಮ್ಮ ಮನೆಗೆ ಬಂದಾಗ ಅದೇ ಮಾತುಗಳು ಮರುಕಳಿಸುತ್ತವೆ. ಈ ಪಾತ್ರೆ ನಾವು ಕೊಟ್ಟಿದ್ದಲ್ಲ, ಇದನ್ನು ಇಷ್ಟು ಬೇಗ ಉಪಯೋಗಿಸುತ್ತಿದ್ದೀರಾ?
“ಅವರು ದೂರ ದೂರದ ಸಂಬಂಧಿಕರನ್ನು ನಮ್ಮ ಮನೆ ತೋರಿಸಲು ಕರೆದುಕೊಂಡು ಬರುತ್ತಾರೆ. ಆಗ ಸಂಬಂಧಿಕರಿಗೆ ನಮ್ಮ ಮಗಳ ಸಂಸಾರ ನಡೆಯಲು ನಾವು ಎಲ್ಲವನ್ನೂ ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ.
“ಬೆಳಗ್ಗೆ ಆಗುತ್ತಿದ್ದಂತೆ, ಅತ್ತೆಯ ಫೋನ್ ಬರುತ್ತದೆ. ನೀವು ಇನ್ನು ಎದ್ದಿಲ್ಲವೇ ಎಂದು ಅವರು ಕೇಳುತ್ತಾರೆ. ಇವತ್ತು ತಿಂಡಿಗೆ ಏನು ಮಾಡಿಕೊಂಡಿದ್ದೀರಿ? ಅಡುಗೆ ಮಾಡಲು ಕೆಲಸದವಳನ್ನು ಏಕೆ ನೇಮಿಸಿಕೊಳ್ಳುತ್ತಿಲ್ಲ? ನೀನು ನಿನ್ನ ಅತ್ತೆಗೆ, ನಾನೆಂದೂ ಅಡುಗೆ ಮಾಡಿಲ್ಲ. ನನ್ನಮ್ಮನಿಗೂ ಅದರ ಅಭ್ಯಾಸ ಇರಲಿಲ್ಲ ಎಂದು ಹೇಳಿಬಿಡಬೇಕು. ಒಂದು ವೇಳೆ ಕೆಲಸದವಳನ್ನು ನೇಮಿಸಿಕೊಳ್ಳಲು ಆಗದ್ದಿದರೆ ಹೇಳು ನಾನೇ ನಿನಗೆ ಒಬ್ಬ ಕೆಲಸದವಳನ್ನು ಕಳಿಸುತ್ತೇನೆ. ಅವಳೇ ನಿನ್ನೆಲ್ಲ ಕೆಲಸ ಮಾಡುತ್ತಾಳೆ.
“ನಾವು ಹೊಸದಾಗಿ ಮದುವೆಯಾದ ದಿನಗಳವು. ಆಗಾಗ ಸಿನಿಮಾ ನೋಡಲು ಹೋಗುತ್ತಿದ್ದೆ, ಅಲ್ಲಿಂದ ಬರುವಾಗ ಹೋಟೆಲ್ ನಲ್ಲಿಯೇ ತಿಂಡಿ ತಿನ್ನುತ್ತಿದ್ದೆ. ಆಗಾಗ ಶಾಪಿಂಗ್ ಗೂ ಹೋಗುತ್ತಿದ್ದೆ. ಆರಂಭದಲ್ಲಿ ಇದು ನನಗೆ ಅಷ್ಟಾಗಿ ಗೊತ್ತಾಗುತ್ತಿರಲಿಲ್ಲ. ನನ್ನ ಅಪ್ಪ ಅಮ್ಮ, ಅಣ್ಣ ಅತ್ತಿಗೆ ಯಾರು ತಾನೇ ತಿಳಿಸಿ ಹೇಳುತ್ತಾರೆ? ಅಮ್ಮನಂತೂ ಮುಗ್ಧೆ. ಅವಳ ಮಗನಾದ ನಾನು ಇನ್ನಷ್ಟು ಮುಗ್ಧ. ಮನೆಯಲ್ಲಾಗುವ ಜಗಳಗಳನ್ನು ಪಾರು ಮಾಡಲು ಅವರು ನನಗೆ ಬೇರೆ ಮನೆ ಮಾಡಿದರು. ನಮ್ಮಿಬ್ಬರಿಗೂ ಅವರ ಮೇಲೆ ಬಹಳ ಕೋಪ ಬಂತು. ಆದರೆ ಆ ಬಳಿಕವೇ ನನ್ನ ಕಣ್ಣು ತೆರೆದವು.
“ಸಿಹಿ ಸಿಹಿ ಮಾತು ಆಡುವುದರಿಂದ, ಒಳ್ಳೊಳ್ಳೆ ಬಟ್ಟೆ ತೊಡುವುದರಿಂದ ಹೊಟ್ಟೆಯಂತೂ ತುಂಬುವುದಿಲ್ಲ. ನನ್ನ ಹೆಂಡತಿಗಂತೂ ಅನ್ನ ಸಾರು ಕೂಡ ತಯಾರಿಸಲು ಬರುತ್ತಿರಲಿಲ್ಲ. ಮೊದ ಮೊದಲು ನಾವು ಅತ್ತೆ ಮನೆಗೆ ಹೋದಾಗ ಅತ್ತೆ ನನಗೆ ಇದನ್ನೆಲ್ಲ ನನ್ನ ಹೆಂಡತಿಯೇ ತಯಾರಿಸಿದ್ದಾಳೆ ಎಂದು ಹೇಳುತ್ತಿದ್ದರು. ನಿಮಗೆ ಗುಲಾಬ್ ಜಾಮೂನ್ ಇಷ್ಟವಾಗುತ್ತಲ್ಲ, ಅದನ್ನು ಕೂಡ ಅವಳೇ ತಯಾರಿಸಿದ್ದಾಳೆ ಎಂದು ಬಿಂಬಿಸುತ್ತಿದ್ದರು.
“ನನ್ನ ಮನೆಯಲ್ಲಿ ಅಮ್ಮ ಹಾಗೂ ಅತ್ತಿಗೆ ಇದ್ದುದರಿಂದ ನನ್ನ ಹೆಂಡತಿಗೆ ಏನೇನು ತಯಾರಿಸಲು ಬರುತ್ತದೆ ಎನ್ನುವುದು ನನಗೆ ಗೊತ್ತಾಗಲೇ ಇಲ್ಲ. ಅವಳಿಗೆ ಹೋಳಿಗೆ ಮಾಡುವುದಿರಲಿ, ಸಾದಾ ಚಪಾತಿ ಮಾಡಲು ಕೂಡ ಬರುತ್ತಿರಲಿಲ್ಲ. ಒಂದು ವೇಳೆ ಅವಳು ತನ್ನ ಅಮ್ಮನನ್ನು ಕೇಳಿ ಏನಾದರೂ ತಯಾರಿಸಬಹುದಿತ್ತು. ಆದರೆ ನಮ್ಮ ಮನೆಯಲ್ಲಿ ಫೋನ್ ಇರಲಿಲ್ಲ, ಎಲ್ಲವೂ ಕಷ್ಟಕರ.
“ನಮ್ಮಲ್ಲಿ ಫೋನ್ ಇರಲಿಲ್ಲ ಎಂಬ ಕಾರಣದಿಂದ ಅವಳ ಅಮ್ಮ ಅಪ್ಪ ಮನೆಗೆ ಬಂದು ಹೊರಗಿನ ಪದಾರ್ಥಗಳನ್ನು ತಂದು ತಿನ್ನುತ್ತಿದ್ದರು. ನನ್ನ ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚುತ್ತಲಿತ್ತು. ಅಲ್ಲಿಯವರೆಗೆ ನಮ್ಮ ಕುಟುಂಬ ಇಬ್ಭಾಗ ಆಗಿರಲಿಲ್ಲ. ಆಗ ಎಲ್ಲ ಖರ್ಚನ್ನು ಅಪ್ಪ ಹಾಗೂ ಅಣ್ಣನೇ ನೋಡಿಕೊಳ್ಳುತ್ತಿದ್ದರು.
“ಹೀಗಾಗಿ ಅದರ ಹೊರೆ ನನ್ನ ತಲೆಯ ಮೇಲೆ ಎಂದೂ ಬಿದ್ದಿರಲಿಲ್ಲ. ಹಣವನ್ನು ಹೇಗೆ ಖರ್ಚು ಮಾಡಬೇಕು, ಮಿತವ್ಯಯ ಹೇಗೆ ಮಾಡಬೇಕು ಎಂಬುದರ ಬಗ್ಗೆ ನನಗೆ ಕಲ್ಪನೆ ಇರಲಿಲ್ಲ. ಹೋಟೆಲ್ ವನಲ್ಲಿ ತಿನ್ನುವುದು, ಸುತ್ತಾಡುವುದು, ಮೋಜು ಮಜಾ ಶಾಪಿಂಗ್ ನಲ್ಲಿಯೇ ನನ್ನ ಸಾಕಷ್ಟು ಹಣ ಖರ್ಚಾಗಿ ಹೋಗುತ್ತಲಿತ್ತು. ಅಪ್ಪನಿಂದ ಹಣ ಕೇಳುವುದು ಕೂಡ ನನಗೆ ಸರಿ ಎನಿಸುತ್ತಿರಲಿಲ್ಲ. ಅಮ್ಮ ನನ್ನ ಈ ವಿವಶತೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಅವರು ನಮ್ಮ ಮನೆಯ ಜೊತೆ ಜೊತೆಗೆ ನನ್ನ ಮನೆಗೂ ಪಡಿತರ ವ್ಯವಸ್ಥೆ ಮಾಡುತ್ತಿದ್ದರು.
“ಈಗ ನನಗೆ ಜೀವನದ ವಾಸ್ತವತೆ ಗೊತ್ತಾಗುತ್ತಿತ್ತು. ಮದುವೆಯ ಆರಂಭದ ಮೋಜುಮಜಾ ಈಗ ಕೊನೆಗೊಂಡಿತ್ತು. ಅದರಿಂದ ಹೊರಬರಲು ನಾವು ದಾರಿಯೊಂದನ್ನು ಕಂಡುಕೊಳ್ಳಬೇಕಿತ್ತು. ಅದರ ಬಗ್ಗೆ ಯೋಚಿಸಿ ನಾನು ನೀತಾಳಿಗೆ ಎಲ್ಲ ವಿಷಯವನ್ನು ಸರಿಯಾಗಿ ತಿಳಿಸು ನಿರ್ಧಾರ ಮಾಡಿದೆ.
“ಅದೇ ಸಮಯಕ್ಕೆ ನಗರದಿಂದ ಹೊರ ಭಾಗದಲ್ಲಿದ್ದ ಒಂದು ಫ್ಲಾಟ್ ನ್ನು ಅಪ್ಪ ನನಗೆ ಕೊಡುವುದಾಗಿ ಹೇಳಿದ್ದರು. ಅದರ ಬಗ್ಗೆ ಕೇಳಿ ತಿಳಿದುಕೊಂಡ ಮಾವ ಮನೆ ನಿರ್ಮಿಸಲು ಹಣ ಕೊಟ್ಟರು. ನಾವು ಎಲ್ಲರಿಂದಲೂ ದೂರ ಇರಬೇಕೆಂದು ಅಲ್ಲಿಗೆ ಹೊರಟುಹೋದೆವು. ನಮ್ಮ ಬಹಳಷ್ಟು ಪ್ರಶ್ನೆಗಳು ತಂತಾನೇ ನಿವಾರಣೆ ಆಗುತ್ತವೆ ಎಂದು ನಾವು ಭಾವಿಸಿ, ಮನೆ ನಿವಾರಣೆ ಆಗುವತನಕ ಮೌನವಾಗಿಯೇ ಇದ್ದೆ.
“ಹೊಸ ಮನೆಗೆ ವಾಸಿಸಲು ಹೋದ ಬಳಿಕ ನಾನು ನನ್ನ ಪತ್ನಿಗೆ ತಿಳಿಸಿ ಹೇಳಿದೆ, ಇನ್ಮುಂದೆ ನನ್ನ ಗಳಿಕೆಯಲ್ಲಿಯೇ ಮನೆ ಖರ್ಚು ಸಾಗಬೇಕು. ಅವಳು ಮಿತವ್ಯಯ ಮಾಡಲು ಆರಂಭಿಸಿದಳು. ನಾವು ಹೊರಗೆ ಸುತ್ತಾಡುವುದನ್ನು ಕಡಿಮೆ ಮಾಡಿದೆ. ಆರಂಭದಲ್ಲಿ ಅವಳಿಗೆ ಮನೆ ಕೆಲಸ ಮಾಡಲು ಕಷ್ಟ ಆಗುತ್ತಿತ್ತು. ಹೀಗಾಗಿ ನಾನೇ ಅವಳಿಗೆ ಕೆಲಸದಲ್ಲಿ ನೆರವಾಗುತ್ತಿದ್ದೆ. ಕ್ರಮೇಣ ಅವಳು ಅಡುಗೆ ಮಾಡುವುದನ್ನು ಕಲಿತುಕೊಂಡಳು. ನಾವು ನಗರದಿಂದ ಬಹಳ ದೂರದಲ್ಲಿ ಇದ್ದುದರಿಂದ ಅತ್ತೆ ಮಾವ ಬರುವುದು ಸಾಕಷ್ಟು ಕಡಿಮೆಯಾಯಿತು. ಆದರೆ ಅತ್ತೆ ಬಂದಾಗೆಲ್ಲ ಅವರು ನೀತೂ, ನೀನು ಮನೆಯನ್ನು ಹೇಗೆ ನಡೆಸುತ್ತವೆ, ನಿನ್ನ ಮನೆಯಲ್ಲಿ ಅದಿಲ್ಲ, ಇದಿಲ್ಲ ಎಂದು ಹೇಳುತ್ತಿದ್ದರು.
“ಆ ಮಾತಿಗೆ ನೀತೂ ಅಮ್ಮನಿಗೆ ಉತ್ತರ ಕೊಡುತ್ತಿದ್ದಳು. ಅಮ್ಮ ನಿಮ್ಮ ಕೌಟುಂಬಿಕ ಜೀವನಕ್ಕೆ ಎಷ್ಟು ವರ್ಷವಾಯಿತು. ನಾನು ನಿಮ್ಮ ಮನಸ್ಸಿಗೆ ಬರುವ ಹೊತ್ತಿಗೆ, ನನ್ನ ಕಡೆಯೂ ಆ ವಸ್ತುಗಳು ಬಂದು ಬಿಡುತ್ತವೆ.
“ನನಗೆ ಹೇಳದೆಯೇ ನನ್ನ ಅತ್ತೆ ನಮಗಾಗಿ ಯಾವುದಾದರೂ ವಸ್ತುವನ್ನು ತೆಗೆದುಕೊಂಡು ಬಂದು, “ಸುರೇಶ್ ನೋಡಪ್ಪ, ನಾನು ನಿಮಗಾಗಿ ಏನು ತಂದಿದ್ದೇನೆ. ನಿಮ್ಮ ಬಳಿ ಈ ವಸ್ತು ಇರಲ್ಲಿಲ್ಲ. ಹಾಗಾಗಿ ಇದನ್ನು ತೆಗೆದುಕೊಂಡು ಬಂದೆ. ಇದು ಇಂಪೋರ್ಟೆಡ್ ವಸ್ತು. ನನಗಂತೂ ಇಂಡಿಯನ್ವಸ್ತುಗಳು ಸ್ವಲ್ಪವೂ ಇಷ್ಟವಾಗುವುದಿಲ್ಲ.
“ನಾನೂ ಕೂಡ ಅವರಿಗೆ ತಿರುಗು ಬಾಣದಂತೆ ಉತ್ತರಿಸುತ್ತಿದ್ದೆ. ನನಗೂ ಕೂಡ ಬೇರೆಯವರು ಕೊಟ್ಟ ವಸ್ತುಗಳು ಇಷ್ಟ ಆಗುವುದಿಲ್ಲ. ನನ್ನ ಹೆಂಡತಿ ನೀತೂ ನನಗಾಗಲಿ ಇಲ್ಲವೇ ತನ್ನ ಅಮ್ಮನ ಮುಂದೆ ಏನನ್ನೂ ಹೇಳಲು ಆಗುತ್ತಿರಲಿಲ್ಲ. ಆದರೆ ನನ್ನ ಅತೃಪ್ತಿಯ ಕಾರಣ ಈಗ ಅವಳಿಗೆ ತಿಳಿಯುತ್ತಿತ್ತು. ಈಗ ಅವಳು ಮನೆಯ ಎಲ್ಲ ಕೆಲಸಗಳನ್ನು ತಾನೇ ಮಾಡುತ್ತಿದ್ದಳು ಹಾಗೂ ನನ್ನ ಪ್ರೀತಿ ಅವಳಲ್ಲಿ ಆತ್ಮವಿಶ್ವಾಸ ಜಾಗೃತಗೊಳಿಸುತ್ತಿತ್ತು. ಈಗ ಅವಳು ತನ್ನ ಅಮ್ಮನಿಗೆ ನೇರವಾಗಿಯೇ, “ಅಮ್ಮ ಇನ್ನು ಮುಂದೆ ನನಗಾಗಿ ಏನನ್ನೂ ತರಬೇಡಿ, ಸುರೇಶ್ ಗೂ ನಿಮ್ಮ ವರ್ತನೆ ಇಷ್ಟವಾಗುತ್ತಿಲ್ಲ, ಆದ್ದರಿಂದ ನಮ್ಮಿಬ್ಬರ ನಡುವೆ ಮನಸ್ತಾಪ ಉಂಟಾಗುತ್ತದೆ. ಜಗಳಗಳಾಗುತ್ತವೆ,’ ಎಂದು ಹೇಳುತ್ತಿದ್ದಳು.
“ಬೇರೆಯವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದನ್ನು ನನ್ನ ಅತ್ತೆ ಎಂದೂ ಕಲಿಯಲೇ ಇಲ್ಲ ಮತ್ತು ಪ್ರತಿಷ್ಠೆ ತೋರಿಸುವುದನ್ನು ಹೇಗೆ ತಾನೇ ಬಿಟ್ಟಾರು? ಈಗ ನಾನು ನನ್ನ ಆದಾಯ ಹೆಚ್ಚಿಸಿಕೊಂಡು ಅದೆಲ್ಲದರಿಂದ ಮುಕ್ತಿ ಕಂಡುಕೊಳ್ಳಬೇಕಿತ್ತು.
“ಯೋಗಾಯೋಗ ಎಂಬಂತೆ ನನ್ನ ಮನದ ಬಯಕೆ ಪೂರ್ತಿಯಾಗತೊಡಗಿತು. ನಾನು ಒಂದು ಚಿಕ್ಕ ಉದ್ಯಮ ಆರಂಭಿಸಿದೆ. ಅದು ಚೆನ್ನಾಗಿ ನಡೆದದ್ದರಿಂದ ಆದಾಯ ಕೂಡ ಹೆಚ್ಚತೊಡಗಿತು. ಆದರೆ ಈ ವಿಷಯವನ್ನು ನಾನು ನೀತೂಳಿಂದ ಬಚ್ಚಿಟ್ಟೆ.
“ಈ ಮಧ್ಯೆ ನನ್ನ ಮಾವ ತಮ್ಮ ವಯಸ್ಸಿನ 59ನೇ ವರ್ಷ ಪೂರೈಸಿದರು. ಈ ಸಂದರ್ಭದ ಲಾಭ ಪಡೆದುಕೊಳ್ಳಲು ನಾನು ನಿರ್ಧರಿಸಿದೆ ಹಾಗೂ ನನ್ನ ತಾಯಿ ತಂದೆಗೆ ನನ್ನ ಮಾವನ 60ನೇ ಹುಟ್ಟುಹಬ್ಬ ಆಚರಿಸಲು ಹೊರಟೆ ಎಂದು ಹೇಳಿದೆ.
“ನನ್ನ ಈ ಪ್ರಸ್ತಾಪ ಕೇಳಿ ಅಪ್ಪ ಅಮ್ಮ ಖುಷಿಗೊಂಡು, ಅಳಿಯ ಕೂಡ ಮಗನ ಸಮಾನ. ನೀನು ಅಲ್ಲಿಗೆ ಹೋಗ್ತಿರೋದು ಒಳ್ಳೆಯದೇ ಎಂದು ಅವರು ಹೇಳಿದರು. ಆದರೆ ನನ್ನ ಅಮ್ಮನಿಗೆ ನನ್ನ ವಿಚಿತ್ರ ನಡೆ ಅರ್ಥವಾಗಿರಲಿಲ್ಲ.
“ನನ್ನ ಅತ್ತೆ ಮಾವನಿಗೆ ಈ ವಿಷಯ ತಿಳಿದಾಗ, ಅವರು ಬಹಳ ಖುಷಿಗೊಂಡರು. ಆದರೆ ನನ್ನ ಹೆಂಡತಿ ಮಾತ್ರ ಒಂದಿಷ್ಟು ಚಡಪಡಿಸಿದ್ದಳು. ಅವಳಿಗೆ ತನ್ನ ತಾಯಿ ತಂದೆಯ ಬಗ್ಗೆ ಇದ್ದ ಪ್ರೀತಿಯ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿ ನನ್ನ ಆಯೋಜನೆಯ ಬಗ್ಗೆ ಅವಳ ಮನಸ್ಸಿನಲ್ಲಿ ಸಂದೇಹವಿತ್ತು. ಅದು ಅವಳ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಕಾರ್ಯಕ್ರಮದ ದಿನದಂದು ಬೆಳಗ್ಗೆ ಹೋಮಹವನ ಹಾಗೂ ಪೂಜೆಯ ಬಳಿಕ ಎಲ್ಲವೂ ಪುರೋಹಿತರಿಗೆ ಮಾವನ ಕೈಯಿಂದ ಬೆಳ್ಳಿಯ ತಟ್ಟೆ, ಆರತಿ, ಬೆಳ್ಳಿಯ ನಾಣ್ಯ ಮುಂತಾದವುಗಳನ್ನು ದಾನವಾಗಿ ಕೊಡಿಸಿದರು. ಅಲ್ಲಿ ಉಪಸ್ಥಿತರಿದ್ದ ಬ್ರಾಹ್ಮಣರು ಹಾಗೂ ಸಂಬಂಧಿಕರು ಅದನ್ನು ನೋಡಿ ಚಕಿತರಾದರು.
“ನಾನು ಮನೆ ಕೆಲಸದವನಿಗೆ ಬೆಳಗ್ಗೆಯೇ ಸ್ಲಂನಲ್ಲಿ ವಾಸಿಸುವವರನ್ನು ಅಲ್ಲಿಗೆ ಕರೆದುಕೊಂಡು ಬರಲು ಹೇಳಿದ್ದೆ. ಕೈಯಿಂದ ಒಂದೊಂದು ವಸ್ತುಗಳನ್ನು ಹಂಚಲಾಯಿತು. ಒಂದೊಂದು ವಸ್ತುಗಳನ್ನು ಕೊಡುವಾಗ ಅತ್ತೆಯ ಮುಖ ಇಳಿದುಹೋಗಿತ್ತು. ಅವರು ನನ್ನನ್ನು ಕೇಳಿಯೇ ಬಿಟ್ಟರು, “ಏ ಸುರೇಶ್, ನಾನು ನಿಮಗಾಗಿ ಕೊಟ್ಟು ಎಲ್ಲ ವಸ್ತುಗಳನ್ನು ಬಡವರಿಗೆ ಏಕೆ ಹಂಚುತ್ತಿರುವಿರಿ?”
“ಆದರೆ ಎಲ್ಲ ವಸ್ತುಗಳನ್ನು ಹಂಚುವ ತನಕ ನಾನು ಮೌನವಾಗಿಯೇ ಇದ್ದೆ. ಆ ಬಳಿಕ ಹೇಳಿದೆ, “ಹೌದು, ನೀವೇ ನಮಗೆ ಈ ವಸ್ತುಗಳನ್ನು ಕೊಟ್ಟಿದ್ದೀರಿ. ಈಗ ನಿಮ್ಮ ಕೈಯಿಂದಲೇ ಅನ್ನುವ ಬಡವರಿಗೆ ಹಂಚಿರುವಿರಿ. ಅಂದಹಾಗೆ, ನೀವು ನಮಗಾಗಿ ಏನನ್ನಾದರೂ ಕೊಡುವುದು ನಮಗೆ ಇಷ್ಟವಾಗಲಿಲ್ಲ. ಈಗ ನೀವು ಎಲ್ಲರೆದುರು ಇವನ್ನೆಲ್ಲ ನಾವೇ ಕೊಟ್ಟಿದ್ದು ಎಂದು ನನ್ನನ್ನು ಕೇಳಲಾಗದು. ಇವೆಲ್ಲ ವಸ್ತುಗಳನ್ನು ದಾನ ಮಾಡುವುದರಿಂದ ಬಡವರ ಆಶೀರ್ವಾದ ನಿಮಗೆ ದೊರಕುತ್ತದೆ. ಆ ರೀತಿಯಾಗಿ ನಾನು ಋಣಭಾರದಿಂದ ಮುಕ್ತನಾಗುತ್ತೇನೆ.
“ಎಲ್ಲೆರೆದುರು ನಾನು ನನ್ನ ಮಾವನ ಕೈಯಲ್ಲಿ ಬಂಗ್ಲೆ ನಿರ್ಮಿಸಲು ಆದ ಖರ್ಚಿನ ಬಾಬತ್ತಿನ ಚೆಕ್ ನ್ನು ಇಟ್ಟೆ ಹಾಗೂ ಅವರಿಗೆ ನಮಸ್ಕರಿಸುತ್ತಾ ಹೇಳಿದೆ, “ಈ ಮೊತ್ತವನ್ನು ನೀವು ನನಗೇ ಮನೆ ಕಟ್ಟಿಸಿಕೊಳ್ಳಲು ಕೊಟ್ಟಿದ್ದೀರಿ. ಈ ಮೊತ್ತವನ್ನು ನಾನು ನಿಮಗೆ ವಾಪಸ್ ಮಾಡುತ್ತಿದ್ದೇನೆ. ಬಹಳಷ್ಟು ಸಂಸ್ಥೆಗಳು ಬಡವರಿಗಾಗಿ ಕೆಲಸ ಮಾಡುತ್ತಿವೆ. ನೀವು ಈ ಮೊತ್ತವನ್ನು ಅವರಿಗೆ ದಾನವಾಗಿ ಕೊಟ್ಟರೆ, ಅವರಿಗೆ ಸಾಕಷ್ಟು ಉಪಯೋಗಕ್ಕೆ ಬರುತ್ತವೆ. ನನ್ನ ಆ ಮಾತಿಗೆ ಅವರು ಈ ವೆಚ್ಚನ್ನು ನಾನೆಲ್ಲಿ ವಾಪಸ್ ಕೇಳಿದ್ದೆ ಎಂದರು.
ವಾಪಸ್ ಕೇಳಿರಲಿಲ್ಲ, ಆದರೆ ನೀವು ಮೇಲಿಂದ ಮೇಲೆ ಎಲ್ಲರೆದುರು ಈ ಬಂಗ್ಲೆ ನಾನು ಕಟ್ಟಿಸಿಕೊಟ್ಟೆ, ನಾನು ಕಟ್ಟಿಸಿಕೊಟ್ಟೆ ಎಂದು ಒತ್ತಿ ಹೇಳಿದಿರಿ. ನನ್ನ ತಾಯಿ ತಂದೆಯ ಆಶೀರ್ವಾದದಿಂದ ನಾನು ಈ ಹಣವನ್ನು ವಾಪಸ್ ಕೊಡಲು ಸಮರ್ಥನಾದೆ. ನೀವು ಬಂಗ್ಲೆ ನಿರ್ಮಿಸಲು ಹಣವನ್ನೇನೊ ಕೊಟ್ಟಿರಿ. ಆದರೆ ಈ ಬಂಗ್ಲೆ ಯಾವ ಜಮೀನಿನಲ್ಲಿ ನಿರ್ಮಿಸಲಾಯಿತೊ, ಅದು ನನ್ನ ತಂದೆ ಕೊಟ್ಟಿದ್ದಾಗಿತ್ತು. ಆ ವಿಷಯವನ್ನು ನೀವು ಮರೆತುಬಿಟ್ರಾ? ನೀವು ನಿಮ್ಮ ಮಗಳಿಗೆ ವಿಷಯದ ಬಗ್ಗೆ ಕೇಳಬಹುದು, ನನ್ನ ಎಂದಾದರೂ ಜಮೀನನ್ನು ನಾನು ಕೊಟ್ಟಿದ್ದೆ ಎಂದು ಹೇಳಿದ್ರಾ ಅಂತಾ.
“ಅತ್ತೆ, ನಿಮ್ಮ ದೊಡ್ಡ ಉಪಕಾರ ನನ್ನ ಮೇಲಿದೆ, ನೀವು ನನಗೆ ಏನನ್ನು ಕೊಟ್ಟಿರೊ, ಅದರ ಬಗ್ಗೆ ಮೇಲಿಂದ ಮೇಲೆ ಉಲ್ಲೇಖಿಸದೇ ಇದ್ದಿದ್ದರೆ, ನಾನು ಹಠಕ್ಕೆ ಬಿದ್ದು ಈ ಸ್ಥಿತಿಗೆ ತಲುಪುತ್ತಿರಲಿಲ್ಲ. ನಿಮ್ಮ ಉಪಕಾರದ ಹೊರೆಯನ್ನು ಇಳಿಸಲು ಆಗುತ್ತಿರಲಿಲ್ಲ. ನನಗಂತೂ ಕೇವಲ ನಿಮ್ಮ ಆಶೀರ್ವಾದದ ಅವಶ್ಯಕತೆ ಅಷ್ಟೇ ಇದೆ. ಒಂದು ಕೈಯಿಂದ ಕೊಟ್ಟ ದಾನದ ಬಗ್ಗೆ ಮತ್ತೊಂದು ಕೈಗೆ ಗೊತ್ತಾಗಬಾರದು ಎಂದು ಹೇಳಲಾಗುತ್ತದೆ. ನೀವಂತೂ ನಿಮ್ಮ ಮಗಳಿಗೆ ಕೊಟ್ಟ ವಸ್ತುಗಳ ಬಗ್ಗೆ ಎಲ್ಲರೆದುರು ಡಂಗುರ ಹೊಡೆದುಕೊಳ್ಳುತ್ತಾ ಹೋದಿರಿ.
ನನ್ನ ಈ ವರ್ತನೆ ನನ್ನ ತಾಯಿ ತಂದೆಗೆ ಖಂಡಿತಾ ಇಷ್ಟವಾಗಲಿಲ್ಲ. ನನ್ನ ಹೆಂಡತಿಗಂತೂ ಇದು ಭಾರಿ ಆಘಾತವನ್ನುಂಟು ಮಾಡಿತು. ಅವಳು ತನ್ನ ತಾಯಿಗೆ ಹೇಳಿಯೇ ಬಿಟ್ಟಳು, ನಾನು ನಿಮಗೆ ಅನೇಕ ಸಲ ಹೇಳಿದೆ. ಆದರೆ ನೀವು ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ನಿಮಗೆ ಇಂಥದೇ ಉತ್ತರ ಬೇಕಿತ್ತು.
“ನನ್ನ ಮಾವ ಕೋಪದಿಂದ ಕೆಂಡಾಮಂಡಲರಾದಾಗ, ನನ್ನ ತಂದೆ ಅವರಿಗೆ ಹೇಳಿದ್ದರು, ನನ್ನ ಮಗ ಮುಗ್ಧ. ಅವನಿಂದ ತಪ್ಪಾಗಿದೆ. ಅವನ ತಪ್ಪಿಗಾಗಿ ನಾನು ನಿಮ್ಮ ಕ್ಷಮೆ ಯಾಚಿಸುತ್ತೇನೆ. ಅವನು ಹೀಗೆ ವರ್ತಿಸಬಾರದಿತ್ತು.
“ನನ್ನ ತಂದೆಯ ಮಾತು ಕೇಳಿ ನನ್ನ ಮಾವನಿಗೆ ಪಶ್ಚಾತ್ತಾಪಾವಾಯಿತು. ಅವರು ಹೇಳಿದ್ದು ಇಷ್ಟು, ಸುರೇಶ್ ನನಗೆ ನಿನ್ನ ಮೇಲೆ ತುಂಬಾ ಕೋಪ ಬರುತ್ತಿತ್ತು. ಆದರೆ ನಾನು ನಿನ್ನ ವರ್ತನೆಯ ಬಗ್ಗೆ ಯೋಚಿಸಿದಾಗ, ನಿನ್ನ ಯೋಚನೆಯೇ ಸರಿ ಎನಿಸಿತು. ಮುಳ್ಳಿನಿಂದ ಮುಳ್ಳನ್ನು ತೆಗೆಯುವ ಗಾದೆ ಮಾತನ್ನು ನೀನು ನಿಜಗೊಳಿಸಿದೆ. ಹಣದಿಂದ ಬಂದ ಗರ್ವ ಈಗ ಕೊನೆಗೊಂಡಿತು. ಈಗ ನೀನು ನನ್ನನ್ನು ಕ್ಷಮಿಸು. ನಮ್ಮಿಂದಾಗಿ ನೀನು ಬಹಳಷ್ಟು ತೊಂದರೆ ಅನುಭವಿಸಬೇಕಾಯಿತು.
“ಚಿಕ್ಕಪ್ಪ, ಈಗ ನಾನು ಅವರ ನಿಜವಾದ ಅಳಿಯನಾಗಿದ್ದೇನೆ. ಈ ಬಗ್ಗೆ ನೀವು ಅವಶ್ಯವಾಗಿ ಪ್ರತಿಕ್ರಿಯೆ ಕೊಡಿ.” ನಿಮ್ಮ ಸುರೇಶ್ ತಾತ ಪತ್ರ ವಾಪಸ್ಸು ಕೊಡುತ್ತಾ, “ಅವನು ಸರಿಯಾಗೇ ಹೇಳ್ತಿದ್ದಾನೆ. ಕೊಡುವವನಿಗೆ, ತಾನು ಸುಖಪ್ರಾಪ್ತಿಗಾಗಿ ಕೊಡುತ್ತಿದ್ದೇನೆ ಎಂದು ತಿಳಿದುಕೊಳ್ಳಬೇಕು. ಚಿಕ್ಕ ಚಿಕ್ಕ ಸಂಗತಿಗಳಿಂದಾಗಿ ನಾನು ದುಃಖ ಅನುಭವಿಸಬೇಕಾಯಿತು. ಇದನ್ನು ನಮ್ಮ ಮಕ್ಕಳು ಅನುಭವಿಸುವಂತಾಗಬಾರದು. ನಾವು ನಮ್ಮ ಮಕ್ಕಳಿಗೆ ಏನಾದರೂ ಕೊಟ್ಟರೆ, ಅದು ನಮ್ಮಲ್ಲಿ ಅಹಂ ಭಾವನೆ ಹುಟ್ಟುಹಾಕಬಾರದು, ಇಲ್ಲದಿದ್ದರೆ ಅದು ತೆಗೆದುಕೊಳ್ಳುವ ಭಾವನೆಗಳಿಗೆ ದುಃಖವನ್ನುಂಟು ಮಾಡುವುದು ಸಹಜವೇ. ಇದನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯವಶ್ಯಕ.
“ಈಗ ನನ್ನ ಕಡೆಯಿಂದಲೂ ಅಂಥದೇ ತಪ್ಪಾಗಿತ್ತು. ನೀನು ಈ ಪತ್ರ ಓದುವ ಅವಕಾಶ ಮಾಡಿಕೊಟ್ಟ ನನ್ನನ್ನು ಎಚ್ಚರಿಸಿದೆ. ನಮ್ಮ ಕಾರಣದಿಂದಾಗಿ ನಮ್ಮ ಮಗಳ ಕುಟುಂಬದಲ್ಲಿ ಜಗಳ ಶುರುವಾಗಬಾರದು. ನೀನು ನನ್ನ ಪರವಾಗಿ ಸುರೇಶನಿಗೆ ಧನ್ಯವಾದ ತಿಳಿಸು. ಅವನ ಕಾರಣದಿಂದ ಮತ್ತೊಬ್ಬ ಮಾವ ಎಚ್ಚರಗೊಳ್ಳಲು ಸಾಧ್ಯವಾಯಿತು,” ಎಂದು ಹೇಳಿದರು.