ಜೋಗಿ ಪ್ರೇಮ್ ನಿರ್ದೇಶನದಲ್ಲಿ ಕೆಡಿ ಸಿನಿಮಾ ಬಹುತೇಕ ಕೊನೆಯ ಹಂತ ತಲುಪಿದೆ. ಸಾಂಗ್ಸ್ ಹಾಗೂ ಟೀಸರ್ ಈಗಾಗಲೇ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ಸಿನಿಮಾ ರಿಲೀಸ್ ಆಗಲಿ ಅಂತ ಫ್ಯಾನ್ಸ್ ಕಾತುರರಾಗಿದ್ದಾರೆ. ಈ ಮಧ್ಯೆ ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಬಿಗ್ ಬಜೆಟ್ ಮೆಗಾ ಪ್ರಾಜೆಕ್ಟ್ಗಳಿಗೆ ಕಮಿಟ್ ಆಗ್ತಿದ್ದಾರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ.
ಕಳೆದ ವರ್ಷ ಎಲ್ಲರ ಗಮನ ಸೆಳೆದಂತಹ ಕೆರೆಬೇಟೆ ಸಿನಿಮಾದ ಡೈರೆಕ್ಟರ್ ರಾಜ್ಗುರು, ಧ್ರುವ ಸರ್ಜಾಗೆ ಒಂದು ಸಬ್ಜೆಕ್ಟ್ ರೀಡಿಂಗ್ ಕೊಟ್ಟಿದ್ದರು. ಕೆರೆಬೇಟೆ ಚಿತ್ರದ ಮೂಲಕ ನ್ಯಾಷನಲ್ ಲೆವೆಲ್ನಲ್ಲಿ ಸದ್ದು ಮಾಡಿದ ಪವನ್ ಒಡೆಯರ್ ಶಿಷ್ಯ ರಾಜ್ಗುರು, ಕಥೆ ಹಾಗೂ ಮೇಕಿಂಗ್ ಸ್ಟೈಲ್ನಿಂದ ಧ್ರುವ ಮನಸ್ಸು ಗೆದ್ದಿದ್ದರು. ಆ ಪ್ರಾಜೆಕ್ಟ್ ಕೆಡಿ ರಿಲೀಸ್ ಡೇಟ್ ಲಾಕ್ ಆಗ್ತಿದ್ದಂತೆ ಕಿಕ್ಸ್ಟಾರ್ಟ್ ಆಗ್ತಿದೆ. ಧ್ರುವ ಸರ್ಜಾ- ರಾಜ್ಗುರು ಕಾಂಬೋನಲ್ಲಿ ಒಂದೊಳ್ಳೆ ಮಾಸ್ ಮಸಾಲ ಎಂಟರ್ಟೈನರ್ ಪ್ರೇಕ್ಷಕರಿಗೆ ಸಿಗೋದು ಕನ್ಫರ್ಮ್. ಅಂದಹಾಗೆ ಇದಕ್ಕೆ ಮುಂಬೈ ಮೂಲದ ನಿರ್ಮಾಣ ಸಂಸ್ಥೆ ಹಣ ಹೂಡಿಕೆ ಮಾಡ್ತಿದೆ.ಇನ್ನು ಮಫ್ತಿ ಹಾಗೂ ಭೈರತಿ ರಣಗಲ್ ಚಿತ್ರಗಳಿಂದ ತನ್ನದೇ ಆದ ವೈಶಿಷ್ಟ್ಯತೆ ಮೆರೆದಿರೋ ಡೈರೆಕ್ಟರ್ ನರ್ತನ್ ಕೂಡ ಇತ್ತೀಚೆಗೆ ನಟ ಧ್ರುವ ಸರ್ಜಾಗೆ ಒಂದು ಕಥೆ ಹೇಳಿದ್ದಾರೆ. ಕಥೆ ಇಂಪ್ರೆಸ್ ಆಗಿ, ಕೂಡಲೇ ಡೇಟ್ಸ್ ನೀಡಿರೋ ಬಹದ್ದೂರ್ ಗಂಡಿಗೆ ಒನ್ಸ್ ಅಗೈನ್ ಕೆವಿಎನ್ ಪ್ರೊಡಕ್ಷನ್ಸ್ನ ವೆಂಕಟ್ ಕೆ ನಾರಾಯಣ್ ಹಣ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಇದೊಂದು ಮೆಗಾ ಪ್ಯಾನ್ ಇಂಡಿಯಾ ಮೂವಿ ಆಗಲಿದ್ದು, ನಾಲ್ಕೈದು ತಿಂಗಳಲ್ಲಿ ಸಿನಿಮಾ ಅಧಿಕೃತವಾಗಿ ಸೆಟ್ಟೇರಲಿದೆ.
ಬಹಳ ವರ್ಷಗಳ ಹಿಂದೆಯೇ ಡಿಬಾಸ್ ದರ್ಶನ್ಗೆ ಜಗ್ಗುದಾದಾ ಸಿನಿಮಾ ಮಾಡಿದ್ದ ರಾಘವೇಂದ್ರ ಹೆಗ್ಡೆ, ಭರ್ಜರಿ ಹೀರೋ ಧ್ರುವ ಸರ್ಜಾಗೆ ಅಡ್ವಾನ್ಸ್ ಮಾಡಿದ್ರು. ಆ ಕಮಿಟ್ಮೆಂಟ್ ಹಾಗೆಯೇ ಉಳಿದಿದೆ. ಹಾಗಾಗಿ ಅದಕ್ಕೂ ಗ್ರೀನ್ ಸಿಗ್ನಲ್ ನೀಡಿರೋ ಧ್ರುವ, ಕಥೆಯೊಂದನ್ನ ಕೇಳಿ, ಅದನ್ನ ಡೆವೆಲಪ್ ಮಾಡೋಕೆ ಹೇಳಿದ್ದಾರಂತೆ. ಸಿನಿಮಾಗೆ ಶಕ್ತಿಮಾನ್ ಅನ್ನೋ ಟೈಟಲ್ ಕೂಡ ಫಿಕ್ಸ್ ಆಗಿದ್ದು, ಚಕ್ರವರ್ತಿ ಚಂದ್ರಚೂಡ್ ಸಿನಿಮಾ ಕಥೆ ಬರೆಯುತ್ತಿದ್ದಾರೆ.