ದೇಶಾದ್ಯಂತ ಇಂಡಿಗೋ ಏರ್​ಲೈನ್​ ರದ್ದುಗೊಳಿಸಿದ ಪರಿಣಾಮ ಇತ್ತೀಚೆಗಷ್ಟೇ ಮದುವೆಯಾಗಿದ್ದ ಬೆಂಗಳೂರಿನ ಸಾಫ್ಟ್​ವೇರ್ ಎಂಜಿನಿಯರ್​ ದಂಪತಿ, ಆರತಕ್ಷತೆ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡಿಕೊಂಡ ಪ್ರಸಂಗ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಮೇಘಾ ಕ್ಷೀರಸಾಗರ ಹಾಗೂ ಒಡಿಶಾ ಮೂಲದ ಸಂಗಮ ದಾಸ್​ ಅವರ ಮದುವೆ ನ.23ರಂದು ಭುವನೇಶ್ವರದಲ್ಲಿ ನಡೆದಿತ್ತು. ವಧುವಿನ ಊರು ಹುಬ್ಬಳ್ಳಿಯ ಗುಜರಾತ್​ ಭವನದಲ್ಲಿ ಡಿ.3ರಂದು ಆರತಕ್ಷತೆ ಆಯೋಜಿಸಲಾಗಿತ್ತು.ಪೈಲಟ್ ಸೇರಿದಂತೆ ಸಿಬ್ಬಂದಿ ಕೊರತೆ ಹಾಗೂ ತಾಂತ್ರಿಕ ಸಮಸ್ಯೆಯಿಂದ ಇಂಡಿಗೋ ಏರ್​ಲೈನ್ ಹಾರಾಟವನ್ನು ರದ್ದುಗೊಳಿಸಿತ್ತು. ಹೀಗಾಗಿ ಭುವನೇಶ್ವರದಲ್ಲೇ ಉಳಿಯುವ ಅನಿವಾರ್ಯತೆ ವಧು-ವರರಿಗೆ ಒದಗಿತ್ತು.

ಮತ್ತೊಂದೆಡೆ ಡಿ.3ರಂದು ಆರತಕ್ಷತೆಗಾಗಿ ಕಲ್ಯಾಣ ಮಂಟಪ ಕೂಡಾ ಬುಕ್​ ಮಾಡಲಾಗಿತ್ತು. ಅದರಂತೆ ಸಬಂಧಿಕರು ಆಗಮಿಸಿದಾಗ ವಧುವಿನ ಪೋಷಕರಿಗೆ ದಿಕ್ಕು ತೋಚದಂತಾಯಿತು. ಕೊನೆಗೆ ನವದಂಪತಿಗಳನ್ನು ವರ್ಚುವಲ್​ ಮೂಲಕ ಆರತಕ್ಷತೆ ಕಾರ್ಯ ಮುಗಿಸಿದರು. ಸಂಬಂಧಿಕರು ಕೂಡಾ ವರ್ಚುವಲ್ ಮೂಲಕವೇ ವಧು-ವರರನ್ನು ಆಶೀರ್ವದಿಸಿ, ವಧು-ವರರಿಗೆ ತಂದಿದ್ದ ಗಿಫ್ಟ್​ನ್ನು ಪೋಷಕರಿಗೆ ನೀಡಿ ತೆರಳಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ