ನಟ ಶಿವರಾಜ್ ಕುಮಾರ್ ಅವರು ಮತ್ತೊಮ್ಮೆ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಶಿವಣ್ಣ ಅವರು ಹಿಂದಿ ಭಾಷೆಗೆ ಸಂಬಂಧಿಸಿದಂತೆ ಕೊಟ್ಟಿರುವ ಹೇಳಿಕೆಯು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಇನ್ನೂ ಹಲವರು ಇದು ಶಿವರಾಜ್ ಕುಮಾರ್ ಅವರ ತಪ್ಪಲ್ಲ. ಈ ಹಿಂದಿನ ತಲೆಮಾರಿಗೆ ಹಿಂದಿ ಭಾಷೆಗೆ ಸಂಬಂಧಿಸಿದಂತೆ ಇರುವ ತಪ್ಪು ತಿಳುವಳಿಕೆ ಎಂದೂ ಕೆಲವರು ಹೇಳಿದ್ದಾರೆ.

ತಮ್ಮ ಮುಂಬರುವ ‘ಒರಿಜಿನಲ್ ಮಾನ್‌ಸ್ಟರ್’ಚಿತ್ರದ ಶೀರ್ಷಿಕೆ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾಗ, ನಟ ಶಿವರಾಜ್​ಕುಮಾರ್ ಭಾಷೆ ಬಗ್ಗೆ ಎಡವಟ್ಟು ಮಾಡಿಕೊಂಡಿದ್ದರು. ಇದಕ್ಕೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವರು. ಶಿವಣ್ಣ ಹೀಗೆ ಮಾಡಿದರೆ ಹೇಗೆ ಎಂದು ಎಲ್ಲರೂ ಪ್ರಶ್ನಿಸಿದ್ದರು. ಇದಕ್ಕೆ ಅವರು ಈಗ ಸ್ಪಷ್ಟನೆ ನೀಡಿದ್ದು, ತಪ್ಪಾಗಿ ಹಾಗೆ ಮಾತನಾಡಿದೆ ಎಂದು ಕ್ಷಮೆ ಕೋರಿದ್ದಾರೆ.

ಶಿವಣ್ಣ ‘ಒರಿಜಿನಲ್ ಮಾನ್​ಸ್ಟರ್​’ ಸಿನಿಮಾ ಮಾಡುತ್ತಿದ್ದು, ಈ ಚಿತ್ರ ಹಿಂದಿಯಲ್ಲೂ ಬರುತ್ತಿದೆ. ‘ಹಿಂದಿಗೆ ನೀವೇ ಡಬ್ ಮಾಡ್ತೀರಾ’ ಎಂದು ಕೇಳಿದಾಗ, ‘ಕಾಲೇಜು ದಿನಗಳಲ್ಲಿ ಹಿಂದಿ ನನ್ನ ಎರಡನೇ ಭಾಷೆ ಆಗಿತ್ತು. ನನಗೆ ಹಿಂದಿ ಮಾತನಾಡಲು ಬರುತ್ತದೆ. ಅದು ಸುಲಭವಾದ ಭಾಷೆ, ನಮ್ಮ ರಾಷ್ಟ್ರೀಯ ಭಾಷೆ ಎಂದಿದ್ದರು.  ಈ ವೀಡಿಯೋ ತುಣುಕು ಸೋಶಿಯಲ್ಸಾ​ ಮೀಡಿಯಾದಲ್ಮಾಲಿ ವ್ಯಾಪಕವಾಗಿ ವೈರಲ್ ಆಗಿತ್ತು.

ಈ ವಿಷಯ ವಿವಾದ ರೂಪ ಪಡೆದುಕೊಳ್ಳುತ್ತಿದ್ದಂತೆ ಶಿವಣ್ಣ ಈ ಕುರಿತು ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. ‘ನಾನು ಸಂವಿಧಾನಾತ್ಮಕ ಅಥವಾ ತಾಂತ್ರಿಕ ಅರ್ಥದಲ್ಲಿ ರಾಷ್ಟ್ರಭಾಷೆ ಎಂದು ಹೇಳಿಲ್ಲ. ಬದಲಿಗೆ ದೇಶದಾದ್ಯಂತ ವ್ಯಾಪಕವಾಗಿ ಮಾತನಾಡಲ್ಪಡುವ ಮತ್ತು ಜನಪ್ರಿಯವಾಗಿರುವ ಭಾಷೆ ಎಂಬ ಸರಳ ಅರ್ಥದಲ್ಲಿ ಆ ಮಾತುಗಳನ್ನು ಆಡಿದ್ದು ಎಂದು ಹೇಳಿದ್ದಾರೆ.

ಕನ್ನಡ ಭಾಷೆ, ನಾಡು-ನುಡಿಯ ಬಗ್ಗೆ ತಮಗಿರುವ ಗೌರವ, ಪ್ರೀತಿ ಎಂದಿಗೂ ಮೊದಲ ಸ್ಥಾನದಲ್ಲೇ ಇರುತ್ತದೆ. ಸಿನಿಮಾ ಪ್ರಚಾರದ ವೇಳೆ ಹಿಂದಿ ಸಂಭಾಷಣೆ, ಡಬ್ಬಿಂಗ್ ಬಗ್ಗೆ ಕೇಳಲಾದ ಪ್ರಶ್ನೆಗೆ ತಕ್ಷಣಕ್ಕೆ ಸರಳವಾಗಿ ಉತ್ತರಿಸುವಾಗ ಈ ಮಾತು ಬಂದಿತ್ತೇ ವಿನಃ ಯಾವುದೇ ಭಾಷಾ ಹೇರಿಕೆಯನ್ನು ಬೆಂಬಲಿಸುವ ಉದ್ದೇಶ ಇದರಲ್ಲಿರಲಿಲ್ಲ ಎಂದು ಹೇಳಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ