- ರಾಘವೇಂದ್ರ ಅಡಿಗ ಎಚ್ಚೆನ್.

ಕರ್ನಾಟಕ ಸರ್ಕಾರವು ಡಾ. ರಾಜ್ ಕುಮಾರ್, ವಿಷ್ಣುವರ್ಧನ್ ಹಾಗೂ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗಳನ್ನು ಅಧಿಕೃತವಾಗಿ ಘೋಷಿಸಿದೆ.
2019ನೇ ಸಾಲಿನ ಡಾ. ರಾಜ್ ಕುಮಾರ್ ಪ್ರಶಸ್ತಿಗೆ ಹಿರಿಯ ನಟಿ ಉಮಾಶ್ರೀ ಅವರನ್ನು ಆಯ್ಕೆ ಮಾಡಲಾಗಿದೆ. ಅವರು ಹಲವು ದಶಕಗಳಿಂದ ಕನ್ನಡ ಚಿತ್ರರಂಗಕ್ಕೆ ನೀಡಿರುವ ಅಮೂಲ್ಯ ಸೇವೆ ಮತ್ತು ಅದ್ಭುತ ನಟನೆಯ ಮಾನ್ಯತೆಯಾಗಿ ಈ ಗೌರವ ಅವರಿಗೆ ಸಂದಿದೆ.
ವಿಷ್ಣುವರ್ಧನ್ ಪ್ರಶಸ್ತಿಗೆ ಹಿರಿಯ ನಟ ರಿಚರ್ಡ್ ಕ್ಯಾಸ್ಟಲಿನೋ ಆಯ್ಕೆಯಾಗಿದ್ದಾರೆ. ಕನ್ನಡ, ತುಳು ಹಾಗೂ ಕೊಂಕಣಿ ಚಿತ್ರರಂಗಗಳಲ್ಲಿ ದೀರ್ಘಕಾಲದ ಅವರ ಸೇವೆ ಮತ್ತು ವಿಭಿನ್ನ ಪಾತ್ರಗಳ ನಿರ್ವಹಣೆ ಪ್ರಶಂಸಾರ್ಹವಾಗಿದೆ.
ಇದೇ ರೀತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ನಿರ್ದೇಶಕ ಎನ್.ಆರ್. ನಂಜುಂಡೇಗೌಡರನ್ನು ಆಯ್ಕೆ ಮಾಡಲಾಗಿದೆ. ಈ ಮೂರು ಪ್ರಮುಖ ಪ್ರಶಸ್ತಿಗಳ ಪ್ರತಿಯೊಂದರಲ್ಲಿ ₹5 ಲಕ್ಷ ನಗದು ಬಹುಮಾನ ಹಾಗೂ ಚಿನ್ನ ಲೇಪಿತ ಪದಕಗಳನ್ನು ಒಳಗೊಂಡಿರಲಿದೆ.
ಅದರ ಜೊತೆಗೆ, ಸರ್ಕಾರವು ‘ಬೆಳ್ಳಿ ತೊರೆ’ ಚಿತ್ರಕ್ಕೆ ಉತ್ತಮ ಸಿನಿಮಾ ಪ್ರಬಂಧ ಪ್ರಶಸ್ತಿ ಹಾಗೂ ‘ಗುಳೆ’ ಚಿತ್ರಕ್ಕೆ ಉತ್ತಮ ಕಿರುಚಿತ್ರ ಪ್ರಶಸ್ತಿಗಳನ್ನು ಸಹ ಘೋಷಿಸಿದೆ. ಈ ಪ್ರಶಸ್ತಿಗಳಲ್ಲಿ ₹25,000 ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಬೆಳ್ಳಿ ಪದಕ ಇರಲಿದೆ.
ಇದರ ಜೊತೆಗೆ ರಾಜ್ಯೋತ್ಸವ ಪ್ರಶಸ್ತಿಗಳ ಘೋಷಣೆ ಸಹ ಜರುಗಿದ್ದು, ಚಲನಚಿತ್ರ ಮತ್ತು ಕಿರುತೆರೆ ವಿಭಾಗದಲ್ಲಿ ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ ಮತ್ತು ವಿಜಯಲಕ್ಷ್ಮಿ ಸಿಂಗ್ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ