ಬರಲಿದೆ ಬೇಬೋಗೊಂದು ಬೇಬಿ!
ಬಾಲಿವುಡ್ನಲ್ಲಿ ಬೇಬೋ ಕರೀನಾ ಕಪೂರ್ ಬೇಬಿ ಬಂಪ್ ಜೊತೆ ಲ್ಯಾಕ್ಮೆ ಫ್ಯಾಷನ್ ವೀಕ್ನಲ್ಲಿ ಭಾಗವಹಿಸಿದಳು. ಈ ಕ್ಷಣಗಳಲ್ಲಿ ಆಕೆ ಭಾವುಕಳಾಗಿ, ಈ ರಾಂಪ್ ವಾಕ್ ನನಗೆ ಸದಾ ಸ್ಮರಣೀಯ. ಏಕೆಂದರೆ ಮೊದಲ ಬಾರಿ ನಾನು ಗರ್ಭವತಿಯಾಗಿ ಹೀಗೆ ಕ್ಯಾಟ್ವಾಕ್ ಮಾಡುತ್ತಿದ್ದೇನೆ, ಎಂದಳು. ಕರೀನಾ ಡಿಸೈನರ್ ಸಬ್ಯಸಾಚಿಯ ಹಾಲಿಯಾ ಸಂಗ್ರಹದಿಂದ ಈ ಡ್ರೆಸ್ ಧರಿಸಿ ರಾಂಪ್ ವಾಕ್ ಮಾಡಿದ್ದಳು. ಭಾರೀ ಕಸೂತಿಯ ಹಸಿರು ಲಹಂಗಾ ಮತ್ತು ಕುರ್ತಿ ಸ್ಟೈಲ್ ಚೋಲಿ ಧರಿಸಿದ್ದಳು, ತಲೆಗೊಂದು ದುಪಟ್ಟಾ. ಇದರಲ್ಲಿ ಆಕೆ ರಾಜಮನೆತನದ ವಧುವಂತೆ ಶೋಭಿಸುತ್ತಿದ್ದಳು.
ವರುಣ್ ಜೊತೆ ಇಬ್ಬಿಬ್ಬರು
ಹಾಟ್ರಲ್ಲಿ ಬಂದಿದ್ದ `ಜುಡ್ವಾ’ ಹಿಟ್ ಎನಿಸಿತ್ತು. ಅದರ ಸೀಕ್ವೆಲ್`ಜುಡ್ವಾ-2′ ಈಗ ಬರುತ್ತಿದೆ. ಮೊದಲ ಚಿತ್ರ ಜ್ಯಾಕಿಚಾನ್ನ `ಟ್ವಿನ್ ಡ್ರಾಗನ್’ ಆಧರಿಸಿತ್ತು. ಅಲ್ಲಿನ ಸಲ್ಮಾನ್ ಪಾತ್ರವನ್ನು ಈಗ ವರುಣ್ ನಿಭಾಯಿಸುತ್ತಿದ್ದಾನೆ. ಈತ ಈಗ ಪರಿಣಿತಿ ಹಾಗೂ ಜ್ಯಾಕಲೀನ್ ಇಬ್ಬರೊಂದಿಗೂ ಡಬಲ್ ರೋಲ್ ನಲ್ಲಿ ರೊಮಾನ್ಸ್ ನಡೆಸಲಿದ್ದಾನೆ. ಇವರಿಬ್ಬರೂ `ಡಿಶುಂ’ ಚಿತ್ರದಲ್ಲಿ ಈಗಾಗಲೇ ವರುಣ್ ಜೊತೆ ನಟಿಸಿದ್ದಾರೆ, ಆದರೆ ಬೇರೆ ಪಾತ್ರಗಳಲ್ಲಿ. ಈಗ ಈ ಚಿತ್ರದ ಮುಖಾಂತರ ವರುಣ್ಗೆ ಪೂರ್ಣ ಪ್ರಮಾಣದ ನಾಯಕಿಯರಾಗಿದ್ದಾರೆ. ಅಂತೂ ಇಬ್ಬರು ಹಾಟಿಯರ ನೆಚ್ಚಿನ ನಾಯಕ ಆಗಲಿದ್ದಾನೆ ವರುಣ್.
ತಾಪಸಿ ಆಗಲಿದ್ದಾಳೆ ಇರೋಮ್
ಶರ್ಮಿಳಾ`ಬೇಬಿ’ ಚಿತ್ರದ ಆ್ಯಕ್ಷನ್ ಪಾತ್ರದಿಂದ ಹೆಚ್ಚಿನ ಚರ್ಚೆಗೆ ಬಂದ ದಕ್ಷಿಣದ ನಟಿ ತಾಪಸಿ ಪನ್ನು `ಪಿಂಕ್’ ಚಿತ್ರದಲ್ಲೂ ಒಳ್ಳೆಯ ಹೆಸರು ಗಳಿಸಿದ್ದಾಳೆ. `ಅಲಿಗ್’ ತಯಾರಿಸುತ್ತಿರುವ ಹಸನ್ ಮೆಹ್ತಾ, ಮಣಿಪುರದ ಐರನ್ ಲೇಡಿ ಇರೋಮ್ ಶರ್ಮಿಳಾಳ ಕುರಿತಂತೆ `ಇಂಫಾಲ್’ ಚಿತ್ರ ತಯಾರಿಸಲಿದ್ದಾರೆ. ಇದಕ್ಕಾಗಿ ತಾಪಸಿಯನ್ನು ಶರ್ಮಿಳಾ ಪಾತ್ರಕ್ಕಾಗಿ ಆರಿಸಿದರಂತೆ. ನಂಬಲರ್ಹ ಮೂಲಗಳ ಪ್ರಕಾರ ತಾಪಸಿ ಬಲು ಖುಷಿಯಿಂದ ಶರ್ಮಿಳಾಳ ಬಯೋಪಿಕ್ ಚಿತ್ರಕ್ಕೆ ಒಪ್ಪಿದ್ದಾಳಂತೆ.ಇಷ್ಟು ಕೋಪ ಏಕೆ?
ಇತ್ತೀಚೆಗೆ ಬಾಲಿವುಡ್ನಲ್ಲಿ ನಾನ್ ಗ್ಲಾಮರಸ್
ಹುಡುಗಿಯರ ಬಗ್ಗೆ ಮಾತನಾಡುವುದಾದರೆ ಅದರಲ್ಲಿ ಕೃಷ್ಣಸುಂದರಿ ರಾಧಿಕಾ ಆಫ್ಟೆ ಮೊದಲಿಗಳು. ತನ್ನ ಆ್ಯಕ್ಟಿಂಗ್ ಕಾರಣದಿಂದಲೇ ಇಂಡಸ್ಟ್ರಿಯಲ್ಲಿ ಒಂದು ಸ್ಥಾನ ಪಡೆದಿರುವ ರಾಧಿಕಾ, ಕೇವಲ ತನ್ನ ಚಿತ್ರಗಳು ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ವಿಡಿಯೋ ಕ್ಲಿಪ್ನಿಂದಲೂ ಚರ್ಚೆಯಲ್ಲಿದ್ದಳು. ಈಕೆಯ ಹೊಸ ವಿವಾದ ಎಂದರೆ `ಪಾರ್ಚೂನ್ಡ್’ ಚಿತ್ರದ ಇಂಟಿಮೇಟ್ದೃಶ್ಯಗಳು. ಒಬ್ಬ ರಿಪೋರ್ಟರ್ ಈ ಬಗ್ಗೆ ಆಕೆಯನ್ನು ಕೆಣಕಿದಾಗ, “ಆ ಕ್ಲಿಪ್ಸ್ ಲೀಕ್ ಆದದ್ದು ಅಲ್ಲ ಅಂತ ನೆನಪಿಡಿ. ಇದು ವಿಶ್ವವಿಡೀ ರಿಲೀಸ್ ಆದ ಚಿತ್ರ. ಆ ಕುರಿತಾಗಿ ಸರಿಯಾಗಿ ತಿಳಿದುಕೊಳ್ಳಿ,” ಎಂದು ಖಾರವಾಗಿ ಗುಡುಗಿದ್ದಾಳೆ.
ಸನೀ ಬಗ್ಗೆ ಕತ್ತಿ ಮಸೆದ ರಾಖಿ
ಸನೀ ಲಿಯೋನ್ ಬಾಲಿವುಡ್ನಲ್ಲಿ ತನ್ನ ಹಾಟ್ ದೃಶ್ಯಗಳಿಂದ ರಂಗೇರಿಸಿದಂತೆ ರಾಖಿ ಸಾವಂತ್ಗೆ ಮೈಯೆಲ್ಲ ಉರಿದುರಿದು ಹೋಗುತ್ತಿದೆ! ಅವಳನ್ನು ಕೇಳುವವರೇ ಇಲ್ಲದೆ, ಅಲ್ಲೊಂದು ಇಲ್ಲೊಂದು ಚಿತ್ರಗಳಲ್ಲಿ ಐಟಂ ಡ್ಯಾನ್ಸ್ ಗಳಲ್ಲಿ ಮುಖ ತೋರಿಸುತ್ತಿದ್ದಾಳೆ. ಈ ಬಾರಿ ರಾಖಿ ನೇರವಾಗಿ ಸನ್ನಿ ಹಾಗೂ ಸೆನ್ಸಾರ್ ಮಂಡಳಿ ಇಬ್ಬರನ್ನೂ ಝಾಡಿಸಿದ್ದಾಳೆ. ಇವಳ `ಏಕ್ ಥಿ ಜೂಲಿ’ ಚಿತ್ರಕ್ಕೆ ` ‘ ಸರ್ಟಿಫಿಕೇಟ್ ಕೊಟ್ಟಿದ್ದಕ್ಕೇ ಇಷ್ಟೆಲ್ಲ ರಾದ್ಧಾಂತ. ರಾಖಿ ಸೆನ್ಸಾರ್ ಮಂಡಳಿ ಅಧ್ಯಕ್ಷರನ್ನೇ ಕೆಲಸಕ್ಕೆ ಲಾಯಕ್ಕಿಲ್ಲ ಎಂದು ಕಿಡಿಕಾರಿದ್ದಾಳೆ. ಅವರನ್ನು ಇಳಿಸಿ, ಅವರಿಗಿಂತ ಬೆಟರ್ ಆಗಿ ನಾನು ಆವ ಕೆಲಸ ನಿರ್ವಹಿಸಿ ತೋರಿಸುವೆ ಅಂತಾಳೆ! ತಾನು ಐಟಂ ಗರ್ಲ್ ಆದ್ದರಿಂದ ಬೇಕೆಂದು ಹೀಗೆ ಸರ್ಟಿಫಿಕೇಟ್ಕೊಟ್ಟಿದ್ದಾರೆ, ಆದರೆ ನಾನು ಪೋರ್ನ್ ಸ್ಟಾರ್ ಅಲ್ಲ ಎಂದು ಅವರು ಗಮನದಲ್ಲಿ ಇಟ್ಟುಕೊಳ್ಳಲಿ ಅಂತಾಳೆ. ಅದು ಯಾರನ್ನು ಕುರಿತದ್ದು ಎಂಬುದು ಎಲ್ಲರಿಗೂ ಗೊತ್ತು. ಬಾಯಿಬಡುಕಿ ರಾಖಿ ಕೈಲಿ ಸಿಕ್ಕಿಕೊಂಡರ ಗತಿ….!
ಬಾಲಿವುಡ್ ಬಯಾಸ್ಕೋಪ್
ಫಿಲ್ಮಿ ಎಂಟ್ರಿಗಾಗಿ ಡ್ರೈವರ್ ಆದವರು ಬಾಲಿವುಡ್ನ ಹಾಸ್ಯ ಚಕ್ರವರ್ತಿ ಎಂದೇ ಖ್ಯಾತರಾದ ದಿ. ಮೆಹಮೂದ್ ಇಲ್ಲಿಗೆ ಎಂಟ್ರಿ ಪಡೆಯಲು ಅದೆಷ್ಟು ಪಾಡುಪಟ್ಟರೋ! ಅವರು ಮುಂಬೈನ ಲೋಕಲ್ ಟ್ರೇನುಗಳಲ್ಲಿ ಟಾಫಿ ಮಾರಿದ್ದೂ ಉಂಟು, ಎಷ್ಟೋ ಸಿನಿ ನಿರ್ದೇಶಕರ ಕಾರಿಗೆ ಡ್ರೈವರ್ ಸಹ ಆಗಿದ್ದರು. ಕಮಾಲ್ ಅಮರೋಹಿಯಂತೂ ಇವರಿಗೆ, ನಿನಗೇನು ನಟನೆಯ ಗಂಧಗಾಳಿ ಇದೆ ಎಂದೆಲ್ಲ ರವಡಿಸಿದ್ದರಂತೆ. `ನಾದಾನ್’ ಚಿತ್ರದಲ್ಲಿ ಒಬ್ಬ ಸಹಕಲಾವಿದ ಮಧುಬಾಲಾ ಮುಂದೆ 10 ಸಲ ರೀಟೇಕ್ ಆದರೂ ಡೈಲಾಗ್ ಒಪ್ಪಿಸದಿದ್ದಾಗ, ಇವರಿಗೆ ಎಂಟ್ರಿಗೆ ಅವಕಾಶ ಸಿಕ್ಕಿತು! ನಿರ್ದೇಶಕ ಹೀರಾ ಸಿಂಗ್ ಎದುರು ಒಂದೇ ಟೇಕ್ನಲ್ಲಿ ಓ.ಕೆ. ಮಾಡಿಸಿಕೊಂಡರು. ಇದಕ್ಕಾಗಿ ಅವರಿಗೆ 300/ ರೂ.ಗಳ ಸಂಭಾವನೆ ಸಿಕ್ಕಿತ್ತು. ಡ್ರೈವರ್ ಗಿರಿಯಲ್ಲಿ ದಿನಕ್ಕೆ 75/ ಮಾತ್ರ ಸಿಗುತ್ತಿತ್ತು. ಹೀಗೆ ಬಾಲನಟನಾಗಿ ಎಂಟ್ರಿ ಪಡೆದ ಅವರು ಹಿಂದಿರುಗಿ ನೋಡಲೇ ಇಲ್ಲ.
ಮೀನಾಕುಮಾರಿ ಎದುರಿಸಿದ್ದ ಕುತ್ತು
ಟ್ರಾಜಿಡಿ ಕ್ವೀನ್ ಮೀನಾಕುಮಾರಿಯ ನಟನೆ ಮತ್ತು ಶಾಯರಿಗೆ ಮಾರುಹೋಗದ ಅಭಿಮಾನಿಗಳಿಲ್ಲ. ಹಿರಿಯ ಸಾಹಿತಿಗಳಿಂದ ಹಿಡಿದು ಚಂಬಲ್ ಕಣಿವೆಯ ಡಾಕುಗಳವರೆಗೂ ಎಲ್ಲರೂ ಅಭಿಮಾನಿಗಳೇ! ಒಮ್ಮೆ ಈಕೆ ಪತಿ ಕಮಾಲ್ ಅಮರೋಹಿ ಜೊತೆ ಶೂಟಿಂಗ್ಗಾಗಿ, ಶಿವಪುರಿ ಮಾರ್ಗವಾಗಿ ಆಗ್ರಾಗೆ ಹೊರಟಿದ್ದರು. ಅದು ದುರ್ಗಮ ಕಾಡಿನ ಹಾದಿ. ಯಾವಾಗ ಡಾಕುಗಳ ಆಕ್ರಮಣವೇ ಎಂಬ ಆತಂಕ. ಇವರ ಕಾರು ಮಧ್ಯದಲ್ಲೇ ಕೆಟ್ಟು ನಿಲ್ಲಬೇಕೇ? ಕಾರನ್ನು ಮುತ್ತಿದ ಡಾಕುಗಳು ಮೀನಾಕುಮಾರಿ ಜೊತೆ ಆಕೆಯ ಪತಿ ಮತ್ತಿಬ್ಬರನ್ನು ಬಂಧಿಸಿ ತಮ್ಮ ನಾಯಕ ಅಮೃತ್ ಲಾಲ್ ಬಳಿ ಎಳೆದೊಯ್ದರಂತೆ. ಆತ ಮೀನಾಕುಮಾರಿಯನ್ನು ಗುರುತಿಸಿ, ಸಿಬ್ಬಂದಿಗೆ ಹೇಳಿ ರಾಜೋಪಚಾರ ಮಾಡಿಸಿದ. ಆಕೆ ಕೈಲಿ ಬೇರೆ ಬೇರೆ ಡೈಲಾಗ್, ಹಾಡು ಹೇಳಿಸಿ ಬೆಳಗಾದ ಮೇಲೆ ಕಾರಿಗೆ ಪೆಟ್ರೋಲ್ ತುಂಬಿಸಿ ಕ್ಷೇಮವಾಗಿ ಕಳುಹಿಸಿಕೊಟ್ಟನಂತೆ!
ಕಂಗನಾಳಿಗೆ ಏನಾಗಿದೆ?
ಸದಾ ಒಂದಾದ ಮೇಲೆ ಒಂದು ಹಿಟ್ ನೀಡುತ್ತಾ ಚರ್ಚೆಯಲ್ಲಿದ್ದ ಕಂಗನಾ ಈಗ ಬರೀ ಜಗಳ, ಹೊಡೆದಾಟ, ಲೇಟ್ ಲತೀಫ್ ಆಗಿ ಗುರುತಿಸಲ್ಪಡುತ್ತಿದ್ದಾಳೆ. ಹೃತಿಕ್ ಜೊತೆ ಇವಳ ಜಗಳ ಸಾರ್ವನಿಕ ಆದಾಗಿನಿಂದ, ಕ್ವೀನ್ ಮೂಡ್ ಟೋಟಲಿ ಆಫ್! ಶಾಹಿದ್ಜೊತೆ ಜಗಳವಾಡಿದ ಕಾರಣ ನಿರ್ದೇಶಕ ಆನಂದ್ ರಾಯ್ ತಮ್ಮ ಮುಂದಿನ ಚಿತ್ರದಿಂದ ಈಕೆಯನ್ನು ಓಡಿಸಿದರು. ಅದರಲ್ಲಿ ಶಾರೂಖ್ ಜೊತೆ ಮೊದಲ ಸಲ ನಟಿಸುವ ಅವಕಾಶವಿತ್ತು. `ತನು ವೆಡ್ಸ್ ಮನು’ ಮತ್ತು `ರಿಟರ್ನ್ಸ್’ ಚಿತ್ರದಲ್ಲಿ ಈ ಮಹಾತಾಯಿಯೊಂದಿಗೆ ಹೆಣಗಿ ಸಾಕಾದ ಅವರು, ಈಕೆಗೆ ಕೈ ಮುಗಿದು ಕತ್ರೀನಾ ಕೈಫ್ಗೆ ಅವಕಾಶ ಮಾಡಿಕೊಟ್ಟರು.
ಹಳೆಯ ಪ್ರೇಮಕ್ಕಾಗಿ ಸಲ್ಮಾನ್
ಖಾನ್ನ `ಪ್ರೇಮಿಸಂ’ ಸ್ಟೈಲ್ ಬಿಲ್ ಕುಲ್ ಬಂಕಿಮ ಚಂದ್ರರ ದೇವದಾಸ್ನಂತೆಯೇ ಇದೆ, ಅವನು ಪಾರೋಲ್ ಚಂದ್ರಮುಖಿ ಇಬ್ಬರನ್ನೂ ಸಮಾನವಾಗಿ ಪ್ರೇಮಿಸುತ್ತಿದ್ದ. ನಿಜವಾದ ಪ್ರೇಮಿ, ತನ್ನ ಸಂಗಾತಿ ಸದಾ ಸುಖಿಯಾಗಿರಲೆಂದು ಬಯಸುವಂತೆ ಸಲ್ಮಾನ್ ತನ್ನ ಮಾಜಿ ಪ್ರೇಯಸಿ ಕತ್ರೀನಾ ಜೊತೆ 2012ರಲ್ಲಿ `ಏಕ್ಥಾ ಟೈಗರ್’ನಲ್ಲಿ ನಟಿಸಿದ್ದ. ಅದರ ಎರಡನೇ ಭಾಗವಾದ `ಟೈಗರ್ ಝಿಂದಾ ಹೈ’ ಚಿತ್ರದಲ್ಲಿ ಮತ್ತೊಮ್ಮೆ ಕಾಣಿಸಲಿದ್ದಾನೆ! ಈಗ ಕತ್ರೀನಾ 2ನೇ ಪ್ರೇಮಿಯಿಂದಲೂ ದೂರಾಗಿ, ತನ್ನ ಕೆರಿಯರ್ನಲ್ಲೂ ಮುಗ್ಗರಿಸಿದ ಮೇಲೆ, ಮಾಜಿ ಪ್ರೇಮಿ ಸಲ್ಮಾನ್ ಅವಳಿಗೆ ಉತ್ತಮ ಅವಕಾಶ ನೀಡಿದ್ದು, ಆಕೆಗೆ ಜೀವ ಬಂದಂತಾಗಿದೆ. ಯಶ್ರಾಜ್ರ ಈ ಚಿತ್ರವನ್ನು ಇದೀಗ ಅಲಿ ಅಬ್ಬಾಸ್ ನಿರ್ದೇಶಿಸುತ್ತಿದ್ದಾರೆ. ವಿಭಿನ್ನ ದೇಶಗಳಲ್ಲಿ ಸತತ ಚಿತ್ರೀಕರಣ ನಡೆಯುತ್ತಿರುವ ಈ ಚಿತ್ರದ ನಡುವೆ ಈ ಮಾಜಿಗಳು ಮತ್ತೆ ಹಾಲಿ ಆಗಲಿದ್ದಾರೆಯೇ….? ಕಾಲವೇ ಉತ್ತರಿಸಬೇಕು.
ನಾನು ಭೀ ಸ್ಟೈಲಿಶ್ ಬಾಲಿವುಡ್
ದೀವಾ ಸೋನಂ ಕಪೂರ್ ಇತ್ತೀಚೆಗೆ `ಇಂಡಿಯನ್ ಬ್ರೈಡಲ್ ಫ್ಯಾಷನ್ ವೀಕ್’ಗಾಗಿ ದೆಹಲಿಯಲ್ಲಿ ಹೊಸ ಸ್ಟೋರ್ನ ಲಾಂಚಿಂಗ್ಗಾಗಿ ರಾಜಧಾನಿಗೆ ಬಂದಿದ್ದಳು. ಕ್ಯಾಮೆರಾದ ಕಣ್ಣು ಕೋರೈಸುವ ಬೆಳಕಿನ ಮಧ್ಯೆ, ಕ್ರೀಂ ಬಣ್ಣದ ಸೀರೆ ಮತ್ತು ಫುಲ್ ಸ್ಲೀವ್ ಮೆರೂನ್ ಬ್ಲೌಸ್ನಲ್ಲಿ ಬೆಡಗಿನಿಂದ ಕಂಗೊಳಿಸುತ್ತಿದ್ದ ಈಕೆ ಎಲ್ಲರ ಮೆಚ್ಚುಗೆ ಗಳಿಸಿದಳು. ನಾನು ಸದಾ ಫ್ಯಾಷನ್ ಪ್ರಿಯೆ, ಅದು ಇಂಡಿಯನ್ ಅಥವಾ ವೆಸ್ಟರ್ನ್ ಇರಲಿ, ಎನ್ನುತ್ತಾಳೆ.
ಮತ್ತೆ ಮೂಡಿಬರಲಿದೆ ಈ ಕಾಮಿಡಿ ಶೋ
ದೇವೆನ್ ಭೋಜಾನಿ ನಿರ್ದೇಶಿಸಿದ ಪ್ರಸಿದ್ಧ ಹಾಸ್ಯ ಧಾರಾವಾಹಿ `ಸಾರಾಭಾಯಿ V/S ಸಾರಾಭಾಯಿ’ ಮತ್ತೆ ಕಿರುತೆರೆಯಲ್ಲಿ ಮೂಡಿಬರಲಿದೆ! ಈ ಕಾರ್ಯಕ್ರಮದ ನಿರ್ಮಾಪಕ ಜೆ.ಡಿ. ಮಜೀಠಿಯಾ ಟ್ವೀಟರ್ನಲ್ಲಿ ಶೋನ ಎಲ್ಲಾ ಕಲಾವಿದರೊಂದಿಗೆ ತಾವು ಇರುವಂತೆ ಒಂದು ಟೀಸರ್ ಶೇರ್ ಮಾಡಿದ್ದಾರೆ. ಅವರು ಬರೆಯುತ್ತಾರೆ, ಸಾರಾಭಾಯಿ ಪರಿವಾರ ಸತೀಶರ ಮನೆಯಲ್ಲಿ ಅಂತ. ಇದರಲ್ಲಿ ಹಿಂದಿನ ಅದೇ ತಂಡವಾದ. ಸತೀಶ್ ಶಾಹ್, ರತ್ನಾ ಪಾಠಕ್, ಸುಮಿತ್ ರಾಘವನ್, ರೂಪಾಲಿ ಗಂಗೂಲಿ, ರಾಜೇಶ್ಕುಮಾರ್, ಅರವಿಂದ್, ರೀಟಾ ಬಾಧುರಿ ಇರುತ್ತಾರೆ.
ಕಿರುತೆರೆಯ ಅತಿ ದುಬಾರಿ ಸ್ಟಾರ್ ಪ್ರಿಯಾಂಕಾ : ಈ ಬಾರಿ 73 ಕೋಟಿಗೂ ಅಧಿಕ ಸಂಭಾವನೆ ಗಳಿಸಿರುವ ಪ್ರಿಯಾಂಕಾ ಚೋಪ್ರಾ, ಕಿರುತೆರೆಯ ಅತಿ ದುಬಾರಿ 10 ಸ್ಟಾರ್ಗಳಲ್ಲಿ ಒಬ್ಬಳೆನಿಸಿದ್ದಾಳೆ. `ಫೋರ್ಬ್ಸ್’ ಪತ್ರಿಕೆ ಇಂಥ ಅತಿ ದುಬಾರಿ ಸಂಭಾವನೆ ಪಡೆಯುವ ನಟಿಯರ ಪಟ್ಟಿ ಪ್ರಕಟಿಸಿದೆ. ಇದರಲ್ಲಿ ಭಾರತದ ಪ್ರಿಯಾಂಕಾ ಕಿರುಪರದೆಯ ವಿಶ್ವದ ಅತಿ ದುಬಾರಿ ಸ್ಟಾರ್ಗಳಲ್ಲಿ 8ನೇಯವಳು ಎನಿಸಿದ್ದಾಳೆ. ಮೊದಲ ಸ್ಥಾನವನ್ನು ಅಮೆರಿಕಾದ `ಮಾಡರ್ನ್ ಫ್ಯಾಮಿಲಿ’ ಶೋನ ನಟಿ ಸೋಫಿಯಾ ರ್ಗೇರಾ ಗಿಟ್ಟಿಸಿದ್ದಾಳೆ.
ಪ್ರಿಯಾಂಕಾ ಕಳೆದ ವರ್ಷ `ಬಾಜಿರಾವ್ ಮಸ್ತಾನಿ’ ಹಾಗೂ `ಜಯ್ಗಂಗಾಜ್’ ಚಿತ್ರಗಳಲ್ಲಿ ಕಾಣಿಸಿದ್ದಳು. ಇದಾದ ನಂತರ ಆಕೆ ಅಮೆರಿಕಾದ ಟಿವಿಯಲ್ಲಿ `ಕ್ವಾಂಟಿಕೋ’ದಲ್ಲಿ ಕಾಣಿಸಿಕೊಂಡು ತಾನು ಯಶಸ್ವೀ ಅಂತಾರಾಷ್ಟ್ರೀಯ ನಟಿ ಎಂದು ನಿರೂಪಿಸಿದ್ದಾಳೆ. ಈ ಶೋ ನಂತರ ಟಿವಿ ಜಾಹೀರಾತುಗಳಿಂದ ಈಕೆಗೆ ಒಟ್ಟು 11 ಮಿಲಿಯನ್ ಡಾಲರ್ ಅಂದರೆ 73 ಕೋಟಿ 72 ಲಕ್ಷಕ್ಕೂ ಹೆಚ್ಚು ಹಣ ಬಂದಿದೆ! ಪಾಪ, ಭಾರತದಲ್ಲಿ ದೀಪಿಕಾ ಪಡುಕೋಣೆ ಕೇವಲ 67 ಕೋಟಿ ಸಂಪಾದಿಸಿ 2ನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಹಿನಾ ಸುರಿಸಿದ ರಕ್ತ
`ಯೇ ರಿಶ್ತಾ ಕ್ಯಾ ಕೆಹಾತಾ ಹೈ’ ಧಾರಾವಾಹಿಯ ನಾಯಕಿ ಅಕ್ಷರಾ ಅರ್ಥಾತ್ ಹಿನಾ ಖಾನ್ ಶೂಟಿಂಗ್ನಲ್ಲಿ ಒಂದು ದುರ್ಘಟನೆ ಎದುರಿಸಬೇಕಾಯಿತು. ಅವಳು ಮೆಟ್ಟಿಲಿನಿಂದ ಇಳಿಯುವಾಗ ಜಾರಿಬಿದ್ದು ಪ್ರಜ್ಞೆ ತಪ್ಪಿದಳು. ಅವಳ ಕಾಲಿನ ಕಿರುಬೆರಳಿನ ಉಗುರು ಪೂರ್ತಿ ಕಿತ್ತು ಬಂದು ದೊಡ್ಡ ಆಘಾತವಾಯಿತಂತೆ. ಉಗುರು ಕಿತ್ತು ಸಾಕಷ್ಟು ರಕ್ತ ಹರಿದಿದ್ದರಿಂದ ಮೂರ್ಛೆ ತಪ್ಪಿದಳು. ಅದರಿಂದ ಹೇಗೋ ಎದ್ದು ಅಂತೂ ನೋವಿನಲ್ಲೇ ಆ ಎಪಿಸೋಡ್ ಪೂರೈಸುವಷ್ಟರಲ್ಲಿ ಅವಳು ಮತ್ತೆ ಪ್ರಜ್ಞೆ ತಪ್ಪಿದಳು! ಸುಶಾಂತ್ ರಾಜ್ಪೂತ್ನ ಮಾಜಿ ಪ್ರೇಯಸಿ ಅಂಕಿತಾ ಸಹ ಅದೇ ಸೆಟ್ಲ್ಲಿ ಬೆಂಕಿಗೆ ಸಿಕ್ಕಿಹಾಕಿಕೊಂಡಳು. ಅವಳ ಕುತ್ತಿಗೆ ಕೈಕಾಲುಗಳು ಸುಟ್ಟೇಹೋಯಿತು.
ಗಗನಸಖಿಯಿಂದ ನಟಿ ಆದದ್ದು ಕಿರುತೆರೆಯ ಜನಪ್ರಿಯ ನಟಿ ದೀಪಿಕಾ ಕಕ್ಕಡ್ ಬಹಳ ದಿನಗಳಿಂದ ಕಲರ್ಸ್ನ `ಸಸುರಾಲ್ ಸಿಮರ್ ಕಾ’ ಧಾರಾವಾಹಿಯಲ್ಲಿ ನಾಯಕಿ ಆಗಿದ್ದಾಳೆ. ಇದಕ್ಕೂ ಮೊದಲು 2-3 ಚಿಕ್ಕ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿದ್ದಳು. ಬಾಲ್ಯದಿಂದಲೇ ಗಗನಸಖಿ ಆಗುವ ಕನಸು ಕಾಣುತ್ತಿದ್ದ ದೀಪಿಕಾ `ಝಲಕ್ ದಿಖ್ ರಾಜಾ’ ಡ್ಯಾನ್ಸ್ ಶೋನಲ್ಲೂ ಯಶಸ್ವಿ ಎನಿಸಿದಳು.
`ಸಸುರಾಲ್…..’ ಧಾರಾವಾಹಿಯಲ್ಲಿ ಸುಸಂಸ್ಕೃತ ಸೊಸೆಯಾಗಿ ಕಾಣಿಸಿರುವ ಈಕೆ, “ಒಂದು ಮನೆಯ ಸೊಸೆಯಾಗಿ ಎಲ್ಲರ ಕೈಲೂ ಸೈ ಅನಿಸಿಕೊಳ್ಳುವುದು ಸುಮ್ಮನೆ ಆಗಲಿಲ್ಲ. ಮನೆಯವರಿಗೆ ಮಾತ್ರ ಸೊಸೆಯ ಅಗತ್ಯವಿದೆ ಅಂತಲ್ಲ, ಸೊಸೆಗೂ ಇಂಥ ಕುಟುಂಬದ ಅಗತ್ಯ ಇದ್ದೇ ಇದೆ. ತ್ಯಾಗಕ್ಕೆ ಎಂದೂ ಹಿಂಜರಿಯಬಾರದು. ಕೋಪ ನಿಯಂತ್ರಿಸಿ, 5 ನಿಮಿಷ ಹೀಗೆ ಸಹನೆ ತಂದುಕೊಂಡರೆ ಮನೆಗಳಲ್ಲಿ ಎದುರಾಗುವ ಇಂಥ ಎಷ್ಟೋ ಜಗಳಗಳು ತಪ್ಪಿಹೋಗುತ್ತವೆ,” ಎನ್ನುತ್ತಾಳೆ.
ಅಂದುಕೊಂಡಂತೆ ಗಗನಸಖಿಯಾದ ದೀಪಿಕಾ, ಅಲ್ಲಿನ ಸ್ಕರ್ಟ್ ಶಿಷ್ಟಾಚಾರಕ್ಕೆ ಹೊಂದಿಕೊಳ್ಳಲಾರದೆ ಕಿರುತೆರೆಯತ್ತ ಬಂದಳಂತೆ. ಈ ಕೆಲಸದ ಮಧ್ಯೆ ಬಿಡುವು ಸಿಕ್ಕಾಗ ಈಗಲೂ ಸದಾ ಫ್ಲೈಟ್ಗಳಲ್ಲೇ ಪ್ರವಾಸ ಹೊರಡುತ್ತಾಳಂತೆ.
ಕಿರುತೆರೆಗೆ ಅಶ್ಮಿತ್ನ ಪಾದಾರ್ಪಣೆ
ಹಿರಿ ತೆರೆಯಲ್ಲಿ ಗೆಲ್ಲಲಾಗದವರು ಕಿರುತೆರೆಗೆ ಲಗ್ಗೆ ಹಾಕುವುದು ಈಗ ವಾಡಿಕೆ ಆಗಿದೆ. ಹೀಗಾಗಿಯೇ 2004ರಲ್ಲಿ ಬಾಲಿವುಡ್ನ `ಇಂತಿಹಾ’ ಚಿತ್ರದಿಂದ ಎಂಟ್ರಿ ಪಡೆದ ಅಶ್ಮಿತ್ ಪಟೇಲ್ (ಈತ `ಕಹೋನಾ ಪ್ಯಾರ್ ಹೈ’ ಚಿತ್ರದ ನಾಯಕಿ ಅಮೀಶಾ ಪಟೇಲ್ಳ ತಮ್ಮ) ಬಿಗ್ಬಾಸ್ನಲ್ಲೂ ಹೆಸರು ಪಡೆದನು. ಇದೀಗ `ಏಕ್ ಮಾ ಜೋ ಲಾಖೊಂಕೇ ಲಿಯೇ ಬನೀ ಅಮ್ಮಾ’ ಧಾರಾವಾಹಿಯಲ್ಲಿ ಫೈಸ್ನ ಪಾತ್ರದಲ್ಲಿ ಬರಲಿದ್ದಾನೆ. ಅಂಡರ್ ವರ್ಲ್ಡ್ ಡಾನ್ ಆಗಿದ್ದನು ತಾಯಿಯ ವಾತ್ಸಲ್ಯಕ್ಕೆ ಕರಗಿ ಹೇಗೆ ಆದರ್ಶವಾದಿಯಾದ ಎಂಬುದೇ ಧಾರಾವಾಹಿಯ ಕಥಾವಸ್ತು.