ನಮ್ಮ ಕರ್ನಾಟಕದ ಪಡುಕೋಣೆ ಎಂಬ ಊರಿನ ಹೆಸರು ಕ್ರೀಡಾಜಗತ್ತಿನಲ್ಲಿ ಮತ್ತು ಚಲನಚಿತ್ರರಂಗದಲ್ಲಿ ಸಾಕಷ್ಟು ಚಿರಪರಿತವಾಗಿದೆ. ತಂದೆ ಪ್ರಕಾಶ್ ಪಡುಕೋಣೆ 1980ರಲ್ಲಿ ಆಲ್ ಇಂಗ್ಲೇಂಡ್ ಬ್ಯಾಂಡ್ಮಿಂಟನ್ ಛಾಂಪಿಯನ್ ಆಗುವ ಮೂಲಕ ಚಿರಪರಿಚಿತರಾದರೆ ಅವರ ಮಗಳು ದೀಪಿಕ ಪಡುಕೋಣೆ ಕಳೆದ ಎಂಟು ಹತ್ತು ವರ್ಷಗಳಿಂದ ಜನಪ್ರಿಯ ನಾಯಕಿಯಾಗಿ ಮಿಂಚುತ್ತಿದ್ದಾಳೆ. ಅದರೆ 1940ರಲ್ಲೇ ಪಡುಕೋಣೆ ಹೆಸರನ್ನು ದೇಶಾದ್ಯಂತ ಪಸರಿಸಿದ ಹೆಸರಾಂತ ಚಿತ್ರಕಾರ, ನಟ, ನೃತ್ಯ ಸಂಯೋಜಕ,ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದ ಅಪ್ಪಟ ಕನ್ನಡಿಗ ಗುರುದತ್ ಶಿವಶಂಕರ್ ಪಡುಕೋಣೆ. ಎಲ್ಲರ ಪ್ರೀತಿಯ ಗುರುದತ್ ಅವರ ಬಗ್ಗೆ ನಾವಿಂದು ತಿಳಿಯೋಣ.

gurudat2

ದಕ್ಷಿಣ ಕನ್ನಡದ ಪಡುಕೋಣೆಯ ಮೂಲದ ಕೊಂಕಣಿ ಸಾರಸ್ವತ ಸಂಪ್ರದಾಯದ ಶ್ರಿ ಶಿವಶಂಕರ ರಾವ್ ಪಡುಕೋಣೆ ಹಾಗೂ ವಸಂತಿ ಪಡುಕೋಣೆ ದಂಪತಿಗಳ ಮಗನಾಗಿ ವಸಂತ ಕುಮಾರ್ ಅವರು ಜುಲೈ 9, 1925 ರಂದು ಬೆಂಗಳೂರಿನಲ್ಲಿ ಜನಿಸಿದರು. ಆರಂಭದಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಆವರ ತಂದೆ ಸ್ವಲ್ಪ ಸಮಯದ ನಂತರ ಬ್ಯಾಂಕ್ ಉದ್ಯೋಗಿಯಾಗಿ, ದೂರದ ಪಶ್ವಿಮ ಬಂಗಾಳದ ಭವಾನಿಪುರ್ ಎಂಬಲ್ಲಿಗೆ ವರ್ಗಾಯಿಸಲ್ಪಟ್ಟ ಕಾರಣ, ವಸಂತ್ ಕುಮಾರರ ಶಿಕ್ಷಣವೆಲ್ಲಾ ಬೆಂಗಾಲಿಯಲ್ಲಿಯೇ ಆಗುತ್ತದೆ. ಅವರ ತಾಯಿ ವಸಂತಿಯವರೂ , ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿ ಅವರು ಕನ್ನಡದಲ್ಲಿ ಸಣ್ಣ ಕಥೆಗಳನ್ನು ಬರೆದಿದ್ದಾರೆ ಮತ್ತು ಹಲವಾರು ಬಂಗಾಳಿ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ವಸಂತಕುಮಾರ್ ತಮ್ಮ ಬಾಲ್ಯದಲ್ಲಾದ ಕೆಲವು ಅಹಿತಕರ ಘಟನೆಗಳಿಂದ ಮಾನಸಿಕವಾಗಿ ಜರ್ಜರಿತಗೊಂಡಿದ್ದಾಗ ಹಿರಿಯರ ಸಲಹೆಯ ಮೇರೆಗೆ ಶುಭ ಶಕುನವೆಂದು ಭಾವಿಸಿ, ಬಹುತೇಕ ಸಾರಸ್ವತರ ಆರಾಧ್ಯ ದೈವ ದತ್ತಾತ್ರೇಯರ ಕೃಪೆ ಇರಲಿ ಎಂದು ಅವರಿಗೆ ಗುರುದತ್ ಎಂದು ಮರುನಾಮಕರಣ ಮಾಡಲಾಗುತ್ತದೆ.

ಓದಿನಲ್ಲಿ ಚುರುಕಾಗಿದ್ದ ಗುರುದತ್, ಬಾಲ್ಯದಲ್ಲಿ ಚಲನಚಿತ್ರಗಳ ಪೋಸ್ಟರ್ಗಳನ್ನು ಚಿತ್ರಿಸುತ್ತಿದ್ದ ತಮ್ಮ ಮಾವ ( ತಾಯಿಯ ದೂರದ ಸಂಬಂಧಿ) ಮತ್ತು ಖ್ಯಾತ ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್ ಅವರ ದೊಡ್ಡಪ್ಪನವರಾಗಿದ್ದ ಬಾಲಕೃಷ್ಣ.ಬಿ.ಬೆನೆಗಲ್ ರವರೊಂದಿಗೆ ಕಾಲಕಳೆಯುತ್ತಾ ಚಿತ್ರಕಲೆಯಲ್ಲಿ ಪ್ರಾವಿಣ್ಯತೆ ಪಡೆಯುತ್ತಾರೆ ತಮ್ಮ 14ನೇ ವಯಸ್ಸಿನಲ್ಲಿಯೇ ಗುರುದತ್ ಅವರು ತಮ್ಮ ಅಜ್ಜಿಯು ಸಾಯಂಕಾಲ ಉರಿಸುತ್ತಿದ್ದ ದೀಪದ ಮುಂದೆ ಕೈಯ್ಯೊಡ್ಡಿ ಕಪ್ಪಾದ ಬೆರಳಿನಿಂದ ಗೋಡೆಗಳ ಮೇಲೆ ಸುಂದರವಾದ ಚಿತ್ರಗಳನ್ನು ಬಿಡಿಸುತ್ತಿದ್ದರಂತೆ. ಚಿತ್ರ ಬಿಡಿಸುವುದರ ಜೊತೆಯಲ್ಲಿಯೇ ನೃತ್ಯ ಮಾಡುವುದೂ ಅವರಿಗೆ ಕರಗವಾಗಿ ತಮ್ಮಷ್ಟಕ್ಕೆ ತಾವೇ ನೃತ್ಯ ಮಾಡುತ್ತಿದ್ದರಂತೆ.

ತಮ್ಮ ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಕಾಲೇಜು ವಿದ್ಯಾಭ್ಯಾಸ ಮುಂದು ವರಿಸಲಾಗದ ಕಾರಣ ಅಲ್ಮೋರಾದಲ್ಲಿದ್ದ ಉದಯ ಶಂಕರ್ ಇಂಡಿಯಾ ಕಲ್ಚರ್ ಸೆಂಟರ್ ಎಂಬ ನೃತ್ಯ , ನಾಟಕ ಮತ್ತು ಸಂಗೀತವನ್ನು ಕಲಿಸುವ ಕೇಂದ್ರಕ್ಕೆ ಸೇರಿಕೊಳ್ಳುತ್ತಾರೆ. ಅಲ್ಲಿ ಗುರುಕುಲ ಪದ್ಧತಿ ಹಾಗೂ ಆಧುನಿಕ ಶೈಲಿ ಇವೆರಡರನ್ನೂ ಹೇಳಿಕೊಡುತ್ತಿದ್ದರು. ಈ ಎಲ್ಲಾ ಕಲೆಗಳಲ್ಲೂ ಬಹಳ ಚುರುಕಾಗಿದ್ದ ಗುರುದತ್ ಸುಮಾರು ಐದು ವರ್ಷಗಳ ಅಂದಿನ ಕಾಲಕ್ಕೇ 25ರೂಗಳ ವಿದ್ಯಾರ್ಥಿ ವೇತನದೊಂದಿಗೆ ತಮ್ಮ ಕಲಾಭ್ಯಾಸವನ್ನು ಮಾಡುತ್ತಾರೆ. ಎರಡನೇ ಮಹಾಯದ್ಧದ ಪರಿಣಾಮವಾಗಿ ಈ ಕಲಾ ಕೇಂದ್ರವನ್ನು ಬಲವಂತವಾಗಿ ಮುಚ್ಚಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ