ಶರತ್ ಚಂದ್ರ
ವಿನಯ್ ರಾಜಕುಮಾರ್ ನಾಯಕ ನಟನಾಗಿ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸುತ್ತಿರುವ ಅಂದೊಂದಿತ್ತು ಕಾಲ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ.
ಈ ಚಿತ್ರದ ಅರೆ ಅರೆ ಯಾರೋ ಇವಳು' ಎಂಬ ಹೊಸ ಹಾಡನ್ನುಇದೇ ತಿಂಗಳ 27 ನೇ ತಾರೀಕಿನಂದು ಚಿತ್ರತಂಡ ಬಿಡುಗಡೆ ಮಾಡಲಿದೆ.
ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿರುವ ಪೋಸ್ಟರ್ ನಲ್ಲಿ ವಿನಯರಾಜಕುಮಾರ್ ಕ್ಲೀನ್ ಶೇವ್ ನಲ್ಲಿ ಕಾಣಿಸಿಕೊಂಡು ಹಾಡಿನ ಬಗ್ಗೆ ಕುತೂಹಲ ಮೂಡಿಸಿದ್ದಾರೆ. ಬಹುಶಃ ಇದು ಫ್ಲಾಶ್ ಬ್ಯಾಕ್ ನಲ್ಲಿ ಬರುವ ಹಾಡಾಗಿರಬಹುದು ಎಂದು ಎಲ್ಲರೂ ಊಹಿಸುತ್ತಿದ್ದಾರೆ.
ಕಿರುತೆರೆಯ ಸೂಪರ್ ಸ್ಟಾರ್ ನಟಿ ಗಟ್ಟಿಮೇಳ ಮತ್ತು ಅಣ್ಣಯ್ಯ ಖ್ಯಾತಿಯ ನಿಶಾ ರವಿ ಕೃಷ್ಣನ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಈಗಾಗಲೇ ಬಿಡುಗಡೆಯಾದ ಸಿದ್ ಶ್ರೀ ರಾಮ್ ಹಾಡಿರುವ 'ಮುಂಗಾರು ಮಳೆಯಲ್ಲಿ' ಹಾಡು ಈ ವರ್ಷದ ಅತಿ ದೊಡ್ಡ ಚಾರ್ಟ್ ಬಸ್ಟರ್ ಆಗಿದ್ದು 35 ಮಿಲಿಯನ್ ಗಿಂತಲೂ ಅಧಿಕ ವೀಕ್ಷಣೆ ಪಡೆದಿದ್ದು, ಈಗಲೂ ಈ ಹಾಡಿನ ಮೇಲೆ ಸಾಕಷ್ಟು ಜನ ರೀಲ್ಸ್ ಮಾಡುತ್ತಿದ್ದಾರೆ.
ಪ್ರತಿಯೊಂದು ಚಿತ್ರದಲ್ಲಿ ವಿಭಿನ್ನ ಸ್ವಿಫ್ಟ್ ಆಯ್ಕೆ ಮಾಡಿಕೊಂಡು ಬಂದಿರುವ ವಿನಯ ರಾಜಕುಮಾರ್ ಅವರ ಈ ಚಿತ್ರದ ಮೇಲೆ ಕೂಡ ಪ್ರೇಕ್ಷಕರಿಗೆ ಸಾಕಷ್ಟು ಭರವಸೆ ಇದೆ.
ಯುವ ನಿರ್ದೇಶಕ ಕೀರ್ತಿ ಕುಚೇಲ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಭುವನ್ ಸುರೇಶ್ ಬಂಡವಾಳ ಹೂಡಿದ್ದಾರೆ. ಅಭಿಷೇಕ್ ಕಾಸರಗೋಡು ಕ್ಯಾಮೆರಾ ವರ್ಕ್ ಮಾಡಿದ್ದು, ರಾಘವೇಂದ್ರ ವಿ. ಚಿತ್ರಕ್ಕೆ ಸಂಗೀತ ನೀಡಿದ್ದಾರೆ
ಪೋಸ್ಟ್ ಪ್ರೊಡಕ್ಷನ್ ಕೆಲಸ ಆದಷ್ಟು ಬೇಗ ಮುಗಿಸಿ ಚಿತ್ರವನ್ನು ತೆರೆ ಕಾಣಿಸುವ ಉದ್ದೇಶ ನಿರ್ಮಾಪಕರಿಗಿದೆ.