ಕನ್ನಡ ಮತ್ತು ತಮಿಳು ಭಾಷಾ ವಿವಾದ ಎಲ್ಲೆಡೆ ಜೋರಾಗಿದೆ. ಆದರೆ, ಕನ್ನಡದ ಸ್ಟಾರ್‌ ನಟರು ಎನಿಸಿಕೊಂಡ ಯಾವ ನಟರೂ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ.

ಕಮಲ ಹಾಸನ್​ ನೀಡಿದ ಹೇಳಿಕೆ ವಿರೋಧಿಸಿ, ಕನ್ನಡದ ಸಾಹಿತಿಗಳು ಹಾಗೂ ರಾಜಕಾರಣಿಗಳು ಮಾತನಾಡಿದ್ದಾರೆ. ಆದರೆ ಇದುವರೆಗೆ ಯಾವೊಬ್ಬ ಸ್ಟಾರ್‌ ನಟರೂ ಈ ವಿಚಾರವಾಗಿ ಮಾತನಾಡಿಲ್ಲ. ಇದೀಗ ನಟಿ, ರಾಜಕಾರಣಿ ರಮ್ಯಾ ಮಾತನಾಡಿದ್ದಾರೆ.

ಕಳೆದ ಒಂದು ವಾರದಿಂದಲೂ ಸೋಷಿಯಲ್‌ ಮೀಡಿಯಾದಲ್ಲಿ ನಟ ಕಮಲ್‌ ಹಾಸನ್‌ ಅವರು ನೀಡಿರುವ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ, ಈ ಸಂದರ್ಭದಲ್ಲಿ ಆಡಳಿತ - ವಿರೋಧ ಪಕ್ಷ ಅಂತ ಪಕ್ಷಾತೀತವಾಗಿ ಕರ್ನಾಟಕದಲ್ಲಿ ಕಮಲ್‌ ಅವರ ಹೇಳಿಕೆಯನ್ನು ರಾಜಕಾರಣಿಗಳು ಖಂಡಿಸಿದ್ದಾರೆ.

ಸಾಹಿತ್ಯ ಹಾಗೂ ಸಿನಿಮಾ ನಿರ್ದೇಶಕರು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಇದರ ಹೊರತಾಗಿ ಸಿನಿಮಾ ರಂಗದ ಯಾವೊಬ್ಬ ನಟರೂ ಮಾತನಾಡಲಿಲ್ಲ. ಆದರೆ, ರಮ್ಯಾ ಅವರು ಈ ವಿಚಾರವಾಗಿ ಧ್ವನಿ ಎತ್ತಿದ್ದಾರೆ.

ಕಮಲ್‌ ಹೇಳಿಕೆಯನ್ನು ಖಂಡಿಸುವ ಮೂಲಕವೇ ನಮ್ಮಲ್ಲೇ ಶ್ರೇಷ್ಠತೆಯ ವ್ಯಸನ ಮೂಡಬಾರದು ಎಂದು ಹೇಳಿದ್ದಾರೆ.

ನಟಿ ರಮ್ಯಾ ಅವರು ಕನ್ನಡ ಪರವಾಗಿ ಹಾಗೂ ಕನ್ನಡ ವಿಚಾರವಾಗಿ ಮಾತನಾಡಿರುವುದನ್ನು ಕನ್ನಡಿಗರು ಸ್ವಾಗತಿಸಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಕಮಲ್‌ ಹಾಸನ್‌ ಅವರ ಸಿನಿಮಾವನ್ನು ತಡೆಯಬಾರದು ಎಂಬರ್ಥದಲ್ಲಿ ಮಾತನಾಡಿರುವ ಒಂದು ವಿಷಯವು ಕನ್ನಡಿಗರು ಒಪ್ಪಿಕೊಂಡಿಲ್ಲ. ಈ ರೀತಿ ಮಾತನಾಡಿದರೂ ಅವರು ಕ್ಷಮೆ ಕೇಳಿಲ್ಲ. ಹೀಗಾಗಿ ಅವರ ಸಿನಿಮಾವನ್ನು ತಡೆಯುವುದರಲ್ಲಿ ತಪ್ಪೇನು ಇಲ್ಲ ಅಂತಲೂ ಹೇಳಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ