ಕೃತಿ ಹೊರಟಳು ದ. ಭಾರತಕ್ಕೆ
ಈ ಶೀರ್ಷಿಕೆ ಓದಿ ಕೃತಿಗೆ ದಕ್ಷಿಣದ ಯಾವುದೋ ಚಿತ್ರ ಸಿಕ್ಕಿತು ಅಂದುಕೊಳ್ಳಬೇಡಿ. ಅಸಲಿಗೆ ಕೃತಿ ಇತ್ತೀಚೆಗೆ ದಕ್ಷಿಣದ ಬಾಹುಬಲಿ ಅಂದ್ರೆ ಪ್ರಭಾಸ್ ಜೊತೆ ಗುಟ್ಟು ಗುಟ್ಟಾಗಿ ಕೈ ಕೈ ಹಿಡಿದು ದಕ್ಷಿಣದೆಲ್ಲೆಡೆ ಸುತ್ತಾಡುತ್ತಿದ್ದಾಳಂತೆ! ಈತನ `ಆದಿಪುರುಷುಡು' ಚಿತ್ರದ ಸೆಟ್ ನಿಂದ ಹಿಡಿದು, ಲಂಚ್ ಡಿನ್ನರ್ ಡೇಟ್ಸ್ ಹೆಸರಲ್ಲಿ ಇಬ್ಬರೂ ಒಟ್ಟೊಟ್ಟಿಗೆ ಸುತ್ತಾಡುತ್ತಿದ್ದಾರೆ. ಈ ಕುರಿತಾಗಿ ವರದಿಗಾರರು ಕೇಳಿದರೆ ಇಬ್ಬರೂ ತುಟಿ ಪಿಟಕ್ಕೆನ್ನದೆ ಸುಮ್ಮನಿದ್ದಾರೆ. ಆದರೆ ವದಂತಿ ನಂಬುವುದಾದರೆ, ಇವರಿಬ್ಬರೂ ಮದುವೆ ಆಗಲಿದ್ದಾರಂತೆ! ಮತ್ತೊಂದು ಸುದ್ದಿ ಎಂದರೆ ಇವರ ಎಂಗೇಜ್ ಮೆಂಟ್ ಗಾಗಿ ಮಾಲ್ಡೀವ್ಸ್ ಹೋಟೆಲ್ ಸಹ ಬುಕ್ ಆಗಿದೆಯಂತೆ! ಈ ಸುದ್ದಿ ನಿಜ ಆಗುವುದಾದರೆ ಇನ್ನು ಕೃತಿಯನ್ನು ಹಿಡಿಯಲಾದೀತೇ?
ಖಾಸಗಿ ಜೀವನದಲ್ಲಿ ಅಸ್ತವ್ಯಸ್ತ ಜಾಹ್ನವಿ
ಹೀಗಂತ ವರದಿಗಾರರು ಎಲ್ಲೂ ಹೇಳುತ್ತಿಲ್ಲ, ಬದಲಿಗೆ ದಿ. ಶ್ರೀದೇವಿಯ ಮಗಳಾದ ಜಾಹ್ನವಿಯ ತಂದೆ ಬೋನಿ ಕಪೂರ್ ತಾವೇ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೆ ಅವರು ಒಂದು ಕಡೆ ಮಾತನಾಡುತ್ತಿದ್ದಾಗ, ತಾವು ಮಗಳ ಬೆಡ್ ರೂಮಿಗೆ ಹೋದಾಗೆಲ್ಲ ಅವಳ ಪರ್ಸನಲ್ ಥಿಂಗ್ಸ್, ಬಟ್ಟೆಬರೆ ಎಲ್ಲವೂ ಅಲ್ಲಿ ಇಲ್ಲಿ ಹರಡಿ ಬಿದ್ದಿರುತ್ತವಂತೆ. ಬೋನೀಜಿ, ಇದಕ್ಕೇಕೆ ಚಿಂತೆ? ಜಾಹ್ನವಿ ಈಗಾಗಲೇ ಸ್ಟಾರ್ ಆಗಿದ್ದಾಳೆ, ಸದಾ ಸಿನಿಮಾ ಶೂಟಿಂಗ್ ಎಂದು ಬಿಝಿ ಆಗಿರುತ್ತಾಳೆ. ಹಾಗಿರುವಾಗ ಖಾಸಗಿ ಜೀವನದಲ್ಲಿ ಅವಳು ತುಸು ಅಸ್ತವ್ಯಸ್ತಳಾದರೆ ಇದರಲ್ಲಿ ಆಶ್ಚರ್ಯವೇನು ಬಂತು? ಪ್ರಾಜೆಕ್ಟ್ಸ್ ಜೊತೆ ಅವಳು ತನ್ನ ಫಿಗರ್ ಮೇಂಟೆನೆನ್ಸ್ ಕೂಡ ಚೆನ್ನಾಗಿ ಮಾಡುತ್ತಿರುವಾಗ ಇದಕ್ಕೆಲ್ಲ ಟೆನ್ಶನ್ ತೆಗೆದುಕೊಳ್ಳಬೇಕೇಕೆ?
ಎಲ್ಲಿದ್ದೀಯಮ್ಮ ಊರ್ವಶಿ?
ಕೆಲವು ದಿನಗಳ ಹಿಂದೆ ಕ್ರಿಕೆಟರ್ ಋಷ್ ಪಂತ್ ಕುರಿತಾದ ಒಂದು ಪೋಸ್ಟ್ ನಿಂದಾಗಿ ಊರ್ವಶಿ, ಒಂದಷ್ಟು ದಿನ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸ್ಟಂಟ್ ನಡೆಸಿದಳು. ನಂತರ ಋಷ್ ಗೆ ಆ್ಯಕ್ಸಿಡೆಂಟ್ ಆಯಿತು, ಅದಾದ ಮೇಲೆ ಊರ್ವಶಿ ಮತ್ತೆ FBನಿಂದ ಮಾಯವಾದಳು. ನಂತರ ಅವಳು ವಾಪಸ್ಸು ಮರಳಿದಾಗ, ಹಳದಿ ಸೀರೆಯಲ್ಲಿ ತನ್ನ ಬೆಡಗು ಬಿನ್ನಾಣ ಪ್ರದರ್ಶಿಸುತ್ತಾ ನುಲಿಯುತ್ತಿದ್ದಳು. ಈಗ ಅವಳ ಅಳಿದುಳಿದ ಫ್ಯಾನ್ಸ್ ಅವಳಿಂದ ತಿಳಿಯ ಬಯಸುವುದು ಎಂದರೆ, ಅವಳು ಹೀಗೆಯೇ ಸದಾ ಕಣ್ಣಾಮುಚ್ಚಾಲೆ ಆಡುತ್ತಿರುತ್ತಾಳೋ ಅಥವಾ ಬೆಳ್ಳಿ ತೆರೆಯಲ್ಲಿ ಮತ್ತೆ ತನ್ನ ಮುಖ ತೋರಿಸುತ್ತಾಳೋ ಇಲ್ಲವೋ ಎಂದು ವ್ಯಂಗ್ಯವಾಡುತ್ತಿದ್ದಾರೆ. ಪಾಪ, ಫ್ಯಾನ್ಸ್ ಮನಸ್ಸಿಗೆ ಬೇಸರ ಆಗಬಾರದು, ಆದರೂ ಒಂದು ವಿಷಯ ಹೇಳಲೇಬೇಕು. ಈ ಊರ್ವಶಿ ಮೇಡಂ ಬಳಿ ಯಾವುದೇ ಸಿನಿಮಾಗಳಿಲ್ಲ..... ನೊಣ ಹೊಡೆಯುವ ಬದಲು ಹೀಗೆ FB ಗಿಮಿಕ್ಸ್ ನಡೆಸುತ್ತಿದ್ದಾಳೆ, ಅವಳಿಗಾಗಿ ಕಾಯುತ್ತಾ ಕೂರಬೇಡಿ ಅಂತ!
ಸಿದ್ದು ವೆಡ್ಸ್ ಕಿಯಾರಾ
`ನಾವು ಬರೀ ಫ್ರೆಂಡ್ಸ್ ಅಷ್ಟೇ ಕಣ್ರೀ' ಎಂದು ಆರಂಭವಾದ ಸಿದ್ದಾರ್ಥ್ ಕಿಯಾರಾರ ಪ್ರೇಮ ಪಯಣ ಇಂದು `ನಾವಿಬ್ಬರೂ ಪತಿ ಪತ್ನಿ' ಎಂಬಲ್ಲಿಗೆ ಬಂದು ನಿಂತಿದೆ. ಈ ಪ್ರೇಮಿಗಳು ಮೊದಲಿನಿಂದಲೂ ತಮ್ಮ ಸಂಬಂಧವನ್ನು ಬಲು ಗುಟ್ಟು ಗುಟ್ಟಾಗಿಯೇ ಉಳಿಸಿಕೊಂಡಿದ್ದರು. ಕೆಮ್ಮು, ಪ್ರೇಮ ಕಾಮಗಳನ್ನು ಬಹಳ ದಿನ ಮುಚ್ಚಿಡಲಾಗದು ಅಂತಾರೆ. ಇವರ ಕಥೆಯೂ ಹೀಗೆ ಆಗಿ ಪರಿಣಯದಲ್ಲಿ ಸುಖಾಂತ್ಯ ಕಂಡಿತು. ರಾಜಾಸ್ಥಾನದಲ್ಲಿ ನಡೆದ ಇವರ ಅದ್ಧೂರಿ ಮದುವೆಗೆ ಬಾಲಿವುಡ್ ಮಂದಿ ಸಾಕ್ಷಿಯಾದರು. ಯಾವ ವರದಿಗಾರರು ಇವರ ಪ್ರೇಮಾಲಾಪನೆಯ ಸುದ್ದಿ ಹಂಚುತ್ತಿದ್ದರೋ, ಅವರಿಂದ ಮದುವೆ ಸುದ್ದಿ ಹಬ್ಬದಂತೆ ಭಲೇ ಎಚ್ಚರ ವಹಿಸಿದ್ದರು. ಮದುವೆಗೆ ಕೆಲವೇ ಮಂದಿ ಆಪ್ತೇಷ್ಟರು ಮಾತ್ರ ಬರುವಂತಾಗಿತ್ತು, ತಮ್ಮ ಅಭಿಮಾನಿಗಳಿಗಾಗಿ ಆನ್ ಲೈನ್ ನಲ್ಲಿ ಇವರು ತಮ್ಮ ಮದುವೆ ಕಾರ್ಯಕ್ರಮವನ್ನು ಲೈವ್ ಹಂಚಿಕೊಳ್ಳಬಾರದಿತ್ತೇ...?