ಶರತ್ ಚಂದ್ರ
ಅರ್ಜುನ್ ಸರ್ಜಾ ಉಪೇಂದ್ರ ಅಣ್ಣನ ಮಗ ನಿರಂಜನ್ ಮತ್ತು ಮಗಳು ಐಶ್ವರ್ಯ ನಾಯಕ ಮತ್ತು ನಾಯಕಿ ಯಾಗಿ ಅಭಿನಯಿಸುತ್ತಿರುವ 'ಸೀತಾ ಪಯಣ' ಎಂಬ ಬಹು ಭಾಷಾ ಚಿತ್ರವನ್ನು ನಿರ್ದೇಶಿಸುತ್ತಿರುವುದು ನಿಮಗೆಲ್ಲಾ ಗೊತ್ತಿದೆ.
ಈ ಚಿತ್ರದ ತೆಲುಗು ಟೀಸರ್ ಲಾಂಚ್ ಗೆ ಅತಿಥಿ ಯಾಗಿ ಉಪ್ಪಿ ಯನ್ನು ಅರ್ಜುನ್ ಸರ್ಜಾ ಆಹ್ವಾನಿಸಿದ್ದರು.
ಅಣ್ಣನ ಮಗ ನಿರಂಜನ್ ಲಾಂಚ್ ಆದಾಗಿನಿಂದ ಮಗನ ಎಲ್ಲಾ ಚಿತ್ರಗಳ ಉಪ್ಪಿ ಬೆನ್ನಿಗೆ ನಿಂತಿದು ಈ ಚಿತ್ರಕ್ಕೆ ಕೂಡ ಸಾಥ್ ನೀಡುತ್ತಿದ್ದಾರೆ.
ಟಾಲಿವುಡ್ ನಲ್ಲಿ ನಿರ್ದೇಶಕನಾಗಿ ನಟನಾಗಿ, ಉಪ್ಪಿಗೆ ವಿಶೇಷ ಸ್ಥಾನಮಾನವಿದೆ. ಬಹುಷಃ ಅನೇಕ ನಿರ್ದೇಶರ ಹೆಚ್ಚಿನ ಇಂಟರ್ವ್ಯೂ ಗಳನ್ನು ಗಮನಿಸಿದರೆ ಉಪೇಂದ್ರ ತಮ್ಮ ನೆಚ್ಚಿನ ನಿರ್ದೇಶಕರಲ್ಲೊಬ್ಬರು ಅಂತ ಹೇಳಿದ್ದನ್ನು ನಾವು ಕೇಳಿದ್ದೇವೆ.
ಸೀತಾ ಪಯಣ ಚಿತ್ರದ ಟೀಸರ್ ಲಾಂಚ್ ನಲ್ಲಿ ಆಗಮಿಸಿದ ಇನ್ನೊಬ್ಬ ಅತಿಥಿ ಪುಷ್ಪ ಖ್ಯಾತಿಯ ಸುಕುಮಾರ್ ಕೂಡ ಉಪ್ಪಿಯ ಕ್ರಿಯೇಟಿವಿಟಿ, ನಿರ್ದೇಶನದ ಶೈಲಿಯ ಬಗ್ಗೆ ಮುಕ್ತವಾಗಿ ಹೊಗಳಿದ್ದಾರೆ. ತಾನು ಉಪ್ಪಿಯ ಚಿತ್ರಗಳ ಬಹು ದೊಡ್ಡ ಅಭಿಮಾನಿ ಎಂದು ತಿಳಿಸಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಉಪ್ಪಿ ಮಾತನಾಡಲು ಅರಂಭಿಸಿದಾಗ ಮೀಡಿಯಾ ದವರ ಪ್ರತಿಕ್ರಿಯೆ ಉಪ್ಪಿ ಯ ಜನಪ್ರಿಯತೆ ಬಗ್ಗೆ ಸಾಕ್ಷಿಯಾಗಿತ್ತು. ಮಾತಿನುದ್ದಕ್ಕೂ ಚಪ್ಪಾಳೆ, ಶಿಳ್ಳೆ ಕಂಡು ಬಂತು.ಉಪ್ಪಿ ಸಂಪೂರ್ಣ ತೆಲುಗಿನಲ್ಲಿ ಮಾತನಾಡುವುದರಿಂದ ಅಲ್ಲಿನ ಜನಕ್ಕೆ ಆಪ್ತ ರಾಗುತ್ತಾರೆ. ಉಪ್ಪಿ ಅಂದ ಮೇಲೆ ಡೈಲಾಗ್ ಇರಬೇಕಲ್ಲ, ಅಲ್ಲಿ ನೆರೆದವರ ಒತ್ತಾಯ ದ ಮೇರೆಗೆ ಉಪ್ಪಿ UI ಚಿತ್ರದ ಡೈಲಾಗ್ ಹೇಳಿ ರಂಜಿಸಿದರು.
ಈಗಾಗಲೇ ಅನೇಕ ತೆಲುಗು ಚಿತ್ರಗಳಲ್ಲಿ ನಟಿಸಿರುವ ಉಪೇಂದ್ರ ಮುಂಬರುವ ಮಹೇಶ್ ಬಾಬು ಚಿತ್ರದಲ್ಲಿ' ಆಂದ್ರ ಕಿಂಗ್ ತಾಲೂಕ' ಚಿತ್ರದಲ್ಲಿ ಸೂಪರ್ ಸ್ಟಾರ್ ಸೂರ್ಯ ಕುಮಾರ್ ಎಂಬ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ.