- ರಾಘವೇಂದ್ರ ಅಡಿಗ ಎಚ್ಚೆನ್.

ಜೀವನದಲ್ಲಿ ಆಸೆ , ಆಕಾಂಕ್ಷೆ , ಶ್ರದ್ಧೆ , ಗುರಿ , ಅದೃಷ್ಟವಿದ್ದರೆ ಖಂಡಿತ ಉನ್ನತ ಮಟ್ಟಕ್ಕೆ ಸಾಗಬಹುದು ಎಂಬುದಕ್ಕೆ ನಿದರ್ಶನವಾಗಿರುವ ವ್ಯಕ್ತಿ
ಭಾರತೀಯ ವೈದ್ಯರು, ನಟರು, ಲೇಖಕರು, ಮ್ಯಾರಥಾನ್ ರನ್ನರ್, ಸಾಂಸ್ಕೃತಿಕ ರಾಯಭಾರಿಯಾಗಿದ ಡಾ. ಲೀಲಾ ಮೋಹನ್ ಪಿ.ವಿ.ಆರ್. ಮೂಲತಃ ಬೆಂಗಳೂರಿನವರಾಗಿದ್ದು , ಎಂ.ಬಿ.ಬಿ.ಎಸ್ ಮತ್ತು ಎಂ.ಡಿ ಪದವಿಗಳನ್ನು ಪೂರ್ಣಗೊಳಿಸಿದ ನಂತರ  ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಯನ್ನು ಆರಂಭಿಸಿ ಸುಮಾರು 18 ವರ್ಷಗಳಿಗಿಂತ ಹೆಚ್ಚು ಅನುಭವದೊಂದಿಗೆ ಫ್ಯಾಮಿಲಿ ಮೆಡಿಸಿನ್, ಪೀಡಿಯಾಟ್ರಿಕ್ಸ್ , ಪಬ್ಲಿಕ್ ಹೆಲ್ತ್, ಲೈಫ್‌ಸ್ಟೈಲ್ ಮೆಡಿಸಿನ್ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದು , ಅದರಲ್ಲೂ ಪೇನ್ ಕಿಲ್ಲರ್‌ಗಳ ಬದಲು ನ್ಯೂಟ್ರಾಸ್ಯೂಟಿಕಲ್ಸ್ ಮೂಲಕ ನೋವು ನಿರ್ವಹಣೆಗೆ ಆದ್ಯತೆ ನೀಡುವ ವೈದ್ಯರಾಗಿ ಹೆಚ್ಚು ಪರಿಚಿತರು. ಇನ್ನು ಸರ್ಜಾಪುರ ಬಳಿ ಇರುವ  ರೇನ್‌ಬೋ ಆಸ್ಪತ್ರೆ , ಮದರ್‌ಹುಡ್ ಆಸ್ಪತ್ರೆ ಹಾಗೂ ಮಣಿಪಾಲ್ ಆಸ್ಪತ್ರೆಯಲ್ಲಿ ಪರಾಮರ್ಶಕ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಹೆಚ್‌ ಎಸ್‌ ಆರ್ ಲೇಔಟ್‌ನಲ್ಲಿ ಪಡಿತೇಮ್ ಹೆಲ್ತ್ ಕೇರ್ ಎಂಬ ಡೇ ಕೇರ್ ವೈದ್ಯಕೀಯ ಕೇಂದ್ರದ ಸಂಸ್ಥಾಪಕರೂ ಹೌದು. ಕೊವಿಡ್ ಮಹಾಮಾರಿಯ ಸಂದರ್ಭದಲ್ಲಿ ನೀಡಿದ ಸೇವೆಗೆ Covid Warrior Award ಸೇರಿದಂತೆ ಹಲವು ಗೌರವಗಳನ್ನು ಪಡೆದಿದ್ದಾರೆ.

IMG-20251116-WA0004

ವೈದ್ಯಕೀಯ ಕ್ಷೇತ್ರದ ಜೊತೆಗೆ ಕನ್ನಡ ಚಿತ್ರರಂಗದಲ್ಲೂ ನಟ, ಸಾಹಿತ್ಯಗಾರ, ಕವನ-ಸಾಹಿತಿ ಹಾಗೂ ಸೃಜನಾತ್ಮಕ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.
ಬಾಲ್ಯದಿಂದಲೇ ಅಭಿನಯ, ಬರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ  ಡಾ. ಲೀಲಾ ಮೋಹನ್ ಪಿ.ವಿ.ಆರ್. ಅವರು 2016ರಲ್ಲಿ ಗಿರಿರಾಜ. ಬಿ.ಎಂ. , ಪರಮೇಶ್, ಕಲಾಮಧ್ಯಮ ಶಿಕ್ಷಕರಿಂದ ಅಭಿನಯ ಮತ್ತು ರಂಗ ಭೂಮಿ ತರಬೇತಿ ಪಡೆದ ನಂತರ ಕಿರು ಚಿತ್ರಗಳಾದ  Don’t Be fuelish, ಆಕ್ಸಿಡೆಂಟ್, ಓ ಎಸ್ ಟಿ, ಹೈವೇ , ಟ್ರಕ್ ಚಿತ್ರಗಳಲ್ಲಿ ಅನುಭವ ಪಡೆದು , 2018ರಿಂದ ಆಲ್ಬಮ್‌ ಹಾಡುಗಳಲ್ಲೂ ಕಾಣಿಸಿಕೊಂಡಿದ್ದಾರೆ.

IMG-20251116-WA0008 (1)

ತದನಂತರ ಪೂರ್ಣ ಪ್ರಮಾಣದಲ್ಲಿ ಕನ್ಯಾ, ಗಡಿಯಾರ ಚಿತ್ರಗಳಲ್ಲಿ ಅಭಿನಯಿಸಿದ ನಂತರ ಈಗ "ನಾಯಿ ಇದೆ ಎಚ್ಚರಿಕೆ" ಚಿತ್ರ ಕೂಡ ಬಿಡುಗಡೆಗೆ ಸಿದ್ಧವಿದೆ. ಈ ಚಿತ್ರ ನಿರ್ಮಿಸುವುದರ ಜೊತೆಗೆ ನಾಯಕನಾಗಿ ಕೂಡ ಅಭಿನಯಿಸಿದ್ದಾರೆ ಡಾ. ಲೀಲಾ ಮೋಹನ್. ಇದಲ್ಲದೆ  ಸಾಲುಸಲಾಗಿ ಕೌರವ ವೆಂಕಟೇಶ್ ನಿರ್ದೇಶನದ PYNA  ನೂತನ ಚಿತ್ರದ ಜೊತೆಗೆ  ಉಗ್ರಾವತಾರ ಚಿತ್ರದಲ್ಲಿ ಸೈಕೋ ಪಾತ್ರ , ರೇ1 ನಲ್ಲಿ ಖಳನಾಯಕನಾಗಿ , ಪುಟಾಣಿ ಪಂಟ್ರೂ ಹಾಗೂ ತೆಲುಗುನಲ್ಲಿ ಕಲ್ಯಾಣ ಮಸ್ತು , ಕಾಲಾನಿಕಿ ಭೈರವಡು  ಚಿತ್ರಗಳಲ್ಲಿ ಅಭಿನಯಿಸಿದ್ದು , ಸದ್ಯ ಕನ್ನಡದಲ್ಲಿ ರಾಕ್ಷಸ , ಬಾರ್ಬಿ , ದಯಂಡ್ ಚಿತ್ರಗಳು  ಬಿಡುಗಡೆಗೆ ಹಂತದಲ್ಲಿದೆ.

IMG-20251116-WA0003

ಡಾ. ಲೀಲಾ ಮೋಹನ್ ಆರೋಗ್ಯ ಜಾಗೃತಿ ಬಗ್ಗೆ “One More Puff – A Guide on Smoking and Quitting” ಧೂಮಪಾನ ಮತ್ತು ನಿಕೋಟಿನ್ ವ್ಯಸನದಿಂದ ಹೊರಬರುವುದು ಹೇಗೆ ಎಂಬುದನ್ನು ಪುಸ್ತಕ ಮೂಲಕ ಅವರ ತಂದಿದ್ದು,  ಕ್ರೀಡೆ ಮತ್ತು ಮ್ಯಾರಥಾನ್ ಓಟದಲ್ಲಿ ದೀರ್ಘಕಾಲದ ಮ್ಯಾರಥಾನ್ ರನ್ನರ್ ಆಗಿರುವ ಅವರು ಕರ್ನಾಟಕ ಹಾಗೂ ಭಾರತದ ಅನೇಕ ಮ್ಯಾರಥಾನ್‌ಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದ್ದಾರೆ. ಹೃದಯ ಆರೋಗ್ಯ, ಫಿಟ್‌ನೆಸ್ ಮತ್ತು ಲೈಫ್‌ಸ್ಟೈಲ್ ಸುಧಾರಣೆಗೆ ಉತ್ತೇಜನ ನೀಡುವ ವ್ಯಕ್ತಿಯಾಗಿ ಪ್ರಸಿದ್ಧರು. ಇವರ ಹಲವು  ಸಾಧನೆಗಳನ್ನು ಗಮನಿಸಿ ವೈದ್ಯಕೀಯ, ಸಂಸ್ಕೃತಿ, ಸಿನೆಮಾ, ಶಿಕ್ಷಣ, ಸಾಮಾಜಿಕ ಸೇವೆಗಳಲ್ಲಿ ನೀಡಿದ ಕೊಡುಗೆಗಾಗಿ 40ಕ್ಕೂ ಹೆಚ್ಚು ಪ್ರಶಸ್ತಿಗಳು ಪಡೆದಿದ್ದಾರೆ. ಅದರಲ್ಲೂ ಪ್ರಮುಖವಾಗಿ ನಾಡಪ್ರಭು ಕೇಂಪೇಗೌಡ ಪ್ರಶಸ್ತಿ , ವಿಕೆ ಹೆಲ್ತ್ ಎಕ್ಸಲೆನ್ಸ್ ಅವಾರ್ಡ್, ಡಾ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ