- ರಾಘವೇಂದ್ರ ಅಡಿಗ ಎಚ್ಚೆನ್.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ಗೆ ರಿಲೀಫ್‌ ಸಿಕ್ಕಿದೆ. ಹೈಕೋರ್ಟ್‌ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ (ಬೆಂಗಳೂರು ಪೊಲೀಸರು) ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್‌ ವಿಚಾರಣೆ ನಡೆಸಿತು. ವಕೀಲರ ವಾದ – ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್‌ ಬೇಲ್​​ ಅರ್ಜಿ ವಿಚಾರಣೆಯನ್ನು ಮೇ14ಕ್ಕೆ ಮುಂದೂಡಿದೆ
ರೇಣುಕಾಸ್ವಾಮಿ ಹತ್ಯೆಯ ಕ್ರೂರತೆಯನ್ನು ಸರ್ಕಾರದ ಪರ ವಕೀಲ ಸಿದ್ದಾರ್ಥ್ ಲೂಥ್ರಾ ಇಂಚಿಂಚೂ ಸುಪ್ರೀಂಕೋರ್ಟ್​ ಮುಂದೆ ವಿವರಿಸಿದ್ರು. ರೇಣುಕಾಸ್ವಾಮಿ ಅವರ ದೇಹವನ್ನು ಪ್ರಾಣಿಗಳು ತಿಂದಿವೆ. ಮೂಳೆಗಳು ಮುರಿದಿವೆ. ರಕ್ತ ಸುರಿದಿದೆ. ಮರ್ಮಾಂಗಕ್ಕೆ ಗಾಯಗಳಾಗಿವೆ. ದೇಹದ ಪ್ರಮುಖ ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟಿದೆ. ವಿದ್ಯುತ್ ಶಾಕ್ ನೀಡಲಾಗಿದೆ ಎಂದು ಸರಕಾರದ ಪರ ವಕೀಲ ಸಿದ್ದಾರ್ಥ್ ಲೂಥ್ರಾ ಹತ್ಯೆಯ ಕ್ರೂರತೆ ವಿವರಿಸಿದ್ರು.
ದರ್ಶನ್ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ : – ಇನ್ನು ದರ್ಶನ್ ಪರ ವಕೀಲರಾದ ಅಭಿಷೇಕ್​ ಮನು ಸಿಂಘ್ವಿ ಪ್ರತಿವಾದ ಮಂಡಿಸಿದ್ರು. ನಟ ದರ್ಶನ್ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ. ಯಾವ ಜಾಗದಲ್ಲಿಯೂ ಎವಿಡೆನ್ಸ್ ಎಲ್ಲಿಯೂ ಇಲ್ಲ. ದರ್ಶನ್ ಹತ್ಯೆ ಮಾಡಿರುವುದಕ್ಕೆ ಸಾಕ್ಷ್ಯಗಳಿಲ್ಲ. ಪೋಟೊಗ್ರಾಫ್​ಗಳಿವೆ ಅಷ್ಟೇ ಎಂದಿದ್ದಾರೆ. ದರ್ಶನ್​ ಅವರು ಯಾವುದೇ ವಿಡಿಯೋದಲ್ಲಿ ಇಲ್ಲ. ಅವರ ಮೊಬೈಲ್​​ನಿಂದ ವಿಡಿಯೋ ಆಗಿಲ್ಲ. ಹತ್ಯೆಗೂ ಅವರಿಗೂ ಸಂಬಂಧವಿಲ್ಲ ಅಂತಾ ದರ್ಶನ್ ಪರ ವಾದ ಮಾಡಿದ್ದಾರೆ. ಮೂರು ಸೆಕೆಂಡ್ ವಿಡಿಯೋ ಇದೆ ಎನ್ನುತ್ತಿದ್ದಾರೆ. ಅದರಲ್ಲಿ ಏನು ಗೊತ್ತಾಗುತ್ತೆ, ಅದನ್ನು ಹೇಗೆ ಸಾಕ್ಷ್ಯ ಎಂದು ಪರಿಗಣಿಸಲಾಗುತ್ತೆ. ನಾನು ಕೂಡ ಆ ವಿಡಿಯೋ ನೋಡಿಲ್ಲ ಎಂದು ಸಿಂಘ್ವಿ ವಾದ ಮಾಡಿದ್ದಾರೆ.
ಐ-ವಿಟ್‌ನೆಸ್‌‌‌ಗಳ ಹೇಳಿಕೆಯನ್ನು ಪಡೆಯದೇ ನನ್ನ ಬಂಧಿಸಲಾಗಿದೆ. ಬಂಧಿಸಿದ ಬಳಿಕ ಐವಿಟ್ ನೆಸ್ ಗಳ ಹೇಳಿಕೆ ಪಡೆಯಲಾಗಿದೆ. ಹತ್ಯೆ ನಡೆದಿದೆ ಎನ್ನಲಾದ ಜಾಗದಲ್ಲಿ ನನ್ನ ಕೆಲಸಗಾರರು ಇರಲಿಲ್ಲ. ಆ ಜಾಗದ ಮಾಲೀಕ ನಾನು ಅಲ್ಲ. ಆ ಜಾಗಕ್ಕೂ ನನಗೂ ಏನೂ ಸಂಬಂಧ ಇಲ್ಲ ಪಾರ್ಕಿಂಕ್ ಪ್ಲೇಸ್ ನಲ್ಲಿ ಹತ್ಯೆಯಾಗಿದೆ ಎನ್ನುತ್ತಿದ್ದಾರೆ. ಅದು ನನ್ನ ಜಾಗ ಅಲ್ಲ, ಅದಕ್ಕೂ ನನಗೂ ಏನೂ ಸಂಬಂಧ ಅಲ್ಲ ಎಂದು ಸಿಂಘ್ವಿ ವಾದ ಮಾಡಿದ್ದಾರೆ. ಬಂಧಿಸಿದ ರೀತಿಯೇ ಸರಿಯಿಲ್ಲ. ನನ್ನ ಬಂಧನಕ್ಕೆ ಯಾವುದೇ ಕಾರಣಗಳಿಲ್ಲ ಎಂದು ದರ್ಶನ್ ಪರ ವಕೀಲ ಅಭಿಷೇಕ್​ ಮನು ಸಿಂಘ್ವಿ ಖಡಕ್​​ ವಾದ ಮಾಡಿದ್ದಾರೆ.
ಸದ್ಯ ನಟ ದರ್ಶನ್​ಗೆ ಕರ್ನಾಟಕ ಹೈಕೋರ್ಟ್​ ಜಾಮೀನು ನೀಡಿದ್ದು ಬೇಲ್​ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್‌ 21 ದಿನಗಳ ಕಾಲ ಮುಂದೂಡಿದೆ. ಹೈಕೋರ್ಟ್ ಕಳೆದ ವರ್ಷ ಡಿ.13 ರಂದು ದರ್ಶನ್, ಪವಿತ್ರಗೌಡ, ಲಕ್ಷ್ಮಣ್, ಪ್ರದೂಶ್, ನಾಗರಾಜು, ಅನುಕುಮಾರ್ ಹಾಗೂ ಜಗದೀಶ್ ಅವರಿಗೆ ಜಾಮೀನು ನೀಡಿತ್ತು. ಆ ಬಳಿಕ ಉಳಿದ ಹತ್ತು ಮಂದಿ ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಜಾಮೀನು ಮಂಜೂರಾಗಿತ್ತು. ಇದನ್ನು ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದರು. ಏಪ್ರಿಲ್‌ 2 ರಂದು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ ಏಪ್ರಿಲ್‌ 22 ಕ್ಕೆ ಮುಂದೂಡಿತ್ತು. ಸದ್ಯ ಇಂದು (ಮಂಗಳವಾರ) ವಿಚಾರಣೆ ನಡೆಸಿ ಹಲವು ಪ್ರಶ್ನೆಗಳನ್ನು ಕೇಳಿದ್ದು, ಇನ್ನಷ್ಟು ವಿಚಾರಣೆ ಅಗತ್ಯವಿದೆ ಎಂದು ಮೇ14ಕ್ಕೆ ಮುಂದೂಡಿತು. ನಟ ದರ್ಶನ್​ಗೆ ಸುಪ್ರೀಂಕೋರ್ಟ್‌ ವಿಚಾರಣೆ ಮಹತ್ವದಾಗಿದೆ. ಒಂದು ವೇಳೆ ಜಾಮೀನನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿದ್ದರೆ ಕೂಡಲೇ ನಟ ಜೈಲು ಸೇರಬೇಕಾಗುತ್ತದೆ. ಸದ್ಯ ಸುಪ್ರೀಂ ವಿಚಾರಣೆ ಮುಂದೂಡಿರುವುದರಿಂದ ಮೇ 14 ರವೆಗೂ ಅಂದರೆ 21 ದಿನ ದರ್ಶನ್​ಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ