ಸಿದ್ಧಾರ್ಥಂಗೆ ಕಿಯಾರಾ ಇಷ್ಟವಂತೆ!
`ಜಬರಿಯಾ ಜೋಡಿ' ಚಿತ್ರದಲ್ಲಿ ಪ್ರೇಮಿಗಳಿಗೆ ಫಟಾಫಟ್ ಮದುವೆ ಮಾಡಿಸುವ ಪಾತ್ರದಲ್ಲಿ ಮಿಂಚಿದ ಸಿದ್ಧಾರ್ಥ್ನಿಗೆ ಕಿಯಾರಾ ಬಹಳ ಇಷ್ಟವಾಗಿದ್ದಾಳಂತೆ! ಇತ್ತೀಚೆಗೆ ಪತ್ರಕರ್ತರೆದುರು ಸುಮ್ಮನಿರಲಾರದೆ ಈತ ಕಿಯಾರಾ ನಂಗೆ ತುಂಬಾ ಇಷ್ಟ. ಅವಳ ಜೊತೆ ಆಗಾಗ ಹುಕಪ್ ಆಗುತ್ತಿರುತ್ತೇನೆ ಎಂದಿದ್ದಾನೆ. ಅವಳನ್ನು ಸಂಪರ್ಕಿಸಿದಾಗ, ಇದೆಲ್ಲ ಗಾಳಿ ಸುದ್ದಿ ಎಂದು ಸಾರಾಸಗಟಾಗಿ ಅದನ್ನು ತಳ್ಳಿಹಾಕಿದಳು. ಹುಷಾರಪ್ಪ ಸಿದ್ಧಾರ್ಥ್..... ಅವಳು ಸ್ಟೇಟಸ್ ಸಿಂಬಲ್ನಲ್ಲಿ ಇನ್ನೂ ತಾನು ಸಿಂಗಲ್ ಎಂದೇ ತೋರಿಸುತ್ತಿರುವಾಗ ನೀನು ಈ ಹುಕಪ್ ಬುರುಡೆ ಬಿಡಬೇಡ! ಎನ್ನುತ್ತಾರೆ ಹಿತೈಷಿಗಳು.
ಸದಾ ಅಳುತ್ತಿದ್ದಳಂತೆ ಪರಿಣೀತಿ
ಪರಿಣೀತಿ ಚೋಪ್ರಾಳ ಫಿಲ್ಮಿ ಕೆರಿಯರ್ ಏಕ್ದಂ ಫ್ಲಾಪ್ ಆಗುತ್ತಿದೆ. ಸಿದ್ಧಾರ್ಥ್ ಜೊತೆಗಿನ ಆಕೆಯ ಇತ್ತೀಚಿನ ಚಿತ್ರ `ಜಬರಿಯಾ ಜೋಡಿ' ಹೇಳಿಕೊಳ್ಳುವಂಥ ಹೆಸರು ಮಾಡಲಿಲ್ಲ. ಇಂಥ ಕಷ್ಟಕರ ದಿನಗಳನ್ನು ಎದುರಿಸುವುದನ್ನು ಪರಿಣೀತಿ ಕಲಿತಿದ್ದಾಳೆ. ಆದರೆ ಆಕೆಗೆ ಇದೇನೂ ಹೊಸದಲ್ಲ. ಹಿಂದೆಯೂ ಈ ರೀತಿ ಆಗಿದ್ದಾಗ, ಬಹಳ ದುಃಖಗೊಂಡು ಒಬ್ಬಳೇ ಒಂದು ಮೂಲೆಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳಂತೆ.... ಅರೆ ಬೇಬಿ, ಕೇವಲ ಅಳುವುದರಿಂದ ಸಮಸ್ಯೆ ಬಗೆಹರಿಯುತ್ತದೆಯೇ? ಇನ್ನೂ ಹೆಚ್ಚು ಹೆಚ್ಚು ಕಷ್ಟಪಡಬೇಕು. ಇಲ್ಲದಿದ್ದರೆ ನಾನಾ ಗ್ಲಾಮರಸ್ ಅವತಾರಗಳಲ್ಲಿ ಎಂಟ್ರಿ ಪಡೆಯುತ್ತಿರುವ ಹೊಸಬರ ಎದುರು ನೀನು ಕೊಚ್ಚಿಹೋದೀಯ!
ಕಿಶೋರ್ರನ್ನು ಹೀಗೆ ನೆನೆಯುತ್ತಾ.....
ಕಿಶೋರ್ ಕುಮಾರ್ರನ್ನು ಕೇವಲ ಗಾಯನಕ್ಕಾಗಿ ಮಾತ್ರವಲ್ಲದೆ, ಅವರ ಹಾಸ್ಯ ಮನೋಭಾವಕ್ಕೂ ಆಗಾಗ ಸ್ಮರಿಸಲಾಗುತ್ತದೆ. 1962ರಲ್ಲಿ ತಯಾರಾದ `ಹಾಫ್ ಟಿಕೆಟ್' ಚಿತ್ರದಲ್ಲಿ ನಡೆದ ಪ್ರಸಂಗ. ಈ ಚಿತ್ರದಲ್ಲಿ ತಾನೇ ಗಾಯಕಿಯ ಕಂಠದಲ್ಲೂ ಹಾಡಿ, ಎರಡೂ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ನಿರ್ದೇಶಕ ಸಲೀಂ ಚೌಧರಿಯವರನ್ನು ಒಪ್ಪಿಸಿದ್ದರು. ಆಗ ಕಿಶೋರ್ `ಓಕೆ.. ಸೀಧೀ ಲಗೀ....' ಹಾಡನ್ನು ಸ್ತ್ರೀ ಕಂಠದಲ್ಲಿಯೂ ರೆಕಾರ್ಡ್ ಮಾಡಿದರು. ಒಂದೇ ಶಾಟ್ಗೆ ಹಾಡು ಓಕೆ ಆಯಿತು. ಆಗ ಕಿಶೋರ್ ನಿರ್ದೇಶಕರನ್ನು, ಲತಾಜಿಯವರಿಗೆ ಕೊಡುವುದಕ್ಕಿಂತ 1 ರೂ. ಕಡಿಮೆ ಸಂಭಾವನೆ ಕೊಡಿ ಎಂದು ತಮಾಷೆ ಮಾಡಿದರಂತೆ. ಆ ಗಂಭೀರ ವಾತಾವರಣದಲ್ಲಿ ಈ ಮಾತು ಹಾಸ್ಯದ ಹೊಳೆ ಹರಿಸಿತ್ತು. ಮುಂದೆ ಈ ಹಾಡು ಎವರ್ಗ್ರೀನ್ ಹಿಟ್ ಆಯಿತು.
ಕರಣ್ನ ಸೈಲೆಂಟ್ ಎಂಟ್ರಿ
ಹಿಂದೆ ಧರ್ಮೇಂದ್ರ ತನ್ನ ಮಗ ಸನ್ನಿ ಡಿಯೋಲ್ನನ್ನು ಬಾಲಿವುಡ್ಗೆ ಪರಿಚಯಿಸಿದಾಗ, ಹಿಂದಿ ಚಿತ್ರೋದ್ಯಮದಲ್ಲಿ ದೊಡ್ಡ ಬಿರುಗಾಳಿ ಬೀಸಿದಂತಾಗಿತ್ತು. ಆದರೆ ಈಗ ಸನ್ನಿ ತನ್ನ ಮಗ ಕರಣ್ ಡಿಯೋಲ್ನನ್ನು ಬಾಲಿವುಡ್ನಲ್ಲಿ ಲಾಂಚ್ ಮಾಡಿದಾಗ, ವಾತಾವರಣ ಪೂರ್ತಿ ಥಂಡಿಯಾಗಿತ್ತು. ಯಾವ ಜೋಶ್, ಚಿಲ್ ಪಾರ್ಟಿ, ಸಡಗರ, ಸಂಭ್ರಮ ಏನೂ ಇರಲಿಲ್ಲ. `ಪಲ್ ಪಲ್ ದಿಲ್ ಕೇ ಪಾಸ್' ಈತನ ಡೆಬ್ಯು ಚಿತ್ರವಾಗಿದ್ದು, ಇದರ ಟೀಸರ್ ಕೂಡ ಆಹಾ ಓಹೋ ಎನ್ನುವ ಹಾಗೇನೂ ಇರಲಿಲ್ಲ. ಧರ್ಮೇಂದ್ರರ ಮೊಮ್ಮಗನ ಎಂಟ್ರಿ ಇಷ್ಟು ಸಪ್ಪೆ ಆಗಬೇಕೇ?
ಎಲ್ಲಾ ಕಡೆ ತೋಪಾದ ಸಿದ್ಧು
ಅಂದ ಕಾಲತ್ತಿಲೆ ಕ್ರಿಕೆಟ್ ಆಡುತ್ತಿದ್ದಾಗ ಸಿಕ್ಸರ್ ಸಿದ್ಧು ಎಂದೇ ಖ್ಯಾತರಾಗಿ ಮೆರೆದ ಇವರು, ನ್ಯೂಸ್ ಚಾನೆಲ್, ಕಪಿಲ್ ಶರ್ಮ ಶೋಗಳಲ್ಲಿ ಭಾರಿ ಮಿಂಚಿದ್ದರು. ಅಂಥ ಈ `ಗುರು' ಈಗ ಫುಲ್ ಥಂಡಾ ಥಂಡಾ ಆಗಿದ್ದಾರೆ. ಯಾಕಂತೀರಾ? ಏನೋ ಎಡವಟ್ಟು ಮಾತುಗಳಿಂದ ಕಪಿಲ್ ಶೋನಲ್ಲಿ (ಮಜಾ ಟಾಕೀಸ್ನಲ್ಲಿ ಸೃಜನ್ ಲೋಕೇಶ್ ಎದುರು ಇಂದ್ರಜಿತ್ ಲಂಕೇಶ್ ಕೂರುವಂತೆ) ಕೂರುತ್ತಿದ್ದ ಸಿದ್ಧು ಅಲ್ಲಿಂದ ಅರ್ಧ ಚಂದ್ರ ಪ್ರಯೋಗಕ್ಕೆ ಒಳಗಾದ ನಂತರ, ಈಗ ಅರ್ಚನಾ ಇವರ ಸ್ಥಾನ ಅಲಂಕರಿಸಿದ್ದಾರೆ. ಅಷ್ಟು ಮಾತ್ರವಲ್ಲ, ಪಂಜಾಬ್ನಲ್ಲಿ ತಮ್ಮ ಮಂತ್ರಿ ಪದವಿಯನ್ನೂ ಇಂಥದೇ ಕಾರಣಕ್ಕೆ ಕಳೆದುಕೊಂಡಿದ್ದಾರೆ. ಎರಡೂ ಕಡೆ ಬ್ಯಾಕ್ ಬೆಂಚರ್ ಆಗಿರುವ ಸಿದ್ಧು ಮುಂದೇನು ಮಾಡುತ್ತಾರೆ.....? ಅಯ್ಯೋ ಪಾಪ, ಹೀಗಾಗಬಾರದಿತ್ತು!