ನಮ್ಮ ಸನಾತನ ಧರ್ಮದ ಪಂಚಾಗಂದಲ್ಲಿ ಪ್ರತೀ ತಿಂಗಳನ್ನು ಕೃಷ್ಣಪಕ್ಷ ಮತ್ತು ಶುಕ್ಲ ಪಕ್ಷ ಎಂದು ಎರಡು ಪಕ್ಷಗಳಾಗಿ ವಿಂಗಡಿಸಿದ್ದು, ಪ್ರತೀ ಪಕ್ಷದ 11ನೇಯ ದಿನವನ್ನು ಏಕಾದಶಿ ಎಂದು ಕರೆಯಲಾಗುತ್ತದೆ. ಈ ಏಕಾದಶಿಯಂದು ಬಹುತೇಕ ಆಸ್ತಿಕರು ಕಟ್ಟು ನಿಟ್ಟು ಉಪವಾಸವನ್ನು ಮಾಡುತ್ತಾ ಭಗವಂತನ ಧ್ಯಾನದಲ್ಲಿ ನಿರತರಾಗಿರುವುದು ಅನೂಚಾನಾಗಿ ನಡೆದುಕೊಂಡು ಬಂದಿರುವ ಪದ್ದತಿಯಾಗಿದೆ. ಈ ಉಪವಾಸ ಪದ್ದತಿಯು ವೈಜ್ಞಾನಿಕವಾಗಿಯೂ ಅತ್ಯಂತ ಮಹತ್ವ ಎನಿಸಿದೆ. ಲಂಘನಂ ಪರಮೌಷಧಂ ಎಂದರೆ ಉಪವಾಸವಾಸ ಮಾಡುವುದೂ ಒಂದು ರೀತಿಯ ಔಷಧ ಎಂದು ಆಯುರ್ವೇದದಲ್ಲಿ ತಿಳಿಸಲಾಗಿದ್ದು, ಈ ರೀತಿಯ ಉಪವಾಸದ ಮುಖಾಂತರ ಪಚನ ಕ್ರಿಯೆ ಶುದ್ಧಿಗೊಳ್ಳುವುದಲ್ಲದೇ, ಇಡೀ ದಿನ ದೇವರ ಧ್ಯಾನದಲ್ಲಿ ಆಸಕ್ತರಾಗಿರುವ ಕಾರಣ, ಅದು ಆತ್ಮವನ್ನು ಶುದ್ಧೀಕರಿಸಿಮೋಕ್ಷವನ್ನು ಸಾಧಿಸಲು ಸಹಾಯಕವಾಗುತ್ತದೆ. ಹೀಗೆ ನಿರಾಹಾರಿಗಳಾಗಿ ಭಗವಂತನ ಸ್ಮರಣೆ ಮಾಡುವುದರಿಂದ ಸಾತ್ವಿಕ ಗುಣ ಹೆಚ್ಚಾಗಿ ದೇಹ ಮತ್ತು ಮನಸ್ಸು ಸ್ವಸ್ಥವಾಗಿ ಇರುತ್ತದೆ ಎನ್ನುವುದು ವೈಜ್ಞಾನಿಕವಾಗಿಯೂ ಸಾಭೀತಾಗಿದೆ. ಇನ್ನು ದ್ಚಾದಶಿಯಂದು ಬೆಳಿಗ್ಗೆ ಸ್ನಾನ ಸಂಧ್ಯಾವಂಧನೆಗಳನ್ನು ಮುಗಿಸಿ ಭಗವಂತನ ಪೂಜೆ ಮಾಡಿ ದ್ವಾದಶಿ ಪಾರಾಯಣೆ ಮಾಡುವ ಪದ್ದತಿಯಿದ್ದು ಆ ದ್ವಾದಶಿ ಅಡುಗೆಯಲ್ಲಿ ಅಗಸೆ ಸೊಪ್ಪನ್ನು ಬಳಸುವ ಪದ್ದತಿ ರೂಢಿಯಲ್ಲಿದ್ದು ಆ ರೀತಿಯ ಆಚರಣೆಯ ಹಿಂದೆ ಒಂದು ಸುಂದರವಾದ ಪೌರಾಣಿಕ ಕಥೆಯಿದ್ದು ಅದನ್ನು ತಿಳಿಯೋಣ ಬನ್ನಿ.

Krisna_Pandava

ಅದೊಂದು ಏಕಾದಶಿಯ ದಿನ ಪಾಂಡವರಲ್ಲಿ ಅಗ್ರಜನಾದ ಶ್ರೀ ಧರ್ಮರಾಯನು ಭಗವಾನ್ ಶ್ರೀಕೃಷ್ಣನನ್ನು ದ್ವಾದಶಿಯ ಪಾರಾಯಣಕ್ಕೆ ತಮ್ಮ ಮನೆಗೆ ಬರಬೇಕೆಂದು ಆಹ್ವಾನಿಸಿದಾಗ ಶ್ರೀಕೃಷ್ಣನು ಸಹಾ ಬಹಳ ಸಂತೋಷದಿಂದ ಆ ಆಮಂತ್ರಣವನ್ನು ಸ್ವೀಕರಿಸುತ್ತಾನೆ. ಶ್ರೀಕೃಷ್ಣನು ಪಾಂಡವರ ಮನೆಗೆ ಬರುವ ವಿಷಯವನ್ನು ತಿಳಿದ ಕೌರವರ ಅಗ್ರಜ ದುರ್ಯೋಧನನು ಸಹಾ ಅದೇ ದ್ವಾದಶಿಯಂದು ತಮ್ಮ ಮನೆಗೆ ಬರಬೇಕೆಂದು ಶ್ರೀಕೃಷ್ಣನನ್ನು ಆಹ್ವಾನಿಸಿದಾಗ, ಶ್ರೀ ಕೃಷ್ಣನು ಯಾರ ಮನೆಗೆ ಊಟಕ್ಕೆ ಹೋಗಬೇಕೆಂಬ ಸಂದಿಗ್ಧ ಪರಿಸ್ಥಿತಿಗೆ ಒಳಗಾಗಿ ಕೆಲ ಕ್ಷಣ ಸಾವರಿಸಿಕೊಂಡು ಯಾರ ಮನೆಯಲ್ಲಿ 108 ತರಕಾರಿಗಳೊಂದಿಗೆ ಊಟವನ್ನು ತಯಾರಿಸುತ್ತಾರೋ, ಅಂತಹವರ ಮನೆಗೆ ತಾನು ಊಟಕ್ಕೆ ಬರುತ್ತೇನೆ ಎಂದು ತಿಳಿಸುವ ಮೂಲಕ ಬೀಸೋ ದೊಣ್ಣೆ ತಪ್ಪಿಸಿಕೊಂಡರೆ, ಸಾವಿರ ವರ್ಷ ಆಯಸ್ಸು ಎನ್ನುವಂತೆ ಪರಿಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾಗಿ ಶ್ರೀಕೃಷ್ಣನು ನಿಭಾಯಿಸುತ್ತಾನೆ.

ಕೇವಲ 108 ತರಕಾರಿಗಳು ತಾನೇ ಎಂಬ ದುರಹಂಕಾರದಿಂದ ದುರ್ಯೋಧನನು ತಕ್ಷಣವೇ ತನ್ನ ಎಲ್ಲಾ ಸೇವಕರನ್ನೂ ಕರೆಯಿಸಿ ತನ್ನ ರಾಜ್ಯದಲ್ಲಿರುವ ಎಲ್ಲಾ ಮಾರುಕಟ್ಟೆಗಳಿಂದಲೂ ತರಕಾರಿಗಳನ್ನು ತರಲು ಆಜ್ಞಾಪಿಸುತ್ತಾನೆ. ರಾಜನ ಆಜ್ಞೆಯಂತ ಆತನ ಭಟರು ಇಡೀ ರಾಜ್ಯವನ್ನು ಸುತ್ತಾಡಿ ತರಕಾರಿಗಳನ್ನು ಖರೀಧಿಸಿ ಅರಮನೆಯ ಪಾಕಶಾಲೆಗೆ ತಂದು ಲೆಕ್ಕ ಹಾಕಿದಾಗ ಅಂತಿಮವಾಗಿ ಅಲ್ಲಿ ಕೇವಲ 105 ಬಗೆಯ ತರಕಾರಿಗಳು ಮಾತ್ರಾ ಲಭ್ಯವಿದ್ದು ಶ್ರೀಕೃಷ್ಣನು ಹೇಳಿದ 108 ತರಕಾರಿಗಳಲ್ಲಿ 3 ತರಕಾರಿಗಳು ಬಾಕಿ ಉಳಿದಾಗ ಮತ್ತೆ ಆ 3 ತರಕಾರಿಗಳನ್ನು ತರಲು ತಿಣುಕಾಡುತ್ತಿರುತ್ತಾರೆ. ತನ್ನ ಸೇವಕರಿಗೆ ಸಿಗದೇ ಹೋದ ತರಕಾರಿ ಪಾಂಡವರು ಹೇಗೆ ತಂದಿರುತ್ತಾರೆ? ಎಂಬ ಕುತೂಹಲದಿಂದ ಪಾಂಡವರ ಮನೆಗೆ ತನ್ನ ಸೇವಕರನ್ನು ಗುಪ್ತವಾಗಿ ಕಳುಹಿಸಿ ಅಲ್ಲಿನ ಪರಿಸ್ಥಿತಿಯನ್ನು ನೋಡಿಕೊಂಡು ಬರಲು ಸೂಚಿಸುತ್ತಾನೆ. ಪಾಂಡವರ ಮನೆಯಿಂದ ಹಿಂದಿರುಗಿದ ಆ ಸೇವಕನು, ರಾಜಾ, ಪಾಂಡವರ ಅರಮನೆಯಲ್ಲಿ ನಾವು ತಂದ ಹಾಗೆ ಯಾವುದೇ ತರಕಾರಿಗಳನ್ನು ತರದೇ ಹೋದರೂ ಧರ್ಮರಾಜನು ಯಾವುದೇ ರೀತಿಯ ಆತಂತಕವಿಲ್ಲದೇ ನಿರಾಳರಾಗಿದ್ದಾರೆ ಎಂದು ತಿಳಿಸಿದಾಗ, ಆಹಾ!!, ತನ್ನ ಬಳಿ 108 ತರಕಾರಿಯಲ್ಲಿ 105 ಬಗೆಯ ತರಕಾರಿಗಳು ಇದ್ದು ಕೇವಲ 3 ತರಕಾರಿಗಳಲ್ಲಿ ಮಾತ್ರಾ ಇಲ್ಲದೇ ಇರುವುದನ್ನು ಮನ್ನಿಸಿ ಶ್ರೀಕೃಷ್ಣನು ತನ್ನ ಮನೆಗೆ ಭೋಜನಕ್ಕೆ ಬರುತ್ತಾನೆ ಎಂದು ನಂಬಿ ಭೂರೀ ಭೋಜನವನ್ನು ತಯಾರಿ ಮಾಡಲು ತನ್ನ ಬಾಣಗಿಸಿಗರಿಗೆ ಸೂಚಿಸುತ್ತಾನೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ