ಇದೀಗ  ತಾನೇ ಹುಟ್ಟಿದ ಎಳೆ ಕೂಸಿಗೆ ಪ್ರಪಂಚದ ಪ್ರತಿಯೊಂದು ವಸ್ತು ಹೊಸದೇ ಆಗಿರುವಂತೆ, ಜನರು ಹೊಸತನವನ್ನು ಎಲ್ಲದರಲ್ಲೂ ಹುಡುಕುತ್ತಲೇ ಇರುತ್ತಾರೆ, ಇದು ಜೀವಮಾನವಿಡೀ ನಡೆಯುತ್ತಲೇ ಇರುತ್ತದೆ. ಹೊಸ ಜಾಗಗಳು, ಹೊಸ ಉಡುಗೆಗಳು, ಹೊಸ ತಿನಿಸು, ಹೊಸ ಜ್ಞಾನ, ಹೊಸ ಬಗೆಯ ಮನರಂಜನೆ, ಹೊಸ ಸಾಹಸ...... ಹೀಗೆ ಪಟ್ಟಿ ಬೆಳೆಯುತ್ತದೆ. ಒಟ್ಟಾರೆ ಹೊಸತೆಂಬುದು ಎಲ್ಲರಿಗೂ ಅತ್ಯಗತ್ಯ.

ಈ ನಿಟ್ಟಿನಲ್ಲಿ ಪ್ರಕೃತಿ ಮಾನವನಿಗೆ ಎಂದೂ ನಿರಾಸೆ ಮಾಡಿಲ್ಲ. ಆಕೆ ಪ್ರತಿ ವರ್ಷ ಋತುಮಾನಕ್ಕೆ ತಕ್ಕಂತೆ ಬದಲಾಗುತ್ತಲೇ ಇರುತ್ತಾಳೆ. ಇದು ಸಮಯಕ್ಕೆ ಸಂಬಂಧಿಸಿದಂತೆ ನಿಯಮಬದ್ಧವಾಗಿ ನಡೆಯುತ್ತಿರುತ್ತದೆ. ಪಾಶ್ಚಿಮಾತ್ಯರಲ್ಲಿ ಬೇಸಿಗೆ, ಮಳೆಗಾಲ, ಚಳಿಗಾಲ, ವಸಂತಕಾಲ ಎಂಬಂತೆ ಭಾರತದಲ್ಲಿ ಪ್ರಕೃತಿಯನ್ನು ನಾವು 6 ಋತುಗಳಲ್ಲಿ ಕಾಣಬಯಸುತ್ತೇವೆ. ಗ್ರೀಷ್ಮ, ವರ್ಷ, ಶರತ್‌, ಹೇಮಂತ, ಶಿಶಿರ ಹಾಗೂ ವಸಂತ.

ugadi-pachad

ಬೇಸಿಗೆಯ ಕಡು ಬಿಸಿಲಿನಿಂದ ಚಳಿಗಾಲದ ಕುಳಿರ್ಗಾಳಿಯವರೆಗೆ, ಮಳೆಗಾಲದ ತುಂತುರು ಹನಿಗಳಿಂದ ವಸಂತಕಾಲದ ಸುರಸುಂದರ ತರುಲತೆಗಳವರೆಗೆ, ಅರಳಿ ಹಿಗ್ಗುವ ಹೂಗಳಿಂದ ಕಾಯಿ ಹಣ್ಣುಗಳವರೆಗೆ ಎಲ್ಲೆಲ್ಲೂ ಪ್ರಕೃತಿಯ ಆಹ್ಲಾದಕರ ವಾತಾವರಣ ಕಂಡುಬರುತ್ತದೆ. ಸಂತಸ ಅರಳುವ ಈ ಸಮಯದಲ್ಲಿ ರಮ್ಯ ಚೈತ್ರಕಾಲ ಧರೆಗಿಳಿದು ಬರುತ್ತದೆ.

ಈ ರೀತಿಯ ಎಲ್ಲಾ ಬದಲಾವಣೆಗಳನ್ನೂ ಸೇರಿಸಿ ಒಂದು ವರ್ಷದ ಕಾಲಾವಧಿ ಎಂದು ಹೇಳುತ್ತೇವೆ. ಇಂಥ ಹೊಸರ್ಷದ ಮೊದಲ ದಿನವನ್ನೇ ವಿಶ್ವಾದ್ಯಂತ ವಿವಿಧ ದಿನಾಂಕಗಳಲ್ಲಿ ಆಚರಿಸಲಾಗುತ್ತದೆ. ಇದರಲ್ಲಿನ ಒಂದು ಸಾಮಾನ್ಯ ಅಂಶವೆದರೆ, ಇದನ್ನು ಕಟಾವಿನ ಕಾಲದ ನಂತರ ಆಚರಿಸಲಾಗುತ್ತದೆ. ಎಲ್ಲೆಡೆ ಕಣಜಗಳು ತುಂಬಿರುತ್ತವೆ, ಪ್ರಕೃತಿ ರಮಣೀಯವಾಗಿ ಕಣ್ಮನ ತುಂಬಿ ತುಳುಕುವಂತಿರುತ್ತದೆ. ಎಲ್ಲೆಲ್ಲೂ ಹಸಿರು, ಮಾವಿನ ತಳಿರು, ಬೇವಿನ ಚಿಗುರು, ಬಣ್ಣ ಬಣ್ಣದ ಹೂಗಳ ಚಿತ್ತಾರ ಎಲ್ಲೆಲ್ಲೂ ರಂಗೋಲಿ ಬಿಡಿಸಿದಂತಿರುತ್ತದೆ.

HYM16UGADI-2_66032e

ಹಿಂದೆ ಮೊಘಲರ ಆಳ್ವಿಕೆಯ ಸಂದರ್ಭದಲ್ಲಿ ಅವರು ಇದನ್ನು ಪರಿಪಾಲಿಸದೆ, ಪ್ರಾಚೀನ ಕಾಲಕ್ಕೆ ತಕ್ಕಂತೆ ಚಂದ್ರನ ಚಲನವಲನ ಆಧರಿಸಿದ `ಹಿಜರಿ' ಕ್ಯಾಲೆಂಡರ್‌ ಅನುಸರಿಸುತ್ತಿದ್ದರು. ಆದರೆ ಬೆಳೆಯ ಚಕ್ರ ಸೂರ್ಯನನ್ನು ಅನುಸರಿಸುತ್ತದೆ, ಇದನ್ನೇ ಹಿಂದೂ ಪಂಚಾಂಗದಲ್ಲೂ ಪ್ರತಿಪಾದಿಸಲಾಗಿದೆ. ಹೀಗಾಗಿ ಜನಸಾಮಾನ್ಯರಲ್ಲಿ ದೊಡ್ಡ ಗೊಂದಲ ಉಂಟುಮಾಡಿತು. ಜೊತೆಗೆ ಸುಂಕ ವಸೂಲಿ ಮಾಡುವ ಅಧಿಕಾರಿಗಳು ಹಾಗೂ ತೆರಿಗೆ ಪಾವತಿಸುವ ಪ್ರಜೆಗಳ ಮಧ್ಯೆ ಭಾರಿ ರಗಳೆ ಎಬ್ಬಿಸಿತು. ಕೊನೆಗೆ ಅಕ್ಬರ್ ಚಕ್ರವರ್ತಿ ಇದಕ್ಕೊಂದು ಪರಿಹಾರ ಹುಡುಕುವಂತೆ ತನ್ನ ಆಸ್ಥಾನದ ಜ್ಯೋತಿಷಿಗೆ ತಿಳಿಸಿದ. ಕೊನೆಗೆ ಜ್ಯೋತಿಷಿಗಳ ತಂಡ ಹೊಸತೊಂದು ವಿಧಾನದ ಪಂಚಾಂಗ ರೂಪಿಸಿತು. ಇದರಲ್ಲಿ ಸೂರ್ಯನ ಚಲನವಲನ ಆಧರಿಸಿ ತಿಂಗಳು ಗುರುತಿಸಲ್ಪಟ್ಟರೆ, ಚಂದ್ರನ ಚಲನವಲನವನ್ನೂ ಅದು ಅಂತರ್ಗತ ಮಾಡಿಕೊಳ್ಳುವಂತೆ ರೂಪಿಸಲಾಗಿತ್ತು. ಇದರಿಂದ ಎಲ್ಲರಿಗೂ ಸಂತೋಷವಾಯಿತು. ಮುಂದೆ ಅದುವೇ ಕ್ರಮವಾಗಿ ಸೌರಮಾನ ಹಾಗೂ ಚಾಂದ್ರಮಾನ ಪಂಚಾಂಗಗಳಾಗಿ ರೂಪಿತಗೊಂಡವು. ಹೀಗಾಗಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಲ್ಲಿ ಚಾಂದ್ರಮಾನ ಪಂಚಾಂಗ ಚಾಲ್ತಿಗೆ ಬಂದಿತು ಹಾಗೂ ತಮಿಳುನಾಡು, ಕೇರಳ, ಪಂಜಾಬ್‌, ಪ.ಬಂಗಾಳದಂಥ ರಾಜ್ಯಗಳಲ್ಲಿ ಸೌರಮಾನ ಪಂಚಾಂಗ ಚಾಲ್ತಿಯಲ್ಲಿದೆ.

ನಮ್ಮ ಭಾರತ ಕೇವಲ ಒಂದು ದೇಶ ಮಾತ್ರ ಆಗಿರದೆ ಒಂದು ಉಪಖಂಡವೇ ಆಗಿದೆ ಎಂದರೆ ಅತಿಶಯೋಕ್ತಿಯಲ್ಲ. ಇಲ್ಲಿ ಹಲವು ಬಗೆಯ ಭಾಷೆ, ಧರ್ಮ, ಸಂಸ್ಕೃತಿ, ಉಡುಗೆ ತೊಡುಗೆ, ಆಹಾರ ಕ್ರಮಗಳು ವಿಭಿನ್ನ ರೀತಿಯಲ್ಲಿ ಮೇಳೈಸಿವೆ. ಅದರಲ್ಲೂ ಒಂದು ಬಗೆಯ ಏಕತೆ ಇರುವುದು ಸುಸ್ಪಷ್ಟ. ಹೀಗಾಗಿ `ವಿಭಿನ್ನತೆಯಲ್ಲಿ ಏಕತೆ' ನಮ್ಮ ದೇಶದ ಅತಿ ದೊಡ್ಡ ವೈಶಿಷ್ಟ್ಯವಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ